ಶುರುವಾಗಿದ್ದು 3BHK ಕೋಣೆಯಲ್ಲಿ, 4 ಉದ್ಯೋಗಿಗಳು…ಇಂದು 1,106 ಕೋಟಿ ಐಟಿ ಕಂಪನಿ ಒಡೆಯ!

ಯೂಸರ್ ಫ್ರೆಂಡ್ಲಿ ವೆಬ್ ಬ್ರೌಸರ್ ಉದ್ಯಮದಿಂದ ಜಾಕ್ ಪಾಟ್ ಹೊಡೆಯಲಿದೆ ಎಂದು ಲೆಕ್ಕಾಚಾರ

ನಾಗೇಂದ್ರ ತ್ರಾಸಿ, Oct 17, 2020, 5:09 PM IST

ಶುರುವಾಗಿದ್ದು 3BHK ಕೋಣೆಯಲ್ಲಿ, 4 ಉದ್ಯೋಗಿಗಳು…ಇಂದು 1,106 ಕೋಟಿ ಐಟಿ ಕಂಪನಿ ಒಡೆಯ

ಕೈತುಂಬಾ ಸಂಬಳ, ಐಶಾರಾಮಿ ಜೀವನ ನಡೆಸಬೇಕೆಂಬ ಕನಸು ಹೊತ್ತಿದ್ದ ಪುಣೆ ಮೂಲದ ಅರುಣ್ ನಥಾನಿ ಎಂಬ ಯುವಕ 1987ರಲ್ಲಿ ಅಮೆರಿಕದ ಚಿಕಾಗೋ ಮೂಲದ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು. ಸುಮಾರು ಐದು ವರ್ಷಗಳ ಕಾಲ ಡಿಸೈನ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ್ದರು. ಆದರೆ ನಥಾನಿಗೆ ತಾನು ಇನ್ನು ವಿದೇಶದಲ್ಲಿ ಕೆಲಸ ಮಾಡುವುದರಲ್ಲಿ ಯಾವ ಪುರುಷಾರ್ಥವೂ ಇಲ್ಲ ಎಂದು ಗಂಟು, ಮೂಟೆ ಕಟ್ಟಿಕೊಂಡು ಭಾರತಕ್ಕೆ ವಾಪಸ್ ಆಗಿದ್ದರು.

ಐಟಿ ಕಂಪನಿ ಆರಂಭವಾಗಿದ್ದು ಹೇಗೆ?

ಅರುಣ್ ಅವರು ಮುಂಬೈನಲ್ಲಿ ಆರಂಭದ ದಿನದಲ್ಲಿ ಶೇರು ಮಾರುಕಟ್ಟೆ ವಿಶ್ಲೇಷಕರಾಗಿ, ಗುಣಮಟ್ಟದ ಭರವಸೆ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಅರುಣ್ ಅವರ ಮೇಲೆ ಪ್ರಭಾವ ಬೀರಿದ್ದು ಇಂಟರ್ನೆಟ್ ಲೋಕ!

ಬ್ರೌಸಿಂಗ್ ಜಗತ್ತು ಕಣ್ಣು ತೆರೆಯುತ್ತಿದ್ದ ಕಾಲದಲ್ಲಿ ಅರುಣ್ ಗೆ ಹೊಸ ದಿಕ್ಕು ಕಾಣಿಸಿತ್ತು. ಇಡೀ ಜಗತ್ತನ್ನೇ ಡಿಜಿಟಲ್ ಆಗಿ ಸಂಪರ್ಕಿಸುವ ಹೊಸ ಅವಕಾಶದ ಉದ್ಯಮಕ್ಕೆ ಕಾಲಿಡಲು ಮುಂದಾಗಿದ್ದು, 1995ರಲ್ಲಿ ಇಂಟರ್ನೆಟ್ ಬ್ರೌಸರ್ ಅನ್ನು ತಯಾರಿಸಿ ಅದನ್ನು ಎಂಎನ್ ಸಿ ಕಂಪನಿಗಳಿಗೆ ಮಾರಾಟ ಮಾಡುವ ಯೋಜನೆಗೆ ಅಂತಿಮ ರೂಪಕೊಟ್ಟಿದ್ದರು!

