ಫೈನಲ್‌ನಲ್ಲೂ ಸ್ಫೂರ್ತಿಯುತ ಆಟ

ಕಪ್‌ನಿಂದ ನಾವು ಒಂದು ಹೆಜ್ಜೆ ದೂರ: ಇಯಾನ್‌ ಮಾರ್ಗನ್‌

Team Udayavani, Jul 13, 2019, 5:44 AM IST

Eoin-Morgan-,-England,-World-Cup,

ಲಂಡನ್‌ : ಇಂಗ್ಲೆಂಡ್‌ ತಂಡದ ಕ್ಯಾಪ್ಟನ್‌ ಇಯಾನ್‌ ಮಾರ್ಗನ್‌ಗೆ ತನ್ನ ತಂಡ ಫೈನಲ್‌ ಪ್ರವೇಶಿಸಿರುವುದು ಒಂದು ಕನಸಿನಂತೆ ಕಾಣಿಸುತ್ತಿದೆಯಂತೆ. 2015ರ ಕೂಟದಲ್ಲಿ ಆರಂಭದ ಸುತ್ತಿನಲ್ಲೇ ತಂಡ ಹೊರಬಿದ್ದ ಬಳಿಕ ಇನ್ನೆಂದಾದರೂ ಇಂಗ್ಲೆಂಡ್‌ಗೆ ಫೈನಲ್‌ ತನಕ ಸಾಗುವ ಅವಕಾಶ ಸಿಕ್ಕೀತು ಎಂಬುದನ್ನು ಊಹಿಸಲೂ ಅವರಿಂದ ಸಾಧ್ಯವಿರಲಿಲ್ಲ. ಆದರೆ ಈಗ ಅನೂಹ್ಯ ವಾದದ್ದು ಸಂಭವಿಸಿ ಇಡೀ ಇಂಗ್ಲೆಂಡ್‌ ರೋಮಾಂಚನದಲ್ಲಿ ತೇಲಾಡುತ್ತಿದೆ.

ಗುರುವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯವನ್ನು 8 ವಿಕೆಟ್‌ಗಳಿಂದ ಬಗ್ಗುಬಡಿದ ಬಳಿಕ ಆಂಗ್ಲರಲ್ಲಿ ಕಪ್‌ ನಮ್ಮದೇ… ಎಂಬ ತುಡಿತ ಜೋರಾಗಿದೆ. ಇಡೀ ದೇಶ ಮಾರ್ಗನ್‌ ಪಡೆ ಗೆದ್ದು ಬರಲಿ, ಆ ಮೂಲಕ ಕ್ರಿಕೆಟ್‌ ಜನಕರಿಗೆ ವಿಶ್ವಕಪ್‌ ಗೆಲ್ಲಲಾಗಲಿಲ್ಲ ಎಂಬ ಕಳಂಕ ದೂರವಾಗಲಿ ಎಂದು ಪ್ರಾರ್ಥಿಸುತ್ತಿದೆ.

ಫೈನಲ್‌ ಪ್ರವೇಶದಲ್ಲಿ ಮಾರ್ಗನ್‌ ಅವರ ಅಜೇಯ 45 ರನ್‌ ಕೊಡು ಗೆಯೂ ಇದೆ. ನಮ್ಮಲ್ಲಿ ಬದ್ಧತೆಯ ಕೊರತೆಯಿರಲಿಲ್ಲ, ಯೋಜನೆಯನ್ನು ಸಿದ್ಧಮಾಡಿಟ್ಟುಕೊಂಡಿದ್ದೆವು ಮತ್ತು ಆ ದಿನ ನಮ್ಮದಾಗಿತ್ತು. ಮೈದಾನದಲ್ಲಿ ರುವವರು ಮಾತ್ರವಲ್ಲದೆ ಡ್ರೆಸ್ಸಿಂಗ್‌ ರೂಮ್‌ನಲ್ದಿದ್ದವರೂ ಪ್ರತಿಯೊಂದು ಎಸೆತವನ್ನು ಆನಂದಿಸಿದರು ಎಂದು ತಂಡದ ಗೆಲುವಿಗೆ ಪ್ರತಿಕ್ರಿಯಿಸಿದ್ದಾರೆ ಮಾರ್ಗನ್‌.

