ಉದ್ಘಾಟನಾ ಪಂದ್ಯದಲ್ಲೇ ಭಾರತದ ಆಟ: ಗಾವಸ್ಕರ್‌ ಬ್ಯಾಟಿಂಗ್‌ ಅಭ್ಯಾಸ!

ಇಂಗ್ಲೆಂಡ್‌-ಭಾರತ ನಡುವೆ ನಡೆದಿತ್ತು ವಿಶ್ವಕಪ್‌ ಮೊದಲ ಪಂದ್ಯ

Team Udayavani, May 17, 2019, 9:38 AM IST

suniul

ವಿಶ್ವಕಪ್‌ ಚರಿತ್ರೆಯ ಉದ್ಘಾಟನಾ ಪಂದ್ಯದಲ್ಲೇ ಭಾರತ ಆಡಲಿಳಿದಿತ್ತು ಎಂಬುದು ಹೆಮ್ಮೆಯ ಸಂಗತಿ. 1975ರ ಜೂನ್‌ 7ರಂದು ಆತಿಥೇಯ ಇಂಗ್ಲೆಂಡ್‌ ಮತ್ತು ಭಾರತ ತಂಡಗಳು ಐತಿಹಾಸಿಕ ಲಾರ್ಡ್ಸ್‌ ನಲ್ಲಿ ಕಣಕ್ಕಿಳಿಯುವುದರೊಂದಿಗೆ ವಿಶ್ವಕಪ್‌ಗೆ ಅಧಿಕೃತ ಚಾಲನೆ ಲಭಿಸಿತು.

ಏಕದಿನ ಮಟ್ಟಿಗೆ ಆಗ ಎಲ್ಲವೂ ಅನನುಭವಿ ತಂಡಗಳೇ. ಭಾರತ ಅದುವರೆಗೆ ಕೇವಲ 3 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿತ್ತು. ಹೀಗಾಗಿ ಸೀಮಿತ ಓವರ್‌ಗಳ ಪಂದ್ಯದ ಪರಿಭಾಷೆ, ಆಟದ ಶೈಲಿ… ಯಾವುದನ್ನೂ ಅರ್ಥೈಸಿಕೊಂಡಿರಲಿಲ್ಲ. ಭಾರತ ಆಗಿನ್ನೂ ಟೆಸ್ಟ್‌ ಗುಂಗಿನಲ್ಲೇ ಇತ್ತು. ಇದಕ್ಕೆ ಉದ್ಘಾಟನಾ ಪಂದ್ಯದ ಫ‌ಲಿತಾಂಶವೇ ಸಾಕ್ಷಿ.

202 ರನ್ನುಗಳ ಭಾರೀ ಸೋಲು ಈ ಪಂದ್ಯದಲ್ಲಿ ಭಾರತಕ್ಕೆ ಎದುರಾದದ್ದು 202 ರನ್ನುಗಳ ಸೋಲು! ಮೈಕ್‌ ಡೆನ್ನಿಸ್‌ ನೇತೃತ್ವದ ಇಂಗ್ಲೆಂಡ್‌ ಮೊದಲು ಬ್ಯಾಟಿಂಗ್‌ ನಡೆಸಿ 4 ವಿಕೆಟಿಗೆ 344 ರನ್‌ ಪೇರಿಸಿತು. ಭಾರತದ ಸ್ಕೋರ್‌ 60 ಓವರ್‌ಗಳಲ್ಲಿ 3 ವಿಕೆಟಿಗೆ 132 ರನ್‌!

