ಈ ಕಳ್ಳ ಬಿಟ್ಟು ಹೋಗಿದ್ದು ಅಂತಿಂಥ ಸುಳಿವು ಅಲ್ಲ!
Team Udayavani, Jul 20, 2019, 10:26 AM IST
ಕಳ್ಳ ತಾನು ಕನ್ನ ಹಾಕಿದ ಜಾಗದಲ್ಲಿ ಏನಾದರೊಂದು ಸುಳಿವು ಬಿಟ್ಟೇ ಹೋಗಿರುತ್ತಾನೆ ಎಂಬ ಮಾತೊಂದಿದೆ. ಈ ಮಾತು ಹಲವಾರು ಸಂದರ್ಭಗಳಲ್ಲಿ ನಿಜವಾಗಿದೆ. ಆದರೆ, ಉತ್ತರಾಖಂಡದ ಡೆಹ್ರಾಡೂನ್ನ ಕಳ್ಳನೊಬ್ಬ ಅಂತಿಂಥ ಸುಳಿವಲ್ಲ, “ಮಹತ್ವದ’ ಸುಳಿವನ್ನೇ ಬಿಟ್ಟುಹೋಗಿ ಈಗ
ಪೊಲೀಸರ ಅತಿಥಿ ಆಗಿದ್ದಾನೆ.
ಅಂದ ಹಾಗೆ ಆತ ಬಿಟ್ಟು ಹೋಗಿರುವುದೇನು ಗೊತ್ತಾ? ಆಧಾರ್ ಕಾರ್ಡ್. ಆಧಾರ್ ಕಾರ್ಡ್ನಲ್ಲಿದ್ದ ವಿಳಾಸದ ಆಧಾರದ ಮೇಲೆ ಪೊಲೀಸರು ಆತನನ್ನು ಪತ್ತೆ ಮಾಡಿದ್ದಾರೆ. ಘಟನೆಯೇನೆಂದರೆ, ಕಳೆದ ತಿಂಗಳು ವಿಕ್ರಮ್ ಸೇಥಿ ಎಂಬುವವರ ಅಂಗಡಿಗೆ 27 ವರ್ಷ ವಯಸ್ಸಿನ ಕಳ್ಳ ಕನ್ನ
ಹಾಕಿದ್ದ. ಅಂಗಡಿಯ ತವರದ ಮಾಳಿಗೆ ಕೊರೆದು ಅಂಗಡಿ ಒಳಗೆ ಬಂದು ಬೆಲೆ ಬಾಳುವ ವಸ್ತುಗಳನ್ನೆಲ್ಲಾ ಕದ್ದು ಪರಾರಿಯಾಗಿದ್ದ.
ಪೊಲೀಸರು ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗಲೂ ಅವರಿಗೆ ಕಳ್ಳನನ್ನು ಪತ್ತೆ ಮಾಡಲಾಗಿರಲಿಲ್ಲ. ಆದರೆ, ಅಂಗಡಿ ಮಾಲೀಕನು ಒಂದು ದಿನ ಅಂಗಡಿ ಸ್ವತ್ಛಗೊಳಿಸುತ್ತಿದ ವೇಳೆ ಅಲ್ಲೊಂದು ಪರ್ಸ್ ಸಿಕ್ಕಿದೆ. ಅದರಲ್ಲಿ ಆಧಾರ್ ಕಾರ್ಡ್ ಇತ್ತು. ಈ ಸುಳಿವಿನಿಂದ ಈಗ ಕಳ್ಳ ಬಂಧಿತನಾಗಿದ್ದಾನೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?