1990ರ ದಶಕದಲ್ಲಿ ಹಿಡಿತ ಸಾಧಿಸಿದ್ದ ವೆಬ್ ಬ್ರೌಸರ್ ನೆಟ್ ಸ್ಕೇಪ್ ರೀತಿ ತಾವು ಒಂದು ವೆಬ್ ಬ್ರೌಸರ್ ಆರಂಭಿಸಲು ನಿರ್ಧರಿಸಿದ್ದರು. ಆದರೆ ಅರುಣ್ ಅವರು ತಮ್ಮ ಪ್ರಾಡಕ್ಟ್ ಹೆಚ್ಚು ಗ್ರಾಹಕ ಸ್ನೇಹಿಯಾಗಿರಬೇಕು ಎಂದು ಬಯಸಿದ್ದರು.

3 ಬಿಎಚ್ ಕೆ ಯಲ್ಲಿ ಸೈಬರೇಜ್ ಆರಂಭ!

1995ರಲ್ಲಿ ಅರುಣ್ ಅವರು ತಮ್ಮಲ್ಲಿದ್ದ ಸ್ವಲ್ಪ ಉಳಿತಾಯದ ಹಣದೊಂದಿಗೆ ಪಾರ್ಟನರ್ ಜತೆ ಸೇರಿ ಪುಣೆಯ ಸಾಲೋಂಖೆ ವಿಹಾರ್ ನಲ್ಲಿ 3 ಬಿಎಚ್ ಕೆ ಬಾಡಿಗೆಗೆ ಪಡೆದು “ಸೈಬರೇಜ್” (2000ನೇ ಇಸವಿಯಲ್ಲಿ ಹೆಸರನ್ನು ಸೈಬೇಜ್ ಎಂದು ಬದಲಾಯಿಸಿದ್ದರು) ಎಂಬ ಪುಟ್ಟ ಕಂಪನಿ ಆರಂಭಿಸಿದ್ದರು. ನಂತರ ನಾಲ್ವರು ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದ್ದರು.

ಹೊಸ ಕನಸು ಕಟ್ಟಿಕೊಂಡಿದ್ದ ಯುವ ಉದ್ಯಮಿಗೆ ತಮ್ಮ ಯೂಸರ್ ಫ್ರೆಂಡ್ಲಿ ವೆಬ್ ಬ್ರೌಸರ್ ಉದ್ಯಮದಿಂದ ಜಾಕ್ ಪಾಟ್ ಹೊಡೆಯಲಿದೆ ಎಂದು ಲೆಕ್ಕಾಚಾರ ಹಾಕಿಕೊಂಡಿದ್ದರು. ಆದರೆ ವ್ಯವಹಾರದ ಮೊದಲ ದಿನವೇ ಅರುಣ್ ಗೆ ದೊಡ್ಡ ಆಘಾತ ತಂದುಬಿಟ್ಟಿತ್ತು.! ಮೊದಲ ದಿನವೇ ನಾಲ್ಕು ಮಂದಿ ಉದ್ಯೋಗಿಗಳು ಕೆಲಸಕ್ಕೆ ಗೈರಾಗಿದ್ದರು. ಅಷ್ಟೇ ಅಲ್ಲ ಉದ್ಯಮದ ಪಾರ್ಟನರ್ ಕೂಡಾ ಕೈಕೊಟ್ಟು ಬಿಟ್ಟಿದ್ದರು!

‘ಕೂಡಲೇ ಅರುಣ್ ಅವರು ಪಾರ್ಟನರ್ ನ್ನು ಕರೆದು ನಾವು ಉದ್ಯಮ ಆರಂಭಿಸುವ, ನಮಗೆ ಒಳ್ಳೆಯ ಸುದ್ದಿ ಸಿಗಲಿದೆ ಎಂದು ಹೇಳಿದ್ದರು. ತನಗೆ ಈ ವ್ಯವಹಾರದ ಮೇಲೆ ಆಸಕ್ತಿ ಇಲ್ಲ ಎಂದು ಪಾರ್ಟನರ್ ಕಡ್ಡಿ ಮುರಿದಂತೆ ಹೇಳಿಬಿಟ್ಟಿದ್ದ. ನೀವು ಕೊನೇ ಘಟ್ಟದಲ್ಲಿ ಯೂಟರ್ನ್ ಹೊಡೆಯಲು ಕಾರಣ ಏನು ಎಂದು ಅರುಣ್ ವಿಚಾರಿಸಿದಾಗ, ಇನ್ನು ಕೆಲವೇ ದಿನದಲ್ಲಿ ಮೈಕ್ರೋ ಸಾಫ್ಟ್ ಉಚಿತ ಬ್ರೌಸರ್ ಅನ್ನು ಬಿಡುಗಡೆ ಮಾಡಲಿದೆ. ಮೈಕ್ರೋಸಾಫ್ಟ್ ವೆಬ್ ಬ್ರೌಸರ್ ಗೆ ಮಾರ್ಕೆಟ್ ಮಾಡಲು ನನಗೆ ಆಫರ್ ನೀಡಿದ್ದಾರೆ. ಹೀಗಾಗಿ ನಿಮ್ಮ ವೆಬ್ ಬ್ರೌಸರ್ ಗೆ ಭವಿಷ್ಯ ಇಲ್ಲ ಎಂದು ಹೇಳಿ ಪಾರ್ಟನರ್ ಹೊರಟು ಹೋಗಿದ್ದರು!

