ಕನ್ನಡ ಅನ್ನದ ಭಾಷೆಯಲ್ಲ, ಎಂದವರ್ಯಾರು?


Team Udayavani, Nov 1, 2021, 5:44 AM IST

ಕನ್ನಡ ಅನ್ನದ ಭಾಷೆಯಲ್ಲ, ಎಂದವರ್ಯಾರು?

“ಇಂಗ್ಲಿಷ್‌, ಹಿಂದಿ ಕಲಿಯಬೇಕು.. ಇಲ್ಲವಾದರೆ ಮುಂದೆ ಬದುಕು ಕಷ್ಟವಾಗಿಬಿಡುತ್ತದೆ. ಕೆಲಸ ಸಿಗುವುದಿಲ್ಲ. ಬದುಕು ಕಟ್ಟಿಕೊಳ್ಳಲಾಗದು’ ಇದು ನಮ್ಮ ಈಗಿನ ತಲೆಮಾರಿನ ವೇದವಾಕ್ಯವಾಗಿಬಿಟ್ಟಿದೆ. ಕನ್ನಡ ಕಲಿತರೆ ಹೊಟ್ಟೆ ತುಂಬುವುದಿಲ್ಲ ಎನ್ನುವ ನಾವು, ಮಕ್ಕಳಿಗೆ ಕನ್ನಡದ ಪರಿಚಯ ಮಾಡಿಸುವುದನ್ನೇ ಬಿಟ್ಟುಬಿಟ್ಟಿದ್ದೇವೆ. ಆದರೆ ಅದೇ ಕನ್ನಡದಲ್ಲಿ ವೃತ್ತಿ ಗಿಟ್ಟಿಸಿಕೊಂಡು, ಪ್ರತೀ ದಿನ ಅದನ್ನೇ ಕೆಲಸವಾಗಿ ಮಾಡಿಕೊಂಡು ಬದುಕು ಕಟ್ಟಿಕೊಂಡ ಹಲವರು ನಮ್ಮ ಮಧ್ಯೆಯಿದ್ದಾರೆ. ಕನ್ನಡ “ಅನ್ನದ ಭಾಷೆ’ಯಲ್ಲ ಎನ್ನುವವರಿಗೆ ಇಲ್ಲಿದೆ ನಮ್ಮ ಉತ್ತರ…

ವಿದೇಶದಲ್ಲೂ ಅಭಿಮಾನಿಗಳು
ಸುದರ್ಶನ್‌ ಭಟ್‌, ಭಟ್‌ ಆ್ಯಂಡ್‌ ಭಟ್‌ ಯೂಟ್ಯೂಬ್‌ ಚಾನೆಲ್‌
ಕೋವಿಡ್ ಸಮಯದಲ್ಲಿ ಸುಮ್ಮನೆ ಆರಂಭಿಸಿದ್ದು ಭಟ್‌ ಆ್ಯಂಡ್‌ ಭಟ್‌ ಯೂಟ್ಯೂಬ್‌ ಚಾನೆಲ್‌. ಆಮೇಲೆ ಅದರಲ್ಲೇ ಸ್ಥಳೀಯ ಸೊಗಡನ್ನ ಸೇರಿಸಿ ವೀಡಿಯೋ ಮಾಡಿದೆವು. ಅದಕ್ಕೆ ಒಳ್ಳೆ ಪ್ರತಿಕ್ರಿಯೆ ಸಿಕ್ಕಿತು. ಒಂದೂವರೆ ವರ್ಷದ ಹಿಂದೆ ಆರಂಭಿಸಿದ ಈ ಚಾನೆಲ್‌ಗೆ ಈಗ 5 ಲಕ್ಷ ಸಬ್‌ ಸ್ಕ್ರೈಬರ್ಸ್‌ ಇದ್ದಾರೆ. ಅಡುಗೆ ಜತೆ ನಮ್ಮ ಭಾಷೆ, ಸ್ಥಳೀಯತೆಯನ್ನೂ ಮೆಚ್ಚಿ ವೀಡಿಯೋ ನೋಡುತ್ತಾರೆ. ನಾನು ಕಾಸರಗೋಡಿನವನಾದರೂ ಕನ್ನಡದಲ್ಲೇ ವೀಡಿಯೋ ಮಾಡುತ್ತೇನೆ. ಕೇರಳದ ಜನರೂ ನನ್ನ ವೀಡಿಯೋಗಳನ್ನ ನೋಡಿ ಮೆಚ್ಚಿಕೊಳ್ತಾರೆ. ಯೂಟ್ಯೂಬ್‌ನಲ್ಲಿ ನಾವು ಹಾಕುವ ವೀಡಿಯೋ ಚೆನ್ನಾಗಿದ್ದರೆ ಭಾಷೆ ಎನ್ನುವುದು ಅಡ್ಡಿಯಾಗುವುದೇ ಇಲ್ಲ. ನಮ್ಮ ಚಾನೆಲ್‌ನ ವೀಡಿಯೋಗಳನ್ನು ಬರೀ ಕರ್ನಾಟಕ, ಬರೀ ಭಾರತವಲ್ಲ ವಿದೇಶದಲ್ಲಿರುವವರೂ ನೋಡ್ತಾರೆ. ಅವರಿಗಾಗಿಯೇ ನಾವು ಇಂಗ್ಲಿಷ್‌ನಲ್ಲಿ ಸಬ್‌ಟೈಟಲ್‌ ಹಾಕಲಾರಂಭಿಸಿ ದ್ದೇವೆ. 23 ವರ್ಷದವನಾದ ನನ್ನನ್ನು ಇವತ್ತು ಈ ಮಟ್ಟಿಗೆ ತರೋದಕ್ಕೆ ನನ್ನ ಭಾಷೆ, ನನ್ನ ಸ್ಥಳೀಯತೆ ಮತ್ತೆ ನನ್ನ ಕಂಟೆಂಟ್‌ ಕಾರಣ.

