ಮಂಜ್ರೆಕರ್ ವಿರುದ್ಧ ಐಸಿಸಿಗೆ ಪತ್ರ ಬರೆದ ಕ್ರಿಕೆಟ್ ಅಭಿಮಾನಿ
Team Udayavani, Jun 29, 2019, 12:25 PM IST
ಮ್ಯಾಂಚೆಸ್ಟರ್: ಪ್ರಸಕ್ತ ವಿಶ್ವಕಪ್ ಏಕದಿನ ಕ್ರಿಕೆಟ್ ಕೂಟದಲ್ಲಿ ಭಾರತ ಸೇರಿದಂತೆ ವಿವಿಧ ದೇಶಗಳ ಮಾಜಿ ಕ್ರಿಕೆಟ್ ಆಟಗಾರರು ಕ್ರಿಕೆಟ್ ವಿಶ್ಲೇಷಣೆಯಲ್ಲಿ ಬ್ಯುಸಿಯಾಗಿದ್ದಾರೆ. ಭಾರತದಿಂದಲೂ ಹಲವಾರು ಮಾಜಿ ಕ್ರಿಕೆಟಿಗರು ಕಾಮೆಂಟ್ರಿ ಪ್ಯಾನಲ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಂತಹವರಲ್ಲಿ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೆಕರ್ ಕೂಡ ಒಬ್ಬರು. ಇದೀಗ
ಅಭಿಮಾನಿಯೊಬ್ಬ ಇವರ ವಿರುದ್ಧ ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ) ದುಬೈನ ಮುಖ್ಯ ಕಚೇರಿಗೆ ಪತ್ರ ಬರೆದು ದೂರು ನೀಡಿದ್ದಾರೆ.
ಅಭಿಮಾನಿಯ ದೂರಿನಲ್ಲೇನಿದೆ?: “ಅಫ್ಘಾನಿಸ್ತಾನ್ ವಿರುದ್ಧದ ಪಂದ್ಯದ ವೇಳೆ ಕ್ರಿಕೆಟ್ ವಿಶ್ಲೇಷಣೆ ನಡೆಸುವ ಸಂದರ್ಭದಲ್ಲಿ ಮಂಜ್ರೆಕರ್ ನಮ್ಮ ಧೋನಿ ವಿಕೆಟ್ ಹಿಂದಿನ ಕಾವಲು ನಾಯಿ ಎಂದು ಪದ ಬಳಕೆ ಮಾಡಿದ್ದಾರೆ. ಒಬ್ಬ ಕ್ರಿಕೆಟ್ ವಿಶ್ಲೇಷಕ “ನಮ್ಮ’ ಎನ್ನುವ ಪದ ಬಳಕೆ ಎಲ್ಲಿಯೂ ಮಾಡಬಾರದು. ಯಾವುದೇ ತಂಡ ಅಥವಾ ಆಟಗಾರನ ಪರ ಪಕ್ಷಪಾತ ನಡೆಸಬಾರದು. ಆದರೆ ಸಂಜಯ್ ಮಂಜ್ರೆಕರ್ ತಮ್ಮವರ ಬಗ್ಗೆ ಅತೀವ ಒಲವು ತೋರಿಸುವ ಪ್ರಯತ್ನ ನಡೆಸಿದ್ದಾರೆ. ಇದು ಪಕ್ಷಪಾತ, ವೃತ್ತಿಯೋಗ್ಯವಲ್ಲದ ಕಾರ್ಯವಾಗಿದೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು