ಒಂದು ಸೀರೆ ಉಡಿಸಲು 2 ಲಕ್ಷ ರೂ.. ಅಂದು ಸಾರಿಯನ್ನು ದ್ವೇಷಿಸುತ್ತಿದ್ದಾಕೆ ಇಂದು ಲಕ್ಷಾಧಿಪತಿ


Team Udayavani, May 18, 2023, 1:35 PM IST

ಒಂದು ಸೀರೆ ಉಡಿಸಲು 2 ಲಕ್ಷ ರೂ.. ಅಂದು ಸಾರಿಯನ್ನು ದ್ವೇಷಿಸುತ್ತಿದ್ದಾಕೆ ಇಂದು ಲಕ್ಷಾಧಿಪತಿ

ಕೆಲ ಹೆಣ್ಣು ಮಕ್ಕಳಿಗೆ ಸಾಂಪ್ರದಾಯಿಕ ಉಡುಗೆ ಸೀರೆ ಎಂದರೆ ಪಂಚಪ್ರಾಣ. ಹೆಣ್ಣು ಮಕ್ಕಳು ಹೆಚ್ಚಾಗಿ ಮದುವೆ ಹಾಗೂ ಇತರ ಕಾರ್ಯಕ್ರಮಗಳಿಗೆ ಸೀರೆ ಉಟ್ಟು ಹೋಗುತ್ತಾರೆ. ಆದರೆ ಈ ಸೀರೆಯನ್ನು ಉಡುವುದು ಕೆಲವರಿಗೆ ಇಷ್ಟವಾದರೆ ಕೆಲವರಿಗೆ  ಸೀರೆ ಉಡುವ ವಿಧಾನ ಬಲು ಕಷ್ಟ.

ಇತ್ತೀಚಿನ ಯುವತಿಯರಿಗೆ ಸೀರೆ ಉಡಿಸಲು ಹಿರಿಯರೇ ಬೇಕು. ಆದರೆ ಇಲ್ಲೊಬ್ಬರು ಬೇರೆಯವರಿಗೆ ಸೀರೆ ಉಡಿಸಿಯೇ ಲಕ್ಷಾಧಿಪತಿ ಆಗಿದ್ದಾರೆ ಎಂದರೆ ನೀವು ನಂಬುತ್ತೀರಾ?

ಡಾಲಿ ಜೈನ್ ಎಂಬ ಮಹಿಳೆಯ ಪರಿಚಯ ಬಹುತೇಕ ಸೆಲೆಬ್ರಿಟಿಗಳಿಗೆ ಗೊತ್ತಿದೆ. ಬಿಟೌನ್‌ ಸೆಲೆಬ್ರಿಟಿಗಳ ಮದುವೆ, ಅವರು ಹೋಗುವ ಅವಾರ್ಡ್‌ ಕಾರ್ಯಕ್ರಮ ಅಥವಾ ಇತರ ಕಾರ್ಯಕ್ರಮಗಳಿಗೆ ಡಾಲಿ ಜೈನ್‌ ಅವರು ಉಡಿಸಿದ ಸೀರೆಯನ್ನೇ ಹಾಕಿಕೊಂಡು ಹೋಗುತ್ತಾರೆ.

ಮದುವೆಯ ಮೊದಲು ಸೀರೆ ಎಂದರೆ ದ್ವೇಷ ಮಾಡುತ್ತಿದ್ದ ಡಾಲಿ ಜೈನ್‌ ಅವರಿಗೆ ಮದುವೆಯ ಬಳಿಕ, ಗಂಡನ ಮನೆಯಲ್ಲಿ ಸೀರೆಯನ್ನೇ ದಿನ ಧರಿಸಬೇಕಿತ್ತು. ಪ್ರತಿದಿನ ಬೆಳ್ಳಗೆ 45 ನಿಮಿಷ ಸೀರೆಯನ್ನು ಧರಿಸುವಲ್ಲೇ ಅವರ ಸಮಯ ವ್ಯರ್ಥವಾಗುತ್ತಿತ್ತು. ಅತ್ತೆಗೆ ತಾನು ಸೀರೆ ಧರಿಸಲ್ಲ, ಕುರ್ತಾವನ್ನು ಧರಿಸುತ್ತೇನೆ ಎನ್ನುತ್ತಿದ್ದರು.

