ವಿಧಿಯ ಆಟದ ಮುಂದೆ ; ಆಟೋ ಓಡಿಸಿ ಬದುಕು ಗೆದ್ದವನ ಯಶೋಗಾಥೆ..


Team Udayavani, Apr 15, 2020, 8:13 PM IST

0..

ಜೀವನದಲ್ಲಿ ಅಂದುಕೊಂಡ ಗುರಿಗಳನ್ನು ಸಾಧಿಸಲು ಹೊರಟವನ ದಾರಿ ಕಲ್ಲು‌ ಮುಳ್ಳುಗಳಿಲ್ಲದೆ ಸುಗಮವಾಗಿ ಇರುವುದು ಕೆಲವೊಬ್ಬರಿಗೆ ಮಾತ್ರ. ಆ ಕೆಲವೊಬ್ಬರಲ್ಲೂ ಅದೃಷ್ಟವಂಚಿತರು ಇರುತ್ತಾರೆ. ಆದರೆ ಆ ಅದೃಷ್ಟವಂಚಿತರ  ಬಾಳಿನಲ್ಲಿ ವಿಧಿ ಬೇರೇನೋ ಭಿನ್ನವಾದದ್ದನ್ನು ಇಟ್ಟಿರುತ್ತದೆ ಅನ್ನುವುದಕ್ಕೆ ಸಾಕ್ಷಿ ಕೇರಳದ ಕೊಚ್ಚಿಯ ಶ್ರೀಕಾಂತ್.

ಇಂದು ಶ್ರೀಕಾಂತ್ ಹಾಗೂ ಅವರ ‘ಹೆಲೋ ಬಡ್ಡಿ’ ಆಟೋ ಕೇರಳದ ಅಲುವಾ ನಗರದಲ್ಲಿ ಜನಪ್ರಸಿದ್ದಿಯಾಗಿದೆ. ಕರತುಕೋಜ್ಹಿ ಆಸ್ಪತ್ರೆಯ ಮುಂಭಾಗದಲ್ಲಿ ನಿಲ್ಲುವ ಶ್ರೀಕಾಂತ್ ರ ಆಟೋ ಸ್ಥಳೀಯರಿಂದ ಚಿರಪರಿಚಿತ ಹಾಗೂ ಪ್ರಶಂಸನೀಯವನ್ನು ಪಡೆದಿದೆ. ಅದಕ್ಕೆ ಕಾರಣ ಶ್ರೀಕಾಂತರ ಆಟೋ ಭಿನ್ನವಾಗಿದ್ದು, ಅವರ ಮನಸ್ಸು ಮಾನವೀಯತೆಯನ್ನು ಸಾರುವಂತದ್ದಾಗಿದೆ. ಎಲ್ಲರ ಹಾಗೆ ಶ್ರೀಕಾಂತ್ ಪ್ರತಿನಿತ್ಯದ ಗಳಿಗೆಯಲ್ಲಿ ಅವಸರದ ವೇಗದಲ್ಲಿ ಆಟೋ ಚಲಾಯಿಸುವ ಚಾಲಕನಲ್ಲ. ಶ್ರೀಕಾಂತ್ ಒಬ್ಬ ವಿಕಲಚೇತನ.