ಹಿಂದಿನ ವಿಶ್ವಕಪ್‌ನ ಹೀನಾಯ ನಿರ್ವಹಣೆಯ ಬಳಿಕ ತಂಡದ ಸ್ಥೈರ್ಯ ಕಳೆಗುಂದಿತ್ತು. ಈ ಸಂದರ್ಭದಲ್ಲಿ ಮಾರ್ಗನ್‌ ಎದೆಗುಂದಬೇಡಿ, ನಮ ಗೂ ಒಂದು ದಿನ ಬರಬಹುದು ಎಂದು ಹುರಿದುಂಬಿಸಿದ್ದರು. ಇದರಿಂದ ನಾಲ್ಕು ವರ್ಷಗಳಲ್ಲಿ ಇಂಗ್ಲೆಂಡ್‌ ಬಹಳಷ್ಟು ಪ್ರಗತಿ ಸಾಧಿಸಲು ಸಾಧ್ಯವಾಯಿತು.

ರವಿವಾರವೂ ತಂಡ ಇದೇ ರೀತಿಯ ಸ್ಫೂರ್ತಿಯಿಂದ ಆಡಬೇಕೆನ್ನುವುದು ಮಾರ್ಗನ್‌ ಬಯಕೆ. ಕಪ್‌ನಿಂದ ನಾವು ಒಂದೇ ಹೆಜ್ಜೆ ದೂರ ಇದ್ದೇವೆ. ಇದು ಗರಿಷ್ಠ ಸಾಮರ್ಥ್ಯವನ್ನು ತೋರಿಸುವ ದಿನ. ಅಂತೆಯೇ ಪಂದ್ಯವನ್ನು ಆನಂದಿಸಬೇಕು ಎಂದು ತಂಡದವರಿಗೆ ಕಿವಿ ಮಾತು ಹೇಳಿದ್ದಾರೆ.

ಫೈನಲ್‌ನಲ್ಲಿ ಕಠಿನ ಹೋರಾಟ
ಲೀಗ್‌ ಹಂತದಲ್ಲಿ ನ್ಯೂಜಿಲ್ಯಾಂಡನ್ನು 119 ರನ್‌ಗಳಿಂದ ಮಣಿಸಿದ್ದರೂ ಫೈನಲ್‌ನಲ್ಲಿ ತಂಡ ಕಠಿನ ಹೋರಾಟ ನಡೆಸಬಹುದು ಎಂಬ ಎಚ್ಚರಿಕೆ ಮಾರ್ಗನ್‌ ಪಡೆಯಲ್ಲಿದೆ. ಲೀಗ್‌ ಹಂತದ ಹೋರಾಟವೇ ಬೇರೆ, ಫೈನಲ್‌ ಹಣಾಹಣಿಯೇ ಬೇರೆ. ಯಾವುದೇ ತಂಡವಾದರೂ ಇಲ್ಲಿ ಗರಿಷ್ಠ ಸಾಮರ್ಥ್ಯದಿಂದ ಆಡುತ್ತದೆ. ಹೀಗಾಗಿ ಲೀಗ್‌ ಫ‌ಲಿತಾಂಶ ನೋಡಿಕೊಂಡು ಮೈಮರೆಯುವ ಸಮಯ ಇದಲ್ಲ ಎನ್ನುತ್ತಾರೆ ಮಾರ್ಗನ್‌.

ಟಾಪ್ ನ್ಯೂಸ್

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

Gadag; ತೋಂಟದಾರ್ಯ ಮಠದ ಅದ್ದೂರಿ ಮಹಾರಥೋತ್ಸವ

Gadag; ತೋಂಟದಾರ್ಯ ಮಠದ ಅದ್ದೂರಿ ಮಹಾರಥೋತ್ಸವ

10-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.