Squid Game ಪ್ರೇರಿತ ಗೇಮ್‌ ಆಡಿ ಸಿಂಗಾಪುರದಲ್ಲಿ 11 ಲಕ್ಷ ರೂ.ಗೆದ್ದ ಭಾರತೀಯ ಮೂಲದ ಕಾರ್ಮಿಕ

ಬಡ ಕಾರ್ಮಿಕನಿಗೆ ಒಲಿದು ಬಂದ ಅದೃಷ್ಟ

Team Udayavani, Jun 1, 2023, 3:54 PM IST

Squid Game ಪ್ರೇರಿತ ಗೇಮ್‌ ಆಡಿ ಸಿಂಗಾಪುರದಲ್ಲಿ 11 ಲಕ್ಷ ರೂ.ಗೆದ್ದ ಭಾರತೀಯ ಮೂಲದ ಕಾರ್ಮಿಕ

ಸಿಂಗಾಪುರ/ಚೆನ್ನೈ: ಭಾರತೀಯ ಮೂಲದ ಕಾರ್ಮಿಕನೊಬ್ಬ ಸಿಂಗಾಪುರದಲ್ಲಿ ಆಟವೊಂದನ್ನು ಆಡಿ ಬರೋಬ್ಬರಿ 11 ಲಕ್ಷ ರೂ.ವನ್ನು ಗೆದ್ದು ರಾತ್ರೋ ರಾತ್ರಿ ಲಕ್ಷಾಧಿಪತಿ ಆಗಿದ್ದಾರೆ.!

ಕಳೆದ ಕೆಲ ವರ್ಷಗಳಿಂದ ಸಿಂಗಾಪುರದಲ್ಲಿ ಕೆಲಸದ  ನಿಮಿತ್ತ ಪೋಲಿಸಮ್ ಇಂಜಿನಿಯರಿಂಗ್‌ ಕಂಪೆನಿಯಲ್ಲಿ ಘನ ವಾಹನವಾಗಿರುವ ಕ್ರೇನ್ ಪರಿಶೀಲಿಸುವುದು ನಿರ್ವಹಿಸುತ್ತಿರುವ ಕೆಲಸವನ್ನು ಮಾಡುತ್ತಿರುವ ತಮಿಳುನಾಡು ಮೂಲದ ಸೆಲ್ವಂ ಅರುಮುಗಂ (42) ಲಕ್ಷಾಧಿಪತಿ ಆಗಿದ್ದಾರೆ.

ಕಳೆದ ವರ್ಷದಂತೆ ಕಂಪೆನಿ ಈ ವರ್ಷವೂ ʼಡಿನ್ನರ್ ಮತ್ತು ಡ್ಯಾನ್ಸ್‌ ʼ ಎಂಬ ಇವೆಂಟ್ ಆಯೋಜನೆ ಮಾಡಿದ್ದಾರೆ.‌ ಈ ಬಾರಿ ದಕ್ಷಿಣ ಕೊರಿಯಾದ ಹಿಟ್‌ ವೆಬ್‌ ಸಿರೀಸ್‌ ಗಳಲ್ಲಿ ಒಂದಾಗಿರುವ ʼ ಸ್ಕ್ವಿಡ್ ಗೇಮ್‌ʼ ಪ್ರೇರಿತವಾಗಿ ಆಟವನ್ನು ಆಯೋಜನೆ ಮಾಡಿದ್ದಾರೆ.

ʼಸ್ಕ್ವಿಡ್ ಗೇಮ್‌ʼ ನಲ್ಲಿರುವಂತೆ ಆಟಗಾರರು ಕೆಂಪು ಟ್ರ್ಯಾಕ್‌ಸೂಟ್ ಜಾಕೆಟ್‌ಗಳನ್ನು ಧರಿಸಿ ಆಟದ ನಾನಾ ಹಂತಗಳನ್ನು ದಾಟಬೇಕು. ಈ ಆಟದಲ್ಲಿ ಭಯಾನಕ ಹಂತಗಳಿರುತ್ತವೆ.

ಆಟದ ಹಂತ ಸಾಗುತ್ತಿದ್ದಂತೆ ಸ್ಪರ್ಧೆಯ ಬಹುಮಾನದ ಮೊತ್ತ ಕಾಣಿಸುತ್ತದೆ. ಹಣ ತುಂಬಿದ ದೊಡ್ಡ ಬಲೂನ್‌ ಆಟಗಾರರಿಗೆ ಕಾಣಿಸುತ್ತದೆ.  ಎಲ್ಲಾ ಹಂತವನ್ನು ದಾಟಿದ ಬಳಿಕ ಈ ಸ್ಪರ್ಧೆಯಲ್ಲಿ ಸೆಲ್ವಂ ಅರುಮುಗಂ ಸಾಧಿಸುತ್ತಾರೆ. ಎಲಿಮಿನೇಷನ್‌ ಆಗದೆ ಕೊನೆಯವರೆಗೂ ಬಂದು ಆಟದಲ್ಲಿ ಸೆಲ್ವಂ ಗೆಲುವು ಸಾಧಿಸಿದ್ದಾರೆ.

