ಭಾರತ ಸೇನೆಯ ವಿಜಯಗಾಥೆ ಸರಣಿ: ಪಾಕ್‌ ಸೈನಿಕರ ಹೆಣಗಳ ರಾಶಿ ಮೇಲೆ ನಡೆದಿದ್ದೆವು!


Team Udayavani, Dec 16, 2021, 10:05 AM IST

ಪಾಕ್‌ ಸೈನಿಕರ ಹೆಣಗಳ ರಾಶಿ ಮೇಲೆ ನಡೆದಿದ್ದೆವು!

ಭಾರತೀಯ ಸೇನೆಯ ಸೇವೆಗೆ ಸೇರಿದ ವರ್ಷದಲ್ಲೇ ಪಾಕ್‌ ವಿರುದ್ಧ ಯುದ್ಧ ಎದುರಿಸಿದ ಸೇನೆಯಲ್ಲಿದ್ದೆ. ಸೇವೆಯಿಂದ ನಿವೃತ್ತಿಯಾಗುವ ವರ್ಷಕ್ಕೆ ಮೊದಲು ಕಾರ್ಗಿಲ್‌ ಯುದ್ಧದಲ್ಲೂ ಪಾಲ್ಗೊಂಡು ಗೆದ್ದಿರುವ ಸಂತಸ ನನ್ನದು.

ಹೀಗೆಂದು ಅಪ್ರತಿಮ ದೇಶಾಭಿಮಾನದಿಂದ ಎದೆ ಯುಬ್ಬಿಸಿದವರು ಸೇನೆಯಲ್ಲಿನ ಸ್ಮರಣೀಯ ಸೇವೆಗೆ 12 ಪದಕ ಪಡೆದಿರುವ ನಿವೃತ್ತ ಸೇನಾ ಕ್ಯಾಪ್ಟನ್‌ ಬಸಲಿಂಗಪ್ಪ ಶಂಕ್ರಪ್ಪ ಖೋತ. ವಿಜಯಪುರ ಜಿಲ್ಲೆಯ ಸಿದ್ಧಾಪುರ ಕೆ. ಗ್ರಾಮದ ಇವರು 1970, ಜೂ.12ರಂದು ಮರಾಠಾ ಲೈಟ್‌ ಇನ್‌ಫೆಂಟ್ರಿ ಸೆಂಟರ್‌ನ 19ನೇ ಯುನಿಟ್‌ಗೆ ಸಿಪಾಯಿಯಾಗಿ ಸೇರ್ಪಡೆಯಾದರು. ಸೇವೆಗೆ ಸೇರಿದ ವರ್ಷದಲ್ಲೇ 1970, ಡಿ.3ರಂದು ದೇಶ ರಕ್ಷಣೆಗಾಗಿ ವೈರಿ ಪಾಕಿ ಸ್ಥಾನ ವಿರುದ್ಧ ಎದೆಯೊಡ್ಡಿ ನಿಲ್ಲುವ ಅವಕಾಶ ಬಂತು.

ಯುದ್ಧದ ಮಾತಿರಲಿ ಸೇನೆಯ ಪೂರ್ಣ ಪ್ರಮಾಣದ ಅನುಭವವೂ ಇಲ್ಲದ ಹಂತದಲ್ಲಿ ಪಾಕ್‌ ವಿರುದ್ಧ ಯುದ್ಧ ಎದುರಾಗಿತ್ತು. ಪ್ರಧಾನಿ ಇಂದಿರಾಗಾಂಧಿ  ಯುದ್ಧಕ್ಕೆ ಸನ್ನದ್ಧರಾಗುವಂತೆ ಘೋಷಿಸುತ್ತಲೇ ಭೈರಾಂಪುರದಿಂದ ಆರ್‌ಪಾರ್‌ ಪ್ರದೇಶಕ್ಕೆ ಬಿ.ಎಸ್‌. ಖೋತ ವರ್ಗವಾದರು. ಪಾಕ್‌ ಸೈನಿಕರ ಜತೆಗೆ ಬಾಂಗ್ಲಾ ಉಗ್ರರೂ ವಿರೋಧಿ ಪಾಳೆಯದಲ್ಲಿದ್ದರು. ಇವರ ತಂಡದಲ್ಲಿದ್ದ 11 ಜನರಲ್ಲಿ ಕಂಪೆನಿ ಕಮಾಂಡರ್‌ ಮಧುಕರ ಪಾಟೀಲ ಸೇರಿದಂತೆ 3 ಜನರು ಹುತಾತ್ಮರಾದಾಗ ಸಹಜವಾಗಿ ಯುವ ಸೈನಿಕ ಖೋತ ಅವರ ಎದೆಯಲ್ಲಿ ಭಯ ತುಂಬಿತ್ತು. ಆದರೆ ಇವರ ತಂಡದ ಹವಲ್ದಾರ್‌ ಕಾಂಬಳೆ ಅವರು ತನ್ನ ಇಡೀ ತಂಡಕ್ಕೆ ವೈರಿಗಳ ವಿರುದ್ಧ ಗೆಲ್ಲಲು ಆತ್ಮವಿಶ್ವಾಸ ತುಂಬಿದರು. ಆಗ ತಂಡದ ನಾಯಕ ವೆಂಕಟ ಚವ್ಹಾಣ ಅವರು ನೀಡಿದ ಕೆಚ್ಚೆದೆಯ ದೇಶಪ್ರೇಮದ ಮಾತುಗಳು ಎಂಎಲ್‌ಐಸಿ 19ನೇ ಯುನಿಟ್‌ ಬಾಂಗ್ಲಾ ಗಡಿಯಲ್ಲಿದ್ದ ಜೈಸೂರು ದಾಟಿ ವೈರಿಗಳನ್ನು ಸದೆಬಡಿಯುವಲ್ಲಿ ಯಶಸ್ಸು ತಂದುಕೊಟ್ಟಿತ್ತು.

