ಬಾಡಿ ಡಿಸ್ಮಾರ್ಫಿಕ್ ಡಿಸ್ ಆರ್ಡರ್ : ಲಕ್ಷಣಗಳೇನು..?


ಶ್ರೀರಾಜ್ ವಕ್ವಾಡಿ, Apr 30, 2021, 9:45 AM IST

Body dysmorphic disorder is a mental health condition

ದೇಹದ ಬಗ್ಗೆ ಕಡಿಮೆ ಆತ್ಮ ಗೌರವ ಹಾಗೂ ಋಣಾತ್ಮಕ ಯೋಚನೆ ಸಾಮಾನ್ಯವಾಗಿ ಹೆಚ್ಚಿನವರಲ್ಲಿ ಇರುತ್ತದೆ. ಇಂತಹ ಸಮಸ್ಯೆಯನ್ನು ಬಾಡಿ ಡಿಸ್ಮಾರ್ಫಿಕ್ ಡಿಸ್ ಆರ್ಡರ್ ಎಂದು ಕರೆಯುತ್ತಾರೆ. ಇದು ನಮ್ಮ ಮಾನಸಿಕ ಸಮಸ್ಯೆಯ ಬಗ್ಗೆ ಒಂದು. ನಮ್ಮ ಬ್ಯೂಟಿ ಬಗ್ಗೆ ಅಥವಾ ನಮ್ಮ ಸೌಂದರ್ಯದ ಬಗ್ಗೆ ಅತಿಯಾದ ಕಾಳಜಿ ಇರುವುದನ್ನು ಬಾಡಿ ಡಿಸ್ಮಾರ್ಫಿಕ್ ಡಿಸ್ ಆರ್ಡರ್ ಎಂದು ಹೇಳಲಾಗುತ್ತದೆ.

ಇದನ್ನು ಬಿಡಿಡಿ ಎಂದು ಕೂಡ ಕರೆಯಲಾಗುತ್ತದೆ. ಸಾಮಾನ್ಯವಾಗಿ ಎಲ್ಲರಲ್ಲೂ ಈ ಸಮಸ್ಯೆ ಇದ್ದೇ ಇರುತ್ತದೆ. ಟೀನ್ ಏಜ್ ಅಥವಾ ಹರೆಯದ ವಯಸ್ಸಿನವರಲ್ಲಿ ಹೆಚ್ಚಾಗಿ ಈ ಸಮಸ್ಯೆ ಹೆಚ್ಚಾಗಿರುತ್ತದೆ.

ತಮ್ಮ ದೈಹಿಕ ಸೌಂದರ್ಯದ ಬಗ್ಗೆ ಅತಿಯಾದ ಕಾಳಜಿ ಇದಾಗಿದೆ. ಉದಾಹರಣೆಗೆ, ತಲೆ ಕೂದಲು ಉದುರುತ್ತಿದೆ,  ನನ್ನ ಮುಖ ಚೆಂದವಿಲ್ಲ, ನನ್ನ ನಗು ಚೆಂದವಿಲ್ಲ, ನಾನು ನಡೆಯುವುದು ಚೆನ್ನಾಗಿ ಕಾಣಿಸುತ್ತಿಲ್ಲ .. ಹೀಗೆ ತಮ್ಮ ಬಗ್ಗೆಯೇ, ತನ್ನ ದೈಹಿಕ ಸೌಂದರ್ಯದ ಬಗ್ಗೆಯೇ ಹೆಚ್ಚು ಕಾಳಜಿ ಇರುವುದನ್ನು ಈ ಸಮಸ್ಯೆ ಇರುವವರಲ್ಲಿ ಕಾಣುವುದಕ್ಕೆ ಸಿಗುತ್ತದೆ.

