ವಿಶ್ವಕಪ್‌ ಎತ್ತಲು ಲಕ್‌ ಬೇಕು!


Team Udayavani, Jul 12, 2019, 5:57 AM IST

new-zeeland

2019ರ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ಯಲ್ಲಿ ಭಾರತದ ಓಟ ಸೆಮಿಫೈನಲ್‌ನಲ್ಲೇ ಅಂತ್ಯಗೊಂಡಿದೆ. ಲೀಗ್‌ ಹಂತದ ಅಗ್ರ ತಂಡವಾದ ಭಾರತವನ್ನು 4ನೇ ಸ್ಥಾನಿಯಾದ ನ್ಯೂಜಿಲ್ಯಾಂಡ್‌ 18 ರನ್ನುಗಳಿಂದ ಮಣಿಸಿ ಸತತ 2ನೇ ಸಲ ಫೈನಲ್‌ಗೆ ಲಗ್ಗೆ ಇರಿಸಿದೆ.

ಇದರಿಂದ ಮತ್ತೂಮ್ಮೆ ಸ್ಪಷ್ಟಗೊಂಡ ಸಂಗತಿಯೆಂದರೆ, ವಿಶ್ವಕಪ್‌ ಎತ್ತಲು ಕೇವಲ ಸಾಧನೆಯೊಂದೇ ಸಾಲದು, ಅದೃಷ್ಟದ ಬೆಂಬಲವೂ ಇರಬೇಕು ಎನ್ನುವುದು!


ಭಾರತದ ಸಾಧನೆ ಅಮೋಘ
ಈ ಕೂಟದಲ್ಲಿ ಭಾರತದ ಸಾಧನೆ ಅಮೋಘ ಮಟ್ಟದಲ್ಲೇ ಇತ್ತು. ರೋಹಿತ್‌ ಶರ್ಮ ಅವರ 5 ಶತಕಗಳ ವಿಶ್ವದಾಖಲೆ, ಮೊಹಮ್ಮದ್‌ ಶಮಿ ಸಾಧಿಸಿದ ಹ್ಯಾಟ್ರಿಕ್‌, ಜಸ್‌ಪ್ರೀತ್‌ ಬುಮ್ರಾ ಅವರ 18 ವಿಕೆಟ್‌ ಬೇಟೆ, ಧವನ್‌-ರಾಹುಲ್‌ ಬಾರಿಸಿದ ಶತಕ, ವಿರಾಟ್‌ ಕೊಹ್ಲಿ ಅವರ ಸತತ 5 ಅರ್ಧ ಶತಕ, ಜಡೇಜ ಅವರ ಫೈಟಿಂಗ್‌ ಸ್ಪಿರಿಟ್‌, ಎಂದಿನಂತೆ ಪಾಕಿಸ್ಥಾನವನ್ನು ಬಗ್ಗುಬಡಿದದ್ದು, ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಕ್ಕೆ ಸೋಲಿನ ರುಚಿ ತೋರಿಸಿದ್ದು… ಹೀಗೆ ಪಟ್ಟಿ ಬೆಳೆಯುತ್ತದೆ.

ಪಂದ್ಯ ರದ್ದಾದುದರ ಲಾಭ?
ಆದರೆ ನ್ಯೂಜಿಲ್ಯಾಂಡ್‌ ಇಂಥ ಯಾವುದೇ ಪರಾಕ್ರಮ ದಾಖಲಿಸಲಿಲ್ಲ. ಕಿವೀಸ್‌ನದ್ದು ಪಾಕಿಸ್ಥಾನದೊಂದಿಗೆ ಸರಿಸಮ ಸಾಧನೆ. ತಲಾ 11 ಅಂಕ ಸಂಪಾದನೆ. ಆದರೆ ರನ್‌ರೇಟ್‌ ಕೈಹಿಡಿಯಿತು. ಬಹುಶಃ ಭಾರತದೆದುರಿನ ಲೀಗ್‌ ಪಂದ್ಯ ರದ್ದಾದುರಿಂದ ಲಭಿಸಿದ ಒಂದು ಅಂಕದಿಂದ ಲಾಭ ಆಗಿರಬಹುದು. ಏಕೆಂದರೆ, ಈ ಪಂದ್ಯ ನಡೆದು ಭಾರತ ಜಯಿಸಿದಲ್ಲಿ ವಿಲಿಯಮ್ಸನ್‌ ಪಡೆಗೆ ನಾಕೌಟ್‌ ಟಿಕೆಟ್‌ ಬಹುಶಃ ಲಭಿಸುತ್ತಿರಲಿಲ್ಲ!

