ಬಾಹುಬಲಿ ಹಾಡನ್ನು ಹಾಡಿ ವೈರಲ್ ಆದ ಈತನಿಗೆ ಕನ್ನಡ ಹಾಡುಗಳೇ ಸಾಧನೆಗೆ ಸ್ಫೂರ್ತಿಯಂತೆ..


ಸುಹಾನ್ ಶೇಕ್, Jun 17, 2020, 6:24 PM IST

web-tdy-1

ನಮ್ಮಲ್ಲಿ ಅಡಗಿರುವ ಪ್ರತಿಭೆ ಯಾವುದೇ ಹಂತದಲ್ಲಿ ಬೆಳಕಿಗೆ ಬರಬಹುದು. ಅದಕ್ಕೆ ಬೇಕಿರುವುದು ನಮ್ಮ ಒಂದು ಪ್ರಯತ್ನ ಅಷ್ಟೇ. ಮುಂದೆ ಹೋಗು ಎನ್ನುವ ಒಂದಿಷ್ಟು ಹಿತೈಷಿಗಳು ಇದ್ರು ಸಾಕು ಆತ್ಮವಿಶ್ವಾಸದಿಂದ ನಮ್ಮೊಳಗಿರುವ ಪ್ರತಿಭೆ ಹೊರ ಜಗತ್ತಿನ ಬೆಳಕಿಗೆ ಮಿಂಚಾಗಿ ಕಾಣುತ್ತದೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬಾಹುಬಲಿ ಚಿತ್ರದ ‘ಕೌನ್ ಹೇ ಹೋ ಕೌನ್ ಹೇ’ ಹಾಡನ್ನು ಪಾರ್ಕ್ ವೊಂದರಲ್ಲಿ ಹುಡುಗನೊಬ್ಬ ಹಾಡುವ ಹಾಡು ಸಾಕಷ್ಟು ವೈರಲ್ ಆಗಿತ್ತು. ಆ ಹಾಡಿನ ಹಿಂದಿರುವ ಹುಡುಗ ಬಿಹಾರದ ಚಪ್ರ ಗ್ರಾಮದ ಚಂದನ್ ಕುಮಾರ್ ಗುಪ್ತಾ. ಚಂದನ್ ಕುಮಾರ್. ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್. ಪ್ರವೃತ್ತಿಯಲ್ಲಿ ಒಬ್ಬ ಪ್ರತಿಭಾವಂತ ಹಾಡುಗಾರ, ಹಾಡಿನ ದನಿಗೆ ಹೆಜ್ಜೆಯಿಡುವ ನೃತ್ಯಗಾರ ಕೂಡ ಹೌದು.

ಚಂದನ್ ಕುಮಾರ್ ಬಾಲ್ಯ ಮನೆಯಲ್ಲಿ ಸೊಗಸಾಗಿ ಹಾಡುವ ಅಜ್ಜನ ಧ್ವನಿಯನ್ನು ಕೇಳುತ್ತಾ, ಅಮ್ಮನ ಪೂಜಾ ಪ್ರಸಂಗದ ಇಂಪಾದ ಹಾಡುಗಳನ್ನು ಕೇಳುತ್ತಾ, ಸಂಗೀತದ ವಾತಾವರಣದಲ್ಲಿ ಬೆಳೆದು ಬಂದದ್ದು. ಬಾಲ್ಯ ಕಳೆದ ವಿದ್ಯಾರ್ಥಿ ಜೀವನ ಹೊಸ್ತಿಲಲ್ಲಿ ಚಂದನ್ ಹಾಡನ್ನು ಹಾಡುತ್ತ  ಹವ್ಯಾಸವನ್ನು ರೂಢಿಸಿಕೊಂಡು ಮುಂದುವರೆಯುತ್ತಾರೆ. ಇಂಜಿನಿಯರಿಂಗ್ ಕಲಿಕೆಗಾಗಿ ಪಂಜಾಬ್  ಸೇರುವ ಚಂದನ್ ಡ್ಯಾನ್ಸ್ ಕ್ಲಾಸ್ ಕಡೆ ಆಕರ್ಷಿತರಾಗುತ್ತಾರೆ. ಅದೊಂದು ದಿನ ಅವರ ಡ್ಯಾನ್ಸ್ ತರಬೇತುದಾರರು ಚಂದನ್ ಕುಮಾರ್ ಹಾಡನ್ನು ಕೇಳಿ ಖುಷಿಯಲ್ಲಿ ದಂಗಾಗುತ್ತಾರೆ. ಆ ಕ್ಷಣದಿಂದಲೇ ಚಂದನ್ ರನ್ನು ಹಾಡಿನ ತರಬೇತಿಯನ್ನು ಸರಿಯಾಗಿ ಪಡೆದುಕೊಳ್ಳುವ ಸಲಹೆಯನ್ನು ನೀಡುತ್ತಾರೆ. ಇದು ಚಂದನ್ ಗಾಯಕನ ಕನಸಿನ ಮೊದಲ ಹೆಜ್ಜೆ.

