ಅಫ್ಘಾನಾಘಾತದಿಂದ ಭಾರತ ಪಾರು

ರೋಸ್‌ಬೌಲ್‌ನಲ್ಲಿ ಬೌಲಿಂಗ್‌ ಮಿಂಚು ; ಶಮಿ ಹ್ಯಾಟ್ರಿಕ್‌ ಸಾಹಸ

Team Udayavani, Jun 23, 2019, 5:04 AM IST

AP6_22_2019_000197B

ಸೌತಾಂಪ್ಟನ್‌: ಬದ್ಧ ಎದುರಾಳಿ ಪಾಕಿಸ್ಥಾನವನ್ನು ನೆಲಕ್ಕೆ ಕೆಡವಿ ಭರ್ಜರಿ ಪರಾಕ್ರಮ ಮೆರೆದಿದ್ದ ಭಾರತ, ಶನಿವಾರದ ವಿಶ್ವಕಪ್‌ ಪಂದ್ಯದಲ್ಲಿ ದುರ್ಬಲ ಹಾಗೂ ಸೋಲಿನ ಸುಳಿಗೆ ಸಿಲುಕಿದ್ದ ಅಫ್ಘಾನಿಸ್ಥಾನ ವಿರುದ್ಧ ಬಹಳ ಕಷ್ಟದಿಂದ 11 ರನ್‌ ಗೆಲುವು ಸಾಧಿಸಿ ನಿಟ್ಟುಸಿರೆಳೆದಿದೆ. ಮೊಹಮ್ಮದ್‌ ಶಮಿ ಅವರ ಹ್ಯಾಟ್ರಿಕ್‌ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತು.

“ರೋಸ್‌ಬೌಲ್‌’ ಅಂಗಳದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಟೀಮ್‌ ಇಂಡಿಯಾ ಅಫ‌^ನ್ನರ ಘಾತಕ ದಾಳಿಗೆ ತತ್ತರಿಸಿ 8 ವಿಕೆಟಿಗೆ ಕೇವಲ 224 ರನ್‌ ಗಳಿಸಿತು. ಜವಾಬಿತ್ತ ಅಫ್ಘಾನಿಸ್ಥಾನ 49.5 ಓವರ್‌ಗಳಲ್ಲಿ 213ಕ್ಕೆ ಆಲೌಟ್‌ ಆಯಿತು. ಶಮಿ ಅಂತಿಮ 3 ವಿಕೆಟ್‌ಗಳನ್ನು ಸತತ 3 ಎಸೆತಗಳಲ್ಲಿ ಹಾರಿಸಿ ಭಾರತದ ಗೆಲುವು ಸಾರಿದರು. ಅಂತಿಮ ಓವರಿನಲ್ಲಿ ಅಫ್ಘಾನ್‌ ಗೆಲುವಿಗೆ 3 ವಿಕೆಟ್‌ಗಳಿಂದ 16 ರನ್‌ ಬೇಕಿತ್ತು.

ಕೈಕೊಟ್ಟ ಬ್ಯಾಟಿಂಗ್‌ ಯೋಜನೆ
ಟಾಸ್‌ ಗೆದ್ದ ಭಾರತ ಮೊದಲು ಬ್ಯಾಟಿಂಗ್‌ ಆಯ್ದುಕೊಂಡು ಬೃಹತ್‌ ಮೊತ್ತ ಪೇರಿಸುವ ಯೋಜನೆಯಲ್ಲಿತ್ತು. ಆದರೆ ಕಪ್ತಾನ ಕೊಹ್ಲಿ ನಿರ್ಧಾರ ಆರಂಭದಲ್ಲೇ ಹೊರಳಿ ಹೋಯಿತು. ಪಾಕ್‌ ವಿರುದ್ಧ ಬ್ಯಾಟಿಂಗ್‌ ಆರ್ಭಟ ತೋರಿದ್ದ ಟೀಮ್‌ ಇಂಡಿಯಾ ಅಫ‌^ನ್ನರ ಮುಂದೆ ಥಂಡಾ ಹೊಡೆದದ್ದು ಅಚ್ಚರಿಯಾಗಿ ಕಂಡಿತು.

