ನೋಡ ಬನ್ನಿ ‘ಉಂಚಳ್ಳಿ ಜಲಪಾತ’ದ ಸೊಬಗು
Team Udayavani, Jun 27, 2021, 10:56 AM IST
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪಿರ ತಾಲ್ಲೂಕಿನ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಉಂಚಳ್ಳಿ ಜಲಪಾತ ಪ್ರಮುಖವಾಗಿದೆ. ಮಳೆಗಾಲದಲ್ಲಿ ಈ ಜಲಪಾತ ಮೈನವಿರೇಳಿಸುವಂತೆ ಧುಮ್ಮುಕ್ಕುತ್ತದೆ.
ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ನದಿಗಳಲ್ಲೊಂದಾದ ಅಘನಾಶಿನಿ ನದಿ ಇಲ್ಲಿ 116 ಮೀಟರ್ ಆಳಕ್ಕೆ ಧುಮುಕಿ ಭವ್ಯವಾದ ಜಲಪಾತವನ್ನು ಸೃಷ್ಟಿಸುತಾಳೆ. ಈ ಜಲಪಾತವನ್ನು ಮೊದಲು 1875 ರಲ್ಲಿ ಬ್ರಿಟಿಷ್ ಅಧಿಕಾರಿ ಜೆ. ಡಿ. ಲುಶಿಂಗ್ಟನ್ ಕಂಡುಹಿಡಿದನು.
ಪ್ರವಾಸಿಗರ ಮನವನ್ನು ಸೂರೆಗೈಯ್ಯುತ್ತ ಕಣ್ಣಿಗೆ ಅದ್ವಿತೀಯ ಆನಂದ ಒದಗಿಸುತ್ತಿದೆ. ಈ ಜಲಪಾತ ನೋಡುವುದೇ ಒಂದು ಹಬ್ಬ. ಕಿವಿ ಕಿವುಡಾಗಿಸುವಂತಿರುವ ಜಲಪಾತದ ಆರ್ಭಟದ ಧ್ವನಿ, ಸುತ್ತಲಿನ ಪರಿಸರ ಮರೆಯಲು ಸಾಧ್ಯವೇ ಇಲ್ಲ! ಈ ಜಲಪಾತ ಸೃಷ್ಠಿಸುವ ಶಬ್ದದಿಂದ ಕಿವಿಗಳು ಕೆಪ್ಪಾಗುತ್ತವೆ. ಅದಕ್ಕಾಗಿಯೇ ಈ ಜಲಪಾತಕ್ಕೆ ಕೆಪ್ಪೆ ಜೋಗ ದೂ ಕೂಡ ಕರೆಯಲಾಗುತ್ತದೆ.
ಉಂಚಳ್ಳಿ ಜಲಪಾತ ನೀರ ರೇಖೆಯಾಗಿಯೋ, ಜಲಧಾರೆಯಾಗಿಯೋ ಇರದೆ ಮೋಡವೇ ಶಿಲೆಗಳ ಮೂಲಕ ಹಸಿರ ಕಣಿವೆ ಸೇರುವ ಭಾವನೆ ಮೂಡಿಸುತ್ತದೆ. ಅಘನಾಶಿನಿ ನದಿಯ ಆಣೆಕಟ್ಟೆಯ ಯೋಜನೆಗಳ ಭೂತ ಈ ಸೌಂದರ್ಯವನ್ನು ಜೋಗದ ಸಿರಿಯಂತೆ ನುಂಗಲು ನಿಂತಿದ್ದರೂ, ನಿಶ್ಚಿಂತ ಯೋಧನಂತೆ ಪ್ರವಾಸಿಗರ ಮನವನ್ನು ಸೂರೆಗೈಯ್ಯುತ್ತ ಕಣ್ಣಿಗೆ ಅದ್ವಿತೀಯ ಆನಂದ ಒದಗಿಸುತ್ತಿದೆ. ಉಂಚಳ್ಳಿ ಜಲಪಾತ ನೋಡುವುದೇ ಒಂದು ಹಬ್ಬ.
ಅಘನಾಶಿನಿ ನದಿಯ ಈ ಏಕೈಕ ಜಲಧಾರೆ ತನ್ನ ಸೌಂದರ್ಯದಿಂದಾಗಿ ಪ್ರಚಾರದಿಂದ ದೂರವಿದ್ದರೂ ಒಮ್ಮೆ ನೋಡಿದವರ ನೆನಪಿನಲ್ಲಿ ಅಚ್ಚಳಿಯದ ಛಾಪನ್ನು ಮೂಡಿಸಿ, ಮತ್ತೆ ಮತ್ತೆ ನೋಡುವ ಅಭಿಲಾಷೆ ಮೂಡಿಸುತ್ತದೆ.