ಬೆಂಗಳೂರು ಕಲಿಸಿದ ಕನ್ನಡ; ಕಲ್ಪಿಸಿದ ಅವಕಾಶ: ಇಂಜಿನಿಯರಿಂಗ್ ಕಲಿಕೆಯ ಬಳಿಕ ಚಂದನ್ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುತ್ತಾರೆ. ಅಲ್ಲಿರುವ ಸಹೋದ್ಯೋಗಿಗಳಿಗೆ ಚಂದನ್ ಹಾಡಿನ ಪ್ರತಿಭೆ ಕುರಿತು ತಿಳಿದಿರುತ್ತದೆ. ಹಾಡನ್ನು ಕೇಳಿ ಅವರ ಸಹೋದ್ಯೋಗಿಗಳು ಚಂದನ್ ಧ್ವನಿಗೆ ಪ್ರೋತ್ಸಾಹಕರಾಗಿ, ಇಲ್ಲಿನ ಸ್ಥಳೀಯ ಕನ್ನಡ ಭಾಷೆಯನ್ನು ಕಲಿಯಲು ಪ್ರಯತ್ನ ಪಡು, ನಾವು ನಿನಗೆ ಕಲಿಸುತ್ತೇವೆ, ನೀನು ಇಲ್ಲಿದ್ದುಕೊಂಡು ಇಲ್ಲಿನ ಭಾಷೆಯಲ್ಲಿ ಹಾಡನ್ನು ಹಾಡಬೇಕೆಂದು ಪ್ರೋತ್ಸಾಹದ ಮಾತುಗಳನ್ನು ಹೇಳಿ, ಚಂದನ್ ರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಾರೆ. ದಿನ ಕಳೆದಂತೆ ಚಂದನ್ ಕನ್ನಡ ಕಲಿಯಲು, ಕನ್ನಡದಲ್ಲಿ ಮಾತಾಡಲು, ಜನರೊಂದಿಗೆ ವ್ಯವಹರಿಸಲು ಕಲಿಯುತ್ತಾರೆ. ನಿಧಾನವಾಗಿ ಕನ್ನಡದ ಹಾಡುಗಳು ನಾಲಿಗೆಯ ತುದಿಯಲ್ಲಿ ಇಂಪಾದ ದನಿಯಲ್ಲಿ ಹೊರಹೊಮ್ಮಲು ಶುರುವಾಗುತ್ತದೆ.

ಆತ್ಮವಿಶ್ವಾಸದಿಂದ ಮುಂದುವರೆದ ಚಂದನ್. ಕನ್ನಡದ ರಿಯಾಲಿಟಿ ಶೋಗಳಲ್ಲಿ, ಸ್ಥಳೀಯ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿ ಒಂದಿಷ್ಟು ಅಭಿಮಾನಿಗಳನ್ನು, ಹೆಸರನ್ನು ಗಳಿಸಿಕೊಳ್ಳುತ್ತಾರೆ. ಅದೇ ಸಮಯದಲ್ಲಿ ಕನ್ನಡದ ಕೆಲ ಸಿನಿಮಾಗಳಲ್ಲಿ ಹಿನ್ನಲೆ ಗಾಯಕರಾಗಿ ಅವಕಾಶವನ್ನು ಪಡೆದುಕೊಳ್ಳುತ್ತಾರೆ.

ಕೆಲ ಸಮಯ ಚೆನ್ನೈನಲ್ಲಿದ್ದ ಚಂದನ್, ಅಲ್ಲಿಯೂ ತಮಿಳು ಭಾಷೆಯನ್ನು ಕಲಿತು, ಅಲ್ಲಿನ ಖಾಸಗಿ ಟಿವಿಯ ಸರಿಗಮಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೈ ಎನ್ನಿಸಿಕೊಳ್ಳುತ್ತಾರೆ. ಅವಕಾಶಗಳು ಚಂದನ್ ರನ್ನು ಹುಡುಕುತ್ತಲೇ ಬಂದಿವೆ.