25.2 ಓವರ್‌ಗಳಲ್ಲಿ ರನ್ನಿಲ್ಲ!
ಇದಕ್ಕೆ ರೋಸ್‌ಬೌಲ್‌ನ ಟರ್ನಿಂಗ್‌ ಟ್ರ್ಯಾಕ್‌ ಕೂಡ ಕಾರಣವಾಯಿತು. ಅಂಗಳವೂ ನಿಧಾನ ಗತಿಯಿಂದ ಕೂಡಿತ್ತು. ಹೀಗಾಗಿ ಬಾರಿಸಿದ ಚೆಂಡು ತೆವಳುತ್ತ ಸಾಗುತ್ತಿತ್ತು. ಅಫ್ಘಾನ್‌ ಬೌಲರ್‌ಗಳು ಇದರ ಭರಪೂರ ಲಾಭವೆತ್ತಿದರು. ದಾಳಿಗಿಳಿದ ಪ್ರತಿಯೊಬ್ಬ ಬೌಲರ್‌ ಕೂಡ ಭಾರತಕ್ಕೆ ಸವಾಲಾಗುತ್ತ ಹೋಗಿ ವಿಕೆಟ್‌ ಕೀಳತೊಡಗಿದರು. ಮುನ್ನುಗ್ಗಿ ಬಾರಿಸಲು ಭಾರತದಿಂದ ಸಾಧ್ಯವಾಗಲೇ ಇಲ್ಲ.

ಇಂಗ್ಲೆಂಡ್‌ ಎದುರಿನ ಹಿಂದಿನ ಪಂದ್ಯದಲ್ಲಿ 25 ಸಿಕ್ಸರ್‌ಗಳ ಹೊಡೆತ ಅನುಭವಿಸಿದ್ದ ಅಫ್ಘಾನ್‌ ಬೌಲರ್‌ಗಳಿಲ್ಲಿ 152 ಡಾಟ್‌ ಬಾಲ್‌ ಎಸೆದದ್ದು ಅದ್ಭುತವಾಗಿ ಕಂಡಿತು. ಅಂದರೆ ಭಾರತ ಎದುರಿಸಿದ 25.2 ಓವರ್‌ಗಳಲ್ಲಿ ರನ್ನೇ ಬಂದಿರಲಿಲ್ಲ!
ಐಪಿಎಲ್‌ನ ಸ್ಟಾರ್‌ ಸ್ಪಿನ್ನರ್‌ಗಳಾದ ಮೊಹಮ್ಮದ್‌ ನಬಿ (33ಕ್ಕೆ 2), ಮುಜೀಬ್‌ ಉರ್‌ ರಹಮಾನ್‌ (26ಕ್ಕೆ 1) ಮತ್ತು ರಶೀದ್‌ ಖಾನ್‌ (38ಕ್ಕೆ 1) ಸೇರಿಕೊಂಡು ಭಾರತವನ್ನೇ ಕುಣಿಸಿದರು. 4ನೇ ಸ್ಪಿನ್ನರ್‌ ರಹಮತ್‌ ಶಾ ಕೂಡ ಮ್ಯಾಜಿಕ್‌ ಮಾಡಿದರು.

ಧೋನಿ-ಜಾಧವ್‌ ನಿಧಾನ ಆಟ
ಮಧ್ಯಮ ಕ್ರಮಾಂಕದಲ್ಲಿ ಜತೆಗೂಡಿದ ಮಹೇಂದ್ರ ಸಿಂಗ್‌ ಧೋನಿ (52 ಎಸೆತಗಳಿಂದ 28 ರನ್‌) ಮತ್ತು ಕೇದಾರ್‌ ಜಾಧವ್‌ (68 ಎಸೆತಗಳಿಂದ 52 ರನ್‌) 57 ರನ್‌ ಜತೆಯಾಟ ನಡೆಸಿದರೂ ರನ್‌ ಗತಿ ಏರಿಸಲು ವಿಫ‌ಲರಾದರು. ಈ 57 ರನ್ನಿಗೆ ಅವರು 14 ಓವರ್‌ ನಿಭಾಯಿಸಿದರು. ಇನ್ನೇನು ಮುನ್ನುಗ್ಗಿ ಬಾರಿಸಬೇಕೆನ್ನುವಾಗಲೇ ಧೋನಿ ಸ್ಟಂಪ್ಡ್ ಆದರು. ಹಾರ್ಡ್‌ ಹಿಟ್ಟರ್‌ ಹಾರ್ದಿಕ್‌ ಪಾಂಡ್ಯ ಸಂಚಲನ ಮೂಡಿಸಬಹುದೆಂಬ ನಿರೀಕ್ಷೆಯೂ ಫ‌ಲಿಸಲಿಲ್ಲ.