ಬದುಕು ಬದಲಾಯಿಸಿದ  ಅವಘಡ; ಅವಕಾಶ ಸೃಷ್ಟಿಸಿತು : ಆಗಷ್ಟೇ ಐಟಿಐ ಶಿಕ್ಷಣವನ್ನು ಮುಗಿಸಿ‌ ಕೆಲಸಕ್ಕಾಗಿ ಅಲೆದಾಡುತ್ತಿದ್ದ ಶ್ರೀಕಾಂತ್ ಅದೊಂದು ದಿನ ತನ್ನ ಸ್ಕೂಟರ್ ನಲ್ಲಿ ಪ್ರಯಣಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದರು. ಬಿದ್ದ ಏಟಿಗೆ ಕೆಲ ಸಮಯ ಆರಾಮವಾಗಿ ವಿಶ್ರಾಂತಿ ಪಡೆಯಲು ಮನೆಯಲ್ಲೇ ಇದ್ದ ಶ್ರೀಕಾಂತ್ ರಿಗೆ ವಿಧಿ ಬೇರೊಂದು ಆಘಾತವನ್ನು ‌ನಿಧಾನವಾಗಿಯೇ ಬದುಕಿನ ಒಳಗೆ ಪ್ರವೇಶ ಮಾಡಿಸಿತು. ಶ್ರೀಕಾಂತ್ ತೆಗೆದುಕೊಳ್ಳುತ್ತಿದ್ದ ಕೆಲವೊಂದು ಔಷಧಿ ದೇಹಕ್ಕೆ ಅಡ್ಡ ಪರಿಣಾಮ ಬೀರಿ ಅವರ ಕಾಲು ಹಾಗೂ ಬೆನ್ನಿನ ಭಾಗವನ್ನು ಶೇ. 60 ರಷ್ಟು ಪಾರ್ಶ್ವವಾಯು ಹಂತಕ್ಕೆ ತಂದೊಡ್ಡಿತು.

ಈ ಆಘಾತದ ನಡುವೆಯೂ ಶ್ರೀಕಾಂತ್ ಬದುಕಿನಲ್ಲಿ ಅರೆ ಕ್ಷಣಿಕ ಖುಷಿಯ ದಿನಗಳು ಬರುತ್ತವೆ. ಪಕ್ಕದೂರಿನ ಸ್ಥಳೀಯ ಕ್ಲಿನಿಕ್ ವೊಂದರಲ್ಲಿ ಗುಮಾಸ್ತರಾಗಿ ಒಂದು ಹುದ್ದೆ ಲಭಿಸುತ್ತದೆ. ಪ್ರತಿ ನಿತ್ಯ ಜೀವ ಸೆಳೆಯುವ ನೋವಿನ ಬೇಗೆಯನ್ನು ಇಟ್ಟುಕೊಂಡು ನಲ್ವತ್ತು ನಿಮಿಷ ಪಯಣ ಮಾಡುತ್ತಾರೆ‌. ಇದು ಅತಿಯಾದಾಗ ಶ್ರೀಕಾಂತ್ ಅವರ ನೋವು ಇನ್ನೂ ಹೆಚ್ಚಾಗಿ ಅವರ ಕಾಲುಗಳು ಸಂಪೂರ್ಣ ಊದಿಕೊಂಡು ಬಿಡುತ್ತದೆ. ಇದರಿಂದ ಶ್ರೀಕಾಂತ್ ಕುಳಿತುಕೊಂಡಲ್ಲಿಯೇ ಅಲುಗಾಡದ ಪರಿಸ್ಥಿತಿಗೆ ಬಂದು ಬಿಡುತ್ತಾರೆ. ಈ ನಡುವೆ ನೂರಾರು ಬಗೆಯ ಚಿಕಿತ್ಸಾ ವಿಧಾನಗಳು, ಸರ್ಜರಿ ನಡೆದು ಸ್ವಲ್ಪ ಸರಿಯಾಗುವ ಹೊತ್ತಿಗೆ ಒಂದು ವರ್ಷ ಕಳೆದು ಹೋಗುತ್ತದೆ. ಈ ಮಧ್ಯೆಯೇ ಇದ್ದ ಒಂದು ಕೆಲಸವೂ ಕೈ ಬಿಟ್ಟು ಹೋಗುತ್ತದೆ.

ಶ್ರೀಕಾಂತ್ ಕೆಲಸ ಮಾಡುತ್ತಿದ್ದ ಕಛೇರಿಯನ್ನು ಸರ್ಕಾರ ತನ್ನ ಅಧೀನಕ್ಕೆ ತೆಗೆದುಕೊಂಡು ಅಲ್ಲಿದ್ದ ಎಲ್ಲಾ ಉದ್ಯೋಗಿಗಳನ್ನು ಕೆಲಸದಿಂದ ಮುಕ್ತಿಗೊಳಿಸುತ್ತದೆ‌. ಕೆಲಸಗಾರರು ತಮ್ಮ ಕೆಲಸಕ್ಕಾಗಿ ಕಾನೂನಿನ ಮೊರೆ ಹೋಗುತ್ತಾರೆ. ಆ ಸಮಯದಲ್ಲಿ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಕೆಲಸ ಕಳೆದುಕೊಂಡ ಎಲ್ಲಾ ಉದ್ಯೋಗಿಗಳಿಗೆ ಮತ್ತೆ ಕೆಲಸ ಸಿಗುತ್ತದೆ. ಶ್ರೀಕಾಂತ್ ಒಬ್ಬರನ್ನು ಬಿಟ್ಟು.