ಸೋಶಿಯಲ್ ಲರ್ನಿಂಗ್ ಮೂಲಕ ತಮ್ಮ ಬಗ್ಗೆ ತಾವು ಒಂದು ರೀತಿಯಲ್ಲಿ ಅಸಹ್ಯ ಭಾವನೆಯನ್ನು ಹೊಂದಿರುವುದು ಈ ರೀತಿಯ ಸಮಸ್ಯೆಯನ್ನು ಹೊಂದಿರುವವರಲ್ಲಿ ಆಣಸಿಗುತ್ತದೆ. ಅಂದರೇ, ಇನ್ನೊಬ್ಬರ ಸೌಂದರ್ಯವನ್ನು ನೋಡಿ ನಾವು ಹಾಗಿಲ್ಲವಲ್ಲ ಎಂದು ಪರಿತಪಿಸುವುದು, ನಾನು ಅವರಂತೆ ಕಾಣಬೇಕು, ನಾನು ಅವರ ಹಾಗೆ ಬದುಕಬೇಕು, ನನ್ನ ದೈಹಿಕ ಸೌಂದರ್ಯ ಅವರಂತೆಯೇ ಇರಬೇಕು… ಹೀಗೆ ಇಂತಹ ಸಣ್ಣ ಸಣ್ಣ ಬಯಕೆಗಳಿಂದಲೇ ಕೊರಗುವ ಸಾಮಾನ್ಯ ಹದಿಹರೆಯದವರ ಮಾನಸಿಕ ಸಮಸ್ಯೆ ಇದಾಗಿದೆ.

ಈ ಸಮಸ್ಯೆ ಇರುವವರಲ್ಲಿ ಸಾಮಾನ್ಯವಾಗಿ ಈಟಿಂಗ್ ಡಿಸ್ ಆರ್ಡರ್, ಸೆಲ್ಫ್ ವಾಮಿಟಿಂಗ್, ಡ್ರಗ್ಸ್, ಆಲ್ಕೋ ಹಾಲ್ ಚಟಕ್ಕೆ ಒಳಗಾಗುವುದನ್ನು ನಾವು ಸಾಮಾನ್ಯವಾಗಿ ಕಾಣಬಹುದು. ಸಿಟ್ಟು, ಕೋಪ ಸಾಮಾನ್ಯವಾಗಿ ಹಚ್ಚಾಗಿರುತ್ತದೆ.

ಪದೇ ಪದೇ ಕನ್ನಡಿ ನೋಡಿಕೊಳ್ಳುವುದು, ತಮ್ಮ ದೈಹಿಕ ಬಾಹ್ಯ ಸೌಂದರ್ಯದ ಬಗ್ಗೆಯೇ ಹೆಚ್ಚಾಗಿ ಕೊರಗುವುದರಿಂದ ಅವರು ಸೋಶಿಯಲ್ ಡಿಸ್ಟ್ಯಾನ್ಸ್ ನಿಂದ ಇರುತ್ತಾರೆ. ಅಂದರೇ, ಹೆಚ್ಚಾಗಿ ಒಬ್ಬಂಟಿಯಾಗಿ ಇರಲು ಬಯಸುತ್ತಾರೆ.

ಸಾಮಾನ್ಯವಾಗಿ ಇದು ಇಪ್ಪತ್ತು ವರ್ಷ ಕಳೆಯುವ ತನಕ ಅಂದರೇ ಪದವಿ ಕಾಲೇಜು ಜೀವನ ಕಳೆಯುವುದರ ತನಕ ಹೆಚ್ಚಾಗಿ ಇರುತ್ತದೆ.

ನಮ್ಮಲ್ಲಿ ಹೆಚ್ಚಿನವರಿಗೆ ನಮ್ಮ ದೇಹದ ಕುರಿತು ತೃಪ್ತಿ ಇರುವುದಿಲ್ಲ. ತಮ್ಮ ದೇಹ ಅಥವಾ ದೈಹಿಕ ಆಕೃತಿಯ ಬಗ್ಗೆ ಸಂತೃಪ್ತಿ ಇರುವವರು ಬಹಳ ಕಡಿಮೆ. ಕೆಲವರು ಎತ್ತರವಾಗಲು ಬಯಸಿದರೆ, ಕೆಲವರು ಗಿಡ್ಡವಾಗಲು ಬಯಸುತ್ತಾರೆ. ಇನ್ನು ಕೆಲವರಿಗೆ ಪುಷ್ಟವಾದ ಮೈಕಟ್ಟು ಮತ್ತು ದಪ್ಪ ಕೂದಲಿನ ಬಯಕೆಯಿರುತ್ತದೆ. ಆದರೆ ಕೆಲವರಲ್ಲಿ ಈ ಬಯಕೆಗಳು ಅತ್ಯಂತ ತೀವ್ರವಾಗಿ ಅದೊಂದು ಗೀಳಾಗಿ ಬದಲಾಗುತ್ತದೆ. ಇದರಿಂದಾಗಿ ಅವರು ತಮ್ಮ ಶಾಲೆ, ಕಾಲೇಜು ಅಥವಾ ಕಛೇರಿಗೆ ಹೋಗುವುದನ್ನೇ ನಿಲ್ಲಿಸಬಹುದು.