ಕಂಪೆನಿ ಆಯೋಜಿಸಿದ ಈ ಆಟದ ಬಹುಮಾನ ಬರೋಬ್ಬರಿ 11 ಲಕ್ಷ ರೂ. ರಾತ್ರಿ ಬೆಳಗ್ಗೆ ಆಗುವಷ್ಟರಲ್ಲಿ ತಮಿಳುನಾಡಿನಲ್ಲಿ ಒಂದು ಬಾಡಿಗೆಯ ಅಪಾರ್ಟ್‌ ಮೆಂಟ್‌ ನಲ್ಲಿ ವಾಸಿಸುತ್ತಿದ್ದ ಸೆಲ್ವಂ ಅರುಮುಗಂ ಲಕ್ಷಾಧಿಪತಿ ಆಗಿದ್ದಾರೆ. ಬಹುಮಾನವನ್ನು ಪಡೆಯಲು ಹೋದಾಗ ಬಹುಮಾನದ ಹಣವನ್ನು ಕೊಟ್ಟ ವ್ಯಕ್ತಿಯ ಕಾಲಿಗೆ ಅಡ್ಡ ಬಿದ್ದು ಸೆಲ್ವಂ ಅರುಮುಗಂ ಭಾವುಕರಾಗಿದ್ದಾರೆ.

ನನಗೆ ನಿಜವಾಗಿಯೂ ಆಟದ ನಿಯಮಗಳು ಗೊತ್ತಾಗಿಲ್ಲ. ಎಲ್ಲರೂ ಆಡುವಾಗ ಅವರನ್ನು ನಾನು ಹಿಂಬಾಲಿಸಿದೆ ಎಂದು ಸೆಲ್ವಂ ಅರುಮುಗಂ ಹೇಳುತ್ತಾರೆ.

ಗೆಲುವಿನ ಬಗ್ಗೆ ಮಾತನಾಡಿದ ಅವರು, “ನನ್ನ ಗೆಲುವಿನ ಬಗ್ಗೆ ಹೇಳಲು ನಾನು ಮನೆಯವರಿಗೆ ಕರೆ ಮಾಡಿದೆ. ನನ್ನ ಹೆಂಡತಿ ಬಳಿ ಇದನ್ನು ಹೇಳುವಾಗ ಅವಳು ತಮಾಷೆ ಅಂದುಕೊಂಡಳು ಆ ಬಳಿಕ ನನ್ನ ಸ್ನೇಹಿತ ಹೇಳಿದಾಗ ಆಕೆ ದುಃಖವನ್ನು ಸಹಿಸದೇ ಅತ್ತು ಬಿಟ್ಟಳು. ಇದು ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣ” ಎಂದರು.

“ಮನೆ ನಿರ್ಮಿಸಲು ಬಹುಮಾನದ ಹಣವನ್ನು ಬಳಸುತ್ತೇನೆ. ನಮ್ಮದು 15 ಸದಸ್ಯರನ್ನು ಒಳಗೊಂಡ  ಕುಟುಂಬ. ಪ್ರಸ್ತುತ ಬಾಡಿಗೆ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದೇವೆ. ತಂದೆ-ತಾಯಿ ಮತ್ತು ಇಬ್ಬರು ಸಹೋದರರು ತೀರಿಕೊಂಡಿದ್ದರಿಂದ  ಸಹೋದರರ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ನೀಡಲು ಬಯಸಿದ್ದೇನೆ” ಎಂದರು.

ಸೆಲ್ವಂ ಅವರು 2007ರಲ್ಲಿ ತಮಿಳುನಾಡಿನಿಂದ ಕೆಲಸ ಮಾಡಲು ಸಿಂಗಾಪುರಕ್ಕೆ ಬಂದಿದ್ದರು. ಅವರಿಗೆ ಪತ್ನಿ ಮತ್ತು ಮೂವರು ಮಕ್ಕಳಿದ್ದಾರೆ.

ಟಾಪ್ ನ್ಯೂಸ್

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

1-eqwqeewqe

Airstrike; ಅಫ್ಘಾನಿಸ್ಥಾನದಲ್ಲಿ ಪಾಕ್‌ನಿಂದ ವೈಮಾನಿಕ ದಾಳಿ: 8 ಸಾವು

Russiaದ ಅಧ್ಯಕ್ಷ ಚುನಾವಣೆಯಲ್ಲಿ ಪುಟಿನ್‌ ಜಯಭೇರಿ: 3ನೇ ವಿಶ್ವ ಯುದ್ಧದ ಎಚ್ಚರಿಕೆ!

Russiaದ ಅಧ್ಯಕ್ಷ ಚುನಾವಣೆಯಲ್ಲಿ ಪುಟಿನ್‌ ಜಯಭೇರಿ: 3ನೇ ವಿಶ್ವ ಯುದ್ಧದ ಎಚ್ಚರಿಕೆ!

police USA

America ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಹತ್ಯೆ: 3ನೇ ಕೇಸು

Indian Couple: ಕೆನಡಾದಲ್ಲಿ ಭಾರತೀಯ ಮೂಲದ ದಂಪತಿ, ಮಗಳು ಸೇರಿ ಮೂವರು ಸಜೀವ ದಹನ…

Indian Couple: ಕೆನಡಾದಲ್ಲಿ ಭಾರತೀಯ ಮೂಲದ ದಂಪತಿ, ಮಗಳು ಸೇರಿ ಮೂವರು ಸಜೀವ ದಹನ…

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.