ಆದರೆ ನಾನು ಈ ಯೋಜನೆ ಬಿಟ್ಟು ಬಿಡಲು ಸಿದ್ದವಿಲ್ಲವಾಗಿತ್ತು. ಏನೇ ಆಗಲಿ ಇಷ್ಟು ಬೇಗನೇ ಆಟದಿಂದ ಹಿಂದೆ ಸರಿಯಬಾರದು ಎಂದು ಅರುಣ್ ನಿರ್ಧರಿಸಿದ್ದರು. ಸೈಬೇಜ್ ಉದ್ಯೋಗ ಉಳಿಸಲು ಜನ್ಮತಳೆದಿದ್ದು, ಹೀಗಾಗಿ ನಮಗೆ ವೆಂಚರ್ ಕ್ಯಾಪಿಟಲ್ ಫಂಡ್ಸ್ ಅಗತ್ಯವಿತ್ತು. ಆದರೆ 90ರ ದಶಕದಲ್ಲಿ ಹೊಸ ಕಂಪನಿಗೆ ಬಂಡವಾಳ ಹೂಡಿಕೆ ಮಾಡಲು ಹಿಂದೆ ಮುಂದೆ ನೋಡುತ್ತಿದ್ದರು. ಕೊನೆಗೂ ಛಲಬಿಡದೆ 3 ಬಿಎಚ್ ಕೆಯಲ್ಲಿಯೇ ನಾಲ್ಕು ಉದ್ಯೋಗಿಗಳನ್ನು ಹಾಕಿಕೊಂಡು ಸಹೋದರ ದೀಪಕ್ ನಥಾನಿ ಜತೆಗೂಡಿ ಬ್ರೌಸರ್ ತಯಾರಿಯಲ್ಲಿ ತೊಡಗಿದ್ದರು. 1995ರಲ್ಲಿ ಅರುಣ್ 32 Bitನ ವಿಂಡೋಸ್ ನ ಬೀಟಾ ವರ್ಷನ್ ಡೆವಲಪ್ ಮಾಡಿದ್ದರು.

1990ರ ದಶಕದಲ್ಲಿ ಭಾರತದಲ್ಲಿ ಇಂಟರ್ನೆಟ್ ಸಂಪರ್ಕ ಎಂಬುದು ಅಪರಿಚಿತ ಹೆಸರಾಗಿತ್ತು. ಅಂದು ನಮಗೆ ನೇರ ಸ್ಪರ್ಧಿಯಾಗಿದ್ದ ನೆಟ್ ಸ್ಕೇಪ್ ಬಿಲಿಯನ್ ಡಾಲರ್ ನಷ್ಟು ವಹಿವಾಟು ನಡೆಸುತ್ತಿತ್ತು. ಅಲ್ಲದೇ ನೆಟ್ ಸ್ಕೇಪ್ ನಲ್ಲಿ ಇಡೀ ಜಗತ್ತಿನ ಐಟಿ ಪ್ರೊಫೆಶನಲ್ಸ್ ಇದ್ದರು. ನಮ್ಮಲ್ಲಿ ಇದ್ದದ್ದು ನಾಲ್ಕೇ ಜನ…

ಆರು ತಿಂಗಳ ಕಠಿಣ ಶ್ರಮದ ನಂತರ ಅರುಣ್ ಅವರ ವೆಬ್ ಬ್ರೌಸರ್ : ದ ಸೈಬರ್ ಏಜ್ ರೈಡರ್” ತಯಾರಾಗಿತ್ತು!

