ಈ ಸಿನಿಮಾ ಕಥೆ ಬರೆದಿದ್ದು ಮಾಜಿ ಸಿಎಂ…ಪ್ರೇಕ್ಷಕ ಗುರುತಿಸದೇ ಹೋದ ಡಾ.ರಾಜ್ ದ್ವಿಪಾತ್ರ ಇದು!


ನಾಗೇಂದ್ರ ತ್ರಾಸಿ, Aug 1, 2020, 7:00 PM IST

ಈ ಸಿನಿಮಾ ಕಥೆ ಬರೆದಿದ್ದು ಮಾಜಿ ಸಿಎಂ…ಪ್ರೇಕ್ಷಕ ಗುರುತಿಸದೇ ಹೋದ ಡಾ.ರಾಜ್ ದ್ವಿಪಾತ್ರ ಇದು

1949ರಲ್ಲಿ ಬಿಡುಗಡೆಯಾಗಿದ್ದ ತಮಿಳು ಸಿನಿಮಾ ವೇಲೈಕ್ಕಾರಿ(ಮನೆಕೆಲಸದಾಕೆ) ಸಿನಿಮಾ ಅಂದು ಸೂಪರ್ ಹಿಟ್ ಆಗಿತ್ತು. ಅಷ್ಟೇ ಆ ಸಿನಿಮಾ ಪ್ರದರ್ಶನದ ನಂತರ ತಮಿಳು ಸಿನಿಮಾ ಹೆಚ್ಚು, ಹೆಚ್ಚು ಜನಪ್ರಿಯವಾಗತೊಡಗಿತ್ತು. ಇದು ಮೂಲತಃ ತಮಿಳುನಾಡು ಮುಖ್ಯಮಂತ್ರಿ ಸಿಎನ್ ಅಣ್ಣಾದೊರೈ ಅವರ ನಾಟಕವಾಗಿತ್ತು. ಬಳಿಕ ಸಿನಿಮಾಕ್ಕಾಗಿ ಚಿತ್ರ ಕಥೆ ಬರೆಯಲು ಕೇಳಿಕೊಂಡಿದ್ದಾಗ ಮೂರು ದಿನಗಳಲ್ಲಿಯೇ ಒಂದು ಸಾವಿರ ಪುಟಗಳಷ್ಟು ಚಿತ್ರಕಥೆ ಬರೆದುಕೊಟ್ಟಿದ್ದರು ಅಣ್ಣಾದೊರೈ! ನಂತರ ಈ ಸಿನಿಮಾ 1963ರಲ್ಲಿ ಕನ್ನಡದಲ್ಲಿ ತೆರೆಕಂಡಿತ್ತು.

ಈ ಸಿನಿಮಾ ತಮಿಳು ಸಿನಿಮಾರಂಗದ ಇತಿಹಾಸದಲ್ಲಿಯೇ ಹೊಸ ಅಲೆಯನ್ನೇ ಸೃಷ್ಟಿಸಿತ್ತು. ಅಷ್ಟೇ ಅಲ್ಲ ತಮಿಳು ಸಿನಿಮಾ ಕ್ಷೇತ್ರಕ್ಕೆ ಹೊಸ ದಿಕ್ಕನ್ನು ನೀಡಿದ್ದ ಸಿನಿಮಾ ಇದಾಗಿತ್ತು. ಸಿನಿಮಾ ಚಿತ್ರಕಥೆ ಬರೆಯುವವರು ನಟನಿಗಿಂತ ದೊಡ್ಡ ಸ್ಟಾರ್ ಎಂಬುದನ್ನು ಸಾಬೀತುಪಡಿಸಿತ್ತು. ಆ ನಿಟ್ಟಿನಲ್ಲಿ ಸಿನಿಮಾ ಟೈಟಲ್ ಗಿಂತ ಮೇಲೆ ಕಥೆಗಾರರ ಹೆಸರು ಮೊದಲು ಬರುವಂತಾಗಿತ್ತು! ಸಿನಿಮಾದಲ್ಲಿ ಹೀರೋ ಆಗಿ ನಟಿಸಿದವರು ಅಣ್ಣಾದೊರೈ ಗೆಳೆಯ ಕೆಆರ್ ರಾಮಸಾಮಿ, ಟಿಎಸ್ ಬಾಲಯ್ಯ, ಎಂಎನ್ ನಂಬಿಯಾರ್, ಡಿ.ಬಾಲಸುಬ್ರಮಣಿಯಂ, ಎಂವಿ ರಾಜಮ್ಮಾ, ವಿಎನ್ ಜಾನಕಿ ಸೇರಿದಂತೆ ಘಟಾನುಘಟಿ ನಟ, ನಟಿಯರು ನಟಿಸಿದ್ದರು.