ಲುಸ್ಸಿಂಗ್ ಟನ್ ಜಲಪಾತ :
ಸ್ಥಳೀಯರಿಗೆ ಮಾತ್ರ ಪರಿಚಿತವಾಗಿದ್ದ ಈ ಜಲಪಾತವನ್ನು 1859ರಲ್ಲಿ ಪ್ರಥಮ ಬಾರಿಗೆ ಲುಸ್ಸಿಂಗ್ ಟನ್ ಎಂಬ ಬ್ರಿಟೀಷ್ ಅಧಿಕಾರಿ ಹೊರ ಜಗತ್ತಿಗೆ ಪರಿಚಯಿಸಿದ ಎನ್ನಲಾಗುತ್ತದೆ. ಇದರಿಂದಾಗಿ ಜಲಪಾತಕ್ಕೆ ಲುಸ್ಸಿಂಗ್ ಟನ್ ಜಲಪಾತ ಎಂಬ ಹೆಸರೂ ಇದೆ. ಜಲಪಾತದ ಎರಡು ನೋಟವು ಪ್ರವಾಸಿಗರಿಗೆ ಸಿಗುತ್ತಿದ್ದು, ಒಂದು ನೋಟವನ್ನು ಎರಡು ಕಿ.ಮೀ. ಕಚ್ಚಾ ಮಣ್ಣಿನ ರಸ್ತೆಯಲ್ಲಿ ನಡೆಯುತ್ತ ಸಾಗಿದರೆ ವೀಕ್ಷಣಾ ಗೋಪುರದ ಮೇಲೆ ನಿಂತು ನೋಡಬಹುದು. ಇಲ್ಲಿಂದ ಮಲೆನಾಡ ಹಸಿರು ವೃಕ್ಷಗಳ ನಡುವೆ ಹಾಲ್ನೊರೆಯು ಇಳಿದು ಭೋರ್ಗರೆಯುತ್ತ ಅಗಾಧ ಅನಂತ ಹಿಮಾಚ್ಛಾದಿತ ದಟ್ಟ ಹಸಿರ ಕಣಿವೆಯಲ್ಲಿ ಹರಿಯುವುದನ್ನು ಕಾಣಬಹುದು.
ಆದರೆ ಇನ್ನೊಂದು ದೃಶ್ಯ ಕಣಿವೆಯ ಕೆಳ ನಿಂತು ನೋಡಬೇಕಾಗಿರುವುದರಿಂದ ಅದರ ವೀಕ್ಷಣೆಗೆ ಮಳೆಗಾಲ ಕಳೆದು ಚಳಿಗಾಲದ ದಿನಗಳೇ ಸೂಕ್ತ. ಮಳೆಗಾಲದಲ್ಲಿ ಈ ಪ್ರಪಾತಕ್ಕೆ ಇರುವ ಸೂಪಾನಗಳು ದುರಸ್ತಿಯ ಸ್ಥಿತಿಯಲ್ಲಿರುವುದರಿಂದ ಅಪಾಯಕಾರಿ. ದಟ್ಟ ಕಾನನದ ಕಣಿವೆಯು ಮಳೆಯ ಜಾರುವಿಕೆ ಅಥವಾ ಪಾಚಿಗಟ್ಟಿದ ಮೆಟ್ಟಿಲುಗಳಲ್ಲಿ ಇಳಿಯುವಾಗ ಸಮತೋಲನ ತಪ್ಪಿದರೆ ಮಲೆನಾಡ ಕಣಿವೆಯಲ್ಲಿ ಸಜೀವ ಸಮಾಧಿ ಖಂಡಿತ. ಆದರೆ ಸಾಹಸಮಯವಾದ ಈ ಕೃತ್ಯವನ್ನು ಎಚ್ಚರಿಕೆಯಿಂದ ಇಳಿದು ಸಾಗಿದರೆ ನಿಮಗೆ ಕಾದಿದೆ ಅಚ್ಚರಿಯ ಅದ್ಭುತ. ನೋಡಿಯೇ ತಣಿಯಬೇಕು ಇದರ ಸೊಬಗನ್ನು.