ಆದರೆ ದಿನ ಕಳೆದಂತೆ ಡಾಲಿ ಅವರಿಗೆ ಸೀರೆ ಎಂದರೆ ಪಂಚಪ್ರಾಣ ಎನ್ನುವಷ್ಟರ ಮಟ್ಟಿಗೆ ಆತ್ಮೀಯವಾಯಿತು. ಇಂಥ ಒಳ್ಳೆಯ ಸೀರೆಗಳನ್ನು ಬಿಟ್ಟು ಈಗಿನ ವಯೋಮನದವರು ಗೌನ್ ಗಳನ್ನು ಆಯ್ದುಕೊಳ್ಳುತ್ತಿದ್ದಾರೆಂದು, ಸೀರೆಯನ್ನು ಗ್ಲೋಬಲ್‌ ಮಟ್ಟದಲ್ಲಿ ಮಿಂಚುವಂತೆ ಮಾಡಲು ಅವರು ಅದನ್ನು ತನ್ನ ವೃತ್ತಿಯನ್ನಾಗಿ ಮಾಡಿಕೊಂಡರು.

ಡಾಲಿ ಜೈನ್‌ ಇಂದು ಸೀರೆ ಉಡಿಸುವಲ್ಲಿ ಸೆಲೆಬ್ರಿಟಿ ಎಂದರೆ ತಪ್ಪಾಗದು. ಡಾಲಿ ಇಂದು ವಿವಿಧ ಸೀರೆ ಉಡುವ 325 ವಿಧಾನಗಳನ್ನು ತಿಳಿದುಕೊಂಡಿದ್ದಾರೆ.  ಅವರಿಂದ ಸೀರೆಯನ್ನು ಉಡಿಸಿಕೊಳ್ಳುವವರಲ್ಲಿ ಖ್ಯಾತನಾಮ ನಟಿಯರು ಸೇರಿದ್ದಾರೆ.

ಬಾಲಿವುಡ್‌ ನಟಿ ಆಲಿಯಾ ಭಟ್‌ ಅವರ ಮದುವೆಯ ಸೀರೆಯನ್ನು ಉಡಿಸಿದ್ದು ಡಾಲಿ ಜೈನ್‌ ಅವರೇ. ಇನ್ನು ಕತ್ರಿನಾ ಕೈಫ್‌ ಮದುವೆಯ ಲೆಹೆಂಗಾದೊಂದಿಗೆ ಸೀರೆಯನ್ನು ಉಡಿಸಿದ್ದು ಕೂಡ ಇವರೇ. ಅಂತಾರಾಷ್ಟ್ರೀಯ ಕಾರ್ಯಕ್ರಮ ಮೆಟ್ ಗಾಲಾಗಾಗಿ ನತಾಶಾ ಪೂನಾವಾಲಾ ತೊಟ್ಟ ಸೀರೆಯನ್ನು ಡಾಲಿ ಜೈನ್‌ ಅವರು ಉಡಿಸಿದ್ದಾರೆ. ಕೇನ್ಸ್ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿರುವ ಸಾರಾ ಆಲಿಖಾನ್‌ ಅವರು ಉಟ್ಟ ಸೀರೆಯನ್ನು ಡಾಲಿ ಜೈನ್‌ ಅವರು ಉಡಿಸಿದ್ದಾರೆ.

