ಮೊದಲ ಸಂಭಾವನೆ 10 ರೂ.! ಬ್ಯೂಟಿ ಕ್ವೀನ್ ಜಯಪ್ರದಾ ಟ್ರಾಜಿಡಿ ಲವ್ ಸ್ಟೋರಿ ಗೊತ್ತಾ…

ಜಗತ್ತಿನ ಅತೀ ಸುಂದರಿ ಎಂದು ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಸತ್ಯಜಿತ್ ರೇ ಬಣ್ಣಿಸಿದ್ದರು.

ನಾಗೇಂದ್ರ ತ್ರಾಸಿ, Jun 6, 2020, 6:40 PM IST

ಮೊದಲ ಸಂಭಾವನೆ 10 ರೂ.!ಬ್ಯೂಟಿ ಕ್ವೀನ್ ಜಯಪ್ರದಾ ಟ್ರಾಜಿಡಿ ಲವ್ ಸ್ಟೋರಿ…

ಬಾಲಿವುಡ್, ತೆಲುಗು, ಮಲಯಾಳಂ, ಬಂಗಾಳಿ, ಮರಾಠಿ ಅಷ್ಟೇ ಅಲ್ಲ ಕನ್ನಡ ಚಿತ್ರರಂಗದಲ್ಲಿ ಹಲವು ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದಾಕೆ ಈಕೆ. ನಟಸಾರ್ವಭೌಮ ಡಾ.ರಾಜ್ ಕುಮಾರ್ ಜತೆ ಸನಾದಿ ಅಪ್ಪಣ್ಣ, ಕವಿರತ್ನ ಕಾಳಿದಾಸ. ಹುಲಿಯ ಹಾಲಿನ ಮೇವು ಶಬ್ದವೇದಿ, ಸಾಹಸ ಸಿಂಹ ವಿಷ್ಣು ಜತೆ ಈ ಬಂಧನ, ಹಿಮಪಾತ, ಹಬ್ಬ ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿಕೊಂಡಿದ್ದವರು ಲಲಿತಾ ರಾಣಿ ಅಲಿಯಾಸ್ ಜಯಪ್ರದಾ!

1980-90ರ ದಶಕದ ಬಹುಬೇಡಿಕೆಯ ಹಾಗೂ ಪ್ರಭಾವಶಾಲಿ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದವರು ಜಯಪ್ರದಾ ಏಳು ಭಾಷೆಯ ಸಿನಿಮಾಗಳಲ್ಲಿ ನಟಿಸುವ ಮೂಲಕ ಜನಪ್ರಿಯತೆ ಗಳಿಸಿದ್ದ ಈಕೆ ಸಿನಿಮಾರಂಗದಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾಗಲೇ ಸಿನಿಮಾ ಇಂಡಸ್ಟ್ರಿಯಿಂದ ಹೊರಬಂದು ತೆಲುಗು ದೇಶಂ ಪಕ್ಷಕ್ಕೆ
ಸೇರ್ಪಡೆಗೊಂಡು ರಾಜಕೀಯ ಕ್ಷೇತ್ರಕ್ಕೆ ಕಾಲಿರಿಸಿದ್ದರು. ಆದರೆ ಟಿಡಿಪಿಯಲ್ಲಿನ ಭಿನ್ನಾಭಿಪ್ರಾಯದಿಂದ ಆ ಪಕ್ಷದಿಂದ ಹೊರನಡೆದಿದ್ದರು. ನಂತರ ಸಮಾಜವಾದಿ ಪಕ್ಷ ಸೇರ್ಪಡೆಗೊಂಡು 2004-2014ರವರಗೆ ಉತ್ತರಪ್ರದೇಶದ ರಾಂಪುರ್ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರು.

ಮೊತ್ತ ಮೊದಲ ಸಂಭಾವನೆ 10 ರೂಪಾಯಿ!
ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಜನಿಸಿದ್ದ ಜಯಪ್ರದಾ ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿಯೇ ಶಾಲಾ ವಾರ್ಷಿಕೋತ್ಸವದಲ್ಲಿ ನೀಡಿದ್ದ ಅದ್ಭುತ ನೃತ್ಯ ಪ್ರದರ್ಶನ ಎಲ್ಲರ ಮನಗೆದ್ದಿತ್ತು. ಈ ವೇಳೆ ಪ್ರೇಕ್ಷಕರರಾಗಿ ಆಗಮಿಸಿದ್ದ ನಿರ್ದೇಶಕರೊಬ್ಬರು(ಕೆಬಿ ತಿಲಕ್) ತನ್ನ ಭೂಮಿ ಕೋಶಂ ಸಿನಿಮಾದಲ್ಲಿ 3 ನಿಮಿಷಗಳ ನೃತ್ಯ ಮಾಡುವಂತೆ ಆಫರ್ ನೀಡಿದ್ದರು. ಆದರೆ ಪುಟ್ಟ ಹುಡುಗಿಯಾಗಿದ್ದ ರಾಣಿ ಹಿಂಜರಿದುಬಿಟ್ಟಿದ್ದಳು, ಕೊನೆಗೆ ಪೋಷಕರ ಒತ್ತಾಯಕ್ಕೆ ಮಣಿದು ಸಿನಿಮಾದಲ್ಲಿ ನೃತ್ಯ ಮಾಡಿದ್ದು, ಅದಕ್ಕಾಗಿ ಆಕೆ ಪಡೆದ ಸಂಭಾವನೆ ಕೇವಲ ಹತ್ತು ರೂಪಾಯಿ. ಈ ಪುಟ್ಟ ಡ್ಯಾನ್ಸ್ ಲಲಿತಾ ರಾಣಿಯ ಬದುಕಿನ ದಿಕ್ಕನ್ನೇ ಬದಲಾಯಿಸಿಬಿಟ್ಟಿತ್ತು. ನಂತರ ಖ್ಯಾತ ನಿರ್ದೇಶಕರುಗಳೇ ತಮ್ಮ ಸಿನಿಮಾಗಳಲ್ಲಿ ನಟಿಸುವಂತೆ ಕ್ಯೂ ನಿಂತುಬಿಟ್ಟಿದ್ದರು. ಇದರ ಪರಿಣಾಮ 1976ರಲ್ಲಿ
ಜಯಪ್ರದಾ ಸ್ಟಾರ್ ನಟಿಯಾಗಲು ಕಾರಣವಾಯಿತು.

ಸ್ಟಾರ್ ನಿರ್ದೇಶಕ ಕೆ.ಬಾಲಚಂದರ್ ಅವರ “ಅಂತುಲೆನಿ ಕಥಾ” ಎಂಬ ಕಪ್ಪು ಬಿಳುಪಿನ ಚಿತ್ರದಲ್ಲಿ ಜಯ ಅವರ ಕಲಾ ಪ್ರತಿಭೆ ಅನಾವರಣಗೊಂಡಿತ್ತು. ಕೆ.ವಿಶ್ವನಾಥ್ ಅವರ ಸಿರಿ ಸಿರಿ ಮುವ್ವ, ಸೀತಾಕಲ್ಯಾಣಂ, ನಿನೈತ್ತಾಲೆ ಇನಿಕ್ಕುಂ, ಹಿಂದಿಯ ಶರಾಬಿ ಸೇರಿದಂತೆ ನೂರಾರು ಸಿನಿಮಾಗಳಲ್ಲಿ ನಟಿಸಿದ್ದರು. 1990ರ ದಶಕದಲ್ಲಿ ಅಮಿತಾಬ್, ಜಿತೇಂದ್ರ ಜತೆ ಜಯಪ್ರದಾ ಹೀರೋಯಿನ್ ಆಗಿ ಮಿಂಚಿದ್ದರು.

ಜಗತ್ತಿನ ಅತೀ ಸುಂದರಿ ಎಂದು ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಸತ್ಯಜಿತ್ ರೇ ಬಣ್ಣಿಸಿದ್ದರು. ಬಂಗಾಳಿ ಸಿನಿಮಾದಲ್ಲಿಯೂ ಜಯ ನಟಿಸಿದ್ದರಾದರೂ ಕೂಡಾ ರೇ ಅವರ ಸಿನಿಮಾದಲ್ಲಿ ನಟಿಸಬೇಕೆಂಬ ಜಯಪ್ರದಾ ಅವರ ಕನಸು ನನಸಾಗಲೇ ಇಲ್ಲ!

