ಮೀಸೆ ತಿರುವುವ ಮುನ್ನ ಎಚ್ಚರ!
Team Udayavani, Jul 14, 2019, 3:41 PM IST
ಮೀಸೆ ಬಿಡುವುದು ಹೆಮ್ಮೆಯ ಸಂಕೇತವಾಗಿರಬಹುದು. ಇಷ್ಟುದ್ದ ಮೀಸೆ ಬಿಟ್ಟು ಅದನ್ನು ಆಗಾಗ ತಿರುವುವುದು ಖುಷಿಯನ್ನೂ ನೀಡಬಹುದು. ಆದರೆ ಇದು ದೊಡ್ಡ ಸಮಸ್ಯೆಯನ್ನೂ ತಂದಿಡಬಹುದು. ಯಾಕೆಂದರೆ ರಾಜಸ್ಥಾನದಲ್ಲಿ ಒಬ್ಬ ಅಧಿಕಾರಿಗೆ ಮೀಸೆ ತಿರುವಿದ್ದಕ್ಕಾಗಿಯೇ ನೋಟಿಸ್ ನೀಡಲಾಗಿದೆ!
ಜೈಪುರದ ಸಾಮಾಜಿಕ ಭದ್ರತಾ ಅಧಿಕಾರಿ ವಿಶಾಲ್ ಸಿಂಗ್ ಸೋಲಂಕಿ ಸಮಾಜ ಕಲ್ಯಾಣ ಇಲಾಖೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಪದೇ ಪದೇ ಮಿಸೆ ತಿರುವುತ್ತಿದ್ದರು ಎಂಬ ಕಾರಣಕ್ಕೆ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಮೀಸೆ ತಿರುವುವ ಮೂಲಕ ಹಿರಿಯ ಅಧಿಕಾರಿಗಳಿಗೆ ಅಗೌರವ ತೋರಿದಂತಾಗಿದೆ. ಸಭೆಯಲ್ಲಿ ಈ ಕೃತ್ಯದಿಂದಾಗಿ ಹಿರಿಯ ಅಧಿಕಾರಿಗಳಿಗೆ ಕಿರಿಕಿರಿಯಾಗಿದೆ. ನಿಮ್ಮ ವಿರುದ್ಧ ಶಿಸ್ತುಕ್ರಮ ಜರಗಿಸುತ್ತೇವೆ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Udupi: ಕಾರು ಢಿಕ್ಕಿ… ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್
Belthangady: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ
NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ
Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