“ಪಂತ್ ಫೀಲ್ಡಿಂಗ್ನಲ್ಲಿ ಸುಧಾರಣೆ’
Team Udayavani, Jul 4, 2019, 5:45 AM IST
ಬರ್ಮಿಂಗ್ಹ್ಯಾಮ್: ರಿಷಭ್ ಪಂತ್ ಫೀಲ್ಡಿಂಗ್ನಲ್ಲಿ ಬಹಳ ಸುಧಾರಣೆ ಕಂಡುಕೊಂಡಿದ್ದಾರೆ ಎಂದು ಭಾರತ ತಂಡದ ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಹೇಳಿದ್ದಾರೆ.
ಶಿಖರ್ ಧವನ್ ಗಾಯಾಳಾಗಿ ವಿಶ್ವಕಪ್ ಕೂಟದಿಂದ ಹೊರಹೋದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಆಯ್ಕೆ ಯಾದ ರಿಷಭ್ ಪಂತ್ ಇಂಗ್ಲೆಂಡ್ ವಿರುದ್ಧ ಆಡುವ ಬಳಗದಲ್ಲಿ ಸ್ಥಾನ ಪಡೆದಿದ್ದರು. ಕೀಪರ್ ಆದ್ದರಿಂದಲೋ ಏನೋ, ಅವರ ಔಟ್ಫೀಲ್ಡ್ ಕ್ಷೇತ್ರರಕ್ಷಣೆ ತೀರಾ ಕಳಪೆಯಾಗಿತ್ತು. ಇದರಿಂದ ಸಾಕಷ್ಟು ಟೀಕೆಯನ್ನೂ ಎದುರಿಸಿದ್ದರು.
“ಔಟ್ಫೀಲ್ಡ್ನಲ್ಲಿ ಪಂತ್ ಹೆಚ್ಚು ಚುರುಕಿನಿಂದಿದ್ದರೂ ಚೆಂಡನ್ನು ನಿಧಾನ ಗತಿಯಿಂದ ಎಸೆಯುತ್ತಿದ್ದರು. ಆದರೆ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಪಂತ್ ಫೀಲ್ಡಿಂಗ್ನಲ್ಲಿ ಕೊಂಚ ಸುಧಾ ರಣೆಯನ್ನು ಗುರುತಿಸಿದ್ದೇನೆ’ ಎಂದು ಶ್ರೀಧರ್ ಅಭಿಪ್ರಾಯಪಟ್ಟಿದ್ದಾರೆ.
“ದಿನೇಶ್ ಕಾರ್ತಿಕ್ ಕೂಡ ಕೀಪರ್. ಆದರೆ ಅವರು ಔಟ್ಫೀಲ್ಡ್ನಲ್ಲಿಯೂ ಉತ್ತಮ ಫೀಲ್ಡಿಂಗ್ ನಡೆಸುತ್ತಾರೆ. ಫೀಲ್ಡಿಂಗ್ ವೇಳೆ ಪಾದರಸದಂತಿರಬೇಕು. ಕಾರ್ತಿಕ್, ಧೋನಿ, ಕೊಹ್ಲಿ ಅವರಿಂದ ಫೀಲ್ಡಿಂಗ್ ಉಪಾಯಗಳನ್ನು ಕೇಳಿ ಕಲಿ ಯುವುದರಿಂದ ಪಂತ್ ಇನ್ನೂ ಉತ್ತಮ ಫೀಲ್ಡಿಂಗ್ ನಡೆಸಬಹುದು’ ಎಂದು ಶ್ರೀಧರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