ಪಾಸ್ ವರ್ಡ್ ಕ್ರಿಯೇಟ್ ಮಾಡುವಾಗ ಈ 10 ಅಂಶಗಳನ್ನು ನೀವು ಗಮನಿಸಲೇಬೇಕು !


ಮಿಥುನ್ ಪಿಜಿ, Sep 22, 2020, 6:12 PM IST

password

ಪಾಸ್ ವರ್ಡ್ ನೆನಪಿಟ್ಟುಕೊಳ್ಳುವುದು ಇಂದಿನ ಕಾಲಘಟ್ಟದಲ್ಲಿ ಸುಲಭ ಸಾಧ್ಯವಲ್ಲ. ಇತ್ತೀಚಿನ ದಿನಗಳಲ್ಲಿ ಹಲವಾರು ಆ್ಯಪ್ ಗಳು, ಡಿವೈಸ್, ಜಿಮೇಲ್ ಸೇರಿದಂತೆ ಇತರೆ ಫ್ಲ್ಯಾಟ್ ಪಾರ್ಮ್ ಗಳನ್ನು ನಿಯಮಿತವಾಗಿ ಬಳಸುವುದರಿಂದ ಎಲ್ಲದಕ್ಕೂ ಒಂದೊಂದು ಪಾಸ್ ವರ್ಡ್ ಅಳವಡಿಸಿರುತ್ತೇವೆ.

ಪ್ರತಿಯೊಬ್ಬರೂ ಕೂಡ ನೆನಪಿಟ್ಟುಕೊಳ್ಳಲು ಸುಲಭವಾದ ಪಾಸ್ ವರ್ಡ್ ಗಳನ್ನೇ ಸೆಟ್ ಮಾಡಿರುತ್ತಾರೆ. ಕೆಲವೊಮ್ಮೆ ಪಾಸ್ ವರ್ಡ್ Expiry ಸಮಯ ಬಂದಾಗ ಹಿಂದಿನ ಪಾಸ್ ವರ್ಡ್ ನ ಕೊನೆಯ ಅಕ್ಷರವನ್ನು ಮಾತ್ರ ಬದಲಿಸಿರುತ್ತೀರಿ. ಆದರೇ ಇದು ಒಳ್ಳೆಯ ಬೆಳವಣಿಗೆಯಲ್ಲ. ಮಾತ್ರವಲ್ಲದೆ ಅಪಾಯಕಾರಿಯೂ ಹೌದು.

ಅದಾಗ್ಯೂ ಹೊಸ ಪಾಸ್ ವರ್ಡ್ ಸೆಟ್ ಮಾಡುವಾಗ ನೆನಪಿಟ್ಟುಕೊಳ್ಳಬೇಕಾದ ಅಂಶಗಳು ಯಾವುದು ? ಎಂಬುದನ್ನು ತಿಳಿಯೋಣ.

* ವಿವಿಧ ಫ್ಲ್ಯಾಟ್ ಫಾರ್ಮ್ ಗಳಲ್ಲಿ ಒಂದೇ ತೆರನಾದ ಪಾಸ್ ವರ್ಡ್ ಬಳಸಬೇಡಿ. ಒಂದೊಮ್ಮೆ ನಿಮ್ಮ ಯಾವುದೇ ಒಂದು ಖಾತೆ ಹ್ಯಾಕ್ ಆದರೂ ಕೂಡ, ಅವರು ನಿಮ್ಮ ಇತರೆ ಅಕೌಂಟ್ ಗಳಿಗೆ ಲಗ್ಗೆ ಇಡುತ್ತಾರೆ.

* ಪಾಸ್ ವರ್ಡ್ ನಲ್ಲಿ ಯಾವುದೇ ಕಾರಣಕ್ಕೂ ಹೆಸರನ್ನು ಬಳಸಲೇಬೇಡಿ. ಪ್ರಮುಖವಾಗಿ ನಿಮ್ಮ ಪೋಷಕರ ಹೆಸರು, ಒಡಹುಟ್ಟಿದವರು, ಸಾಕುಪ್ರಾಣಿಗಳ ಹೆಸರು, ಕಾರು ಗಳ ಬ್ರಾಂಡ್ ಹೆಸರು, ಇವೆಲ್ಲಾ ಬಹಳ ಸುಲಭವಾದ ಮತ್ತು ಪತ್ತೆಹಚ್ಚಲು ಸಾಧ್ಯವಾಗುವ ಪಾಸ್ ವರ್ಡ್ ಗಳು.

