Squid Game ಪ್ರೇರಿತ ಗೇಮ್‌ ಆಡಿ ಸಿಂಗಾಪುರದಲ್ಲಿ 11 ಲಕ್ಷ ರೂ.ಗೆದ್ದ ಭಾರತೀಯ ಮೂಲದ ಕಾರ್ಮಿಕ

ಬಡ ಕಾರ್ಮಿಕನಿಗೆ ಒಲಿದು ಬಂದ ಅದೃಷ್ಟ

Team Udayavani, Jun 1, 2023, 3:54 PM IST

Squid Game ಪ್ರೇರಿತ ಗೇಮ್‌ ಆಡಿ ಸಿಂಗಾಪುರದಲ್ಲಿ 11 ಲಕ್ಷ ರೂ.ಗೆದ್ದ ಭಾರತೀಯ ಮೂಲದ ಕಾರ್ಮಿಕ

ಸಿಂಗಾಪುರ/ಚೆನ್ನೈ: ಭಾರತೀಯ ಮೂಲದ ಕಾರ್ಮಿಕನೊಬ್ಬ ಸಿಂಗಾಪುರದಲ್ಲಿ ಆಟವೊಂದನ್ನು ಆಡಿ ಬರೋಬ್ಬರಿ 11 ಲಕ್ಷ ರೂ.ವನ್ನು ಗೆದ್ದು ರಾತ್ರೋ ರಾತ್ರಿ ಲಕ್ಷಾಧಿಪತಿ ಆಗಿದ್ದಾರೆ.!

ಕಳೆದ ಕೆಲ ವರ್ಷಗಳಿಂದ ಸಿಂಗಾಪುರದಲ್ಲಿ ಕೆಲಸದ  ನಿಮಿತ್ತ ಪೋಲಿಸಮ್ ಇಂಜಿನಿಯರಿಂಗ್‌ ಕಂಪೆನಿಯಲ್ಲಿ ಘನ ವಾಹನವಾಗಿರುವ ಕ್ರೇನ್ ಪರಿಶೀಲಿಸುವುದು ನಿರ್ವಹಿಸುತ್ತಿರುವ ಕೆಲಸವನ್ನು ಮಾಡುತ್ತಿರುವ ತಮಿಳುನಾಡು ಮೂಲದ ಸೆಲ್ವಂ ಅರುಮುಗಂ (42) ಲಕ್ಷಾಧಿಪತಿ ಆಗಿದ್ದಾರೆ.

ಕಳೆದ ವರ್ಷದಂತೆ ಕಂಪೆನಿ ಈ ವರ್ಷವೂ ʼಡಿನ್ನರ್ ಮತ್ತು ಡ್ಯಾನ್ಸ್‌ ʼ ಎಂಬ ಇವೆಂಟ್ ಆಯೋಜನೆ ಮಾಡಿದ್ದಾರೆ.‌ ಈ ಬಾರಿ ದಕ್ಷಿಣ ಕೊರಿಯಾದ ಹಿಟ್‌ ವೆಬ್‌ ಸಿರೀಸ್‌ ಗಳಲ್ಲಿ ಒಂದಾಗಿರುವ ʼ ಸ್ಕ್ವಿಡ್ ಗೇಮ್‌ʼ ಪ್ರೇರಿತವಾಗಿ ಆಟವನ್ನು ಆಯೋಜನೆ ಮಾಡಿದ್ದಾರೆ.

ʼಸ್ಕ್ವಿಡ್ ಗೇಮ್‌ʼ ನಲ್ಲಿರುವಂತೆ ಆಟಗಾರರು ಕೆಂಪು ಟ್ರ್ಯಾಕ್‌ಸೂಟ್ ಜಾಕೆಟ್‌ಗಳನ್ನು ಧರಿಸಿ ಆಟದ ನಾನಾ ಹಂತಗಳನ್ನು ದಾಟಬೇಕು. ಈ ಆಟದಲ್ಲಿ ಭಯಾನಕ ಹಂತಗಳಿರುತ್ತವೆ.

ಆಟದ ಹಂತ ಸಾಗುತ್ತಿದ್ದಂತೆ ಸ್ಪರ್ಧೆಯ ಬಹುಮಾನದ ಮೊತ್ತ ಕಾಣಿಸುತ್ತದೆ. ಹಣ ತುಂಬಿದ ದೊಡ್ಡ ಬಲೂನ್‌ ಆಟಗಾರರಿಗೆ ಕಾಣಿಸುತ್ತದೆ.  ಎಲ್ಲಾ ಹಂತವನ್ನು ದಾಟಿದ ಬಳಿಕ ಈ ಸ್ಪರ್ಧೆಯಲ್ಲಿ ಸೆಲ್ವಂ ಅರುಮುಗಂ ಸಾಧಿಸುತ್ತಾರೆ. ಎಲಿಮಿನೇಷನ್‌ ಆಗದೆ ಕೊನೆಯವರೆಗೂ ಬಂದು ಆಟದಲ್ಲಿ ಸೆಲ್ವಂ ಗೆಲುವು ಸಾಧಿಸಿದ್ದಾರೆ.

