ಕೊಹ್ಲಿ, ಬೌಲ್ಟ್, ಆದಿಲ್‌ ರಶೀದ್‌ ಪ್ರಚಂಡ ಫಾರ್ಮ್

2015ರ ವಿಶ್ವಕಪ್‌ ಬಳಿಕ ಮಿಂಚು ಹರಿಸಿದವರು ;ಕೇದಾರ್‌ ಜಾಧವ್‌ ನಂ.1 ಆಲ್‌ರೌಂಡರ್‌

Team Udayavani, May 28, 2019, 6:00 AM IST

VA

ಈ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಅತ್ಯಧಿಕ ರನ್‌ ಬಾರಿಸುವ ಬ್ಯಾಟ್ಸ್‌ಮನ್‌ ಯಾರು, ಅತ್ಯಧಿಕ ವಿಕೆಟ್‌ ಯಾರಿಗೆ ಸಿಗಬಹುದು ಎಂಬ ಬಗ್ಗೆ ಈಗಾಗಲೇ ಚರ್ಚೆ ಹುಟ್ಟಿಕೊಂಡಿದೆ. ಇಲ್ಲಿ ನಿರ್ದಿಷ್ಟ ಆಟಗಾರರನ್ನು ಹೆಸರಿಸುವುದು ಭಾರೀ ಸವಾಲಿನ ಸಂಗತಿ. ಆದರೆ 2015 ವಿಶ್ವಕಪ್‌ ಬಳಿಕ ಪ್ರಚಂಡ ಫಾರ್ಮ್ ಕಾಯ್ದುಕೊಂಡು ಬಂದ ಆಟಗಾರರತ್ತ ಒಂದು ನೋಟ ಹಾಯಿಸಿದರೆ ಇದಕ್ಕೆ ಸಮಾಧಾನಕರ ಉತ್ತರವನ್ನು ಕಂಡುಕೊಳ್ಳಬಹುದು.

ಆಗ ಮೂಡಿಬರುವ ಹೆಸರುಗಳೆಂದರೆ ವಿರಾಟ್‌ ಕೊಹ್ಲಿ, ಟ್ರೆಂಟ್‌ ಬೌಲ್ಟ್ ಮತ್ತು ಆದಿಲ್‌ ರಶೀದ್‌. ಇವರು ಕ್ರಮವಾಗಿ ಬ್ಯಾಟಿಂಗ್‌, ವೇಗದ ಬೌಲಿಂಗ್‌ ಮತ್ತು ಸ್ಪಿನ್‌ ಬೌಲಿಂಗ್‌ ವಿಭಾಗಗಳಲ್ಲಿ ಉತ್ತಮ ನಿರ್ವಹಣೆ ಕಾಯ್ದುಕೊಂಡು ಬಂದಿದ್ದಾರೆ. ಉತ್ತಮ ಆಲ್‌ರೌಂಡರ್‌ ಎಂಬ ಹೆಗ್ಗಳಿಕೆ ಕೇದಾರ್‌ ಜಾಧವ್‌ ಅವರದು. ಈ ವಿಶ್ವಕಪ್‌ನಲ್ಲಿ ಇದೇ ಫಾರ್ಮ್ ಉಳಿಸಿಕೊಂಡು ಮಿಂಚುವ ಭರವಸೆ ಮೂಡಿಸಿದ್ದಾರೆ.

ವಿರಾಟ್‌ ಕೊಹ್ಲಿ ಸಾಧನೆ
ಕೊಹ್ಲಿ 69 ಏಕದಿನ ಪಂದ್ಯಗಳಲ್ಲಿ 4,306 ರನ್‌ ಪೇರಿಸಿದ್ದಾರೆ. 19 ಶತಕ, 16 ಅರ್ಧ ಶತಕ ಕೊಹ್ಲಿ ಬ್ಯಾಟಿಂಗ್‌ ಪರಾಕ್ರಮಕ್ಕೆ ಸಾಕ್ಷಿ. ರನ್‌ ಗಳಿಕೆಯಲ್ಲಿ ಕೊಹ್ಲಿಯ ಹಿಂದೇ ಇರುವ ಆಟಗಾರನೆಂದರೆ ರೋಹಿತ್‌ ಶರ್ಮ ಅವರು

ಟ್ರೆಂಟ್‌ ಬೌಲ್ಟ್
54 ಪಂದ್ಯ, 107 ವಿಕೆಟ್‌, 24.59 ಸರಾಸರಿ ವೇಗದ ಬೌಲಿಂಗ್‌ ವಿಭಾಗದಲ್ಲಿ ಟ್ರೆಂಟ್‌ ಬೌಲ್ಟ್ ಮತ್ತು ಕಾಗಿಸೊ ರಬಾಡ ಅವರದು ಸಮಬಲದ ಸಾಧನೆ. ಇವರಿಬ್ಬರು ಕ್ರಮವಾಗಿ 107 ಮತ್ತು 106 ವಿಕೆಟ್‌ ಉರುಳಿಸಿ 3ನೇ ಹಾಗೂ 4ನೇ ಸ್ಥಾನದಲ್ಲಿದ್ದಾರೆ. ಬೌಲ್ಟ್ 54 ಪಂದ್ಯ ಆಡಿದರೆ, ರಬಾಡ 66 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಟಾಪ್‌-10 ಯಾದಿಯಲ್ಲಿರುವ ನ್ಯೂಜಿಲ್ಯಾಂಡಿನ ಏಕೈಕ ಬೌಲರ್‌ ಎಂಬುದು ಬೌಲ್ಟ್ ಹೆಗ್ಗಳಿಕೆ.