ಇತ್ತೀಚೆಗೆ ಸ್ನೇಹಿತನೊಬ್ಬನ ಮದುವೆಯ ಕಾರಣದಿಂದ ಚಂದನ್ ಊರಿಗೆ ಬರುತ್ತಾರೆ. ಲಾಕ್ ಡೌನ್ ನೆಪದಿಂದ ಊರಿನಲ್ಲೇ ನೆಲೆಯಾಗುತ್ತಾರೆ. ಅಲ್ಲಿ ಸ್ನೇಹಿತರ ಒತ್ತಾಯದಿಂದ ಚಂದನ್ ಹಾಡಲು ಒಪ್ಪುತ್ತಾರೆ.ಅದೇ ಸಮಯದಲ್ಲಿ ಹಾಡಿದ ಹಾಡು ಬಾಹುಬಲಿ ಚಿತ್ರದ ‘ಕೌನ್ ಹೇ ಹೋ ಕೌನ್ ಹೇ’ ಇದನ್ನು ಸ್ನೇಹಿತನೊಬ್ಬ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡುತ್ತಾನೆ. ಮೇ 17 ರಂದು ಪೋಸ್ಟ್ ಮಾಡಿದ್ದ ಆ ಹಾಡು ಕೆಲವೇ ಗಂಟೆಗಳಲ್ಲಿ ಜಗತ್ತಿನಾದ್ಯಂತ ವೈರಲ್ ಆಗುತ್ತದೆ. ಕೈಲಾಸ್ ಖೇರ್ ಕಂಠದಂತೆಯೇ ಈ ಹುಡುಗನ ಹಾಡು ಇದೆ ಎಂದು ಜನ ಇದನ್ನು ಇಷ್ಟಪಡುತ್ತಾರೆ. ಇದುವರೆಗೆ ಚಂದನ್ ಹಾಡಿರುವ ಈ ಹಾಡು ಪೇಸ್ ಬುಕ್ ,ಇನ್ಸ್ಟಾ ಗ್ರಾಮ್ ಸೇರಿದಂತೆ ಎಲ್ಲೆಡೆ ಸುಮಾರು 2 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದಿದೆ.

ಚಂದನ್ ರಿಗೆ ಹಾಡು ಹೊಸತಲ್ಲ. ಅವಕಾಶಗಳಿಗಾಗಿ ಎಲ್ಲೆಡೆ ಅಲೆದಾಟ ನಡೆಸಿದ್ದಾರೆ. ಚಂದನ್ ಕನ್ನಡ, ತಮಿಳು,ತೆಲುಗು, ಪಂಜಾಬಿ,ಭೋಜ್‌ಪುರಿ, ಬಂಗಾಳಿ ಸೇರಿದಂತೆ ಒಟ್ಟು ಒಂಬತ್ತು ಭಾಷೆಯಲ್ಲಿ ಸರಾಗವಾಗಿ ಹಾಡನ್ನು, ಹಾಡಿನ ಭಾವವನ್ನು ವ್ಯಕ್ತಪಡಿಸುತ್ತಾರೆ.

ವೈರಲ್ ಆದ ಹಾಡಿನ ಬಳಿಕ ಚಂದನ್ ಅವರಿಗೆ ಅವಕಾಶಗಳು ಹುಡುಕುತ್ತಾ ಬರುತ್ತಿವೆ. ಹಿಂದಿಯ ಜನಪ್ರಿಯ ಹಾಡಿನ ರಿಯಾಲಿಟಿ ಶೋ ‘ಇಂಡಿಯನ್ ಐಡಲ್‌’ ನ ಆಡಿಷನ್ ಗಾಗಿ ಇವರಿಗೆ ಕರೆ ಬಂದಿದೆ. ಅವಕಾಶಗಳು ಹೇಗೆ ಬೇಕಾದರೂ ಬರಬಹುದು. ಮುನ್ನಡೆಯುವ ಒಂದು ಆತ್ಮವಿಶ್ವಾಸದ ಪ್ರಯತ್ನ ಬೇಕಷ್ಟೇ..

 

– ಸುಹಾನ್ ಶೇಕ್

ಟಾಪ್ ನ್ಯೂಸ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.