ಕಂಪೆನಿ ಆಯೋಜಿಸಿದ ಈ ಆಟದ ಬಹುಮಾನ ಬರೋಬ್ಬರಿ 11 ಲಕ್ಷ ರೂ. ರಾತ್ರಿ ಬೆಳಗ್ಗೆ ಆಗುವಷ್ಟರಲ್ಲಿ ತಮಿಳುನಾಡಿನಲ್ಲಿ ಒಂದು ಬಾಡಿಗೆಯ ಅಪಾರ್ಟ್‌ ಮೆಂಟ್‌ ನಲ್ಲಿ ವಾಸಿಸುತ್ತಿದ್ದ ಸೆಲ್ವಂ ಅರುಮುಗಂ ಲಕ್ಷಾಧಿಪತಿ ಆಗಿದ್ದಾರೆ. ಬಹುಮಾನವನ್ನು ಪಡೆಯಲು ಹೋದಾಗ ಬಹುಮಾನದ ಹಣವನ್ನು ಕೊಟ್ಟ ವ್ಯಕ್ತಿಯ ಕಾಲಿಗೆ ಅಡ್ಡ ಬಿದ್ದು ಸೆಲ್ವಂ ಅರುಮುಗಂ ಭಾವುಕರಾಗಿದ್ದಾರೆ.

ನನಗೆ ನಿಜವಾಗಿಯೂ ಆಟದ ನಿಯಮಗಳು ಗೊತ್ತಾಗಿಲ್ಲ. ಎಲ್ಲರೂ ಆಡುವಾಗ ಅವರನ್ನು ನಾನು ಹಿಂಬಾಲಿಸಿದೆ ಎಂದು ಸೆಲ್ವಂ ಅರುಮುಗಂ ಹೇಳುತ್ತಾರೆ.

ಗೆಲುವಿನ ಬಗ್ಗೆ ಮಾತನಾಡಿದ ಅವರು, “ನನ್ನ ಗೆಲುವಿನ ಬಗ್ಗೆ ಹೇಳಲು ನಾನು ಮನೆಯವರಿಗೆ ಕರೆ ಮಾಡಿದೆ. ನನ್ನ ಹೆಂಡತಿ ಬಳಿ ಇದನ್ನು ಹೇಳುವಾಗ ಅವಳು ತಮಾಷೆ ಅಂದುಕೊಂಡಳು ಆ ಬಳಿಕ ನನ್ನ ಸ್ನೇಹಿತ ಹೇಳಿದಾಗ ಆಕೆ ದುಃಖವನ್ನು ಸಹಿಸದೇ ಅತ್ತು ಬಿಟ್ಟಳು. ಇದು ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣ” ಎಂದರು.

“ಮನೆ ನಿರ್ಮಿಸಲು ಬಹುಮಾನದ ಹಣವನ್ನು ಬಳಸುತ್ತೇನೆ. ನಮ್ಮದು 15 ಸದಸ್ಯರನ್ನು ಒಳಗೊಂಡ  ಕುಟುಂಬ. ಪ್ರಸ್ತುತ ಬಾಡಿಗೆ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದೇವೆ. ತಂದೆ-ತಾಯಿ ಮತ್ತು ಇಬ್ಬರು ಸಹೋದರರು ತೀರಿಕೊಂಡಿದ್ದರಿಂದ  ಸಹೋದರರ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ನೀಡಲು ಬಯಸಿದ್ದೇನೆ” ಎಂದರು.

ಸೆಲ್ವಂ ಅವರು 2007ರಲ್ಲಿ ತಮಿಳುನಾಡಿನಿಂದ ಕೆಲಸ ಮಾಡಲು ಸಿಂಗಾಪುರಕ್ಕೆ ಬಂದಿದ್ದರು. ಅವರಿಗೆ ಪತ್ನಿ ಮತ್ತು ಮೂವರು ಮಕ್ಕಳಿದ್ದಾರೆ.

ಟಾಪ್ ನ್ಯೂಸ್

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

Copters crash into each other

Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್‌ಗಳು: 10 ಯೋಧರು ಸಾವು

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

1-wewwqewewqe

US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.