ಸರಕಾರಿ ಕೆಲಸ ಬೇಕಿಲ್ಲ, ಕನ್ನಡದಲ್ಲೇ ಬದುಕಿದೆ
ನಂದಿನಿ ರಮೇಶ್‌, ಸಂಭಾಷಣೆ ಬರಹಗಾರ್ತಿ
ಫೇಸ್‌ಬುಕ್‌ನಲ್ಲಿ ಹಾಕಿದ್ದ ಒಂದೇ ಒಂದು ಕವನದಿಂದ ನನಗೆ ಜೀ ಕನ್ನಡದ ಡ್ರಾಮಾ ಜೂನಿಯರ್ಸ್‌ನಲ್ಲಿ ಸ್ಕ್ರಿಪ್ಟ್ ಬರೆಯುವ ಅವಕಾಶ ಸಿಕ್ಕಿತು. ಸರಕಾರಿ ಕೆಲಸದಲ್ಲಿದ್ದ ನಾನು 2 ತಿಂಗಳು ಯೋಚಿಸಿ ಆ ಕೆಲಸವನ್ನು ಬಿಟ್ಟು, ಟಿವಿ ಕ್ಷೇತ್ರಕ್ಕೆ ಬರುವ ನಿರ್ಧಾರ ಮಾಡಿದೆ. ಡ್ರಾಮಾ ಜೂನಿಯರ್ಸ್‌ ಆದ ಮೇಲೆ ಒಂದೆರೆಡು ತಿಂಗಳು ಏನು ಮಾಡಬೇಕು ಎನ್ನುವುದೂ ಗೊತ್ತಾಗದೆ, ಧಾರವಾಹಿಗಳಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದೆ. ಆದರೆ ಈಗ ಒಂದು ದಿನವೂ ಪುರುಸೊತ್ತು ಇಲ್ಲದಷ್ಟು ಕೆಲಸ ನನ್ನ ಹುಡುಕಿಕೊಂಡು ಬರುತ್ತಿದೆ. 2016ರಲ್ಲಿ ಈ ಕ್ಷೇತ್ರಕ್ಕೆ ಬಂದ ನಾನು ಒಂದೇ ವರ್ಷದಲ್ಲಿ ಇಲ್ಲಿ ಒಳ್ಳೆ ಸ್ಥಾನ ತೆಗೆದುಕೊಂಡೆ. ಇವತ್ತು ಕಲರ್ಸ್‌ ಕನ್ನಡ, ಜೀ ಕನ್ನಡದ 3 ಧಾರವಾಹಿಗಳಿಗೆ ಸಂಭಾಷಣೆ ಬರೀತಿದೀನಿ. ಐದು ವರ್ಷದಿಂದ ಈ ಕ್ಷೇತ್ರದಲ್ಲಿ ಕೆಲಸ ಮಾಡಿದರೂ ಒಂದೇ ಒಂದು ದಿನಕ್ಕೂ ನನ್ನ ಹೆಜ್ಜೆ ತಪ್ಪು ಎನಿಸಲಿಲ್ಲ. ಪ್ರತೀ ದಿನ ಹೆಮ್ಮೆಯೊಂದಿಗೆ ಬದುಕುತ್ತಿದ್ದೇನೆ. ಸರಕಾರಿ ಕೆಲಸದಲ್ಲಿದ್ದಾಗ ತಿಂಗಳಿಗೆ 3,000 ಇದ್ದ ಸಂಬಳವನ್ನ 9 ಸಾವಿರಕ್ಕೆ ಏರಿಸಿಕೊಳ್ಳೋದಕ್ಕೆ ವರ್ಷಗಟ್ಟಲೆ ಕಷ್ಟಪಟ್ಟಿದೆ. ಆದರೆ ಈ ಕ್ಷೇತ್ರದಲ್ಲಿ ಕೆಲವೇ ತಿಂಗಳಲ್ಲಿ ದಿನಕ್ಕೆ 9 ಸಾವಿರ ದುಡಿಯುವಷ್ಟು ಬೆಳೆದೆ.

ಇದನ್ನೂ ಓದಿ:ಭಾರತದಲ್ಲಿ ಪ್ರತಿದಿನ ಸರಾಸರಿ 31 ಮಕ್ಕಳು ಆತ್ಮಹತ್ಯೆ! 2020ರ ಮಾಹಿತಿ ಹೊರ ಹಾಕಿದ ಕೇಂದ್ರ

ಬೇರೆ ರಾಜ್ಯದಲ್ಲೂ ಇದೆ ಅವಕಾಶ
ಸ್ಪರ್ಶ ಆರ್‌.ಕೆ, ಕಂಠದಾನ ಕಲಾವಿದೆ, ಗಾಯಕಿ
ಮನೆಯವರ ಸಂಪೂರ್ಣ ಬೆಂಬಲವಿದ್ದಿದ್ದರಿಂದ ನಾನು ಗಾಯಕಿಯಾಗಿ ವೃತ್ತಿ ಆರಂಭಿಸಿದೆ. ಆದರೆ ಕೊರೊನಾ ಬಂದ ಅನಂತರ ಯಾವುದೇ ಶೋಗಳು ಇಲ್ಲದಿದ್ದರಿಂದ ಕೆಲಸ ಇಲ್ಲದಂತಾಗಿತ್ತು. ಆ ಸಮಯದಲ್ಲಿ ಕನ್ನಡದಲ್ಲಿ ಡಬ್ಬಿಂಗ್‌ ಧಾರಾವಾಹಿಗಳು ಆರಂಭವಾದವು. ಮೊದಲೇ ಎರಡು ಸಿನೆಮಾಗಳಿಗೆ ಕಂಠದಾನ ಮಾಡಿದ್ದ ನನಗೆ ಮಹಾಭಾರತ ಧಾರವಾಹಿಯಲ್ಲಿ ದ್ರೌಪದಿಗೆ ಧ್ವನಿ ನೀಡುವ ಅದೃಷ್ಟದ ಅವಕಾಶ ಸಿಕ್ಕಿತು. ಅದಾದ ಮೇಲೆ ಒಂದರ ಅನಂತರ ಒಂದೆನ್ನುವಂತೆ ಅವಕಾಶಗಳು ಬರತೊಡಗಿದವು. ಅದರಲ್ಲೂ ನನ್ನ ಕೆಲಸದ ಆಯ್ಕೆ ನಾವೇ ಮಾಡಿ ಕೊಳ್ಳುವ ಸ್ವಾತಂತ್ರ್ಯ ನನಗಿದೆ. ಐಟಿ-ಬಿಟಿಗಳಲ್ಲಿ ಕೆಲಸ ಮಾಡುವವರಿ ಗಿಂತ ಹೆಚ್ಚು ಕೆಲಸದ ಅವಕಾಶಗಳು ನಮಗಿವೆ. ಹಿಂದೊಂದು ಕಾಲದಲ್ಲಿ, ಕನ್ನಡ ಕಲಿತರೆ ಕರ್ನಾಟಕ ಬಿಟ್ಟು ಬೇರೆಲ್ಲೂ ಕೆಲಸ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಬೇರೆ ಬೇರೆ ಭಾಷೆಗಳ ಚಿತ್ರರಂಗದವರು ಕನ್ನಡದಲ್ಲೂ ಸಿನೆಮಾ ಬಿಡುಗಡೆ ಮಾಡುತ್ತಿದ್ದಾರೆ. ಅದರಿಂದಾಗಿ ಬೇರೆ ರಾಜ್ಯಗಳಲ್ಲೂ ನಮಗೆ ಒಳ್ಳೆಯ ಅವಕಾಶ ಸಿಗುತ್ತಿವೆ. ಎಷ್ಟೋ ಭಾಷೆಗಳಿಗೆ ಹೋಲಿಸಿದರೆ ನಾವು, ಕನ್ನಡ ಸಿನೆರಂಗದವರು ತುಂಬಾನೇ ಒಳ್ಳೆ ಸ್ಥಾನದಲ್ಲಿ ದ್ದೇವೆ. ನನ್ನ ಜೀವ ನವೇ ಕನ್ನಡ ಭಾಷೆಯಲ್ಲಿದೆ. ಅದರ ಬಗ್ಗೆ ನನಗೆ ಬಹಳ ಹೆಮ್ಮೆಯೂ ಇದೆ.

