ಬರದ ನಾಡಿನಲ್ಲೊಬ್ಬಳು ‘ಭಗೀರಥೆ’…ಜಲಕ್ರಾಂತಿಗೆ ಸಾಕ್ಷಿಯಾದಳು 19 ವರ್ಷದ ತರುಣೆ  


Team Udayavani, Feb 20, 2021, 8:55 PM IST

Babita r

ಮಧ್ಯಪ್ರದೇಶ : ಗಂಗೆಯನ್ನು ಭೂಮಿಗೆ ಕರೆತಂದ ಭಗೀರಥನಂತೆ ಬುಂದೇಲ್‌ಖಂಡ್ ನ ಬಬಿತಾ ರಜಪೂತ್ ಬರದಿಂದ ನಲಗುತ್ತಿದ್ದ ತನ್ನೂರಿನಲ್ಲಿ ಜಲಕ್ರಾಂತಿ ಮಾಡಿದ್ದಾರೆ.

ಮಧ್ಯಪ್ರದೇಶದ ಆಗ್ರೋಥ ಗ್ರಾಮದಲ್ಲಿ ಮೊದಲಿಂದಲೂ ಜೀವಜಲಕ್ಕೆ ಪರಿತಪಿಸುವ ಪರಿಸ್ಥಿತಿ ಇತ್ತು. ವರ್ಷದಲ್ಲಿ ಎರಡ್ಮೂರು ಸಾರಿ ಬೀಳುವ ಮಳೆ ನೀರು ಯಾವುದಕ್ಕೂ ಸಾಕಾಗುತ್ತಿರಲಿಲ್ಲ. ನೀರಿಲ್ಲದೆ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದವು. ವರ್ಷಕ್ಕೆ ಒಂದು ಬೆಳೆ ಬೆಳಯಲು ಹರಸಾಹಸ ಪಡುವ ದುಸ್ಥಿತಿ ಈ ಗ್ರಾಮಕ್ಕೆ ಬಂದೋದಗಿತ್ತು. ಬೇಸಿಗೆ ಕಾಲದಲ್ಲಿ ದೂರದ ಊರಿಂದ ನೀರು ತರಲು ಮಕ್ಕಳು ಶಾಲೆಯನ್ನೇ ಬಿಡಬೇಕಾಗುತ್ತಿತ್ತು.

ಆಗ್ರೋಥ ಗ್ರಾಮದಲ್ಲಿ 70 ಎಕರೆ ವಿಸ್ತೀರ್ಣದ ಕೆರೆಯಿದ್ದರೂ ನೀರಿಲ್ಲದೆ ಬರಿದಾಗಿತ್ತು. ಮಳೆಯಿಂದ ಸಂಗ್ರಹವಾಗುವ ಅಲ್ಪ ಪ್ರಮಾಣದ ನೀರು ಗ್ರಾಮಸ್ಥರಿಗೆ ಸಾಕಾಗುತ್ತಿರಲಿಲ್ಲ. 2018 ರಲ್ಲಂತೂ ಈ ಗ್ರಾಮಕ್ಕೆ ಮಳೆರಾಯನ ದರುಶನ ಅಪರೂಪವಾಗಿತ್ತು. ಕೇವಲ ಎರಡು ಬಾರಿ ಮಾತ್ರ ಮಳೆ ಸುರಿಯಿತು. ಈ ನೀರು ಕೂಡ ಹರಿದು ಪೊಲಾಯಿತು.

ಜಲಕ್ರಾಂತಿಗೆ ಪಣ ತೊಟ್ಟ ಬಬಿತಾ :

ಡಿಗ್ರಿ ಮುಗಿಸಿರುವ ಬಬಿತಾ ತಮ್ಮ ಗ್ರಾಮದ ನೀರಿನ ಸಮಸ್ಯೆ ಹೋಗಲಾಡಿಸಲು ಪಣ ತೊಡುತ್ತಾಳೆ. ಬೆಟ್ಟದಿಂದ ಹರಿದು ಪೊಲಾಗುವ ನೀರನ್ನು ಕೆರೆಗೆ ತರಲು ಯೋಜನೆ ರೂಪಿಸುತ್ತಾಳೆ. ಇದಕ್ಕಾಗಿ ಕಾಲುವೆ ತೋಡಬೇಕಾಗುತ್ತದೆ. ಕೆರೆಯ ಸುತ್ತಮುತ್ತಲಿನ ಜಾಗ ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿದ್ದರಿಂದ ಇದಕ್ಕೆ ಅನುಮತಿ ದೊರೆಯುವುದಿಲ್ಲ. ಆದರೆ, ಅಧಿಕಾರಿಗಳಿಗೆ ತನ್ನೂರಿನ ಪರಿಸ್ಥಿತಿ ತಿಳಿ ಹೇಳಿ ಕಾಲುವೆ ನಿರ್ಮಿಸಲು ಅನುಮತಿ ಪಡೆಯುತ್ತಾಳೆ ಈ ಗಟ್ಟಿ ಗಿತ್ತಿ.