ಇದನ್ನೂ ಓದಿ:ಎನ್‌ಕೌಂಟರ್‌: ಎ+ ಕೆಟಗರಿಯ ಹಿಜ್ಬುಲ್‌ ಉಗ್ರನ ಹತ್ಯೆ

ಪಾಕಿಸ್ಥಾನ ವಿರುದ್ಧದ ಯುದ್ಧದಲ್ಲಿ ಭಾರತೀಯ ಸೇನೆ ಪರಾಕ್ರಮ ಮೆರೆದಿತ್ತು. ಹೀಗಾಗಿ ವೈರಿ ಪಡೆಯ ಸಾವಿರಾರು ಸೈನಿಕರ ಹೆಣಗಳ ರಾಶಿ ದಾಟಿಕೊಂಡು ಢಾಕಾವರೆಗೂ ಮುನ್ನುಗ್ಗಿ ವಿಜಯ ಸಾಧಿಸಿದ್ದೇ ಒಂದು ರೋಚಕ ಅನುಭವ.

ಪಾಕ್‌ ವಿರುದ್ಧ ಯುದ್ಧ ಗೆದ್ದುದಲ್ಲದೇ ವೈರಿ ಪಾಳೆಯದ ಸುಮಾರು 6,000 ಯುದ್ಧ ಕೈದಿಗಳನ್ನು ಸೆರೆ ಹಿಡಿದಿದ್ದಕ್ಕೆ ಭಾರತ ಸರಕಾರ ಇವರ ಮೇಲೆ ಕಾಪ್ಟರ್‌ಗಳ ಮೂಲಕ ಹೂಮಳೆ ಸುರಿಸಿ ವಿಶೇಷ ಗೌರವ ನೀಡಿತ್ತು ಎಂದು ಹೆಮ್ಮೆ ಪಡುತ್ತಾರೆ ಕ್ಯಾ| ಖೋತ.

ಇದಲ್ಲದೇ 30 ವರ್ಷಗಳ ಸುದೀರ್ಘ‌ ಸೇವೆಯ ನಿವೃತ್ತಿ ಹಂತದಲ್ಲಿ 1999ರಲ್ಲಿ ಮತ್ತೆ ಕಾರ್ಗಿಲ್‌ ಯುದ್ಧ ಘೋಷಣೆ ಆಗಿತ್ತು. ಅರುಣಾಚಲ ಪ್ರದೇಶದಲ್ಲಿ ಸುಬೇದಾರ್‌ ಮೇಜರ್‌ ಆಗಿದ್ದ ಖೋತ್‌ ಅವರಿಗೆ ಕಾಶ್ಮೀರಕ್ಕೆ ವರ್ಗವಾಯಿತು. ಆಗಲೂ ಪಾಕ್‌ ವಿರುದ್ಧ ನಡೆದ ಕಾರ್ಗಿಲ್‌ ಯುದ್ಧದಲ್ಲಿ ಭಾರತ ವಿಜಯ ಸಾಧಿಸಿದ್ದು, ಈ ಯುದ್ಧದಲ್ಲೂ ಖೋತ ದೇಶಕ್ಕಾಗಿ ತಮ್ಮ ಸೇವೆ ನೀಡಿದ್ದರು.

-ಜಿ.ಎಸ್‌. ಕಮತರ

ಟಾಪ್ ನ್ಯೂಸ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

19-kushtagi

Kushtagi:ವಿದ್ಯುತ್‌ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.