ದಣಿವರಿಯದ “ಅಂತರ್ಯಾಮಿ” ಪಯಣ: ನಿವೃತ್ತ ಶಿಕ್ಷಕ…ಮಹಾನ್ ಪರಿಸರ ಪ್ರೇಮಿ

ಜಾಗೃತಿಯನ್ನು ಮೂಡಿಸುವ ಬರಹಗಳನ್ನು ಬರೆದು ಗ್ರಾಮದ ಬೀದಿಯಲ್ಲಿ, ಊರ ರಸ್ತೆ ಬದಿಯಲ್ಲೂ ಅಂಟಿಸಿ, ಜಾಗೃತಿ ಮೂಡಿಸುತ್ತಿದ್ದಾರೆ.

ಸುಹಾನ್ ಶೇಕ್, Aug 20, 2021, 12:04 PM IST

ದಣಿವರಿಯದ “ಅಂತರ್ಯಾಮಿ” ಪಯಣ: ನಿವೃತ್ತ ಶಿಕ್ಷಕ…ಮಹಾನ್ ಪರಿಸರ ಪ್ರೇಮಿ

ಕೆಲವರಿಗೆ ಪ್ರಕೃತಿ ಮೇಲೆ ಅಪಾರ ಪ್ರೀತಿ. ಮಕ್ಕಳಂತೆ ಗಿಡಗಳನ್ನು ನೆಟ್ಟು,ನೀರು ಹಾಕಿ ಪೋಷಿಸುವುದು,ಅವುಗಳನ್ನು ಆರೈಕೆ ಮಾಡಿ, ಗೊಬ್ಬರ ಮಣ್ಣು ಹಾಕುವುದು, ಗಿಡವನ್ನು ಮರವಾಗಿ ಮಾಡುವುದು. ಒಟ್ಟಿನಲ್ಲಿ ತಾಯಿಯಂತೆ ನೆಟ್ಟ ಗಿಡಗಳನ್ನು ನೋಡಿಕೊಳ್ಳುವುದು ಪ್ರಕೃತಿ ಪ್ರೇಮಿಯ ಲಕ್ಷಣ. ಇಲ್ಲೊಬ್ಬ ವ್ಯಕ್ತಿ ಇದ್ದಾರೆ. ವಯಸ್ಸು 75 ದಾಟಿದರೂ ಅವರಿಗೆ ಪ್ರಕೃತಿಯ ಮೇಲೆ ಅಪಾರ ಪ್ರೀತಿ. ಗಿಡಗಳನ್ನು ನೆಟ್ಟು ಅವುಗಳ ದಿನಚರಿಯನ್ನು ನೋಡುವುದು ಅಂದರೆ ಇವರಿಗೆ ದಿನನಿತ್ಯದ ಕಾಯಕ. ಇವರು ಪರಿಸರದ ಮಹಾನ್ ಪ್ರೇಮಿ.

