ಇಲ್ಲಿ ಎಲ್ಲದಕ್ಕೂ “ಅರ್ಥ” ನಮ್ಮ ಇರುವಿಕೆಯನ್ನು ಆಧರಿಸಿರುತ್ತದೆ..!
ಅರ್ಥ ಮಾಡಿಕೊಳ್ಳಬೇಕು ಎಂಬ ಮಾತಿನ ಒಳಗೆಯೇ “ಹೇಗೆ ಮತ್ತು ಯಾವುದನ್ನು” ಅವಿತಿದೆ
ಶ್ರೀರಾಜ್ ವಕ್ವಾಡಿ, Jun 18, 2021, 9:00 AM IST
ತೋಟದಲ್ಲಿ ಬೆಳೆಯುವ ಹೂವೊಂದಕ್ಕೆ ಪರಿಮಳವಿದ್ದಂತೆ, ಮಾನವರಿಗೆ ವ್ಯಕ್ತಿತ್ವ ಅಷ್ಟೇ ಮುಖ್ಯ. ಪ್ರತಿಯೊಬ್ಬರ ಜೀವನದ ಒಳಿತು ಕೆಡಕುಗಳಿಗೆ ಅವರೇ ಶಿಲ್ಪಿಗಳಾಗಿರುತ್ತಾರೆ. ಈ ಆಧಾರದ ಮೇಲೆ ವ್ಯಕ್ತಿತ್ವ ಬೆಳವಣಿಗೆಯಾಗುತ್ತದೆ. ಮೊದಲು ನಮಗೆ ನಮ್ಮ ವ್ಯಕ್ತಿತ್ವದ ಬಗ್ಗೆ ಸ್ಪಷ್ಟನೆ ಇರುವುದು ನಮ್ಮ ಬೆಳವಣಿಗೆಗೆ ನಾಂದಿ ಹಾಡುತ್ತದೆ.
ನಮ್ಮ ಬೆಳವಣಿಗೆ ಹೇಗೆ..?
ಇನ್ನೊಬ್ಬರಿಗೆ ಕಿವಿಯಾದಾಗ ಮಾತ್ರ ಒಬ್ಬಾತ ಬೆಳೆಯುವುದಕ್ಕೆ ಅಗಾಧವಾದ ಅವಕಾಶ ಎದುರಿಗೆ ಬಂದೊದಗುತ್ತದೆ. ಇನ್ನೊಬ್ಬರ ಮಾತನ್ನು ಕೇಳುವ ತಾಳ್ಮೆ ಹಾಗೂ ವಿಧೇಯತೆ ಬಹಳ ಮುಖ್ಯ ಎನ್ನುವುದು ಈ ಮಾತಿನ ತಾತ್ಪರ್ಯ.
ಆದರ್ಶ, ಸದಾಚಾರ, ಶ್ರದ್ಧೆ, ನಿಷ್ಠೆ, ದಕ್ಷತೆ, ಎಚ್ಚರ, ಸನ್ನಿವೇಶಗಳೊಡನೆ ಹೊಂದಿಕೊಳ್ಳುವ ಸಾಮರ್ಥ್ಯ, ವೃತ್ತಿ ಪ್ರಿಯತೆ, ಪರೋಪಕಾರದ ಬುದ್ಧಿ, ಪ್ರಾಮಾಣಿಕತೆಗಳು ವ್ಯಕ್ತಿತ್ವ ವಿಕಸನದ ಶಕ್ತಿ ಬಿಂದುಗಳು.
ಇಬ್ಬರ ನಡುವೆ ಇರುವ ಅಭಿಪ್ರಾಯಗಳನ್ನು ಹಾಗೂ ಅನಿಸಿಕೆಗಳನ್ನುಏಕೀಕರಣಗೊಳಿಸುವುದಕ್ಕೆ ಸಾಧ್ಯವಿಲ್ಲ. ಕಾಲ, ಸ್ಥಿತಿ, ಸಂಬಂಧಗಳು ಇಲ್ಲಿ ಬಹಳ ಮುಖ್ಯವಾಗುತ್ತದೆ. ಬೆಳೆಯುವ ಗುರುತು ನಮ್ಮನ್ನು ನಾವು ಕಾಲಕ್ಕೆ, ಸ್ಥಿತಿಗೆ ಹಾಗೂ ಸಂಬಂಕ್ಕೆ ಹೊಂದಿಸಿಕೊಂಡಾಗ ಮಾತ್ರ ಯಾವುದೇ ಅಡ್ಡಿ ಆತಂಕಗಳಿಲ್ಲದೇ ಬೆಳವಣಿಗೆಯಾಗುವುದಕ್ಕೆ ಸಾಧ್ಯವಾಗುತ್ತದೆ.
