ಏಕದಿನ ಆರಂಭವೇ ಆಕಸ್ಮಿಕ!

ಏಕದಿನ ಅಂತಾರಾಷ್ಟ್ರೀಯ ಪಂದ್ಯದ ಆರಂಭದ ಹಿಂದೆ ಅದೆಷ್ಟು ರೋಚಕ ಘಟನೆಗಳು!

Team Udayavani, May 17, 2019, 9:31 AM IST

1st-match

ಅದು 1970-71ರ ಆಸ್ಟ್ರೇಲಿಯ-ಇಂಗ್ಲೆಂಡ್‌  ನಡುವಿನ ಆ್ಯಶಸ್‌ ಸರಣಿ. ಮೊದಲೆರಡು ಟೆಸ್ಟ್‌ ನೀರಸ ಡ್ರಾದಲ್ಲಿ ಅಂತ್ಯಗೊಂಡಿದ್ದವು. 3ನೇ ಟೆಸ್ಟ್‌ಗೆಂದು ಮೆಲ್ಬರ್ನ್ಗೆ ಹೋದಾಗ ಅಲ್ಲಿಯೂ  ಮಳೆರಾಯನ ಸ್ವಾಗತ! ಮೊದಲೆರಡು ದಿನಗಳ ಆಟವನ್ನು ಮುಂಚಿತವಾಗಿಯೇ ರದ್ದುಗೊಳಿಸಲಾಗಿತ್ತು. ಈ ಪಂದ್ಯವನ್ನು  ಹೊಸತಾಗಿ 2 ದಿನ ವಿಳಂಬವಾಗಿ ಆರಂಭಿಸಲು ಎರಡೂ ಮಂಡಳಿಗಳು ಒಪ್ಪಲಿಲ್ಲ. 3ನೇ ದಿನವೂ ಮಳೆಯಾಟ ಮುಂದುವರಿಯಿತು. ಮೆಲ್ಬರ್ನ್ ಆಡಳಿತ ಮಂಡಳಿಗೆ ಆಗಲೇ 80 ಸಾವಿರ ಡಾಲರ್‌ ನಷ್ಟವಾಗಿತ್ತು. ಹೀಗಾಗಿ ಈ ಸರಣಿ ಬಳಿಕ ಹೆಚ್ಚುವರಿಯಾಗಿ 7ನೇ ಟೆಸ್ಟ್‌ ಆಡಿಸಲು ಆಸೀಸ್‌ ಯೋಚಿಸಿತು. ಆಗ ಇಂಗ್ಲೆಂಡ್‌ ಆಟಗಾರರು ಹೆಚ್ಚು ಸಂಭಾವನೆಯ ಬೇಡಿಕೆಯಿಟ್ಟರು.

ಈ ಎಲ್ಲ ವಿದ್ಯಮಾನಗಳಿಂದ ಮೆಲ್ಬರ್ನ್ ವೀಕ್ಷಕರೂ ನಿರಾಸೆಗೊಂಡಿದ್ದರು. ಆಗ ಹೊಳೆದದ್ದೇ ಇಂಗ್ಲೆಂಡಿನ “ಜಿಲೆಟ್‌ ಕಪ್‌’ ಪಂದ್ಯಾವಳಿ. ಇದು ಒಂದು ದಿನದಲ್ಲಿ ಮುಗಿಯುವ ಸೀಮಿತ ಓವರ್‌ಗಳ ಪಂದ್ಯವಾಗಿತ್ತು. ವೀಕ್ಷಕರನ್ನು ರಂಜಿಸುವ, ಮಂಡಳಿಯ ನಷ್ಟವನ್ನೂ ತುಂಬುವ ಸಲುವಾಗಿ ಮೆಲ್ಬರ್ನ್ ಟೆಸ್ಟ್‌ ಪಂದ್ಯದ 5ನೇ ದಿನ ಇಂಥದೊಂದು ಪಂದ್ಯವನ್ನು ಆಡಲು ನಿರ್ಧರಿಸಲಾಯಿತು. ತಂಡಗಳಿಗೆ ಇಂಗ್ಲೆಂಡ್‌ ಇಲೆವೆನ್‌ ಮತ್ತು ಆಸ್ಟ್ರೇಲಿಯ ಇಲೆವೆನ್‌ ಎಂದು ಹೆಸರಿಸಲಾಯಿತು. ತಂಬಾಕು ಕಂಪೆನಿ ರಾಥ್ಮ್ಯಾನ್ಸ್ ಕೊನೆಯ ಹಂತದಲ್ಲಿ ಪ್ರಾಯೋಜನೆ ವಹಿಸಿ 5 ಸಾವಿರ ಡಾಲರ್‌ ಹಾಗೂ ಪಂದ್ಯಶ್ರೇಷ್ಠನಿಗೆ 90 ಡಾಲರ್‌ ನೀಡಲು ಮುಂದಾಯಿತು. ಇದೇ ಕ್ರಿಕೆಟ್‌ ಇತಿಹಾಸದ ಪ್ರಪ್ರಥಮ ಏಕದಿನ ಅಂತಾರಾಷ್ಟ್ರೀಯ ಪಂದ್ಯ!

ಅದೃಷ್ಟವಶಾತ್‌ ಇದಕ್ಕೆ ಮಳೆಯಿಂದ ಯಾವುದೇ ಅಡಚಣೆಯಾಗಲಿಲ್ಲ. ಇದು ತಲಾ 40 ಓವರ್‌ಗಳ ಪಂದ್ಯವಾಗಿತ್ತು. ಓವರಿಗೆ 8 ಎಸೆತಗಳಾಗಿದ್ದವು. ಆಸ್ಟ್ರೇಲಿಯ ಇದನ್ನು 5 ವಿಕೆಟ್‌ಗಳಿಂದ ಗೆದ್ದಿತು. ಇಂಗ್ಲೆಂಡ್‌ 39.4 ಓವರ್‌ಗಳಲ್ಲಿ 190ಕ್ಕೆ ಆಲೌಟಾದರೆ, ಆಸ್ಟ್ರೇಲಿಯ 34.6 ಓವರ್‌ಗಳಲ್ಲಿ 5 ವಿಕೆಟಿಗೆ 191 ರನ್‌ ಬಾರಿಸಿತು. ರೇ ಇಲ್ಲಿಂಗ್‌ವರ್ತ್‌ ಮತ್ತು ಬಿಲ್‌ ಲಾರಿ ಇತ್ತಂಡಗಳ ನಾಯಕರಾಗಿದ್ದರು. ಈ ಪಂದ್ಯ ನಡೆದ ನಾಲ್ಕೇ ವರ್ಷಗಳಲ್ಲಿ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಉಗಮವಾದದ್ದು ಇನ್ನೊಂದು ವಿಸ್ಮಯ!

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.