ಕನ್ನಡಕ್ಕಾಗಿ ಕಂಪೆನಿ ಕಟ್ಟಿದ ಖುಷಿ
ವಸಂತ ಶೆಟ್ಟಿ, ಮೈಲ್ಯಾಂಗ್‌ ಆಡಿಯೋ ಬುಕ್‌
ಕನ್ನಡದಲ್ಲಿ ಪುಸ್ತಕ ಬಂದು 100 ವರ್ಷಗಳಾ ಯಿತು. ಆದರೆ ಡಿಜಿಟಲ್‌ ಲೋಕದಲ್ಲಿ ನಮ್ಮ ಕನ್ನಡದ ಪುಸ್ತಕಗಳಿಲ್ಲ ಎನ್ನುವ ಕೊರಗು ಕಾಡಿದ್ದಕ್ಕೆ ಮೈಲ್ಯಾಂಗ್‌ ಆಡಿಯೋ ಬುಕ್‌ ಮಾಡಿದೆವು. 15 ವರ್ಷಗಳ ಐಟಿ ಕೆಲಸ ಮಾಡಿದ್ದ ನಾನು ಮತ್ತು 25 ವರ್ಷದ ಐಟಿಯಲ್ಲಿ ಕೆಲಸ ಮಾಡಿದ್ದ ನನ್ನ ಸ್ನೇಹಿತ ಇಬ್ಬರೂ ಸೇರಿಕೊಂಡು ಆರಂಭಿಸಿದ ಉದ್ಯಮವದು. 2020ರ ಮಾರ್ಚ್‌ನಲ್ಲಿ ಆರಂಭವಾ ಯಿತು ನಮ್ಮ ಪ್ರಯಾಣ. ಮೊದಲಿಗೆ 100 ಇ-ಬುಕ್‌ ಮತ್ತು 4 ಆಡಿಯೋ ಬುಕ್‌ನೊಂದಿಗೆ ಆರಂಭವಾದ ನಮ್ಮ ಉದ್ಯಮದಲ್ಲಿ ಈಗ 1100ಕ್ಕೂ ಅಧಿಕ ಇ-ಬುಕ್‌, 150ಕ್ಕೂ ಹೆಚ್ಚು ಆಡಿಯೋ ಬುಕ್‌ ಇವೆ. ನಮ್ಮ ಆ್ಯಂಡ್ರಾಯ್ಡ ಆ್ಯಪ್‌ನ° ಲಕ್ಷಕ್ಕೂ ಅಧಿಕ ಮಂದಿ ಬಳಸುತ್ತಿದ್ದಾರೆ. ಐಟಿ ಉದ್ಯಮದಲ್ಲಿ ದೊಡ್ಡ ಸಂಬಳವಿದೆ ನಿಜ. ಆದರೆ ಇಲ್ಲಿ, ಕನ್ನಡದಲ್ಲಿ ಕೆಲಸ ಮಾಡುವಾಗ ಸಿಗುವ ಆತ್ಮತೃಪ್ತಿಯೇ ಬೇರೆ. ಇ ಬುಕ್‌ಗಳನ್ನು ಓದುವವರಲ್ಲಿ ಶೇ. 80 ಮಂದಿ 18-40 ವರ್ಷದವರು ಎನ್ನುವ ಖುಷಿ ನಮಗಿದೆ. ಕರ್ನಾಟಕದ 6 ಕೋಟಿ ಜನರ ಜತೆ ಬೇರೆ ರಾಜ್ಯ, ವಿದೇಶದಲ್ಲಿ ಇರುವ ಕನ್ನಡಿಗರನ್ನೂ ತಲುಪುವ ಅವಕಾಶ ನಮಗಿದೆ. ನಮಗಿಲ್ಲಿ ಅವಕಾಶದ ಕೊರತೆ ಖಂಡಿತವಾಗಿಯೂ ಇಲ್ಲ.

ಕನ್ನಡ ಸಾಕುತ್ತೆ ಎನ್ನೋದಕ್ಕೆ ನಾನೇ ನಿದರ್ಶನ
ಅಲೋಕ್‌ (ಆಲ್‌ ಒಕೆ), ಸಂಗೀತ ನಿರ್ದೇಶಕ, ಗಾಯಕ
ಕನ್ನಡದಲ್ಲಿ ಸ್ವತಂತ್ರವಾಗಿ ಆಲ್ಬಂ ಸಾಂಗ್‌ ಮಾಡುವ ಪರಿಚಯ ಮಾಡಿಕೊಟ್ಟವರು ನಾವು. ಕನ್ನಡದ ಕೊಟ್ಟ ಖುಷಿ ಬೇರೆ ಯಾವುದೂ ಕೊಟ್ಟಿಲ್ಲ. ಈಗಾಗಲೇ 50ರಷ್ಟು ಹಾಡು ಬರೆದಿದ್ದೇನೆ. ಅದರಲ್ಲಿ ಹಲವು ಸೂಪರ್‌ ಹಿಟ್‌ ಆಗಿವೆ. ಬರೀ ಕರ್ನಾಟಕ ಮಾತ್ರವಲ್ಲ, ಬೇರೆ ರಾಜ್ಯಗಳ ಜನರೂ ಕನ್ನಡದ ಹಾಡುಗಳನ್ನ ಇಷ್ಟ ಪಟ್ಟು ಕೇಳ್ಳೋದಕ್ಕೆ ಆರಂಭಿಸಿದ್ದಾರೆ. ಕನ್ನಡವಿಲ್ಲವೆಂದರೆ ಕೆಲಸವಿಲ್ಲ ಎನ್ನುವ ಮಾತು ಶುದ್ಧ ಸುಳ್ಳು. ಕನ್ನಡ ನಮ್ಮನ್ನು ಸಾಕುತ್ತದೆ ಎನ್ನುವುದಕ್ಕೆ ನಾನೇ ನಿದರ್ಶನ. ಕನ್ನಡ ನಾಡಿನಲ್ಲಿ ಹುಟ್ಟಿ ಕನ್ನಡದಲ್ಲೇ ಬದುಕು ಕಟ್ಟಿಕೊಳ್ಳಬಹುದು ಎನ್ನುವುದನ್ನು ನನ್ನಂತ ಅದೆಷ್ಟೋ ಜನ ಮಾಡಿ ತೋರಿಸಿದ್ದಾರೆ. ಕನ್ನಡದವರು ಬೇರೆ ಭಾಷೆಯ ಭ್ರಮೆಯಿಂದ ಮೊದಲು ಹೊರಗೆ ಬರಬೇಕು. ಅವರು ಕನ್ನಡ ವನ್ನ ಪ್ರೀತಿಸಿ, ಅವರ ಒಬ್ಬ ಸ್ನೇಹಿತನಿಗೆ ನಮ್ಮ ಕನ್ನಡದ ಹಾಡುಗಳನ್ನ ಕೇಳಿಸಿದರೂ ಸಾಕು. ಅದೊಂದು ರೀತಿ ವೈರಲ್‌ ಫೀವರ್‌ ರೀತಿ ಹಬ್ಬುತ್ತಾ ಹೋಗುತ್ತದೆ. ಇತ್ತೀಚಿನ ದಿನಗಳಲ್ಲಂತೂ ಕನ್ನಡ ಹಾಡುಗಳನ್ನ ಕನ್ನಡಿಗರಷ್ಟೇ ಅಲ್ಲದೆ ಬೇರೆಯವರೂ ಇಷ್ಟ ಪಟ್ಟು ಕೇಳ್ಳೋದಕ್ಕೆ ಶುರು ಮಾಡಿಕೊಂಡಿದ್ದಾರೆ. ಅದು ನಮ್ಮ ಕನ್ನಡದ ತಾಕತ್ತು.

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.