ಬಂಗಾರ್ ತಲೆದಂಡ ಸಾಧ್ಯತೆ?
Team Udayavani, Jul 13, 2019, 5:14 AM IST
ಹೊಸದಿಲ್ಲಿ: ಭಾರತದ ಸೆಮಿಫೈನಲ್ ಸೋಲಿನ ಬೆಂಕಿ ಯಾರನ್ನು ಬೂದಿ ಮಾಡಲಿದೆ ಎಂಬುದು ಗೊತ್ತಾಗಿಲ್ಲ. ಆದರೆ ಬ್ಯಾಟಿಂಗ್ ತರಬೇತುದಾರ ಸಂಜಯ್ ಬಂಗಾರ್ ತಲೆದಂಡವಾಗುವ ಸಾಧ್ಯತೆಯಿದೆ.
ಸೆಮಿಫೈನಲ್ನಲ್ಲಿ ತಂಡ ಬ್ಯಾಟಿಂಗ್ ಕುಸಿತ ಅನುಭವಿಸಿಯೇ ಸೋತಿದೆ. ಇದು ಬಂಗಾರ್ ವೈಫಲ್ಯ ಎಂದು ಬಿಂಬಿಸಲ್ಪಡುವ ಸಾಧ್ಯತೆಯಿದೆ. ಈ ಸುಳಿವನ್ನು ಬಿಸಿಸಿಐ ಮೂಲಗಳು ನೀಡಿವೆ. ತಂಡದ ಇಬ್ಬರು ಆಟಗಾರರು ತಮ್ಮ ಬ್ಯಾಟಿಂಗ್ ದೋಷಗಳನ್ನು ತಿದ್ದಿಕೊಳ್ಳಲು ಕೆಲ ಹಿರಿಯ ಆಟಗಾರರನ್ನು ಸಂಪರ್ಕಿಸಿದ್ದರು ಎನ್ನಲಾಗಿದೆ. ಇದೂ ಬಂಗಾರ್ ಸಾಮರ್ಥ್ಯದ ಬಗ್ಗೆ ಅನುಮಾನ ಮೂಡಿಸಿದೆ.
ಅದೂ ಇಲ್ಲದೇ ಧೋನಿಯನ್ನು ತಡವಾಗಿ ಬ್ಯಾಟಿಂಗ್ಗೆ ಕಳುಹಿಸಿದ ನಿರ್ಧಾರ ತೆಗೆದುಕೊಂಡಿದ್ದು ಬಂಗಾರ್ ಎಂದೂ ಕೆಲ ಮೂಲಗಳು ಹೇಳಿವೆ. ಧೋನಿಯನ್ನು ಯಾವ ಕ್ರಮಾಂಕದಲ್ಲಿ ಕಳುಹಿಸಬೇಕು ಎಂಬ ನಿರ್ಧಾರವನ್ನು ರವಿಶಾಸ್ತ್ರಿ ಬಂಗಾರ್ಗೆ ಬಿಟ್ಟಿದ್ದರು. ಕಡೆಗೆ ಈ ನಿರ್ಧಾರ ತಂಡದ ಸೋಲಿನಲ್ಲಿ ಮುಖ್ಯಪಾತ್ರ ವಹಿಸಿತು ಎಂದು ಚರ್ಚೆಯಾಗುತ್ತಿದೆ. ಇವೆಲ್ಲವೂ ಬಂಗಾರ್ ತಲೆದಂಡದಲ್ಲಿ ಮುಗಿಯಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