ಮೂರು ಪಂದ್ಯಗಳಿಂದ ಭುವನೇಶ್ವರ್ ಔಟ್
Team Udayavani, Jun 18, 2019, 5:23 AM IST
ಮ್ಯಾಂಚೆಸ್ಟರ್: ಏಕದಿನ ವಿಶ್ವಕಪ್ನಲ್ಲಿ ಪಾಲ್ಗೊಂಡಿರುವ ಭಾರತ ತಂಡಕ್ಕೆ ಮತ್ತೂಂದು ಕಹಿ ಸುದ್ದಿ. ಶಿಖರ್ ಧವನ್ ಗಾಯಗೊಂಡು ಪಂದ್ಯ ಕಳೆದುಕೊಂಡ ಬೆನ್ನಲ್ಲೇ ಇದೀಗ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಮಂಡಿರಜ್ಜು ಗಾಯಕ್ಕೆ ತುತ್ತಾಗಿ ಮುಂದಿನ 3 ಪಂದ್ಯ ಕಳೆದುಕೊಳ್ಳಲಿದ್ದಾರೆ.
ನಾಯಕ ವಿರಾಟ್ ಕೊಹ್ಲಿ ಈ ವಿಷಯನ್ನು ಖಚಿತಪಡಿಸಿದ್ದಾರೆ. ಪಾಕಿಸ್ಥಾನ ವಿರುದ್ಧದ ಪಂದ್ಯದ ವೇಳೆ ಭುವಿ ಗಾಯಕ್ಕೆ ತುತ್ತಾಗಿದ್ದರು. ಮುಂದಿನ ಕೆಲವು ದಿನಗಳು ಅವರು ವಿಶ್ರಾಂತಿ ತೆಗೆದುಕೊಳ್ಳಬೇಕಿರುವುದು ಅನಿವಾರ್ಯವಾಗಿದೆ. ಇವರ ಬದಲಿಗೆ ವೇಗಿ ಮೊಹಮ್ಮದ್ ಶಮಿ ಮುಂದಿನ ಪಂದ್ಯದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.