ಲಕ್ಷದೀಪೋತ್ಸವದ ವೈಭವ ಹೆಚ್ಚಿಸಿದ ಆಹಾರ ಮೇಳ    


Team Udayavani, Dec 5, 2021, 4:00 PM IST

ahara mela

ಧರ್ಮಸ್ಥಳ:  ಎಲ್ಲೆಡೆ ಜಗಮಗಿಸುವ ದೀಪಾಲಂಕಾರ, ವೈಭವೋಪೇತವಾಗಿ ನಡೆಯುತ್ತಿದ್ದ ದೇವರ ಉತ್ಸವ , ಸಹಸ್ರರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತಗಣ , ಸಾಲು ಸಾಲು ಅಂಗಡಿಗಳು ಇವೆಲ್ಲದರ ಜೊತೆ ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದಲ್ಲಿ ಕಂಡುಬಂದ  ಮತ್ತೊಂದು ವಿಶೇಷತೆಯೆಂದರೆ ಆಹಾರಮೇಳ.

ಮಾತು ಬಿಡದ ಮಂಜುನಾಥನ ಕ್ಷೇತ್ರ ಧರ್ಮಸ್ಥಳವು ತಲಾತಲಾಂತರರಗಳಿಂದ ಚತುರ್ದಾನಗಳಿಂದಲೇ ವಿಶೇಷ ಸ್ಥಾನಮಾನ ಪಡೆದಿದೆ. ಧರ್ಮಸ್ಥಳ ಎನ್ನುವ ಹೆಸರೇ ಸೂಚಿಸುವಂತೆ ಧರ್ಮದ ನೆಲೆಬೀಡಾಗಿರುವ ಇಲ್ಲಿ ಅನ್ನದಾನ, ವಿದ್ಯಾದಾನ , ಔಷಧದಾನ ಮತ್ತು ಅಭಯದಾನದ ಮೂಲಕ ಸ್ವಾಮಿಯನ್ನು ಪ್ರಸನ್ನಗೊಳಿಸಲಾಗುತ್ತಿದೆ.

ಕ್ಷೇತ್ರದ ಅನ್ನಛತ್ರದಲ್ಲಿ ಪ್ರತಿನಿತ್ಯವು ಅನ್ನದಾನ ನಡೆಯುತ್ತಿದ್ದು ಸಾವಿರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸುವ ಮೂಲಕ ಧನ್ಯತೆಯನ್ನು ಅನುಭವಿಸುತ್ತಾರೆ.  ಆದರೆ ಕಳೆದ ಹನ್ನೊಂದು ವರ್ಷದಿಂದ ಲಕ್ಷದೀಪೋತ್ಸವ ಕೊನೆಯ ದಿನ ಭಕ್ತವೃಂದದವರೇ ಬೃಹತ್ ಉಚಿತ ಆಹಾರ ಮೇಳ ಆಯೋಜನೆ ಮಾಡಿ ಪುಣ್ಯ ಸಂಪಾದನೆ ಮಾಡಿಕೊಳ್ಳುತ್ತಿದ್ದಾರೆ. ವಿವಿಧ ಬಗೆಯ ಖಾದ್ಯಗಳು ತುಂಬಿರುವ  ಆಹಾರ ಮೇಳವು ಭಕ್ತಜನರ ಹಸಿವನ್ನು ತಣಿಸುತ್ತಿದೆ.

ವರ್ಷದಲ್ಲಿ ಒಂದು ದಿವಸ ಧರ್ಮಸ್ಥಳ ಅನ್ನಛತ್ರದ ಎಲ್ಲ ಸಿಬ್ಬಂದಿಗಳಿಗೆ ಲಕ್ಷದೀಪೋತ್ಸವದ ಪ್ರಯುಕ್ತ ರಜೆ ನೀಡಲಾಗುತ್ತದೆ. ಆದ್ದರಿಂದ ಆ ದಿನ ಭಕ್ತಗಣಕ್ಕೆ ಮಂಜುನಾಥನ ಅನ್ನಪ್ರಸಾದ ಸ್ವೀಕರಿಸುವ ಭಾಗ್ಯ ಇರುತ್ತಿರಲಿಲ್ಲ. ಇದನ್ನು ಮನಗಂಡ ದಾನಿಗಳು ಆ ದಿನ ನಾವು ಅನ್ನದಾನ ಮಾಡುವ ಭಕ್ತರನ್ನು ಸಂತುಷ್ಟಿಗೊಳಿಸುತ್ತೇವೆ ಎಂದು ತೀರ್ಮಾನಿಸಿ ಆಹಾರ ಮೇಳದ ಪರಿಕಲ್ಪನೆಯನ್ನು ಅನುಷ್ಠಾನ ಕ್ಕೆ ತಂದರು.