ಟಾಪ್ ನ್ಯೂಸ್

2006ರ ನಕಲಿ ಎನ್‌ಕೌಂಟರ್ ಪ್ರಕರಣ: ಮುಂಬೈನ ಮಾಜಿ ಪೋಲೀಸ್ ಅಧಿಕಾರಿಗೆ ಜೀವಾವಧಿ ಶಿಕ್ಷೆ

2006ರ ನಕಲಿ ಎನ್‌ಕೌಂಟರ್ ಪ್ರಕರಣ: ಮುಂಬೈನ ಮಾಜಿ ಪೊಲೀಸ್ ಅಧಿಕಾರಿಗೆ ಜೀವಾವಧಿ ಶಿಕ್ಷೆ

Sparrows ಕಣ್ಮರೆಯಾಗುತ್ತಿರುವ ಗುಬ್ಬಚ್ಚಿಗಳು..ಆದರೆ ಇಲ್ಲಿವೆ ನೂರಾರು ಚಿಂವ್..ಚಿಂವ್ ಗಳು..

Sparrows ಕಣ್ಮರೆಯಾಗುತ್ತಿರುವ ಗುಬ್ಬಚ್ಚಿಗಳು..ಆದರೆ ಇಲ್ಲಿವೆ ನೂರಾರು ಚಿಂವ್..ಚಿಂವ್ ಗಳು..

Panaji; ಹೊಸ ದಾಖಲೆ ನಿರ್ಮಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್

Panaji; ಹೊಸ ದಾಖಲೆ ನಿರ್ಮಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್

Thirthahalli ಅಂಗನವಾಡಿ ಮಿಲೆಟ್ ಲಡ್ಡು ಮಿಶ್ರಣದಲ್ಲಿ ಹುಳು ಪ್ರತ್ಯಕ್ಷ !

Thirthahalli ಅಂಗನವಾಡಿ ಮಿಲೆಟ್ ಲಡ್ಡು ಮಿಶ್ರಣದಲ್ಲಿ ಹುಳು ಪ್ರತ್ಯಕ್ಷ !

CCTV: ಬೆಳಗಾವಿಯಲ್ಲಿ ಹುಲಿ ಓಡಾಟದ ವಿಡಿಯೋ ವೈರಲ್… ಸುಳ್ಳು ಸುದ್ದಿ ಎಂದ ಅರಣ್ಯ ಇಲಾಖೆ

CCTV: ಬೆಳಗಾವಿಯಲ್ಲಿ ಹುಲಿ ಓಡಾಟದ ವಿಡಿಯೋ ವೈರಲ್… ಸುಳ್ಳು ಸುದ್ದಿ ಎಂದ ಅರಣ್ಯ ಇಲಾಖೆ

Indi; ಕುಡಿಯುವ ನೀರಿಗಾಗಿ ಒತ್ತಾಯ; ಮೊಬೈಲ್‌ ಟವರ್‌ ಹತ್ತಿದ ಯುವಕ

Indi; ಕುಡಿಯುವ ನೀರಿಗಾಗಿ ಒತ್ತಾಯ; ಮೊಬೈಲ್‌ ಟವರ್‌ ಹತ್ತಿದ ಯುವಕ

SS Rajamouli:‌ ಬರಲಿದೆಯಾ ʼRRRʼ ಸೀಕ್ವೆಲ್?: ಜಪಾನ್‌ನಲ್ಲಿ ಸುಳಿವು ಕೊಟ್ಟ ರಾಜಮೌಳಿ

SS Rajamouli:‌ ಬರಲಿದೆಯಾ ʼRRRʼ ಸೀಕ್ವೆಲ್?: ಜಪಾನ್‌ನಲ್ಲಿ ಸುಳಿವು ಕೊಟ್ಟ ರಾಜಮೌಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂಡಿಯನ್ ಆಯಿಲ್ ಕಂಪನಿಗೆ ನಿರ್ದೇಶಕರಾಗಿ (ಎಚ್‌ಆರ್) ರಶ್ಮಿ ಗೋವಿಲ್ ಅಧಿಕಾರ ಸ್ವೀಕಾರ