1949ರಲ್ಲಿ ಬಿಡುಗಡೆಗೊಂಡಿದ್ದ ವೇಲೈಕ್ಕಾರಿ ಸಿನಿಮಾ ನೂರು ದಿನಗಳ ಕಾಲ ಪ್ರದರ್ಶನ ಕಂಡಿತ್ತು. ಕೋರ್ಟ್ ರೂಂ ಸೀನ್ ತೋರಿಸಿದ ಮೊತ್ತ ಮೊದಲ ತಮಿಳು ಸಿನಿಮಾ ವೇಲೈಕ್ಕಾರಿ. ನಂತರ ಬಂದ ಸಿನಿಮಾಗಳಲ್ಲಿ ಕೋರ್ಟ್ ದೃಶ್ಯ ಬಳಕೆ ಟ್ರೆಂಡ್ ಆಗಿಬಿಟ್ಟಿತ್ತು. ಸಿನಿಮಾದಲ್ಲಿನ ಅದ್ಭುತ ಡೈಲಾಗ್ ನಿಂದಾಗಿ ತಮಿಳು ಸಿನಿಮಾ ಡೈಲಾಗ್ ಬರಹಗಾರರಿಗೆ ಹೆಚ್ಚಿನ ಆದ್ಯತೆ ತಂದುಕೊಟ್ಟಿತ್ತು.

ಕನ್ನಡ, ಹಿಂದಿ, ತೆಲುಗಿನಲ್ಲಿ ತೆರೆಕಂಡಿತ್ತು:

1949ರಲ್ಲಿ ತಮಿಳಿನಲ್ಲಿ ಬಿಡುಗಡೆಯಾಗಿದ್ದ ವೇಲೈಕ್ಕಾರಿ ಸಿನಿಮಾ ನಂತರ 1956ರಲ್ಲಿ ಬಾಲಿವುಡ್ ನಲ್ಲಿ “ನಯಾ ಆದ್ಮಿ” ಹೆಸರಿನಲ್ಲಿ ಪ್ರದರ್ಶನ ಕಂಡಿತ್ತು. 1955ರಲ್ಲಿ ತೆಲುಗಿನಲ್ಲಿ “ಸಂತೋಷಂ” ಹೆಸರಿನಲ್ಲಿ ತೆರೆ ಕಂಡಿದ್ದು, ಎನ್ ಟಿ ರಾಮರಾವ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಆದರೆ ತೆಲುಗಿನಲ್ಲಿ ಸಿನಿಮಾ ಯಶಸ್ವಿಯಾಗಲಿಲ್ಲವಾಗಿತ್ತು. 1963ರಲ್ಲಿ ಕನ್ನಡದಲ್ಲಿಯೂ “ಮಲ್ಲಿ ಮದುವೆ” ಹೆಸರಿನಲ್ಲಿ ತೆರೆಕಂಡಿದ್ದು, ಡಾ.ರಾಜ್ ಕುಮಾರ್, ಉದಯ್ ಕುಮಾರ್, ಲೀಲಾವತಿ ಸೇರಿದಂತೆ ಹಲವು ಘಟಾನುಘಟಿಯರು ನಟಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ಯಶಸ್ಸು ಗಳಿಸಿತ್ತು.

ಕನ್ನಡದಲ್ಲಿ ಹಿಟ್ ಆಗಿದ್ದ “ಮಲ್ಲಿ ಮದುವೆ” ಡಾ.ರಾಜ್ ದ್ವಿಪಾತ್ರ ಹೇಗಿತ್ತು?