ಇತರೆ ವಧುಗಳು ತಮಗೆ ಯಾವ ರೀತಿಯ ಸೀರೆ ವಿಧಾನ ಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಹೊಂದಿರುವುದಿಲ್ಲ. ಅವರು ಸೆಲೆಬ್ರಿಟಿಗಳನ್ನು ನೋಡಿ ಒಂದು ಲೆಹೆಂಗಾ ಖರೀದಿಸಿ ತಾವು ಕತ್ರಿನಾಳಂತೆ ಕಾಣಬೇಕೆಂದು ಬಯಸುತ್ತಾರೆ. ಆದರೆ ಸಮಸ್ಯೆಗೆ ಕಾರಣವಾಗಲಿದೆ…, ನೀವು ಯಾರನ್ನಾದರೂ ನೋಡಬಹುದು, ನೀವು ಅವರನ್ನು ಅನುಸರಿಸಬಹುದು, ಅವರನ್ನು ಉಲ್ಲೇಖಿಸಬಹುದು, ಆದರೆ ಇದು ನನಗೆ ಬೇಕು ಎಂದು ನೀವು ಹೇಳಲು ಸಾಧ್ಯವಿಲ್ಲ, ಏಕೆಂದರೆ ನೀವು ನಿಮ್ಮದೇ ಆದ ವ್ಯಕ್ತಿತ್ವವನ್ನು ಹೊಂದಿದ್ದೀರಿ ಮತ್ತು ಅದು ಕೊನೆಯಲ್ಲಿ ಕಂಡುಬರುತ್ತದೆ, ”ಎಂದು  ಡಾಲಿ ಜೈನ್‌ ಹೇಳುತ್ತಾರೆ.

ಸೀರೆಯನ್ನು ವಿವಿಧ ವಿಧಾನದಲ್ಲಿ ಉಡಿಸಿದ ಬಳಿಕ ಅವರು ಫೋಟೋ ಶೂಟ್‌ ಗಳನ್ನು ಮಾಡಿಸುತ್ತಾರೆ. ಜೈನ್ ಕೆಲವು ಪುರುಷರಿಗೂ ಸೀರೆಯನ್ನು ಉಡಿಸಿದ್ದಾರೆ.

ಡಾಲಿ ಜೈನ್ ಒಂದು ಸೀರೆ ಉಡಿಸಲು 35 ಸಾವಿರದಿಂದ 2 ಲಕ್ಷದವರೆಗೂ ಹಣವನ್ನು ತೆಗೆದುಕೊಳ್ಳುತ್ತಾರೆ.‌

-ಸುಹಾನ್‌ ಶೇಕ್

ಟಾಪ್ ನ್ಯೂಸ್

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆಹಾ! ಈ ಕಾಶಿ ಹಲ್ವಾ ಏನ್‌ ರುಚಿ ಅಂತೀರಾ,ಒಮ್ಮೆ ಹೀಗೆ ಮಾಡಿ ನೋಡಿ….

ಆಹಾ! ಈ ಕಾಶಿ ಹಲ್ವಾ ಏನ್‌ ರುಚಿ ಅಂತೀರಾ,ಒಮ್ಮೆ ಹೀಗೆ ಮಾಡಿ ನೋಡಿ….

13

ಗಲ್ಫ್ ಮರುಭೂಮಿಯಲ್ಲಿ 2 ವರ್ಷ ನರಕಯಾತನೆ: ʼಆಡುಜೀವಿತಂʼ ಸಿನಿಮಾದ ನಿಜವಾದ ಹೀರೋ ಇವರೇ…

ಜರ್ಮನಿ ಕನ್ನಡತಿಯ ಸ್ಫೂರ್ತಿಯ ಪಯಣ; ಏನಿದು ಮಿಸಸ್‌ ಇಂಡಿಯಾ ವರ್ಡ್‌ವೈಡ್‌ ?

ಜರ್ಮನಿ ಕನ್ನಡತಿಯ ಸ್ಫೂರ್ತಿಯ ಪಯಣ; ಏನಿದು ಮಿಸಸ್‌ ಇಂಡಿಯಾ ವರ್ಲ್ಡ್‌ವೈಡ್‌ ?

MS Dhoni: ಕ್ಯಾಪ್ಟನ್ಸಿ ಕಿರೀಟ ಕಳಚಿಟ್ಟ ಥಲಾ..; ಟ್ರೋಫಿಯೊಂದಿಗೆ ಯಶೋಗಾಥೆಯೊಂದು ಅಂತ್ಯ

MS Dhoni: ಕ್ಯಾಪ್ಟನ್ಸಿ ಕಿರೀಟ ಕಳಚಿಟ್ಟ ಥಲಾ..; ಟ್ರೋಫಿಯೊಂದಿಗೆ ಯಶೋಗಾಥೆಯೊಂದು ಅಂತ್ಯ

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.