ಕೆಳಗಿದೆ ಹರಿದೋಡುವ ನೀರು, ಮೇಲಿನಿಂದ ಇಳಿಯುತ್ತದೆ ಬಿಳಿ ನೊರೆಯ ಹೊನಲು. ಹರ್ಷದ ಹೊನಲೇ ಪಾಪನಾಶಿನಿಯಾದ ಅಘನಾಶಿನಿ ಧಾರೆಯಾಗಿ ಉಂಚಳ್ಳಿಯಲ್ಲಿ ಇಳಿದು ಬರುತ್ತಿದೆಯೆಂದೆನಿಸಿದರೆ ಆಶ್ಚರ್ಯವಲ್ಲ. ಈ ನೆಲದಲ್ಲಿ ಎಂಥವನೂ ಕವಿಯಾದರೆ ಅದು ಇಲ್ಲಿನ ನಿಸರ್ಗದ ಕೈಚಳಕ. ಇಲ್ಲಿಳಿದು ನಿಂತರೆ ಕೆಳಗೆ ಮತ್ತೆರಡು ಮಳೆಗಾಲದ ಜಲಧಾರೆಗಳು ಕಾಣಸಿಗುತ್ತವೆ. ಆದರೆ ದುರ್ಗಮ ಕಣಿವೆಯ ಹಾದಿಯಲ್ಲಿ ಮಳೆಗಾಲದಲ್ಲಿ ಉಂಬಳಗಳು ಹೇರಳವಾಗಿವೆ.
ಈ ಸುಂದರ, ನಯನ ಮನೋಹರ ಸೊಬಗು ವರ್ಷದ ಎಲ್ಲಾ ದಿನಗಳಲ್ಲೂ ತುಂಬು ಬೆಡಗಿನಿಂದ ಕಂಗೊಳಿಸುತ್ತದೆ. ಮಲೆನಾಡಿನ ಆರ್ಭಟದ ಮಳೆಗೆ ಕೆಂಪು ನೀರಿನಿಂದಾವೃತವಾದ ಅಘನಾಶಿನಿಯ ಪ್ರವಾಹದಿಂದಾಗಿ ಮಳೆಗಾಲದಲ್ಲಿ ಕೆಂಪು ಮಿಶ್ರಿತ ಜಲಧಾರೆ ಗೋಚರಿಸಿದರೆ, ಉಳಿದ ದಿನಗಳಲ್ಲಿ ಹಾಲ್ನೊರೆಯ ಬೆಡಗು ಮನಸೆಳೆಯುತ್ತದೆ.
ಹೋಗುವುದು ಹೇಗೆ? :
ಸಿದ್ದಾಪುರದಿಂದ 35 ಕಿ.ಮೀ. ದೂರದ ಹೆಗ್ಗರಣೆಗೆ ತಲುಪಿದರೆ, ಅಲ್ಲಿಂದ 4 ಕಿ.ಮೀ. ದೂರದಲ್ಲಿದೆ ಈ ಅದ್ಭುತ ಹಸಿರ ಸಿರಿ ಮಧ್ಯೆ ಜಲಧಾರೆಯ ಅವಿಸ್ಮರಣೀಯ ಸೌಂದರ್ಯ. ಇನ್ನೊಂದು ದಾರಿ ಶಿರಸಿಯಿಂದ 39 ಕಿ.ಮೀ. ದೂರವಿದೆ.
ಶಿರಸಿ -ಕುಮಟಾ ರಾಜ್ಯ ಹೆದ್ದಾರಿಯಲ್ಲಿನ ಅಮ್ಮಿನಳ್ಳಿ ಸಮೀಪ ಎಡಕ್ಕೆ ತಿರುಗಿ ಹೆಗ್ಗರಣೆ ರಸ್ತೆಯಲ್ಲಿ ಸಾಗಿದರೆ ಉಂಚಳ್ಳಿ ಜಲಪಾತ ಆರ್ಭಟದ ಭೋರ್ಗರೆತದೊಂದಿಗೆ ಇರುವ ಸಾರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಹಾ! ಈ ಕಾಶಿ ಹಲ್ವಾ ಏನ್ ರುಚಿ ಅಂತೀರಾ,ಒಮ್ಮೆ ಹೀಗೆ ಮಾಡಿ ನೋಡಿ….
ಗಲ್ಫ್ ಮರುಭೂಮಿಯಲ್ಲಿ 2 ವರ್ಷ ನರಕಯಾತನೆ: ʼಆಡುಜೀವಿತಂʼ ಸಿನಿಮಾದ ನಿಜವಾದ ಹೀರೋ ಇವರೇ…
ಜರ್ಮನಿ ಕನ್ನಡತಿಯ ಸ್ಫೂರ್ತಿಯ ಪಯಣ; ಏನಿದು ಮಿಸಸ್ ಇಂಡಿಯಾ ವರ್ಲ್ಡ್ವೈಡ್ ?
MS Dhoni: ಕ್ಯಾಪ್ಟನ್ಸಿ ಕಿರೀಟ ಕಳಚಿಟ್ಟ ಥಲಾ..; ಟ್ರೋಫಿಯೊಂದಿಗೆ ಯಶೋಗಾಥೆಯೊಂದು ಅಂತ್ಯ
ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!
MUST WATCH
ಹೊಸ ಸೇರ್ಪಡೆ
ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್ ಮುಂದಿದೆ ಅಗ್ನಿ ಪರೀಕ್ಷೆ
ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