ಸ್ಕೋರ್‌ ಪಟ್ಟಿ
ಭಾರತ
ಕೆ.ಎಲ್‌. ರಾಹುಲ್‌ ಸಿ ಹಜ್ರತುಲ್ಲ ಬಿ ನಬಿ 30
ರೋಹಿತ್‌ ಶರ್ಮ ಬಿ ಮುಜೀಬ್‌ 1
ವಿರಾಟ್‌ ಕೊಹ್ಲಿ ಸಿ ರಹಮತ್‌ ಬಿ ನಬಿ 67
ವಿಜಯ್‌ ಶಂಕರ್‌ ಎಲ್‌ಬಿಡಬ್ಲ್ಯು ರಹಮತ್‌ 29
ಎಂ.ಎಸ್‌. ಧೋನಿ ಸ್ಟಂಪ್ಡ್ ಖೀಲ್‌ ಬಿ ರಶೀದ್‌ 28
ಕೇದಾರ್‌ ಜಾಧವ್‌ ಜದ್ರಾನ್‌ (ಬದಲಿ) ಬಿ ನೈಬ್‌ 52
ಹಾರ್ದಿಕ್‌ ಪಾಂಡ್ಯ ಸಿ ಖೀಲ್‌ ಬಿ ಆಲಂ 7
ಮೊಹಮ್ಮದ್‌ ಶಮಿ ಬಿ ನೈಬ್‌ 1
ಕುಲದೀಪ್‌ ಯಾದವ್‌ ಔಟಾಗದೆ 1
ಜಸ್‌ಪ್ರೀತ್‌ ಬುಮ್ರಾ ಔಟಾಗದೆ 1
ಇತರ 7
ಒಟ್ಟು (50 ಓವರ್‌ಗಳಲ್ಲಿ 8 ವಿಕೆಟಿಗೆ) 224
ವಿಕೆಟ್‌ ಪತನ: 1-7, 2-64, 3-122, 4-135, 5-192, 6-217, 7-222, 8-223.
ಬೌಲಿಂಗ್‌:
ಮುಜೀಬ್‌ ಉರ್‌ ರಹಮಾನ್‌ 10-0-26-1
ಅಫ್ತಾಬ್‌ ಆಲಂ 7-1-54-1
ಗುಲ್ಬದಿನ್‌ ನೈಬ್‌ 9-0-51-2
ಮೊಹಮ್ಮದ್‌ ನಬಿ 9-0-33-2
ರಶೀದ್‌ ಖಾನ್‌ 10-0-38-1
ರಹಮತ್‌ ಶಾ 5-0-22-1
ಅಫ್ಘಾನಿಸ್ಥಾನ
ಹಜ್ರತುಲ್ಲ ಜಜಾಯ್‌ ಬಿ ಶಮಿ 10
ಗುಲ್ಬದಿನ್‌ ನೈಬ್‌ ಸಿ ಶಂಕರ್‌ ಬಿ ಪಾಂಡ್ಯ 27
ರಹಮತ್‌ ಶಾ ಸಿ ಚಹಲ್‌ ಬಿ ಬುಮ್ರಾ 36
ಹಶ್ಮತುಲ್ಲ ಶಾಹಿದಿ ಸಿ ಮತ್ತು ಬಿ ಬುಮ್ರಾ 21
ಅಸYರ್‌ ಅಫ್ಘಾನ್‌ ಬಿ ಚಹಲ್‌ 8
ಮೊಹಮ್ಮದ್‌ ನಬಿ ಸಿ ಪಾಂಡ್ಯ ಬಿ ಶಮಿ 52
ನಜೀಬುಲ್ಲ ಜದ್ರಾನ್‌ ಸಿ ಚಹಲ್‌ ಬಿ ಪಾಂಡ್ಯ 21
ರಶೀದ್‌ ಖಾನ್‌ ಸ್ಟಂಪ್ಡ್ ಧೋನಿ ಬಿ ಚಹಲ್‌ 14
ಇಕ್ರಮ್‌ ಅಲಿ ಖೀಲ್‌ ಔಟಾಗದೆ 7
ಅಫ್ತಾಬ್‌ ಆಲಂ ಬಿ ಶಮಿ 0
ಮುಜೀಬ್‌ ಬಿ ಶಮಿ 0
ಇತರ 17
ಒಟ್ಟು (49.5 ಓವರ್‌ಗಳಲ್ಲಿ ಆಲೌಟ್‌) 213
ವಿಕೆಟ್‌ ಪತನ: 1-20, 2-64, 3-106, 4-106, 5-130, 6-166, 7-190, 8-213, 9-213.
ಬೌಲಿಂಗ್‌:
ಮೊಹಮ್ಮದ್‌ ಶಮಿ 9.5-1-40-4
ಜಸ್‌ಪ್ರೀತ್‌ ಬುಮ್ರಾ 10-1-39-2
ಯಜುವೇಂದ್ರ ಚಹಲ್‌ 10-0-36-2
ಹಾರ್ದಿಕ್‌ ಪಾಂಡ್ಯ 10-1-51-2
ಕುಲದೀಪ್‌ ಯಾದವ್‌ 10-0-39-0

ಟಾಪ್ ನ್ಯೂಸ್

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.