ಸಂಬಂಧಗಳ ನಡುವೆ ಇರುವ ಸಲುಗೆ ಅದು ಸಂಪೂರ್ಣ ಸ್ವಾತಂತ್ರ್ಯವಲ್ಲ. ಅದು ನಂಬಿಕೆ ಹಾಗೂ ವಿಶ್ವಾಸಗಳ ಮೇಲೆ ಒಂದಿಂಚು ಎತ್ತರದಲ್ಲಿ ಇರುವ ಒಳ್ಳೆಯ ಅಭಿಪ್ರಾಯವಷ್ಟೇ. ಸಲುಗೆಯನ್ನು ದುರುಪಯೋಗಪಡಿಸಿಕೊಂಡರೇ, ಆ ಸಂಬಂಧವನ್ನೇ ಕಳೆದುಕೊಳ್ಳುವ ಸಾಧ್ಯತೆಯೂ ಬಹಳವಾಗಿ ಇದೆ. ಹಾಗಾಗಿ ನಾವು ನಮ್ಮನ್ನು ನಾವು ಅಳೆದುಕೊಂಡು, ಇನ್ನೊಬ್ಬರನ್ನೂ ಕೂಡ ಅಳೆದುಕೊಂಡು ಬದುಕುವುದು ನಮ್ಮ ಜೀವನದಲ್ಲಿ ಬಹಳ ಮಹತ್ತರದಾಗಿರುತ್ತದೆ ಎನ್ನುವುದನ್ನು ಬೆಳವಣಿಗೆಯನ್ನು ಬಯಸುವ ಪ್ರತಿಯೊಬ್ಬನು ಪಾಲಿಸಬೇಕಾಗುತ್ತದೆ. ಅದು ಒಬ್ಬಾತನ ಬದುಕಿನ ಸಂಪೂರ್ಣ ವಿಕಾಸಕ್ಕೆ ಮೆಟ್ಟಿಲಾಗುತ್ತದೆ.
ಬೆಳವಣಿಗೆಗೆ ಮಿತಿಯಿಲ್ಲ
ಒಳ್ಳೆಯದ್ದನ್ನು ಯೋಚಿಸುವುದಕ್ಕೆ ಗಡಿಯಿಲ್ಲ. ಕೆಟ್ಟದಕ್ಕೆ ಗಡಿ ಇದೆ. ಮಿತಿ ಇದೆ. ಹಾಗೆಯೇ, ನಮ್ಮ ಬದುಕಿನಲ್ಲಿ ಬೆಳವಣಿಗೆಗೆ ಎಲ್ಲೆ ಇಲ್ಲ. ನಾವು ಎಷ್ಟು ಬೇಕಾದರೂ ಬೆಳೆಯುವುದಕ್ಕೆ ಸಾಧ್ಯವಿದೆ. ಆದರೇ, ಮೊದಲು ನಾವು ಬದುಕಿಗೆ, ಭವಿಷ್ಯಕ್ಕೆ ಶರಣಾಗಬೇಕು ಅಷ್ಟೇ.
ಬದುಕನ್ನು ಅರ್ಥ ಮಾಡಿಕೊಳ್ಳಬೇಕು ಎಂಬ ಮಾತಿನ ಒಳಗೆಯೇ “ಹೇಗೆ ಮತ್ತು ಯಾವುದನ್ನು” ಎನ್ನುವುದು ಅವಿತಿರುತ್ತದೆ ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು.