ಆದಿಲ್‌ ರಶೀದ್‌
83 ಪಂದ್ಯ, 129 ವಿಕೆಟ್‌, 29.68 ಸರಾಸರಿ
ಕಳೆದ 4 ವರ್ಷಗಳಲ್ಲಿ ಬೌಲಿಂಗ್‌ ಯಶಸ್ಸು ಕಂಡವರಲ್ಲಿ ಸ್ಪಿನ್ನರ್‌ಗಳೇ ಅಗ್ರಸ್ಥಾ ನದಲ್ಲಿರುವುದು ಗಮನಾರ್ಹ. ಇಲ್ಲಿ ಇಂಗ್ಲೆಂಡಿನ ಆದಿಲ್‌ ರಶೀದ್‌ ಮತ್ತು ಅಫ್ಘಾನಿಸ್ಥಾನ ರಶೀದ್‌ ಖಾನ್‌ ನಡುವೆ ಉತ್ತಮ ಪೈಪೋಟಿ ಕಂಡುಬಂದಿದೆ. ಆದಿಲ್‌ ರಶೀದ್‌ 83 ಪಂದ್ಯಗಳಿಂದ 129 ವಿಕೆಟ್‌ ಉರುಳಿಸಿದರೆ, ರಶೀದ್‌ ಖಾನ್‌ 59 ಪಂದ್ಯಗಳನ್ನಾಡಿ 125 ವಿಕೆಟ್‌ ಸಂಪಾದಿಸಿದ್ದಾರೆ.

ಟಾಪ್‌-10ರಲ್ಲಿರುವ ಇತರ ಬೌಲರ್‌ಗಳೆಂದರೆ ಇಮ್ರಾನ್‌ ತಾಹಿರ್‌, ಕುದೀಪ್‌ ಯಾದವ್‌, ಬುಮ್ರಾ, ಲಿಯಮ್‌ ಪ್ಲಂಕೆಟ್‌, ಮುಸ್ತಫಿಜುರ್‌ ರೆಹಮಾನ್‌, ಹಸನ್‌ ಅಲಿ.

71 ಪಂದ್ಯಗಳಿಂದ 3,790 ರನ್‌ ರಾಶಿ ಹಾಕಿದ್ದಾರೆ. ಸಿಡಿಸಿದ್ದು 15 ಶತಕ ಹಾಗೂ 16 ಅರ್ಧ ಶತಕ. ಸಾರಸರಿ 61.72.ಟಾಪ್‌-10 ಯಾದಿಯಲ್ಲಿರುವ ಉಳಿದ ಬ್ಯಾಟ್ಸ್‌ ಮನ್‌ ಗಳೆಂದರೆ ಜೋ ರೂಟ್‌, ಇಯಾನ್‌ ಮಾರ್ಗನ್‌, ಕ್ವಿಂಟನ್‌ ಡಿ ಕಾಕ್‌, ಜಾಸನ್‌ ರಾಯ್‌, ರಾಸ್‌ ಟೇಲರ್‌, ಕೇನ್‌ ವಿಲಿಯಮ್ಸನ್‌, ಶಿಖರ್‌ ಧವನ್‌ ಮತ್ತು ಫಾ ಡು ಪ್ಲೆಸಿಸ್‌.

ಕೇದಾರ್‌ ಜಾಧವ್‌
58 ಪಂದ್ಯ, 1,154 ರನ್‌, 27 ವಿಕೆಟ್‌
ಆಲ್‌ರೌಂಡ್‌ ಸಾಧಕರಲ್ಲಿ ಭಾರತದ ಕೇದಾರ್‌ ಜಾಧವ್‌ ಮುಂಚೂಣಿಯಲ್ಲಿ ದ್ದಾರೆ. 58 ಪಂದ್ಯ ಗಳಿಂದ 1,154 ರನ್‌ ಹಾಗೂ 27 ವಿಕೆಟ್‌ ಸಂಪಾದಿಸಿದ್ದು ಇವರ ಸಾಧನೆ. ಟಾಪ್‌-10 ಯಾದಿಯಲ್ಲಿರುವ ಉಳಿದ ಆಲ್‌ರೌಂಡರ್‌ಗಳೆಂದರೆ ರಶೀದ್‌ ಖಾನ್‌, ಕ್ರಿಸ್‌ ವೋಕ್ಸ್‌, ದೌಲತ್‌ ಜದ್ರಾನ್‌, ಶಕಿಬ್‌ ಅಲ್‌ ಹಸನ್‌, ಆ್ಯಂಡಿಲ್‌ ಫೆಲುಕ್ವಾಯೊ, ಮೊಹಮ್ಮದ್‌ ನಬಿ, ಶಾದಾಬ್‌ ಖಾನ್‌, ಬೆನ್‌ ಸ್ಟೋಕ್ಸ್‌, ಜಿಮ್ಮಿ ನೀಶಮ್‌.

ಟಾಪ್ ನ್ಯೂಸ್

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

6-fusion

Yugadi: ಯುಗಾದಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.