ಟ್ಯಾಕ್ಸಿ ಡ್ರೈವರ್ ಟು ಮಹಿಳಾ ಪೊಲೀಸ್ ಅಧಿಕಾರಿ; ನ್ಯೂಜಿಲ್ಯಾಂಡ್ ನಲ್ಲಿ ಕೌರ್ ಸಾಹಸಗಾಥೆ

ಮನ್‌ದೀಪ್‌ಕೌರ್‌ ಬಳಿ ಆಕೆಯ ತಾಯಿ ನೀನು ಹುಡುಗನಾಗಿದ್ದರೆ ಪೊಲೀಸ್‌ ಆಗಬಹುದಿತ್ತು ಎನ್ನುತ್ತಿದ್ದರು.

Team Udayavani, Apr 7, 2022, 1:50 PM IST

ಟ್ಯಾಕ್ಸಿ ಡ್ರೈವರ್ ಟು ಮಹಿಳಾ ಪೊಲೀಸ್ ಅಧಿಕಾರಿ; ನ್ಯೂಜಿಲ್ಯಾಂಡ್ ನಲ್ಲಿ ಕೌರ್ ಸಾಹಸಗಾಥೆ

ಸಾಧಿಸಿದರೆ ಎಲ್ಲವೂ ಸಾಧ್ಯ. ಸಾಧನೆಗೆ ಯಾವುದೇ ಹಂಗು ಇಲ್ಲ ಎಂಬುದನ್ನು ಸಾಧಕರು ಪದೇ ಪದೇ ನಿರೂಪಿಸುತ್ತಿದ್ದಾರೆ, ಆ ಪಟ್ಟಿಯಲ್ಲಿ ಈಗ ಮನ್‌ದೀಪ್‌ ಕೌರ್‌ ಕೂಡ ಸೇರುತ್ತಾರೆ. ಪಂಜಾಬ್‌ನಿಂದ ನ್ಯೂಜಿಲ್ಯಾಂಡ್‌ನ‌ ವರೆಗಿನ ಪ್ರಯಾಣ ಸುಲಭವಾಗಿರಲಿಲ್ಲ. ಬದುಕಲು ಯಾವುದೇ ಮಾರ್ಗ ಇಲ್ಲದಿರುವಾಗ ಆಯ್ದುಕೊಂಡ ಟ್ಯಾಕ್ಸಿ ಚಾಲಕಿ ವೃತ್ತಿಯಿಂದ ವಿದೇಶದಲ್ಲಿ ಪೊಲೀಸ್‌ ಆಗುವವರೆಗೆ ಮನ್‌ದೀಪ್‌ ಕೌರ್‌ ಬಳಿ ಹೇಳಲು ಸಾವಿರ ಕಥೆಗಳಿವೆ. ಸ್ವಂತ ಮಕ್ಕಳನ್ನಯ ತನ್ನಿಂದ ದೂರವುಳಿಸಿ ಕನಸಿನ ಬೆಂಬತ್ತಿ ಓಡುವುದು ಅಷ್ಟು ಸುಲಭದ ಮಾತೇನಲ್ಲ ಎಂಬುದು ಮನ್‌ದೀಪ್‌ಕೌರ್‌ ಅವರ ಮನದಾಳದ ಮಾತು.

ಇದನ್ನೂ ಓದಿ: ಸಿ.ಟಿ. ರವಿ ಸರ್ಕಾರದ ಭಾಗವಲ್ಲ; ಸರ್ಕಾರ ಯಾವುದೇ ಹೇಳಿಕೆ ನೀಡಿಲ್ಲ: ಸಚಿವ ಬಿ.ಸಿ. ನಾಗೇಶ್‌

ಹುಡುಗಿ ಪೊಲೀಸ್‌ ಯಾಕಾಗಬಾರದು? ಹುಡುಗಿ ಪೊಲೀಸ್‌ ಯಾಕಾಗಬಾರದು? ಹೀಗೊಂದು ಪ್ರಶ್ನೆಯನ್ನು ತನ್ನ ಬಾಲ್ಯದಲ್ಲಿ ತಾಯಿಯ ಮುಂದೆ ಕೇಳಿದ್ದ ಕೌರ್‌ಗೆ ಲಭಿಸಿದ್ದು ನಿರಾಸೆ ಮಾತ್ರ. ಪಂಜಾಬ್‌ನ ಒಂದು ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದ ಮನ್‌ದೀಪ್‌ಕೌರ್‌ ಬಳಿ ಆಕೆಯ ತಾಯಿ ನೀನು ಹುಡುಗನಾಗಿದ್ದರೆ ಪೊಲೀಸ್‌ ಆಗಬಹುದಿತ್ತು ಎನ್ನುತ್ತಿದ್ದರು.

