ಕ್ರೇಜ್ ಹುಟ್ಟಿಸಿದ ಕಪಿಲ್ , ಜೋಶ್ ಹಬ್ಬಿಸಿದ ಧೋನಿ
ಇವರಿಬ್ಬರ ಸಾಹಸ ಕೊಹ್ಲಿ ತಂಡಕ್ಕೂ ಸ್ಫೂರ್ತಿಯಾಗಲಿ...
Team Udayavani, May 30, 2019, 6:00 AM IST
ಯಾವಾಗ ಕಪಿಲ್ದೇವ್ ಪಡೆ ವೆಸ್ಟ್ ಇಂಡೀಸಿನ ಸೊಕ್ಕಡಗಿಸಿ ವಿಶ್ವಕಪ್ ಗೆದ್ದಿತೋ, ಭಾರತೀಯ ಕ್ರಿಕೆಟ್ನಲ್ಲಿ ದೊಡ್ಡ ಪಲ್ಲಟವೊಂದು ಸಂಭವಿಸಿತು. ಅಲ್ಲಿಯ ತನಕ ಬರೀ ಟೆಸ್ಟ್ ಪಂದ್ಯಗಳತ್ತ ಆಸಕ್ತಿ ವಹಿಸುತ್ತಿದ್ದ ದೇಶದ ಕ್ರಿಕೆಟ್ ಪ್ರೇಮಿಗಳಲ್ಲಿ ಹೊಸತೊಂದು ಸಂಚಲನ ಮೂಡಿತು. ಸೀಮಿತ ಓವರ್ಗಳ ಕ್ರಿಕೆಟ್ ಕ್ರೇಜ್ ದೊಡ್ಡ ಮಟ್ಟದಲ್ಲಿ ಹಬ್ಬತೊಡಗಿತು. ಎಷ್ಟರ ಮಟ್ಟಿಗೆಂದರೆ, ಪ್ರತೀ ವಿಶ್ವಕಪ್ ಆಗಮಿಸಿದಾಗಲೂ ಭಾರತವೇ ಚಾಂಪಿಯನ್ ಆಗಲಿದೆ ಎಂದು ವಿಪರೀತ ನಂಬಿಕೆ ಇರುವಷ್ಟು!
* ಭಾರತದ ಮೇಲೆ ನಿರೀಕ್ಷೆಯ ಭಾರ
ಹೌದು, ಕಪಿಲ್ ಮೂಡಿಸಿದ ಕ್ರಿಕೆಟ್ ಕ್ರೇಜ್ ದೊಡ್ಡ ಮಟ್ಟದಲ್ಲೇ ಹಬ್ಬಿತ್ತು. ಭಾರತದಲ್ಲಿ ಟೆಸ್ಟ್ ಜತೆಗೆ ಏಕದಿನ ಸರಣಿಗೆ ಹೆಚ್ಚಿನ ಪ್ರಾಶಸ್ತ್ಯ ಲಭಿಸಿತು. ಯುವ ಜನತೆ ಭಾರೀ ಮಟ್ಟದಲ್ಲಿ ಈ ಪಂದ್ಯಗಳಿಗೆ ಮುಗಿಬೀಳತೊಡಗಿತು. ಪ್ರತಿಯೊಂದು ವರ್ಲ್ಡ್ಕಪ್ ಬಂಗಾದಲೂ ಭಾರತದ ನಿರೀಕ್ಷೆಗಳು ಗರಿಗೆದರುತ್ತಿದ್ದವು. ಆದರೆ ಭಾರತ ಮತ್ತೂಮ್ಮೆ ವಿಶ್ವಕಪ್ ಎತ್ತುವುದನ್ನು ಕಣ್ತುಂಬಿಸಿಕೊಳ್ಳಲು 2011ರ ತನಕ ಕಾಯಬೇಕಾಯಿತು. ಅಂದು ಧೋನಿ ಪಡೆ ಮೋಡಿಗೈಯುವ ಮೂಲಕ ದೇಶದ ಅಪಾರ ಕ್ರಿಕೆಟ್ ಅಭಿಮಾನಿಗಳ ಕನಸನ್ನು ನನಸಾಗಿಸಿತು.