ಜಯಪ್ರದಾ ಟ್ರಾಜಿಡಿ ಲೈವ್ ಲೈಫ್:
ಬಾಲಿವುಡ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದ ಜಯಪ್ರದಾ ಮೇಲೆ ಆದಾಯ ತೆರಿಗೆ ಇಲಾಖೆ ದೃಷ್ಟಿ ಬಿದ್ದಿತ್ತು. ಅಲ್ಲದೇ ದಿಢೀರ್ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿಬಿಟ್ಟಿತ್ತು. ಭಾವನಾತ್ಮಕವಾಗಿ ಕುಗಿಹೋಗಿರುವ ಜತೆಗೆ ಕೆರಿಯರ್ ಮೇಲೂ ಹೊಡೆತ ನೀಡಿತ್ತು. ಸ್ಫುರದ್ರೂಪಿ ಜಯಪ್ರದಾಳನ್ನು ಮದುವೆಯಾಗಲು ತಾಮುಂದು, ನಾಮುಂದು ಎಂದು ಹೇಳುತ್ತಿದ್ದ ಈ ವೇಳೆ ಜಯಪ್ರದಾ ಇಂತಹ ಸಂದರ್ಭದಲ್ಲಿ ಜಯಪ್ರದಾ ನೆರವಿಗೆ ಬಂದ ವ್ಯಕ್ತಿ ಸಿನಿಮಾ ನಿರ್ಮಾಪಕ ಶ್ರೀಕಾಂತ್ ನಹಾತಾ. ಇದೊಂದು ಸಹಾಯ ಇಬ್ಬರನ್ನೂ ಆತ್ಮೀಯ ಸ್ನೇಹಿರತನ್ನಾಗಿಬಿಟ್ಟಿತ್ತು. ನಿರ್ಮಾಪಕ ಶ್ರೀಕಾಂತ್ ಅವರ ಭಾವನಾತ್ಮಕ ಬೆಂಬಲ ಜಯಪ್ರದಾ ಅವರನ್ನು ಪ್ರೀತಿಯ ಸೆಳೆತಕ್ಕೆ ಸಿಲುಕಿಸಿ ಬಿಟ್ಟಿತ್ತು. ಗಾಢ ಪ್ರೇಮ ವಿವಾಹ ಬಂಧನ ಹಂತಕ್ಕೆ ತಲುಪಿಸಿತ್ತು..ಆದರೆ ಶ್ರೀಕಾಂತ್ ಅದಾಗಲೇ
ಮದುವೆಯಾಗಿ ಮೂವರು ಮಕ್ಕಳು ಕೂಡಾ ಇದ್ದರು.

ಕುರುಡು ಪ್ರೀತಿಗೆ ಬಿದ್ದ ಜಯಪ್ರದಾ ಶ್ರೀಕಾಂತ್ ಜತೆಗಿನ ಸಂಬಂಧ ಕಡಿದುಕೊಳ್ಳಲು ಸಿದ್ದವಾಗಿಲ್ಲ. ಮದುವೆಯಾಗಿ, ಮಕ್ಕಳಿದ್ದರೂ ತೊಂದರೆ ಇಲ್ಲ..ಎಂದು ತಮ್ಮ ಪ್ರೇಮ ಕಹಾನಿ ಮುಂದುವರಿಸಿದ್ದರು. ಸಿನಿಮಾ ಇಂಡಸ್ಟ್ರೀಯಲ್ಲಿಯೂ ಇಬ್ಬರ ಪ್ರಣಯ ಪ್ರಸಂಗ ಭರ್ಜರಿಯಾಗಿ ಹರಿದಾಡತೊಡಗಿತ್ತು. ಯಾವ ವಿರೋಧ, ಟೀಕೆಯನ್ನೂ ಲೆಕ್ಕಿಸದ ಜಯಾ ಮತ್ತು ಶ್ರೀಕಾಂತ್ ಯಾರೂ ಊಹಿಸದ ನಿರ್ಧಾರಕ್ಕೆ ಬಂದು ಬಿಟ್ಟಿದ್ದರು.!ಅಂತೂ ಜಯಾ ಮತ್ತು ಶ್ರೀಕಾಂತ್ 1986ರಲ್ಲಿ ವಿವಾಹವಾಗಿದ್ದರು. ಏತನ್ಮಧ್ಯೆ ಎರಡನೇ ವಿವಾಹ ಹೊಸ ವಿಷಯವಾಗಿಲ್ಲ ಸತ್ಯ. ಆದರೆ ಶ್ರೀಕಾಂತ್, ಜಯಾ ಶಾಕಿಂಗ್ ಗೆ ಒಳಗಾಗಿದ್ದರು. ಅದಕ್ಕೆ ಕಾರಣ ಶ್ರೀಕಾಂತ್ ಮೊದಲ ಪತ್ನಿಗೆ ವಿವಾಹ ವಿಚ್ಛೇದನ ನೀಡದೇ ಜಯಾಪ್ರದಾ ಅವರನ್ನು ವಿವಾಹವಾಗಿದ್ದು. ಜಯಾ ಮತ್ತು ಶ್ರೀಕಾಂತ್ ದಂಪತಿಗೆ ಮಕ್ಕಳಾಗಿಲ್ಲದ ಹಿನ್ನೆಲೆಯಲ್ಲಿ ಜಯಾಪ್ರದಾ ತನ್ನ ಸಹೋದರಿಯ ಮಗನನ್ನು ದತ್ತು ತೆಗೆದುಕೊಂಡು ಸಾಕಿದ್ದರು.