ಆಗ ಬಾಲಕಿಯದ್ದು ಗೊಂದಲದ ಮನಸ್ಥಿತಿ. ಯಾಕೆ ಹುಡುಗರು ಮಾತ್ರ ಪೊಲೀಸ್‌ ಆಗಬೇಕೆಂದು? ಆ ಪ್ರಶ್ನೆಗೆ ಉತ್ತರ ಹುಡುಕಿದ್ದು ಮಾತ್ರ ವರ್ಷಗಳ ಬಳಿಕ. 18 ವರ್ಷಕ್ಕೆ ಮದುವೆಯಾಗಿ 19 ವರ್ಷಕ್ಕೆ ತಾಯಿಯಾಗಿ ಒಂದು ಕುಟುಂಬ ನಡೆಸುತ್ತಿದ್ದ ಕೌರ್‌ ಅವರ ಜೀವನ ಎರಡು ಮಕ್ಕಳಾದಾಗ ತಾಯಿ ಮನೆಗೆ ಹಿಂದಿರುಗುವಲ್ಲಿಗೆ ಮುಟ್ಟಿತ್ತು. ಯಶಸ್ಸಿನ ಮೊದಲ ಹೆಜ್ಜೆ ಅಲ್ಲಿಂದ ಆರಂಭವಾಗಿತ್ತೆಂದು ಹೇಳಿದರೂ ತಪ್ಪಾಗಲಾರದು. ತನ್ನ ಮಕ್ಕಳನ್ನು ಹೆತ್ತವರ ಬಳಿ ಬಿಟ್ಟು ಆಕೆ ಆಸ್ಟ್ರೇಲಿಯಾಗೆ ತೆರಳಿದರು. ಅಲ್ಲಿ ಸೇಲ್ಸ್‌ ವಿಭಾಗದಲ್ಲಿ ಕೆಲಸ ದೊರಕಿತ್ತು. ಇಂಗ್ಲೀಷ್‌ನಲ್ಲಿ ಮಾತನಾಡುವ ಆತ್ಮವಿಶ್ವಾಸ ಅಲ್ಲಿಂದ ಆರಂಭವಾಯಿತು. ಟ್ಯಾಕ್ಸಿ ಓಡಿಸುವ ಪರವಾನಿಗೆಯನ್ನೂ ಪಡೆದುಕೊಂಡರು.

1999ರಲ್ಲಿ ನ್ಯೂಜಿಲ್ಯಾಂಡ್‌ಗೆ ತೆರಳಿದರು. ಒಂದು ದಿನ ಟ್ಯಾಕ್ಸಿ ಮನೋತಜ್ಞರು ಪ್ರಯಾಣ ಮಾಡುತ್ತಿದ್ದರು. ಅವರು ಕೌರ್‌ ಬಳಿ ಸಂತೋಷದ ಬಗ್ಗೆ ಮಾತನಾಡುತ್ತ ಬಾಲ್ಯದ ಕನಸುಗಳನ್ನು ನನಸು ಮಾಡಿಕೊಳ್ಳುವುದೇ ನಿಜವಾದ ಆತ್ಮತೃಪ್ತಿ ಎನ್ನುತ್ತಾರೆ. ಅಲ್ಲಿಗೆ ಪೊಲೀಸ್‌ ಆಗುವ ಕನಸು ಮತ್ತೆ ಜೀವಂತವಾಗುತ್ತದೆ. ಅಲ್ಲಿನ ಓರ್ವ ಪೊಲೀಸ್‌ ಅಧಿಕಾರಿಯ ಸಹಾಯದಿಂದ ಆಕೆ ಪೊಲೀಸ್‌ ಆಗುವತ್ತ ಗಮನ ಹರಿಸುತ್ತಾರೆ. ಕರ್ತವ್ಯಕ್ಕೆ ಮುಖ್ಯ ದೇಹದ ದೃಢತೆ ಎಂದರಿತ ಅವರು ಬರೋಬ್ಬರಿ 10 ಕೆಜಿ ತೂಕ ಕಳೆದುಕೊಂಡರು. ಸಾಧನೆಗೆ ಯಾವುದೂ ಅಡ್ಡಿಯಾಗಲ್ಲ. ಕೊನೆಗೂ ಪಟ್ಟ ಪ್ರಯತ್ನಕ್ಕೆ ಫ‌ಲ ಸಿಕ್ಕಿತು. 2004 ರಲ್ಲಿ ಆಕೆ ನ್ಯೂಜಿಲ್ಯಾಂಡ್‌ನ‌ ಪೊಲೀಸ್‌ ಅಧಿಕಾರಿಯಾದರು. 2021ರಲ್ಲಿ ಭಡ್ತಿ ಪಡೆದ ಆಕೆ ನ್ಯೂಜಿಲ್ಯಾಂಡ್‌ನ‌ಲ್ಲಿ ಪೊಲೀಸ್‌ ಆದ ಮೊದಲ ಭಾರತೀಯೆ. ಈಗ ತನ್ನ ಮಕ್ಕಳ ಜತೆ ಶಾಶ್ವತವಾಗಿ ಅಲ್ಲಿ ನೆಲೆಸಿದ್ದಾರೆ.

ಟಾಪ್ ನ್ಯೂಸ್

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

1–qwewqe

Ayodhya: ಸೂರ್ಯ ತಿಲಕ ಸಾಧ್ಯವಾಗಿಸಿದ ವಿಜ್ಞಾನಿಗಳಿಗೆ ತಲೆ ಬಾಗುತ್ತೇನೆ: ಅರುಣ್ ಯೋಗಿರಾಜ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.