*  ಯಾವುದೇ ಕಾರಣಕ್ಕೂ ನಿಮ್ಮ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ನ ನಂಬರ್ ಹಾಗೂ ಮೊಬೈಲ್ ನಂಬರ್ ಕೂಡ ಪಾಸ್ ವರ್ಡ್ ಆಗಿ ಬಳಸಬೇಡಿ. ಮುಖ್ಯವಾಗಿ ಜನ್ಮದಿನಾಂಕಗಳು ಹಾಗೂ ವಾರ್ಷಿಕೋತ್ಸವದ ದಿನಾಂಕಗಳಿಂದ ಆದಷ್ಟೂ ದೂರ ಇರುವುದು ಒಳಿತು.

*  ಪಾಸ್ ಪೋರ್ಟ್ ನಂಬರ್, ಪಾನ್ ಕಾರ್ಡ್ ನಂಬರ್ ಮುಂತಾದವುಗಳ ಸೀರಿಯಲ್ ನಂಬರ್ ಗಳನ್ನು ಕೂಡ ಪಾಸ್ ವರ್ಡ್ ಆಗಿ ಬಳಸುವುದು ಅಪಾಯಕಾರಿ.

*  ಒಮ್ಮೆ ಬಳಸಿದ ಪಾಸ್ ವರ್ಡ್ ಗಳನ್ನು ಮತ್ತೊಮ್ಮೆ ಉಪಯೋಗಿಸಬೇಡಿ. ಹಲವು ಜಾಲತಾಣಗಳು ಒಮ್ಮೆ ಬಳಸಿದ ಪಾಸ್ ವರ್ಡ್ ಗಳನ್ನು ತೆಗೆದುಕೊಳ್ಳುವುದಿಲ್ಲವಾದರೂ, ಇವುಗಳ ಬಳಕೆಯನ್ನು ನಿಲ್ಲಿಸಿ. ಯಾಕೆಂದರೇ ಹ್ಯಾಕರ್ ಗಳು ಡೇಟಾ ಬೇಸ್ ಲೀಕ್ ಮಾಡುವ ಸಂದರ್ಭದಲ್ಲಿ ಡಾರ್ಕ ವೆಬ್ ನಲ್ಲಿ ಹಳೆಯ ಪಾಸ್ ವರ್ಡ್ ಗಳನ್ನು ಕೂಡ ಹಂಚಿರುತ್ತಾರೆ.

 

*  ಆನ್ ಲೈನ್ ಗಳಲ್ಲಿ ನಿಮ್ಮ ಪಾಸ್ ವರ್ಡ್ ಅನ್ನು ಸೇವ್ ಮಾಡಬೇಡಿ. ಮುಖ್ಯವಾಗಿ ಇಮೇಲ್ ಡ್ರಾಫ್ಟ್ ನಲ್ಲಿ ಕೂಡ. ಪಾಸ್ ವರ್ಡ್ ಗಳನ್ನು ಎಲ್ಲಾದರೂ ಬರೆದಿಟ್ಟುಕೊಳ್ಳುವುದು ಸೂಕ್ತ. ಇಂಟರ್ ನೆಟ್ ಕನೆಕ್ಟ್ ಆಗಿರುವ ಯಾವುದೇ ಆ್ಯಪ್ ನಲ್ಲಿ ಪಾಸ್ ವರ್ಡ್ ಬರೆದಿಡುವುದು ಸೂಕ್ತವಲ್ಲ.

*  ಗೂಗಲ್ ನಂತಹ ಬ್ರೌಸರ್ ನಲ್ಲಿ ಪಾಸ್ ವರ್ಡ್ ಸೇವ್ ಆಯ್ಕೆ ಇರುವುದನ್ನು ಗಮನಿಸಿರಬಹುದು. ಈ ಫೀಚರ್ ಬಹಳ ಉಪಯೋಗಕಾರಿ. ಅದಾಗ್ಯೂ ಇದನ್ನು ಬಳಸದಿರುವುದು ಉತ್ತಮ. ಯಾಕೆಂದರೇ ನಿಮಗೆ ತಿಳಿಯದೇ ಯಾವುದೇ ಥರ್ಡ್ ಪಾರ್ಟಿ ವೆಬ್ ಸೈಟ್ ಗಳೀಗೆ ಪ್ರವೇಶಿಸಿದರೇ ಅವು ನಿಮ್ಮೆಲ್ಲಾ ಪಾಸ್ ವರ್ಡ್ ಗಳನ್ನು ಕಸಿದುಕೊಳ್ಳುವುದು ಖಂಡಿತಾ.