174 ಎಸೆತಗಳಿಂದ 36 ರನ್‌! ಆರಂಭಕಾರ ಸುನೀಲ್‌ ಗಾವಸ್ಕರ್‌ ಪೂರ್ತಿ 60 ಓವರ್‌ಗಳ ತನಕ ಕ್ರೀಸ್‌ ಆಕ್ರಮಿಸಿ ಕೊಂಡು, 174 ಎಸೆತಗಳಿಂದ ಔಟಾಗದೆ 36 ರನ್‌ ಮಾಡುವ ಮೂಲಕ ಭಾರತದ “ಏಕದಿನ ಸಾಮರ್ಥ್ಯ’ವನ್ನು ಜಗಜ್ಜಾಹೀರು ಮಾಡಿದರು! 59 ಎಸೆತಗಳಿಂದ 37 ರನ್‌ ಮಾಡಿದ ಗುಂಡಪ್ಪ ವಿಶ್ವನಾಥ್‌ ಅವರದೇ ಭಾರತದ ಸರದಿಯ ಅತ್ಯಧಿಕ ವೈಯಕ್ತಿಕ ಗಳಿಕೆ. ಇಂಗ್ಲೆಂಡ್‌ ಪರ ಆರಂಭಕಾರ ಡೆನ್ನಿಸ್‌ ಅಮಿಸ್‌ 147 ಎಸೆತಗಳಿಂದ 137 ರನ್‌ ಬಾರಿಸಿ ವಿಶ್ವಕಪ್‌ ಇತಿಹಾಸದ ಮೊದಲ ಶತಕಕ್ಕೆ ಸಾಕ್ಷಿಯಾದರು. ವಿಶ್ವಕಪ್‌ನಲ್ಲಿ ಮೊದಲ ವಿಕೆಟ್‌ ಉರುಳಿಸಿದ ಸಾಧಕನೆಂಬ ಹೆಗ್ಗಳಿಕೆ ಮೊಹಿಂದರ್‌ ಅಮರನಾಥ್‌ ಅವರದಾಯಿತು.

ಗಾವಸ್ಕರ್‌ ಬ್ಯಾಟಿಂಗ್‌ ಅಭ್ಯಾಸ!
ಉದ್ಘಾಟನಾ ಪಂದ್ಯದಲ್ಲಿ ಸುನೀಲ್‌ ಗಾವಸ್ಕರ್‌ ಅವರ ಆಮೆಗತಿಯ ಆಟ ಕಂಡು ರೋಸಿಹೋದ ಅಭಿಮಾನಿಯೊಬ್ಬ ಅಂಗಳಕ್ಕೆ ಹಾರಿ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ಸಂಭವಿಸಿತ್ತು. ಬಳಿಕ ತಮ್ಮ ಆಟದ ಕುರಿತು ಪ್ರತಿಕ್ರಿಯಿಸಿದ ಗಾವಸ್ಕರ್‌, “ಇಂಗ್ಲೆಂಡಿನ ಆ ಬೃಹತ್‌ ಮೊತ್ತವನ್ನು ಹಿಂದಿಕ್ಕಲು ನಮ್ಮಿಂದ ಹೇಗೂ ಆಗುತ್ತಿರಲಿಲ್ಲ. ಹೀಗಾಗಿ ನಾನು ಬ್ಯಾಟಿಂಗ್‌ ಪ್ರ್ಯಾಕ್ಟೀಸ್‌ ನಡೆಸಿದೆ’ ಎಂದಿದ್ದರು!

ಭಾರತ ತಂಡ
ಎಸ್‌. ವೆಂಕಟರಾಘವನ್‌ (ನಾಯಕ), ಸುನೀಲ್‌ ಗಾವಸ್ಕರ್‌, ಅಂಶುಮನ್‌ ಗಾಯಕ್ವಾಡ್‌,  ಏಕನಾಥ್‌ ಸೋಲ್ಕರ್‌, ಜಿ.ಆರ್‌. ವಿಶ್ವನಾಥ್‌, ಬೃಜೇಶ್‌ ಪಟೇಲ್‌, ಮೊಹಿಂದರ್‌ ಅಮರನಾಥ್‌,  ಫ‌ರೂಖ್‌ ಇಂಜಿನಿಯರ್‌, ಅಬಿದ್‌ ಅಲಿ, ಮದನ್‌ಲಾಲ್‌, ಕರ್ಸನ್‌ ಘಾವ್ರಿ, ಬಿಶನ್‌ ಸಿಂಗ್‌ ಬೇಡಿ.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.