ಸಿನಿ ಬದುಕಿನಲ್ಲಿ ಸೂಪರ್ ಸ್ಟಾರ್ ಗಳಾದ ಅಮಿತಾಬ್ ಸೇರಿದಂತೆ ಘಟಾನುಘಟಿಗಳ ಜತೆ ನಟಿಸಿದ್ದ ಜಯಪ್ರದಾ ಎನ್ ಟಿ ರಾಮರಾವ್ ಅವರ ಆಹ್ವಾನದ ಮೇರೆಗೆ ತೆಲುಗುದೇಶಂ ಪಕ್ಷ ಸೇರಿದ್ದರು. ನಂತರ ಸಮಾಜವಾದಿ ಪಕ್ಷ ಆ ಬಳಿಕ ಭಾರತೀಯ ಜನತಾ ಪಕ್ಷ ಸೇರ್ಪಡೆಗೊಂಡಿದ್ದರು. ಪ್ರಸ್ತುತ ಒಂಟಿಯಾಗಿರುವ ಜಯಾಪ್ರದಾ ಅವರು ಲೋಕಲ್ ಟಿವಿ ಶೋ ಜಯಪ್ರದಂನಲ್ಲಿ ಸೆಲೆಬ್ರಿಟಿಗಳನ್ನು ಸಂದರ್ಶನ ಮಾಡುವ ಮೂಲಕ ತೆಲುಗು ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಟಾಪ್ ನ್ಯೂಸ್

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆಹಾ! ಈ ಕಾಶಿ ಹಲ್ವಾ ಏನ್‌ ರುಚಿ ಅಂತೀರಾ,ಒಮ್ಮೆ ಹೀಗೆ ಮಾಡಿ ನೋಡಿ….

ಆಹಾ! ಈ ಕಾಶಿ ಹಲ್ವಾ ಏನ್‌ ರುಚಿ ಅಂತೀರಾ,ಒಮ್ಮೆ ಹೀಗೆ ಮಾಡಿ ನೋಡಿ….

13

ಗಲ್ಫ್ ಮರುಭೂಮಿಯಲ್ಲಿ 2 ವರ್ಷ ನರಕಯಾತನೆ: ʼಆಡುಜೀವಿತಂʼ ಸಿನಿಮಾದ ನಿಜವಾದ ಹೀರೋ ಇವರೇ…

ಜರ್ಮನಿ ಕನ್ನಡತಿಯ ಸ್ಫೂರ್ತಿಯ ಪಯಣ; ಏನಿದು ಮಿಸಸ್‌ ಇಂಡಿಯಾ ವರ್ಡ್‌ವೈಡ್‌ ?

ಜರ್ಮನಿ ಕನ್ನಡತಿಯ ಸ್ಫೂರ್ತಿಯ ಪಯಣ; ಏನಿದು ಮಿಸಸ್‌ ಇಂಡಿಯಾ ವರ್ಲ್ಡ್‌ವೈಡ್‌ ?

MS Dhoni: ಕ್ಯಾಪ್ಟನ್ಸಿ ಕಿರೀಟ ಕಳಚಿಟ್ಟ ಥಲಾ..; ಟ್ರೋಫಿಯೊಂದಿಗೆ ಯಶೋಗಾಥೆಯೊಂದು ಅಂತ್ಯ

MS Dhoni: ಕ್ಯಾಪ್ಟನ್ಸಿ ಕಿರೀಟ ಕಳಚಿಟ್ಟ ಥಲಾ..; ಟ್ರೋಫಿಯೊಂದಿಗೆ ಯಶೋಗಾಥೆಯೊಂದು ಅಂತ್ಯ

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

10

Missing: ಚುನಾವಣಾ ಕರ್ತವ್ಯದಲ್ಲಿದ್ದ ಸರಕಾರಿ ನೌಕರ ನಾಪತ್ತೆ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.