ಬಾಡಿ ದಿಸ್ಮಾರ್ಫಿಕ್ ಡಿಸ್ ಆರ್ಡರ್ ಒಂದು ಕ್ಲಿನಿಕಲ್ ಪರಿಸ್ಥಿತಿಯಾಗಿದ್ದು, ಇದರಿಂದಾಗಿ ವ್ಯಕ್ತಿಯು ತನ್ನ ದೇಹದ ಆಕೃತಿ ಅಥವಾ ಮೂಗು, ಬಣ್ಣ, ಕಿವಿ, ತುಟಿಗಳಂತಹ ನಿರ್ದಿಷ್ಟ ಅಂಗಾಂಗಗಳ ಆಕಾರಗಳ ಬಗ್ಗೆ ಅತಿಯಾಗಿ ಮತ್ತೆ ಮತ್ತೆ ಚಿಂತೆ ಮಾಡುತ್ತಾರೆ.

ಬಾಡಿ ಡಿಸ್ಮಾರ್ಫಿಕ್ ಡಿಸ್ ಆರ್ಡರ್ ನಿಂದ ಬಳಲುತ್ತಿರುವ ವ್ಯಕ್ತಿಗಳು ತಮ್ಮ ಬಗ್ಗೆ ಅತಿಯಾದ ನಿರೀಕ್ಷೆಯನ್ನು ಹೊಂದಿರುತ್ತಾರೆ ಅಥವಾ ತಮ್ಮನ್ನು ತಾವು ಪರಿಪೂರ್ಣರಾಗಿಸಲು ಪ್ರಯತ್ನಿಸುತ್ತಾರೆ. ಇದರಿಂದ ತಮ್ಮ ತಪ್ಪುಗಳ ಬಗ್ಗೆ ಇತರರಿಂದ ಮತ್ತೆ ಮತ್ತೆ ಅಭಿಪ್ರಾಯಗಳನ್ನು ಪಡೆಯಬಹುದು. ಇಂತಹ ಸಂದರ್ಭಗಳಲ್ಲಿ ವ್ಯಕ್ತಿಯು ಮಾನಸಿಕ ಆರೋಗ್ಯ ತಜ್ಞರನ್ನು ಭೇಟಿಯಾಗುವಂತೆ ಮಾಡುವಲ್ಲಿ ಕುಟುಂಬದ ಪಾತ್ರ ಪ್ರಮುಖವಾಗಿರುತ್ತದೆ. ವ್ಯಕ್ತಿಯು ಚಿಕಿತ್ಸೆ ಪಡೆಯುತ್ತಿರುವಾಗ ಕುಟುಂಬದವರು ಅವರನ್ನು ಅರ್ಥಮಾಡಿಕೊಂಡು ಅಗತ್ಯ ಬೆಂಬಲ ನೀಡುವುದರಿಂದ ಅವರು ಆ ಸಮಸ್ಯೆಯಿಂದ ಹೊರ ಬರಲು ಸಾಧ್ಯವಾಗುತ್ತದೆ.

ಮಾಹಿತಿ : ಸವಿತಾ ಕೆ.

ಮನಃಶಾಸ್ತ್ರ ಉಪನ್ಯಾಸಕರು, ಭಂಡಾರ್ ಕಾರ್ಸ್ ಕಾಲೇಜು, ಕುಂದಾಪುರ  

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.