ವಯಸ್ಸು 87 ದಾಟಿದರೂ ಹಳ್ಳಿಗಳಿಗೆ ಹೋಗಿ ವೈದ್ಯಕೀಯ ಸೇವೆ ಒದಗಿಸುತ್ತಿರುವ ಮಹಾನ್ ವ್ಯಕ್ತಿತ್ವ


Team Udayavani, Nov 4, 2020, 9:53 PM IST

ವಯಸ್ಸು 87 ದಾಟಿದರೂ ಹಳ್ಳಿಗಳಿಗೆ ಹೋಗಿ ವೈದ್ಯಕೀಯ ಸೇವೆ ಒದಗಿಸುತ್ತಿರುವ ಮಹಾನ್ ವ್ಯಕ್ತಿತ್ವ

ನಾವು ಆಯಿತು. ನಮ್ಮ ಕೆಲಸವಾಯಿತು. ಹೀಗೆ ದಿನಗಳನ್ನು ದೂಡಿ,ವರ್ಷಗಳನ್ನು ಸವೆದು ಬದುಕು ಬವಣೆಯನ್ನು ಮುಗಿಸುವ ವ್ಯಕ್ತಿಗಳ ಸಾಲಿಗೆ ನಾವು ನೀವು ಸೇರಿರಬಹುದು. ಆದರೆ ಕೆಲವರು ಈ ಸಾಲಿನಲ್ಲಿ ಇದ್ದುಕೊಂಡೇ ಭಿನ್ನವಾಗಿ ಕಾಣುತ್ತಾರೆ. ಅಂಥ ವ್ಯಕ್ತಿಗಳನ್ನು ಸಾಧಕರೆನ್ನಬಹುದು. ಸಮಾಜದ ಸೇವೆಯಲ್ಲಿ ನಿಸ್ವಾರ್ಥತನವನ್ನು ಕಾಣುವ ವ್ಯಕ್ತಿಯೊಬ್ಬರ ಕಥೆಯಿದು.

ವಯಸ್ಸು 87,ಬಾಡಿದ ದೇಹ,ಕುಗ್ಗಿದ ಉತ್ಸಾಹ,ದಣಿವು, ಮಾತ್ರೆ,ನಿದ್ದೆ ಇವಿಷ್ಟೇ ಬದುಕಿನ ನಿತ್ಯ ದೃಶ್ಯದಂತೆ ಚಟುವಟಿಕೆಯಾಗಿ  ಸಾಗುವ ಘಟ್ಟದಲ್ಲಿ ಇರುವ ವ್ಯಕ್ತಿಯೊಬ್ಬರ ಕಥೆಯೆಂದು ಅಂದುಕೊಳ್ಳ ಬೇಡಿ. ವಯಸ್ಸು ಮತ್ತು ಮನಸ್ಸಿಗೆ ಇಲ್ಲಿ ಯಾವ ಸಂಪರ್ಕವೇ ಇಲ್ಲ. ವಯಸ್ಸು 87 ದಾಟಿದರೂ ಮನಸ್ಸು, ದೇಹಗಳೆರೆಡು ಇಪ್ಪತ್ತು ಚಿಗುರಿದ ಯುವಕನ ಹಾಗೆ. ಇದು ಮಹಾರಾಷ್ಟ್ರದ ಚಂದಾಪೂರ್ ಗ್ರಾಮದ ವಯೋ ವೃದ್ಧ ಹೋಮಿಯೋಪತಿ ವೈದ್ಯ ರಾಮಚಂದ್ರ ದಾಂಡೆಕರ್ ಅವರ ಕಥೆ.

ರಾಮಚಂದ್ರ ದಾಂಡೆಕರ್ ಅವರ ದಿನ ಆರಂಭವಾಗುವುದು ಸೇವೆಯ ಮೂಲಕ. ಸೇವೆ ಅಂದರೆ ತಾವು ಕಲಿತು ಕರಗತ ಮಾಡಿಕೊಂಡ ವೈದ್ಯ ವೃತ್ತಿ. ಹೋಮಿಯೋಪತಿ ವೈದ್ಯರಾಗಿರುವ ರಾಮಚಂದ್ರ ತಮ್ಮ 87 ನೇ ವಯಸ್ಸಿನಲ್ಲೂ ಹಳ್ಳಿಗರ ಪಾಲಿಗೆ ಜೀವ ಉಳಿಸುವ ಕಾಯಕ ಮಾಡುತ್ತಿದ್ದಾರೆ. ಬೆಳಗಿನ ಜಾವ ಸೈಕಲ್ ಹತ್ತಿ ಮಹಾರಾಷ್ಟ್ರದ ದೂರದ ಹಳ್ಳಿಗಳಿಗೆ ಪಯಣ ಬೆಳೆಸಿ ಗುರಿ ಮುಟ್ಟಿದವರು ಮನೆಗೆ ಬರುವುದು ಸಂಜೆ ಮೇಲೆಯೇ.