ಒಡಿಶಾದ ಕಂಟಿಲೊ ಗ್ರಾಮದ ಮುದಿ ಜೀವ ಈ ಅಂತರ್ಯಾಮಿ. ಬಾಲ್ಯದಲ್ಲಿ ಅಂದರೆ ತನ್ನ 11 ನೇ ವಯಸ್ಸಿನಲ್ಲಿ ಅದೊಂದು ದಿನ ಅಂತರ್ಯಾಮಿ ಆಲದ ಗಿಡವೊಂದನ್ನು ತನ್ನ ಮನೆಯಂಗಳದಲ್ಲಿ ನೆಡುತ್ತಾರೆ. ಆ ಗಿಡಕ್ಕೆ ನೀರು ಹಾಕಿ, ಅದರ ಬಾಲ್ಯ, ಯೌವನ, ಮುದಿತನವನ್ನು ಕಾಯುತ್ತಾ, ಅದನ್ನು ಸಾಕಿ ಮರವಾಗಿ ಕಾಪಾಡುವಲ್ಲಿ ಅಂತರ್ಯಾಮಿ ಯಶಸ್ವಿಯಾಗುತ್ತಾರೆ. ಪ್ರತಿ ವರ್ಷ ಗಿಡ ನೆಟ್ಟು ಪೋಷಿಸುವ ಅಂತರ್ಯಾಮಿ ಅವರ ಹವ್ಯಾಸಕ್ಕೆ ಶಿಕ್ಷಕ ವೃತ್ತಿ ಜತೆಯಾಗುತ್ತದೆ. ಶಿಕ್ಷಕ ವೃತ್ತಿಯಲ್ಲಿ ಮಕ್ಕಳಲ್ಲಿ ಪರಿಸರದ ಉಳಿವಿನ ಬಗ್ಗೆ ಜಾಗೃತಿ ಪಾಠವನ್ನು ಮಾಡುವುದು ಮಾತ್ರವಲ್ಲದೆ. ಶಾಲೆಯ ಹಿತ್ತಲಿನಲ್ಲಿ ನೂರಾರು ಗಿಡಗಳನ್ನು ನೆಡಲು ಶುರು ಮಾಡುತ್ತಾರೆ. ಖಾಲಿ ಜಮೀನುಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಅಂತರ್ಯಾಮಿ ನೆಟ್ಟ ಗಿಡಗಳು ಮರವಾಗಿ ಬೆಳೆದು ನಿಲ್ಲುತ್ತವೆ. ಈ ಪ್ರಕೃತಿ ಪ್ರೇಮ ಅವರನ್ನು ಊರಿನಲ್ಲಿ ‘ಗಚ್ಚಾ’ ಸರ್ ಎಂದು ಹೆಸರಿನಿಂದ ಎಲ್ಲರೂ ಕರೆಯುವಂತೆ ಮಾಡುತ್ತದೆ. ಗಚ್ಚಾ ಎಂದರೆ ಒಡಿಯಾದಲ್ಲಿ ಮರ ಎಂದು ಅರ್ಥ.

1973 ರಲ್ಲಿ ಪ್ರಾಥಮಿಕ ಶಾಲೆಯೊಂದಕ್ಕೆ ಶಿಕ್ಷಕನಾಗಿ ಸೇರಿಕೊಂಡ ಅವರು, ವರ್ಗಾವಣೆ ಆಗುತ್ತಾ ಒಟ್ಟು 6 ಶಾಲೆಗಳಲ್ಲಿ ಗಿಡಗಳನ್ನು ನೆಡುವ ಬೃಹತ್ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದೆ. ಅರಣ್ಯ ಇಲಾಖೆಯಿಂದ ಗಿಡಗಳನ್ನು ಪಡೆದು ನರ್ಸರಿಯ ಹಾಗೆ ಒಂದರ ನಂತರ ಒಂದು ಗಿಡಗಳನ್ನು ಒಟ್ಟು ಮಾಡಿ ನೆಡುತ್ತಾ ಬಂದೆ ಎನ್ನುತ್ತಾರೆ ಅಂತರ್ಯಾಮಿ. 2004 ರಿಂದ 10 ಸಾವಿರ ಸೆಸಿಗಳನ್ನು ನೆಟ್ಟಿರುವ ಅಂತರ್ಯಾಮಿ. ವಿದ್ಯಾರ್ಥಿಗಳ ಜತೆಗೊಡಿ 20 ಸಾವಿರ ಗಿಡಗಳನ್ನು ನೆಟ್ಟಿದ್ದಾರೆ. ಒಟ್ಟು ಇದುವರೆಗೆ 30 ಸಾವಿರ ಗಿಡಗಳನ್ನು ನೆಟ್ಟು ಪೋಷಿಸಿದ್ದಾರೆ. ತೇಗ, ಆಲ, ಮಾವು, ಭಾರತೀಯ ಬೀಲ್, ಅಂಜೂರ ಮತ್ತು ಇತರ ಸ್ಥಳೀಯ ತಳಿಗಳಂತಹ ಸಸಿಗಳನ್ನು ನೆಡಲು ಅವರು ಒತ್ತು ನೀಡಿದರು. ಇವರ ಪಯಣ ಇಲ್ಲಿಗೆ ನಿಲ್ಲಿಲ್ಲ. ವಯಸ್ಸು 75 ದಾಟಿದರೂ ಇಂದಿಗೂ ಗಿಡಗಳನ್ನು ನೆಡುವುದು ಇವರಿಗೆ ಆಯಾಸವಾಗದ ಕೆಲಸ.