ನ್ಯೂಜಿಲ್ಯಾಂಡ್‌ ಸಾಮಾನ್ಯ ತಂಡ
ಹಾಗೆ ನೋಡಿದರೆ ನ್ಯೂಜಿಲ್ಯಾಂಡ್‌ ತೀರಾ ಸಾಮಾನ್ಯ ತಂಡ. ಬಲಾಬಲ ಹಾಗೂ ಸಾಧನೆ ಲೆಕ್ಕಾಚಾರದಲ್ಲಿ ಪಾಕ್‌, ಬಾಂಗ್ಲಾ, ವಿಂಡೀಸ್‌ಗಿಂತಲೂ ಕೆಳಮಟ್ಟದ್ದು. ತಂಡದ ಆರಂಭಿಕರ ರನ್‌ ಬರಗಾಲಕ್ಕೆ ಇನ್ನೂ ಮುಕ್ತಿ ಸಿಕ್ಕಿಲ್ಲ. ವಿಲಿಯಮ್ಸನ್‌-ಟೇಲರ್‌ ಜತೆಗೂಡಿದ ಬಳಿಕವಷ್ಟೇ ಇನ್ನಿಂಗ್ಸಿಗೊಂದು ಜೀವ. ಇವರಿಬ್ಬರು ನಿರ್ಗಮಿಸಿದ ಬಳಿಕ ಮತ್ತೆ ವಿಲವಿಲ. ಬೌಲಿಂಗ್‌ ಮತ್ತು ಫೀಲ್ಡಿಂಗ್‌ ಓಕೆ. ಇದರೊಂದಿಗೆ ಕೈಹಿಡಿದ ಅದೃಷ್ಟ ಎನ್ನುವುದು ತಂಡವನ್ನು ಮತ್ತೆ ಫೈನಲಿಗೆ ತಂದು ನಿಲ್ಲಿಸಿದೆ. ರವಿವಾರ ಅದು ಚಾಂಪಿಯನ್‌ ಆಗಿ ಮೂಡಿಬಂದರೂ ಅಚ್ಚರಿ ಇಲ್ಲ.

ಆಗ, 5 ಶತಕ ಬಾರಿಸಿದ ರೋಹಿತ್‌ ಶರ್ಮ ಅವರಂಥ ಆಟಗಾರನಿಗೆ ಕಪ್‌ ಮರೀಚಿಕೆಯಾದರೆ, 2 ಸೊನ್ನೆಯೊಂದಿಗೆ ಬರೀ 167ರಷ್ಟು ರನ್‌ ಮಾಡಿದ ಮಾರ್ಟಿನ್‌ ಗಪ್ಟಿಲ್‌ ಕಪ್‌ ಎತ್ತಿ ಹಿಡಿಯಬಹುದು! ಇದಕ್ಕೇ ಹೇಳುವುದು, ಅದೃಷ್ಟದ ಪಾತ್ರ ಸಾಧನೆಗಿಂತ ಮಿಗಿಲು ಎನ್ನುವುದು!

1992-2019:
ಒಂದು ಸಾಮ್ಯ
1992ರ ವಿಶ್ವಕಪ್‌ ನೆನಪಿಸಿಕೊಳ್ಳಿ. ಅದು ಕೂಡ ರೌಂಡ್‌ ರಾಬಿನ್‌ ಲೀಗ್‌ ಮಾದರಿಯದ್ದಾಗಿತ್ತು. ಅಂದಿನ ಚಾಂಪಿಯನ್‌ ತಂಡವಾದ ಪಾಕಿಸ್ಥಾನ ಲೀಗ್‌ ಹಂತದಲ್ಲಿ 3 ಸೋಲುಂಡಿತ್ತು. ಇಂಗ್ಲೆಂಡ್‌ ಎದುರು ಜುಜುಬಿ 74ಕ್ಕೆ ಕುಸಿದಿತ್ತು. ಇಂಗ್ಲೆಂಡ್‌ ಒಂದಕ್ಕೆ 24 ರನ್‌ ಮಾಡಿದಾಗ ಮಳೆ ಸುರಿಯಿತು. ಪಂದ್ಯ ರದ್ದುಗೊಂಡಿತು. ಇಲ್ಲಿ ಲಭಿಸಿದ ಒಂದು ಅಂಕದಿಂದಲೇ ಪಾಕಿಸ್ಥಾನದ ಅದೃಷ್ಟದ ಬಾಗಿಲು ತೆರೆಯಿತು. ಅದು 9 ಅಂಕಗ ಳೊಂದಿಗೆ 4ನೇ ಸ್ಥಾನಿಯಾಗಿ ನಾಕೌಟ್‌ ಪ್ರವೇಶಿಸಿತು. ಅಲ್ಲಿ ಅಗ್ರಸ್ಥಾನದಲ್ಲಿದ್ದ ನ್ಯೂಜಿಲ್ಯಾಂಡಿಗೆ ಆಘಾತವಿಕ್ಕಿತು. ಲೀಗ್‌ನಲ್ಲಿ ತನ್ನನ್ನು 74ಕ್ಕೆ ಕೆಡವಿದ್ದ ಇಂಗ್ಲೆಂಡನ್ನೇ ಫೈನಲ್‌ನಲ್ಲಿ ಕೆಡವಿ ಕಪ್‌ ಎತ್ತಿತು!ಈ ಸಲವೂ ನ್ಯೂಜಿಲ್ಯಾಂಡ್‌ 3 ಲೀಗ್‌ ಪಂದ್ಯ ಸೋತಿದೆ. 4ನೇ ಸ್ಥಾನದೊಂದಿಗೆ ನಾಕೌಟ್‌ ಪ್ರವೇಶಿಸಿದೆ. ಅಗ್ರಸ್ಥಾನಿ ಭಾರತವನ್ನು ಕೆಡವಿದೆ. ಮುಂದಿನ ಫ‌ಲಿತಾಂಶಕ್ಕೆ ರವಿವಾರ ರಾತ್ರಿ ತನಕ ಕಾಯೋಣ!

ಟಾಪ್ ನ್ಯೂಸ್

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Lok Sabha polls: ಇಂದು ಸುಮಲತಾ ಬೆಂಬಲಿಗರ ಸಭೆ 

Lok Sabha polls: ಇಂದು ಸುಮಲತಾ ಬೆಂಬಲಿಗರ ಸಭೆ 

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.