ಇದನ್ನೂ ಓದಿ:- ಬೆಳ್ತಂಗಡಿ: ತೋಟದಲ್ಲಿ ಪ್ರತ್ಯಕ್ಷವಾದ ಮೊಸಳೆ ರಕ್ಷಣೆ

ರಾಜ್ಯದ ವಿವಿಧ ಭಾಗಗಳ ಭಕ್ತರು ತಾವು ಬೆಳೆದ ಆಹಾರ ಧಾನ್ಯಗಳನ್ನು ಕ್ಷೇತ್ರಕ್ಕೆ ತಂದು ಅದರಿಂದ ಅನ್ನ ಸಾಂಬಾರ್ , ದೋಸೆ ,ಮುದ್ದೆ ರೊಟ್ಟಿ , ಇಡ್ಲಿ ಮತ್ತು ಸಿಹಿಖಾದ್ಯ ಮುಂತಾದ ರುಚಿಯಾದ ತಿಂಡಿತಿನಸುಗಳನ್ನು ತಯಾರಿಸಿ ತಾವೇ ಕೈಯಾರೆ ಭಕ್ತಾದಿಗಳಿಗೆ ಬಡಿಸುತ್ತಾರೆ. ಕ್ಷೇತ್ರವು ಸೂಕ್ತ ವ್ಯವಸ್ಥೆಗಳನ್ನು ಮಾಡುವ ಮೂಲಕ ಆಹಾರಮೇಳವು ಅಚ್ಚುಕಟ್ಟಾಗಿ ಸಾಂಗವಾಗಿ ನಡೆಯುವಂತೆ ನೋಡಿಕೊಳ್ಳುತ್ತಿದೆ.

ಈ ಬಾರಿಯ ಆಹಾರ ಮೇಳಕ್ಕೆ 19 ತಂಡಗಳು ಆಗಮಿಸಿದ್ದು 18 ಬಗೆಯ ಹಲವಾರು ಬಗೆಯ ಖಾದ್ಯಗಳೊಂದಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿದ್ದರು. ಸಂಜೆಯಿಂದಲೇ ಆಹಾರ ಮೇಳದತ್ತ ಜನ ಗುಂಪು ಗುಂಪಾಗಿ ದೌಡಾಯಿಸಿ ಒಟ್ಟಾರೆಯಾಗಿ 2 ಲಕ್ಷದಷ್ಟು ಜನ  ಮೇಳದಲ್ಲಿ ಭಾಗವಹಿಸಿ ಸವಿಯನ್ನು ಸವಿದರು.  ನೂರಾರು ಸ್ವಯಂಸೇವಕರು ಆಹಾರಮೇಳ ಯಶಸ್ವಿಯಾಗಾಲು ಕಾರಣಿಭೂತರಾದರು.

ಹೀಗೆ ಲಕ್ಷದೀಪೋತ್ಸವವದ ಮಹಾ ವೈಭವದಲ್ಲಿ ಆಹಾರ ಮೇಳವು ಖ್ಯಾತಿಯನ್ನು ಪಡೆದಿದ್ದು ಲಕ್ಷಾಂತರ  ಭಕ್ತರ ಹಸಿವ ನೀಗಿಸುವ ಪುಣ್ಯ ಕಾರ್ಯವಾಗಿದೆ. ಈ ಮೂಲಕ ಧರ್ಮಸ್ಥಳದ ಅನ್ನದಾನದ ಸೇವೆಗೆ ನಿರಂತರತೆಯ  ಸ್ಪರ್ಶ ದೊರಕಿದೆ.

ಜಗದೀಶ್ ಬಳಂಜ,  ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ ಉಜಿರೆ.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

CAR-D

Sullia: ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಕಂಟೈನರ್‌ ಢಿಕ್ಕಿ

Belthangady ಪಿಕಪ್‌ ಹಿಮ್ಮುಖವಾಗಿ ಚಲಿಸಿ ವ್ಯಕ್ತಿ ಸಾವು

Belthangady ಪಿಕಪ್‌ ಹಿಮ್ಮುಖವಾಗಿ ಚಲಿಸಿ ವ್ಯಕ್ತಿ ಸಾವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.