*  two-factor authentication ಆಯ್ಕೆಯಿದ್ದಲ್ಲಿ ಹೆಚ್ಚಾಗಿ ಬಳಸುವುದು ಉತ್ತಮ.

*  ಪ್ರತಿ 5 ತಿಂಗಳಿಗೊಮ್ಮೆ ಪಾಸ್ ವರ್ಡ್ ಬದಲಾಯಿಸುವುದು ಒಳ್ಳೆಯ ಹವ್ಯಾಸ. ಇದು ತುಂಬಾ ಕಷ್ಟಕರವಾದರೂ, ಎಲ್ಲಾ ಕಳೆದುಕೊಳ್ಳುವ ಮುನ್ನ ಎಚ್ಚೆತ್ತುಕೊಳ್ಳುವುವುದು ಸೂಕ್ತವಲ್ಲವೇ?

*   ಮುಖ್ಯವಾಗಿ ಪಾಸ್ ವರ್ಡ್ ಸೆಟ್ ಮಾಡುವಾಗ ವರ್ಡ್, ಸಿಂಬಲ್ಸ್ ಮುಂತಾದವನ್ನು ಬಳಸಿಕೊಂಡು ಕನಿಷ್ಟ 10-15 ಪದಗಳಿರುವಂತೆ ನೋಡಿಕೊಳ್ಳಿ. ಉದಾ: “E7r9t8@Q#h%Hy+M”.

ಟಾಪ್ ನ್ಯೂಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jammu Kashmir: ಗುಲ್‌ ಮಾರ್ಗ್‌, ಆದಿ ಶಂಕರಾಚಾರ್ಯ ಪೀಠ..ನೋಡಲೇಬೇಕಾದ ಸ್ಥಳಗಳು ಹಲವು…

Jammu Kashmir: ಗುಲ್‌ ಮಾರ್ಗ್‌, ಆದಿ ಶಂಕರಾಚಾರ್ಯ ಪೀಠ..ನೋಡಲೇಬೇಕಾದ ಸ್ಥಳಗಳು ಹಲವು…

ಬರದ ಬಿಕ್ಕಟ್ಟು:ತಂತ್ರಜ್ಞಾನ ನಗರಿ ಬೆಂಗಳೂರನ್ನು ದಿವಾಳಿಯಂಚಿಗೆ ತಳ್ಳುವುದೇ ನೀರಿನ ಸಮಸ್ಯೆ?

ಬರದ ಬಿಕ್ಕಟ್ಟು:ತಂತ್ರಜ್ಞಾನ ನಗರಿ ಬೆಂಗಳೂರನ್ನು ದಿವಾಳಿಯಂಚಿಗೆ ತಳ್ಳುವುದೇ ನೀರಿನ ಸಮಸ್ಯೆ?

Desi Swara: ಇಟಲಿಯಲ್ಲಿ ಶ್ರೀರಾಮನಾಮ ಸತ್ಸಂಗ, ಆರಾಧನೆ

Desi Swara: ಇಟಲಿಯಲ್ಲಿ ಶ್ರೀರಾಮನಾಮ ಸತ್ಸಂಗ, ಆರಾಧನೆ

Jammu-Kashmir ಅಂದು-ಇಂದು: ಕಾಶ್ಮೀರಿ ಜನರ ಮನಸ್ಥಿತಿ ಈಗ ಹೇಗಿದೆ ಗೊತ್ತಾ?

Jammu-Kashmir ಅಂದು-ಇಂದು: ಕಾಶ್ಮೀರಿ ಜನರ ಮನಸ್ಥಿತಿ ಈಗ ಹೇಗಿದೆ ಗೊತ್ತಾ?

Jammu-Kashmir: ಅಂದು-ಇಂದು- ಸಮೃದ್ಧಿಯ ನಾಡು- ನೆಮ್ಮದಿಯ ಬೀಡು

Jammu-Kashmir: ಅಂದು-ಇಂದು- ಸಮೃದ್ಧಿಯ ನಾಡು- ನೆಮ್ಮದಿಯ ಬೀಡು

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

8-wenlock

Wenlockನಲ್ಲಿ ಮೂಲಸೌಕರ್ಯ ಕೊರತೆ; ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಪೊಲೀಸ್‌ಗೆ ದೂರು

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.