“ಹೇಗೆ ಮತ್ತು ಯಾವುದನ್ನು”
ನಮ್ಮನ್ನು ನಾವು ಬಹಳವಾಗಿ ನಂಬುವುದೇ ಇದಕ್ಕೆ ಉತ್ತರ ನೀಡುತ್ತದೆ. ಎಲ್ಲವನ್ನು ಸಾಧ್ಯವಾಗಿಸುತ್ತದೆ. ಯಾವ ನಿರೀಕ್ಷೆಯಿಲ್ಲದೇ ನಮ್ಮೊಳಗೆ ನಾವು ಸಂವಾದಕ್ಕೆ ತೊಡಗಿಕೊಂಡಾಗ ನಮ್ಮಲ್ಲಿ ಹುಟ್ಟುವ…. ಹೇಗೆ..? ಯಾಕೆ..? ಯಾರಿಗೆ..? ಎಲ್ಲಿಂದ..? ಯಾವುದಕ್ಕೆ..? ಹೀಗೆ ಇತ್ಯಾದಿ ಪ್ರಶ್ನೆಗಳಿಗೆ ನಾವು ಉತ್ತರ ಹುಡುಕಿಕೊಳ್ಳುವ ಪ್ರಯತ್ನ ಮಾಡುವುದಕ್ಕೆ ಪ್ರಯತ್ನಿಸಿದಾಗ ಸಿಗುವ ಒಳ್ಳೆಯ ಫಲಿತಾಂಶವನ್ನು ನಮ್ಮಲ್ಲಿ ಅಳವಡಿಸಿಕೊಳ್ಳುವುದಕ್ಕೆ ಸ್ವಲ್ಪ ಮಟ್ಟಿಗಾದರೂ ಪ್ರಯತ್ನ ಪಟ್ಟಾಗ ಬದುಕು ನಾವು ಅಂದುಕೊಂಡ ಹಾಗೆ ಇರುವುದಕ್ಕೆ ಸಾಧ್ಯವಾಗುತ್ತದೆ. ಹಾಗಾಗಿ ಅರ್ಥ ಮಾಡಿಕೊಳ್ಳುವುದು “ಹೇಗೆ ಮತ್ತು ಯಾವುದನ್ನು” ಎನ್ನುವುದಕ್ಕೆ ನಾವು ನಮ್ಮನ್ನೇ ಪ್ರಶ್ನೆ ಮಾಡಿಕೊಂಡಾಗ ಸಿಗುವ ಉತ್ತಮ ಉತ್ತರವೇ ನಮ್ಮ ಬೆಳವಣಿಗೆಯನ್ನು ನಿರ್ಧರಿಸುತ್ತದೆ ಎನ್ನುವುದಕ್ಕೆ ಅನುಮಾನ ಇಲ್ಲ.
ಬದಕಿನಲ್ಲಿ ಸಂಪೂರ್ಣವಾಗಿ ಎಲ್ಲವೂ ಅರ್ಥವಾಯಿತು ಎನ್ನುವ ಸ್ಥಿತಿಯನ್ನು ಕಾಣುವುದಕ್ಕೆ ಸಾಧ್ಯವಿಲ್ಲ. ಬದುಕು ಎನ್ನುವುದು ಪ್ರತಿ ಕ್ಷಣ ಕ್ಷಣಕ್ಕೂ ಹೊಸತನದಿಂದಿರುವ ಕಾರಣದಿಂದಾಗಿ ಪ್ರತಿ ಹಂತದಲ್ಲಿಯೂ ಬದುಕನ್ನು ಅರ್ಥ ಮಾಡಿಕೊಳ್ಳುತ್ತಾ ಹೋಗಬೇಕಾಗುತ್ತದೆ. ಮತ್ತೊಂದೇನಂದರೇ, ಬದುಕಿನಲ್ಲಿ ಅರ್ಥಕ್ಕೆ ನಾವು ಸ್ವೀಕರಿಸಿಕೊಂಡ ಹಾಗೆ, ನಾವು ಅರ್ಥ ಮಾಡಿಕೊಂಡ ಹಾಗೆ ಅರ್ಥ ದೊರಕುತ್ತಾ ಹೋಗುತ್ತದೆ. ಅದೇ ಮಾನವನ ಬದುಕಿನ ಸಹಜ ಗುಣ ಧರ್ಮ.