ಇಷ್ಟು ಮಾತ್ರವಲ್ಲದೆ ಅಂತರ್ಯಾಮಿ ಕಾಡುಗಳನ್ನು ಉಳಿಸಬೇಕು. ಅಲ್ಲಿರುವ ಪ್ರಾಣಿ- ಪಕ್ಷಿಗಳನ್ನು ಉಳಿಸಬೇಕು, ಕಾಡ್ಗಿಚ್ಚಿನಂಥ ಘಟನೆಗಳನ್ನು ಆದಷ್ಟು ತಡೆಯಬೇಕು ಎನ್ನುವ ಪ್ರಯತ್ನದಲ್ಲಿ ಅರಣ್ಯ ಅಧಿಕಾರಿಗಳ ಜತೆ ನಿರಂತರವಾಗಿ ಚರ್ಚಿಸಿದ್ದಾರೆ. ಗಿಡಗಳನ್ನು ಬೆಳೆಸಬೇಕು, ಅವುಗಳನ್ನು ಉಳಿಸಬೇಕು ಅದಕ್ಕಾಗಿ ಯಾವ ಸಾಮಾಜಿಕ ಜಾಲತಾಣಗಳಿಲ್ಲದ ಸಮಯದಿಂದಲೂ ಅಂತರ್ಯಾಮಿ, ಪೋಸ್ಟರ್ ಗಳನ್ನು ಮಾಡಿ, ಅವುಗಳ ಮೇಲೆ ಪರಿಸರದ ಕುರಿತು ಜಾಗೃತಿಯನ್ನು ಮೂಡಿಸುವ ಬರಹಗಳನ್ನು ಬರೆದು ಗ್ರಾಮದ ಬೀದಿಯಲ್ಲಿ, ಊರ ರಸ್ತೆ ಬದಿಯಲ್ಲೂ ಅಂಟಿಸಿ, ಜಾಗೃತಿ ಮೂಡಿಸುತ್ತಿದ್ದಾರೆ. ಇವರ ಈ ಕಾಯಕ್ಕೆ ಹಲವಾರು ಸಂಘ- ಸಂಸ್ಥೆಗಳು, ವಿದ್ಯಾರ್ಥಿಗಳು ಜತೆಯಾಗುತ್ತಿದ್ದಾರೆ.

ಗಿಡಗಳನ್ನು ನೆಡುವ ಜತೆಗೆ ಸೆಸಿಗಳ ಬೀಜ ವಿತರಣೆಯನ್ನು ಮಾಡುತ್ತಾರೆ. 30 ಸಾವಿರ ಗಿಡಗಳನ್ನು ನೆಟ್ಟಿರುವ ಇವರು ಅವುಗಳನ್ನು ಪ್ರದೇಶವಾರಿನಂತೆ ಡಾಕ್ಯುಮೆಂಟೇಷನ್ ಆಗಿ ಕಾಪಾಡಿಕೊಂಡಿದ್ದಾರೆ ಅಂತೆ.

– ಸುಹಾನ್ ಶೇಕ್

ಟಾಪ್ ನ್ಯೂಸ್

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

1–qwewqe

Ayodhya: ಸೂರ್ಯ ತಿಲಕ ಸಾಧ್ಯವಾಗಿಸಿದ ವಿಜ್ಞಾನಿಗಳಿಗೆ ತಲೆ ಬಾಗುತ್ತೇನೆ: ಅರುಣ್ ಯೋಗಿರಾಜ್

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

11

ಪೊಲೀಸ್‌ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್‌ ಸ್ಟರ್‌ ಆದದ್ದೇಗೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.