 

ಬರದ ನಾಡಿನಲ್ಲೊಬ್ಬಳು ‘ಭಗೀರಥೆ’…ಜಲಕ್ರಾಂತಿಗೆ ಸಾಕ್ಷಿಯಾದಳು 19 ವರ್ಷದ ತರುಣೆ  

7 ತಿಂಗಳ ಕಾಲ ಪ್ರರಿಶ್ರಮ :

ಮಳೆಯ ನೀರನ್ನು ಕೆರೆಗೆ ತರಲು ಮುಂದಾದ ಬಬಿತಾ, ತಾನೇ ಕಾಲುವೆ ನಿರ್ಮಿಸಲು ಪಿಕಾಸಿ ಹಿಡಿದು ಮುಂದಾಗುತ್ತಾಳೆ. ಇವಳಿಗೆ ಊರಿನ 200 ಮಹಿಳೆಯರು ಕೈ ಜೋಡಿಸುತ್ತಾರೆ. 7 ತಿಂಗಳಿನಲ್ಲಿ ಕಾಲುವೆ ಸಿದ್ಧವಾಗುತ್ತೆ. ಈ ಸಾಹಸಿಯರ ಬೆವರು ಹನಿಯ ಪ್ರತೀಕವಾಗಿ ಕಳೆದ ಒಂದು ವರ್ಷದಿಂದ ಊರಿನ ಕೆರೆ ತುಂಬಿ ತುಳುಕುತ್ತಿದೆ.

ತುಂಬಿತು ಕೆರೆ, ನೀಗಿತು ಬರದ ಹೊರೆ :     

ಮನಸಿದ್ದರೆ ಮಾರ್ಗ ಎಂಬುವುದಕ್ಕೆ ಈ ಊರಿನ ಬಬಿತಾ ಸಾಕ್ಷಿಯಾಗಿದ್ದಾರೆ. ಇವರು ಮಾಡಿರುವ ಜಲಕ್ರಾಂತಿಗೆ ಊರಿನ ಸಮಸ್ಯೆ ದೂರವಾಗಿದೆ. ಬರದಿಂದ ನಲುಗುತ್ತಿದ್ದ ಆಗ್ರೋಥ ಗ್ರಾಮದಲ್ಲಿ ನೀರಿನ ಸಮಸ್ಯೆ ನೀಗಿದೆ. ಮಳೆಯ ನೀರು ನೇರವಾಗಿ ಕೆರೆಗೆ ಹರಿದು ಬರುತ್ತಿದೆ. ಪರಿಣಾಮ ವರ್ಷಕ್ಕೆ ಎರಡು ಬೆಳೆ ಬೆಳೆಯುತ್ತಿದ್ದಾರೆ ಇಲ್ಲಿಯ ರೈತರು.

2020ರಲ್ಲಿಯೂ ಕಡಿಮೆ ಮಳೆಯಾಯಿತು. ಆದರೂ 10 ಬಾವಿ, 5 ಬೋರ್ ವೆಲ್ ಗಳು ನೀರು ಚಿಮ್ಮುತ್ತಿವೆ. ನನ್ನ 12 ಎಕರೆ ಜಮೀನು ಈಗ ನೀರಾವರಿಯಾಗಿದೆ ಎನ್ನುತ್ತಾರೆ ಈ ಗ್ರಾಮದ ರೈತ ರಾಮರತನ್ ರಜಪೂತ್.

ಟಾಪ್ ನ್ಯೂಸ್

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

11

ಪೊಲೀಸ್‌ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್‌ ಸ್ಟರ್‌ ಆದದ್ದೇಗೆ?

ಸಲ್ಮಾನ್‌ ಖಾನ್‌ ಟು ಸಿಧು ಮೂಸೆವಾಲ: ಗುಂಡಿನ ದಾಳಿಗೆ ಬೆದರಿದ ಸೆಲೆಬ್ರಿಟಿಗಳಿವರು

ಸಲ್ಮಾನ್‌ ಖಾನ್‌ ಟು ಸಿಧು ಮೂಸೆವಾಲ: ಗುಂಡಿನ ದಾಳಿಗೆ ಬೆದರಿದ ಸೆಲೆಬ್ರಿಟಿಗಳಿವರು

ರೋಮಾಂಚನಗೊಳಿಸುವ ಡಿಸ್ನಿ ಲೋಕ…. ; ಇಲ್ಲಿ ಎಲ್ಲವೂ ಕಣ್ಣೆದುರಿಗೆ

Disneyland: ರೋಮಾಂಚನಗೊಳಿಸುವ ಡಿಸ್ನಿ ಲೋಕ….ಇಲ್ಲಿ ಎಲ್ಲವೂ ಕಣ್ಣೆದುರಿಗೆ…

kambala-main

Kambala; ಹೀಗೆಯೇ ಮುಂದುವರಿದರೆ ಇರಬಹುದೇ ‘ಕಂಬುಲ ನನ ದುಂಬುಲಾ’?

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Loksabha

Udupi Chikmagalur Lok Sabha Election: ಮಹಿಳಾ ಮತದಾರರೇ ಅಧಿಕ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

3-

ಕಾರ್ಯಕರ್ತರ ಸಭೆ; ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಗೆ ಬೆಂಬಲ ನೀಡಿ ಗೆಲ್ಲಿಸುವಂತೆ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.