ಶ್ರೀಕಾಂತ್ ಹಾಗೆ ಸುಮ್ಮನೆ ಕೂರಲಿಲ್ಲ. ಅಂಗಡಿಗಳಲ್ಲಿ, ಬೇರೆ ಬೇರೆ ಶಾಪ್ ಗಳಲ್ಲಿ ದಿನನಿತ್ಯದ ಹೊಟ್ಟೆಪಾಡಿಗಾಗಿ ದುಡಿಯುತ್ತಾರೆ. ಈ ವೇಳೆಯಲ್ಲಿ ಶ್ರೀಕಾಂತ್ ರ ಸಂಬಂಧಿಕರು ಆಟೋವೊಂದು ತೆಗೆದುಕೊಂಡು ದುಡಿ ಎನ್ನುವ ಸಲಹೆಯನ್ನು ನೀಡುತ್ತಾರೆ. ಈ ಸಲಹೆಯನ್ನು ಶ್ರೀಕಾಂತ್ ಅನುಕರಣೆ ಮಾಡುವ ನಿಟ್ಟಿನಲ್ಲಿ ಆಟೋವೊಂದನ್ನು ತೆಗೆದುಕೊಳ್ಳುತ್ತಾರೆ ಅದುವೇ ‘ ಹೆಲೋ ಬಡ್ಡಿ’. ಈ ಆಟೋ ಶ್ರೀಕಾಂತ್ ಬದುಕಿನ ದಿಕ್ಕನ್ನೇ ಬದಲಾಯಿಸುತ್ತದೆ.

ಒಂದು ಆಟೋ ಹಲವು ವಿಶೇಷ : ಶ್ರೀಕಾಂತ್ ಅವರ ‘ಹೆಲೋ ಬಡ್ಡಿ’ ಆಟೋ ಜನರಿಗೆ ಇಷ್ಟವಾಗಲು ಕಾರಣ ಹಲವು ಇದೆ. ಪ್ರತಿನಿತ್ಯ ಅವಸರವಾಗಿ ಆಫೀಸಿಗೆ ಹೊರಡುವ ನಾವುಗಳು ಮೊಬೈಲ್ ಚಾರ್ಜ್ ನೋಡಿ ಬ್ಯಾಟರಿ ಲೋ ಆದದ್ದನ್ನು ಕಂಡು ಸಿಡುಕುಗೊಳ್ಳುತ್ತೇವೆ. ಆದರೆ ನೀವು ಶ್ರೀಕಾಂತ್ ಅವರ ಆಟೋದಲ್ಲಿ‌ ಪ್ರಯಾಣಿಸಿದರೆ ನಿಮಗೆ ಈ ಸಮಸ್ಯೆ ಆಗದು. ಏಕೆಂದರೆ ಅವರ ಆಟೋದಲ್ಲಿ ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ ಇದೆ. ಹಾಗೆಯೇ ‌ನಿಮಗೆ ದಿನಪತ್ರಿಕೆ ಓದುವ ಹವ್ಯಾಸ ಇದ್ದರೆ ಇವರ ಆಟೋದಲ್ಲಿ ಮಲೆಯಾಳಂ, ತಮಿಳು ಹಾಗೂ ಇಂಗ್ಲೀಷ್ ಭಾಷೆಯ ದಿನಪತ್ರಿಕೆಗಳು ಪ್ರಯಾಣಿಕರ ಪಯಣಕ್ಕೆ ಜೊತೆಯಾಗುತ್ತವೆ. ಉಚಿತ ವೈಫೈ, ಗೂಗಲ್ ಪೇ, ಪೇಟಿಯಮ್, ಭೀಮ್ ನಂತಹ ಆನ್ಲೈನ್ ಪೇಮೆಂಟ್ ವ್ಯವಸ್ಥೆಯೂ ಇವರ ‘ಹೆಲೋ ಬಡ್ಡಿ’ ಆಟೋದಲ್ಲಿದೆ.

