ಮಿಡತೆ ಬಿರಿಯಾನಿ ಎಂದ ಸಚಿವಗೆ ನೆಟ್ಟಿಗರ ಕ್ಲಾಸ್
Team Udayavani, Nov 14, 2019, 1:57 AM IST
ಸಾರ್ವಜನಿಕರಿಗೆ ಸಮಸ್ಯೆಯಾದರೆ ಆಡಳಿತದಲ್ಲಿ ಇರುವವರು ಏನಪ್ಪಾ ಮಾಡಬೇಕು? ಅದಕ್ಕೆ ಪರಿಹಾರ ಕಂಡುಕೊಂಡು, ಮುಂದಿನ ದಿನಗಳಲ್ಲಿ ಅಂಥದ್ದು ಮರುಕಳಿಸದೇ ಇರುವ ರೀತಿಯಲ್ಲಿ ಮುನ್ನೆಚ್ಚರಿಕೆ ವಹಿಸಬೇಕು. ಪಾಕಿಸ್ಥಾನದ ಕರಾಚಿಯಲ್ಲಿ ಈಗ ಮಿಡತೆಗಳದ್ದೇ ಹಾವಳಿ. ಎಲ್ಲಿ ನೋಡಿದರಲ್ಲಿ ಅವುಗಳು ಹಾರಿಬರುತ್ತವೆ.
ಜನರಿಗೆ ಏನು ಮಾಡಬೇಕು ಎಂದು ತಿಳಿಯದೆ, ತಮ್ಮ ತಮ್ಮ ಪ್ರದೇಶಗಳಲ್ಲಿನ ಸಮಸ್ಯೆಯ ಫೋಟೋ, ವಿಡಿಯೋವನ್ನು ಟ್ವಿಟರ್ಗೆ ಅಪ್ಲೋಡ್ ಮಾಡುತ್ತಿದ್ದಾರೆ. ಪಾಕಿಸ್ಥಾನದ ಸಿಂಧ್ ಪ್ರಾಂತ್ಯದ ಕೃಷಿ ಸಚಿವ ಇಸ್ಮಾಯಿಲ್ ರಾಹೂ ‘ಮಿಡತೆಗಳ ಸಮಸ್ಯೆಯೇ? ಹಾಗಿದ್ದರೆ ಚಿಂತೆ ಬೇಡ. ಅವುಗಳನ್ನು ಬಿರಿಯಾನಿ, ಕಡಾಯಿ ಮಾಡಿ ತಿನ್ನಿ’ ಎಂದು ಹೇಳಿರುವ ವೀಡಿಯೋ ಸಕತ್ ಆಗಿ ವೈರಲ್ ಆಗಿದೆ.
ಟ್ವಿಟರ್ನಲ್ಲಿ ಹಲವಾರು ಮಂದಿ ರಾಹೂ ಹೇಳಿಕೆಗೆ ಕಠಿನವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಬಾಯಿಗೆ ಬಂದಂತೆ ಮಾತನಾಡುವುದೇಕೆ ಎಂದು ಪ್ರಶ್ನೆ ಮಾಡಿದ್ದಾರೆ. ಈ ಸಮಸ್ಯೆ ಪಾಕಿಸ್ಥಾನ ಸರಕಾರಕ್ಕೂ ಭಾರೀ ಸವಾಲಾಗಿ ಪರಿಣಮಿಸಿದೆ.