ಇಂಗ್ಲೆಂಡ್‌ ವಿರುದ್ಧ ಪಂತ್‌/ಕಾರ್ತಿಕ್‌ ಕಣಕ್ಕೆ?

ಭಾರತದ 4ನೇ ಕ್ರಮಾಂಕಕ್ಕೆ ಸರ್ಜರಿ ಸಮಯ

Team Udayavani, Jun 29, 2019, 10:09 AM IST

vijay-shankar

ಮ್ಯಾಂಚೆಸ್ಟರ್‌: ಈ ವಿಶ್ವಕಪ್‌ ಪಂದ್ಯಾವಳಿಯ ಏಕೈಕ ಅಜೇಯ ತಂಡವಾಗಿರುವ ಭಾರತವೀಗ ಸೆಮಿಫೈನಲ್‌ ಅಂಚಿಗೆ ಬಂದು ನಿಂತಿದೆ. ಉಳಿದ 3 ಪಂದ್ಯಗಳಲ್ಲಿ ಕೇವಲ ಒಂದಂಕ ಗಳಿಸಿದರೂ ಕೊಹ್ಲಿ ಪಡೆಯ ನಾಕೌಟ್‌ ಪ್ರವೇಶ ಅಧಿಕೃತಗೊಳ್ಳಲಿದೆ.

ಗುರುವಾರ ರಾತ್ರಿ ವೆಸ್ಟ್‌ ಇಂಡೀಸ್‌ ವಿರುದ್ಧ ಸಾಧಿಸಿದ 125 ರನ್‌ ಜಯಭೇರಿ ಭಾರತದ ಯಶಸ್ಸಿನ ಓಟಕ್ಕೆ ಸಾಕ್ಷಿ. ಅಂದಮಾತ್ರಕ್ಕೆ ಟೀಮ್‌ ಇಂಡಿಯಾದಲ್ಲಿ ಎಲ್ಲವೂ ಸುಸೂತ್ರವಾಗಿದೆ, ಯಾವುದೇ ಸಮಸ್ಯೆ ಇಲ್ಲ ಅಂದರೆ ತಪ್ಪಾದೀತು. ಇದಕ್ಕೆ 4ನೇ ಕ್ರಮಾಂಕದ ವೈಫ‌ಲ್ಯವೇ ಸಾಕ್ಷಿ.

ಮಿಡ್ಲ್ ಆರ್ಡರ್‌ ಅತ್ಯಂತ ದುರ್ಬಲ ಉಳಿದೆಲ್ಲ ತಂಡಗಳ 4ನೇ ಕ್ರಮಾಂಕವನ್ನು ಗಮನಿಸಿ… ಇಯಾನ್‌ ಮಾರ್ಗನ್‌, ಸ್ಟೀವನ್‌ ಸ್ಮಿತ್‌, ರಾಸ್‌ ಟೇಲರ್‌, ಮೊಹಮ್ಮದ್‌ ಹಫೀಜ್ , ಮುಶ್ಫಿಕರ್‌ ರಹೀಂ ಅವರಂಥ ಸಮರ್ಥ ಹಾಗೂ ಅನುಭವಿ ಬ್ಯಾಟ್ಸ್‌ಮನ್‌ಗಳು ಇಲ್ಲಿ ಬ್ಯಾಟ್‌ ಹಿಡಿದು ಬರುತ್ತಿದ್ದಾರೆ.
ಎಷ್ಟೇ ಒತ್ತಡದ ಪರಿಸ್ಥಿತಿಯಲ್ಲೂ ತಂಡವನ್ನು ಮೇಲೆತ್ತುತ್ತಾರೆ. ಆದರೆ ಭಾರತ ಮಾತ್ರ ಯಾವುದೇ ಅನುಭವ ಹೊಂದಿಲ್ಲದ, ತೀರಾ ಸಾಮಾನ್ಯ ಆಟಗಾರ ನಾಗಿರುವ ವಿಜಯ್‌ ಶಂಕರ್‌ ಅವರನ್ನು ಆಡಲಿಳಿಸುತ್ತಿದೆ. ವಿಶ್ವಕಪ್‌ನಂಥ ದೊಡ್ಡ ಕೂಟದಲ್ಲಿ ಇದನ್ನು ಗ್ಯಾಂಬ್ಲಿಂಗ್‌ ಎಂದೇ ಹೇಳಬೇಕಾಗುತ್ತದೆ. ಇದರ ವ್ಯತಿರಿಕ್ತ ಪರಿಣಾಮ ಈಗಾಗಲೇ ತಂಡದ ಮೇಲೆ ಉಂಟಾಗಿದೆ. ಅಫ್ಘಾನ್‌ ಮತ್ತು ವಿಂಡೀಸ್‌ ವಿರುದ್ಧ ಚಡಪಡಿಸಿದ್ದೇ ಇದಕ್ಕೆ ಸಾಕ್ಷಿ.