ಇನ್ನು, ಕೊರಗುವವರಿಗೆ, ತನ್ನನ್ನು ತಾನು ತುಂಬಾ ಸಮರ್ಥಿಸಿಕೊಳ್ಳುವವರಿಗೆ, ತಮ್ಮ ಮೂಗಿನ ನೇರಕ್ಕೆ ಮಾತಾಡುವವರಿಗೆ ನಿಜಕ್ಕೂ ಬದುಕಿನ ಅರ್ಥವೇ ಗೊತ್ತಿರುವುದಿಲ್ಲ. ಬದುಕೆಂದರೇ, ತನ್ನ ಇರುವಿಕೆ ಮಾತ್ರ ಎಂದು ಅರ್ಥ ಮಾಡಿಕೊಂಡವರಿಗೆ ಯಾರಿಂದಲೂ ಔಷಧಿ ಇಲ್ಲ. ಮನಃಶಾಸ್ತ್ರದ ಪ್ರಕಾರ ಅದೊಂದು ಮಾನಸಿಕ ವಿಕೃತಿ.
ಯಾರು ಬದುಕನ್ನು ಸ್ವೀಕರಿಸುವ, ಸಂಬಂಧಗಳನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಇರುತ್ತಾರೋ ಅಂತವರಿಗೆ ಬದುಕು ಅಂದರೇ ಏನು ಎನ್ನುವ ಬಗ್ಗೆ ತುಡಿತವಿರುತ್ತದೆ. ಇನ್ನೊಬ್ಬರ ಬದುಕು ನೋಡಿ ಗೊತ್ತಿರುತ್ತದೆ. ಬಹಳ ಮುಖ್ಯವಾಗಿ ಇನ್ನೊಬ್ಬರಿಗೆ ಕಿವಿಯಾದ ಅನುಭವ ಇರುತ್ತದೆ. ಕಿವಿಯಾಗುವ ಬಯಕೆಯೂ ಇರುತ್ತದೆ.
ಇಲ್ಲಿ ಎಲ್ಲದಕ್ಕೂ “ಅರ್ಥ” ನಮ್ಮ ಇರುವಿಕೆ ಹೇಗಿರುತ್ತದೆ, ನಮ್ಮ ಸ್ವೀಕೃತಿ ಹೇಗಿರುತ್ತದೆ ಎನ್ನವುದನ್ನು ಆಧರಿಸಿ ಸಿಗುತ್ತದೆ.
-ಶ್ರೀರಾಜ್ ವಕ್ವಾಡಿ
ಇದನ್ನೂ ಓದಿ : ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಹಾಂಗ್ ಕಾಂಗ್ ನಲ್ಲಿ ಐವರು ಸಂಪಾದಕರ ಬಂಧನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu Kashmir: ಗುಲ್ ಮಾರ್ಗ್, ಆದಿ ಶಂಕರಾಚಾರ್ಯ ಪೀಠ..ನೋಡಲೇಬೇಕಾದ ಸ್ಥಳಗಳು ಹಲವು…
ಬರದ ಬಿಕ್ಕಟ್ಟು:ತಂತ್ರಜ್ಞಾನ ನಗರಿ ಬೆಂಗಳೂರನ್ನು ದಿವಾಳಿಯಂಚಿಗೆ ತಳ್ಳುವುದೇ ನೀರಿನ ಸಮಸ್ಯೆ?
Desi Swara: ಇಟಲಿಯಲ್ಲಿ ಶ್ರೀರಾಮನಾಮ ಸತ್ಸಂಗ, ಆರಾಧನೆ
Jammu-Kashmir ಅಂದು-ಇಂದು: ಕಾಶ್ಮೀರಿ ಜನರ ಮನಸ್ಥಿತಿ ಈಗ ಹೇಗಿದೆ ಗೊತ್ತಾ?
Jammu-Kashmir: ಅಂದು-ಇಂದು- ಸಮೃದ್ಧಿಯ ನಾಡು- ನೆಮ್ಮದಿಯ ಬೀಡು
MUST WATCH
ಹೊಸ ಸೇರ್ಪಡೆ
Mangaluru: ರೋಗಿಗಳಲ್ಲಿ ಭರವಸೆ ತುಂಬುವ ಕೆಲಸವಾಗಲಿ: ರೈ| ರೆ| ಡಾ| ಸಲ್ಡಾನ್ಹಾ
Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್ ಗೆ RLJP ಮುಖಂಡ ಪರಾಸ್ ರಾಜೀನಾಮೆ
ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು
Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ
Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!