ಶ್ರೀಕಾಂತ್ ತನ್ನ ಆಟೋದಲ್ಲಿ ಪ್ರಯಾಣಿಕರ ಸುಗಮಕ್ಕಾಗಿ, ಐಷರಾಮಿ ಅನುಭವಕ್ಕಾಗಿ ಕಾರು ಸೀಟುಗಳನ್ನು ಅಳವಡಿಸಿದ್ದಾರೆ. ಹಾಗೂ ಅನಾರೋಗ್ಯ ಪೀಡಿತರಾಗಿ ತನ್ನ ಆಟೋವನ್ನು ಸದಾ ಆಸ್ಪತ್ರೆಯ ಮುಂಭಾಗದಲ್ಲಿ ನಿಲ್ಲಿಸುತ್ತಾರೆ. ಪ್ರತಿ ತಿಂಗಳು ತನ್ನ ದುಡಿತದಿಂದ 5 ಸಾವಿರ ರೂಪಾಯಿಯನ್ನು  ಆಸ್ಪತ್ರೆಯ ಚಿಕಿತ್ಸಾ ಖರ್ಚನ್ನು ಭರಿಸಲಾಗದ ಕುಟುಂಬಕ್ಕೆ ಆಸರೆಯಾಗುವ ನಿಟ್ಟಿನಲ್ಲಿ ಜಿಲ್ಲಾ ಆಸ್ಪತ್ರೆಗೆ ನೀಡುತ್ತಾರೆ. ಬಡವರಿಗೆ ಉಚಿತ ಸೇವೆಯನ್ನು ನೀಡುತ್ತಾರೆ.

ಇವರು ಐಎಸ್ಒದಿಂದ ಪ್ರಮಾಣೀಕರಿಸಲ್ಪಟ್ಟ ಭಾರತದ ಮೊದಲ ವಿಕಲ ಚೇತನ ಆಟೋಚಾಲಕ ಎಂಬ ಹಿರಿಮೆಯನ್ನು ಪಡೆದುಕೊಂಡಿದ್ದಾರೆ.

 

-ಸುಹಾನ್ ಶೇಕ್

ಟಾಪ್ ನ್ಯೂಸ್

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1–qwewqe

Ayodhya: ಸೂರ್ಯ ತಿಲಕ ಸಾಧ್ಯವಾಗಿಸಿದ ವಿಜ್ಞಾನಿಗಳಿಗೆ ತಲೆ ಬಾಗುತ್ತೇನೆ: ಅರುಣ್ ಯೋಗಿರಾಜ್

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

11

ಪೊಲೀಸ್‌ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್‌ ಸ್ಟರ್‌ ಆದದ್ದೇಗೆ?

ಸಲ್ಮಾನ್‌ ಖಾನ್‌ ಟು ಸಿಧು ಮೂಸೆವಾಲ: ಗುಂಡಿನ ದಾಳಿಗೆ ಬೆದರಿದ ಸೆಲೆಬ್ರಿಟಿಗಳಿವರು

ಸಲ್ಮಾನ್‌ ಖಾನ್‌ ಟು ಸಿಧು ಮೂಸೆವಾಲ: ಗುಂಡಿನ ದಾಳಿಗೆ ಬೆದರಿದ ಸೆಲೆಬ್ರಿಟಿಗಳಿವರು

ರೋಮಾಂಚನಗೊಳಿಸುವ ಡಿಸ್ನಿ ಲೋಕ…. ; ಇಲ್ಲಿ ಎಲ್ಲವೂ ಕಣ್ಣೆದುರಿಗೆ

Disneyland: ರೋಮಾಂಚನಗೊಳಿಸುವ ಡಿಸ್ನಿ ಲೋಕ….ಇಲ್ಲಿ ಎಲ್ಲವೂ ಕಣ್ಣೆದುರಿಗೆ…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.