* 28 ವರ್ಷ ಕಾಯಬೇಕಾಯಿತು
1983ರಿಂದ 2011-ಈ 28 ವರ್ಷಗಳ ಅವಧಿಯ ವಿಶ್ವಕಪ್ ಕೂಟಗಳಲ್ಲಿ ಭಾರತದ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ, ಕಾತರಕ್ಕೆ ಮಿತಿ ಇರಲಿಲ್ಲ. ಎರಡು ಸಲ ಭಾರತದ ಆತಿಥ್ಯದಲ್ಲೇ ಕೂಟ ನಡೆದಾಗಲೂ ಕಪ್ ಮರೀಚಿಕೆಯೇ ಆಗಿ ಉಳಿಯಿತು. 2003ರಲ್ಲಿ ಸೌರವ್ ಗಂಗೂಲಿ ಪಡೆಗೆ ಅದ್ಭುತವೊಂದನ್ನು ಸಾಧಿಸುವ ಅವಕಾಶ ಬಾಗಿಲಿಗೆ ಬಂದಿತ್ತು. ಆದರೆ ನಸೀಬು ಕೈಕೊಟ್ಟಿತು. ಆದರೆ 2011 ಅದೃಷ್ಟ ತಂದಿತ್ತಿತು. ಧೋನಿ ಟೀಮ್ ವಿಶ್ವ ಸಾಮ್ರಾಟನಾಗಿ ಮೆರೆಯಿತು.
* ಬಲಿಷ್ಠ ತಂಡಗಳ ಸಾಹಸಗಾಥೆ
ವಿಶ್ವಕಪ್ ಗೆದ್ದ ಭಾರತದ ಈ ಎರಡೂ ತಂಡಗಳು ಅತ್ಯಂತ ಬಲಿಷ್ಠವಾಗಿದ್ದವು. 1983ರಲ್ಲಿ ದಾಖಲಾದದ್ದು ಅಚ್ಚರಿಯ ಫಲಿತಾಂಶವಾದರೂ ಟ್ರೋಫಿ ಎತ್ತಲು ಭಾರತ ಅರ್ಹವಾಗಿಯೇ ಇತ್ತು. ಅಮೋಘ ಆಲ್ರೌಂಡ್ ಪ್ರದರ್ಶನ, ಕಪಿಲ್ ಅವರ ದಿಟ್ಟ ನಾಯಕತ್ವ, ಇಂಗ್ಲೆಂಡ್ ಟ್ರ್ಯಾಕ್ಗಳ ಭರ್ಜರಿ ಲಾಭ ಭಾರತವನ್ನು ಬಹಳ ಎತ್ತರಕ್ಕೆ ಏರಿಸಿತು. 2003ರಲ್ಲಿ ಭಾರತದ ಬ್ಯಾಟಿಂಗ್ ಸರದಿ ಬಲಿಷ್ಠವಾಗಿದ್ದರೂ ಬೌಲಿಂಗ್ ವಿಭಾಗ ನಿರೀಕ್ಷೆಯಷ್ಟು ಘಾತಕವಾಗಿರಲಿಲ್ಲ. ಗಂಗೂಲಿ ಫೈನಲ್ ತನಕ ತಂಡವನ್ನು ಮುನ್ನಡೆಸಿದರೂ ಕಪ್ ಎಟುಕಲಿಲ್ಲ.
2011ರ ಧೋನಿ ಪಡೆ ಭಾರತೀಯ ಕ್ರಿಕೆಟಿನ ಸುವರ್ಣ ಯುಗಕ್ಕೆ ಸಾಕ್ಷಿಯಾಯಿತು. ತೆಂಡುಲ್ಕರ್ಗೆ ಕಪ್ ಅರ್ಪಿಸುವಲ್ಲಿ ಎಲ್ಲರೂ ಟೊಂಕ ಕಟ್ಟಿ ನಿಂತರು. ಈ ಇಬ್ಬರು ಕಪ್ತಾನರ ಸಾಹಸಗಾಥೆ ಈಗಿನ ಕೊಹ್ಲಿ ಪಡೆಗೆ ಸ್ಫೂರ್ತಿಯಾಗಬೇಕಿದೆ. ತಂಡದಲ್ಲೇ ಇರುವ ಧೋನಿ ಹೆಚ್ಚಿನ ಸ್ಫೂರ್ತಿ ತುಂಬಬಲ್ಲರು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