ವಿಜಯ್‌ ಶಂಕರ್‌ ಪ್ರತಿಭಾನ್ವಿತ ಆಲ್‌ರೌಂಡರ್‌ ಎಂಬುದರಲ್ಲಿ ಎರಡು ಮಾತಿಲ್ಲ. ಕಳೆದ ವರ್ಷ ಈ ತಮಿಳುನಾಡು ಕ್ರಿಕೆಟಿಗನ ಪ್ರತಿಭೆ ದೊಡ್ಡ ಮಟ್ಟದಲ್ಲೇ ಅನಾವರಣಗೊಂಡಿತ್ತು. ಆದರೆ ವಿಶ್ವಕಪ್‌ ನಲ್ಲಿ ಇದು ಫ‌ಲ ಕೊಟ್ಟಿಲ್ಲ. ಮುಖ್ಯವಾಗಿ, ಮೊದಲೆರಡು ವಿಕೆಟ್‌ ಬೇಗನೆ ಬಿದ್ದಾಗ ಇನ್ನಿಂಗ್ಸ್‌ ಬೆಳಸಿಕೊಂಡು ಹೋಗುವ ಸಾಮರ್ಥ್ಯ ಶಂಕರ್‌ ಅವರಲ್ಲಿ ಇನ್ನೂ ಕಂಡು ಬಂದಿಲ್ಲ. ಹೀಗಾಗಿ ಮಿಡ್ಲ್ ಆರ್ಡರ್‌ ಮೇಲೀಗ ವಿಪರೀತ ಒತ್ತಡ ಬಿದ್ದಿದೆ.

ಆರಂಭಕಾರ ಶಿಖರ್‌ ಧವನ್‌ ಇದ್ದಾಗ ರಾಹುಲ್‌ 4ನೇ ಕ್ರಮಾಂಕಕ್ಕೆ
ಸೂಕ್ತವಾಗಿದ್ದರು. ಆದರೆ ರಾಹುಲ್‌ಗೆ ಭಡ್ತಿ ಲಭಿಸಿದ ಬಳಿಕ ಅವಕಾಶ ಪಡೆದ ಶಂಕರ್‌ ಇದರ ಲಾಭವೆತ್ತಲು ವಿಫ‌ಲರಾಗಿದ್ದಾರೆ. ಐಪಿಎಲ್‌ ವೇಳೆ ಸ್ಪಿನ್‌ ವಿರುದ್ಧ ಶಂಕರ್‌ ಅವರ ವೈಫ‌ಲ್ಯ ಗೋಚರಕ್ಕೆ ಬಂದಿತ್ತು. ಇಲ್ಲೀಗ ಉತ್ತಮ ಮಟ್ಟದ ಪೇಸ್‌ ಬೌಲಿಂಗ್‌ ವಿರುದ್ಧ ಸ್ಟ್ರೈಕ್‌ ರೊಟೇಟ್‌ ಮಾಡುವಲ್ಲಿ ವಿಫ‌ಲರಾಗುತ್ತಿದ್ದಾರೆ.