ಕನ್ನಡ, ಹಿಂದಿ, ತಮಿಳು ಸೇರಿದಂತೆ ಭಾರತೀಯ ಚಿತ್ರರಂಗದಲ್ಲಿ ದ್ವಿಪಾತ್ರ ಪ್ರೇಕ್ಷಕರ ಮನಗೆದ್ದಿದ್ದು ಸುಳ್ಳಲ್ಲ. ಬಾಲಿವುಡ್ ನಲ್ಲಿ ಮೊತ್ತ ಮೊದಲು ದ್ವಿಪಾತ್ರದಲ್ಲಿ ನಟಿಸಿದ್ದು ಅಶೋಕ್ ಕುಮಾರ್. ಅದು 1943ರಲ್ಲಿ ತೆರೆಕಂಡಿದ್ದ “ಕಿಸ್ಮತ್” ಸಿನಿಮಾದಲ್ಲಿ. ಆ ನಂತರದಲ್ಲಿ ದೇವ್ ಆನಂದ್, ಧರ್ಮೇಂದ್ರ, ರಾಜೇಶ್ ಖನ್ನಾ ದ್ವಿಪಾತ್ರದಲ್ಲಿ ನಟಿಸಿದ್ದರು. 1960ರಲ್ಲಿ ತೆಲುಗು ಸ್ಟಾರ್ ನಟ ಎನ್ ಟಿ ರಾಮರಾವ್ ಕೂಡಾ ದ್ವಿಪಾತ್ರದಲ್ಲಿ ಮಿಂಚಿದ್ದರು.

ಕನ್ನಡದಲ್ಲಿ ತೆರೆಕಂಡಿದ್ದ “ಮಲ್ಲಿ ಮದುವೆ” (ವೇಲೈಕ್ಕಾರಿ) ಸಿನಿಮಾದಲ್ಲಿ ಡಾ.ರಾಜ್ ಕುಮಾರ್ ಅವರು ದ್ವಿಪಾತ್ರದಲ್ಲಿ ನಟಿಸಿದ್ದರು. ಆದರೆ ಅದನ್ನು ಪ್ರೇಕ್ಷಕನನ್ನು ತಲುಪಿರಲಿಲ್ಲವಾಗಿತ್ತು. 1963ರಲ್ಲಿ ಡಾ.ರಾಜ್ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ನಟಿಸಿದ್ದ ಪಾತ್ರ ಅದು. ಆದರೆ ಆ ಪಾತ್ರ ಸಿನಿಮಾದಲ್ಲಿ ತೋರಿಸಲ್ಪಟ್ಟಿದ್ದು ಕೇವಲ ಮೂರು ಸೆಕೆಂಡ್ಸ್! ಇದು ಇಡೀ ಚಿತ್ರಕಥೆಗೆ ತಿರುಕೊಟ್ಟ ಪಾತ್ರ ಅದಾಗಿತ್ತು. ನಂತರ ಡಾ.ರಾಜ್ ಅವರು ಬಾಳು ಬೆಳಗಿತು, ಅದೇ ಕಣ್ಣು ಸೇರಿ ಹಲವಾರು ಚಿತ್ರಗಳಲ್ಲಿ ದ್ವಿಪಾತ್ರದಲ್ಲಿ ನಟಿಸಿ ಅಪಾರ ಜನಮನ್ನಣೆ ಪಡೆದಿದ್ದರು. ಶಂಕರ್ ಗುರು ಸಿನಿಮಾದಲ್ಲಿ ರಾಜ್ ಅವರು ತ್ರಿಪಾತ್ರದಲ್ಲಿ ಅಭಿನಯಿಸಿದ್ದರು.

ಟಾಪ್ ನ್ಯೂಸ್

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಇದು ಮರ್ಯಾದೆ ಪ್ರಶ್ನೆ!

Sandalwood: ಇದು ಮರ್ಯಾದೆ ಪ್ರಶ್ನೆ!

15

Pawan Wadeyar: ವೆಂಕ್ಯಾನ ಹಿಂದೆ ಸಾಗರ್‌-ಪವನ್‌

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

9-udupi

ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.