ಇಂಡಿಯನ್ ಆಯಿಲ್ ಕಂಪನಿಗೆ ನಿರ್ದೇಶಕರಾಗಿ (ಎಚ್‌ಆರ್) ರಶ್ಮಿ ಗೋವಿಲ್ ಅಧಿಕಾರ ಸ್ವೀಕಾರ

Narayan Murthy INFOSYS

Infosys; 4 ತಿಂಗಳ ಮೊಮ್ಮಗನಿಗೆ 243 ಕೋಟಿ ರೂ.ಷೇರು ಗಿಫ್ಟ್ ನೀಡಿದ ಮೂರ್ತಿ

Stock Exchange: ಬಾಂಬೆ ಷೇರುಪೇಟೆ ಸೂಚ್ಯಂಕ 1,000 ಅಂಕ ಕುಸಿತ: 12 ಲಕ್ಷ ಕೋಟಿ ರೂ. ನಷ್ಟ

Stock Exchange: ಬಾಂಬೆ ಷೇರುಪೇಟೆ ಸೂಚ್ಯಂಕ 1,000 ಅಂಕ ಕುಸಿತ: 12 ಲಕ್ಷ ಕೋಟಿ ರೂ. ನಷ್ಟ

musk

YouTube ಠಕ್ಕರ್‌ನೀಡಲು ಮಸ್ಕ್  ಹೊಸ ಟಿವಿ ಆ್ಯಪ್‌

Facebook, Instagram, Meta, Shares value, Mark, Udayavani, ಫೇಸ್‌ ಬುಕ್‌, ಇನ್ಸ್ಟಾಗ್ರಾಮ್‌, ಸರ್ವರ್‌ ಡೌನ್‌, ಸೇವೆಯಲ್ಲಿ ವ್ಯತ್ಯಯ

Facebook, Instagram ಸರ್ವರ್‌ ಡೌನ್‌, ಸೇವೆಯಲ್ಲಿ ವ್ಯತ್ಯಾಸ; 829 ಕೋಟಿ ರೂಪಾಯಿ ನಷ್ಟ

MUST WATCH

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

ಹೊಸ ಸೇರ್ಪಡೆ

2006ರ ನಕಲಿ ಎನ್‌ಕೌಂಟರ್ ಪ್ರಕರಣ: ಮುಂಬೈನ ಮಾಜಿ ಪೋಲೀಸ್ ಅಧಿಕಾರಿಗೆ ಜೀವಾವಧಿ ಶಿಕ್ಷೆ

2006ರ ನಕಲಿ ಎನ್‌ಕೌಂಟರ್ ಪ್ರಕರಣ: ಮುಂಬೈನ ಮಾಜಿ ಪೊಲೀಸ್ ಅಧಿಕಾರಿಗೆ ಜೀವಾವಧಿ ಶಿಕ್ಷೆ

Sparrows ಕಣ್ಮರೆಯಾಗುತ್ತಿರುವ ಗುಬ್ಬಚ್ಚಿಗಳು..ಆದರೆ ಇಲ್ಲಿವೆ ನೂರಾರು ಚಿಂವ್..ಚಿಂವ್ ಗಳು..

Sparrows ಕಣ್ಮರೆಯಾಗುತ್ತಿರುವ ಗುಬ್ಬಚ್ಚಿಗಳು..ಆದರೆ ಇಲ್ಲಿವೆ ನೂರಾರು ಚಿಂವ್..ಚಿಂವ್ ಗಳು..

ಉದ್ಯಾವರ-ಮರ್ಣೆ-ಬೆಳ್ಳೆ ರಸ್ತೆ ಅಭಿವೃದ್ಧಿ

ಉದ್ಯಾವರ-ಮರ್ಣೆ-ಬೆಳ್ಳೆ ರಸ್ತೆ ಅಭಿವೃದ್ಧಿ

Panaji; ಹೊಸ ದಾಖಲೆ ನಿರ್ಮಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್

Panaji; ಹೊಸ ದಾಖಲೆ ನಿರ್ಮಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್

ರಾಷ್ಟ್ರೀಯ ನಾಟ್ಯೋತ್ಸವ; ದೇಶವೇ ಕೆರೆಮನೆಯತ್ತ ನೋಡುವಂತಾಗಿದ್ದು ಸಾಧನೆ

ರಾಷ್ಟ್ರೀಯ ನಾಟ್ಯೋತ್ಸವ; ದೇಶವೇ ಕೆರೆಮನೆಯತ್ತ ನೋಡುವಂತಾಗಿದ್ದು ಸಾಧನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.