ಬೌಲಿಂಗ್‌ನಿಂದಲೂ ಹಿಂದೆ
ಆಲ್‌ರೌಂಡರ್‌ ಅಂದಮೇಲೆ ಆತನ ಸಾಮರ್ಥ್ಯವನ್ನು ಪೂರ್ತಿಯಾಗಿ ಬಳಸಿ
ಕೊಳ್ಳಬೇಕಾಗುತ್ತದೆ. ಆದರೆ ಕಳೆದೆರಡು ಪಂದ್ಯಗಳಲ್ಲಿ ಶಂಕರ್‌ ಅವರನ್ನು ಬೌಲಿಂಗಿಗೇ ಇಳಿಸುತ್ತಿಲ್ಲ. 5ನೇ ಬೌಲರ್‌ ಆಗಿ ಪಾಂಡ್ಯ ಅವರೇ ಅವಕಾಶ ಬಾಚಿಕೊಳ್ಳುತ್ತಿದ್ದಾರೆ. ಪಾಕಿಸ್ಥಾನ ವಿರುದ್ಧ ಭುವನೇಶ್ವರ್‌ಕುಮಾರ್‌ ಓವರ್‌ ಪೂರ್ತಿಗೊಳಿಸಲು ಬಂದ ಶಂಕರ್‌ ಮೊದಲ ಎಸೆತದಲ್ಲೇ ಇಮಾಮ್‌ ಉಲ್‌ ಹಕ್‌ ವಿಕೆಟ್‌ ಕಿತ್ತು ಮಿಂಚಿದ್ದರು. ಬಳಿಕ ನಾಯಕ ಸಫ‌ರಾಜ್‌ ಅವರಿಗೂ ಪೆವಿಲಿಯನ್‌ ಹಾದಿ ತೋರಿಸಿದ್ದರು. ಬ್ಯಾಟಿಂಗಿಗಷ್ಟೇ ಮೀಸಲಾದ ಶಂಕರ್‌ ಇದರಲ್ಲಿ ಯಶಸ್ಸು ಕಾಣುತ್ತಿಲ್ಲ. ಅವರ ಗಳಿಕೆ 15, 29 ಮತ್ತು 14 ರನ್‌ ಮಾತ್ರ

ಸಮಸ್ಯೆಗೆ ಪರಿಹಾರ ಅಗತ್ಯ
ಇಂಗ್ಲೆಂಡ್‌ ಎದುರಿನ ರವಿವಾರದ “ಬಿಗ್‌ ಮ್ಯಾಚ್‌’ ಸಮೀಪಿಸುತ್ತಿರುವಂತೆಯೇ ತಂಡದ ಆಡಳಿತ ಮಂಡಳಿ 4ನೇ ಕ್ರಮಾಂಕದ ಬ್ಯಾಟಿಂಗ್‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿಯಲ್ಲಿ ಯೋಚಿಸುತ್ತಿದೆ. ಇಲ್ಲಿ ದಿನೇಶ್‌ ಕಾರ್ತಿಕ್‌ ಮತ್ತು ರಿಷಭ್‌ ಪಂತ್‌ ರೇಸ್‌ನಲ್ಲಿದ್ದಾರೆ. ಅನುಭವದ ದೃಷ್ಟಿಯಲ್ಲಿ ಕಾರ್ತಿಕ್‌ ಓಕೆ. ಆದರೆ ಎಡಗೈ ಬ್ಯಾಟ್ಸ್‌ಮನ್‌ ಲೆಕ್ಕಾಚಾರದಲ್ಲಿ ಪಂತ್‌ ಮುಂದಿದ್ದಾರೆ. ಧವನ್‌ ಹೊರಬಿದ್ದ ಬಳಿಕ ಭಾರತ ಸ್ಪೆಷಲಿಸ್ಟ್‌ಎಡಗೈ ಬ್ಯಾಟ್ಸ್‌ಮನ್‌ ಕೊರತೆ ಅನುಭವಿಸುತ್ತಿದೆ.

ಟಾಪ್ ನ್ಯೂಸ್

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Loksabha

Udupi Chikmagalur Lok Sabha Election: ಮಹಿಳಾ ಮತದಾರರೇ ಅಧಿಕ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

3-

ಕಾರ್ಯಕರ್ತರ ಸಭೆ; ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಗೆ ಬೆಂಬಲ ನೀಡಿ ಗೆಲ್ಲಿಸುವಂತೆ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.