ರಾಮಚಂದ್ರ ಹೋಮಿಯೋಪತಿಯಲ್ಲಿ ಡಿಪ್ಲೊಮಾ ಪದವಿ ಪಡೆದು,ಒಂದು ವರ್ಷ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿಕೊಂಡು, ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೇವೆಯನ್ನು ಆರಂಭಿಸುತ್ತಾರೆ. ಹಳ್ಳಿಗಳಲ್ಲಿ ಬಸ್ಸಿನ ಕೊರತೆಯಿಂದ, ಸರಿಯಾದ ‌ಸಮಯಕ್ಕೆ ಚಿಕಿತ್ಸೆ ಸಿಗದೆ ಪರದಾಡುವ ಪರಿಸ್ಥಿತಿಯನ್ನು ಕಣ್ಣಾರೆ ಕಂಡ ರಾಮಚಂದ್ರ ಅವರು ಕಾಡಿನ ಪ್ರದೇಶದ ಮಧ್ಯದಲ್ಲಿರುವ ಮನೆಗಳಿಗೆ ಭೇಟಿ ಕೊಟ್ಟು ಚಿಕಿತ್ಸೆಯನ್ನು ನೀಡುತ್ತ ‌ಬರುತ್ತಿದ್ದಾರೆ.

ಬೆಳಗ್ಗಿನ ಜಾವ ಸೈಕಲ್ ನಲ್ಲಿ ಚಿಕಿತ್ಸೆಗೆ ಸಂಬಂಧಿಸಿದ ‌ಔಷಧಿ ಹಾಗೂ ಪರಿಕರಗಳನ್ನು ಬ್ಯಾಗ್ ನಲ್ಲಿ ಹಾಕಿಟ್ಟು ಪೆಡಲ್ ತುಳಿಯುತ್ತಾ ಸಾಗಿ ಬಂದ ಇವರ ಸೇವೆ 60 ವರ್ಷಕ್ಕೂ ಹೆಚ್ಚಿನ ವರ್ಷವನ್ನು ಪೊರೈಸಿದೆ.

ಕೋವಿಡ್ ಪರಿಸ್ಥಿತಿಯಲ್ಲೂ ರಾಮಚಂದ್ರ ಹಳ್ಳಿಗರ ವೈದ್ಯಕೀಯ ಸೇವೆಯಲ್ಲಿ ಹಿಂದೆ ಬಿದ್ದಿಲ್ಲ.ಅವಶ್ಯಕತೆಯಿದ್ದಾಗ ನಡುರಾತ್ರಿಯಲ್ಲೂ ಚಿಕಿತ್ಸೆಗೆ ಧಾವಿಸುವ ಇವರ ಸೇವೆಗೆ ಹಾಗೂ ದೇಹಕ್ಕೆ ಸುಸ್ತು ಎನ್ನುವುದು ಇದುವರೆಗೆ ಆಗಿಲ್ಲ. ಬಡವರಿಗೆ ಸದಾ ಮಿಡಿಯುವ ಇವರ ಕೈ ಹಣವನ್ನು ಪಡೆಯುವುದು ಬಿಡುವುದು ಕುಟುಂಬದ ಮೇಲೆ ಅವಲಂಬಿತವಾಗುತ್ತದೆ‌ ಎನ್ನುತ್ತಾರೆ.

 

–  ಸುಹಾನ್ ಶೇಕ್

ಟಾಪ್ ನ್ಯೂಸ್

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Rohit Sharma spoke about team selection for T20 World Cup

T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

kejriwal 2

Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

18

Honesty: ಪ್ರಾಮಾಣಿಕರಿಗಿದು ಕಾಲವಲ್ಲ…

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

17

Sirsi: ಶಿರಸಿ ಮಾರಿಕಾಂಬೆ ವೈಭವದ ಜಾತ್ರೆ

16-wtr

Water: ನೀರು ಭುವನದ ಭಾಗ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.