ಅತ್ಯಂತ ಸವಾಲಿನ ವಿಶ್ವಕಪ್‌: ವಿರಾಟ್‌ ಕೊಹ್ಲಿ

ಮುಂಬಯಿಯಲ್ಲಿ ಟೀಮ್‌ ಇಂಡಿಯಾ ನಾಯಕನ ಪತ್ರಿಕಾಗೋಷ್ಠಿ "ರೌಂಡ್‌ ರಾಬಿನ್‌ ಲೀಗ್‌ ಕಠಿನ'

Team Udayavani, May 22, 2019, 10:03 AM IST

kohli

ಮುಂಬಯಿ: ರೌಂಡ್‌ ರಾಬಿನ್‌ ಲೀಗ್‌ ಮಾದರಿಯಿಂದಾಗಿ ಮುಂಬರುವ ವಿಶ್ವಕಪ್‌ ಪಂದ್ಯಾವಳಿ ಅತ್ಯಂತ ಸವಾಲಿನದ್ದಾಗಲಿದೆ ಎಂದು ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ. ಮಂಗಳ ವಾರ ಮುಂಬಯಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು. ಕೋಚ್‌ ರವಿಶಾಸ್ತ್ರೀ ಕೂಡ ಉಪಸ್ಥಿತರಿದ್ದರು.
ಭಾರತಕ್ಕೆ ಅಂಡರ್‌-19 ವಿಶ್ವಕಪ್‌ ತಂದಿತ್ತ ಕಪ್ತಾನನೆಂಬ ಹೆಗ್ಗಳಿಕೆಯ ವಿರಾಟ್‌ ಕೊಹ್ಲಿ ಹಿರಿಯರ ವಿಶ್ವಕಪ್‌ನಲ್ಲಿ ಇದೇ ಮೊದಲ ಸಲ ತಂಡವನ್ನು ಮುನ್ನಡೆಸುತ್ತಿದ್ದಾರೆ. ಹಿಂದಿನ 3 ವಿಶ್ವಕಪ್‌ಗ್ಳಲ್ಲಿ ಅವರು ಭಾರತ ತಂಡದ ಸದಸ್ಯನಾಗಿದ್ದರು.

ಎಲ್ಲರ ವಿರುದ್ಧ ಆಡುವ ಸವಾಲು
“ವೈಯಕ್ತಿಕವಾಗಿ ಹೇಳಬೇಕೆಂದರೆ ಇದು ಅತ್ಯಂತ ಸವಾಲಿನ ವಿಶ್ವಕಪ್‌. ಇಲ್ಲಿ ಎಲ್ಲರೂ ಎಲ್ಲರ ವಿರುದ್ಧ ಆಡಬೇಕಿದೆ. ಇಲ್ಲಿ ಯಾವುದೇ ತಂಡ ಯಾರನ್ನೂ ಬೇಕಾದರೂ ಸೋಲಿಸಬಹುದು. ಇದನ್ನು ಗಮನದಲ್ಲಿರಿಸಿಕೊಳ್ಳಬೇಕು. ಅಫ್ಘಾನಿಸ್ಥಾನ ತಂಡವನ್ನೇ ಗಮನಿಸಿ, ಈ 4 ವರ್ಷಗಳಲ್ಲಿ ಅತ್ಯಂತ ಬಲಿಷ್ಠವಾಗಿ ಗೋಚರಿಸಿದೆ. ಹಾಗೆಯೇ ಉಳಿದ ತಂಡಗಳೂ ಅತ್ಯಂತ ಪ್ರಬಲವಾಗಿವೆ. ಇಲ್ಲಿ ಪ್ರತೀ ಪಂದ್ಯದಲ್ಲೂ ನಮ್ಮ ಪೂರ್ಣ ಸಾಮರ್ಥ್ಯವನ್ನು ಹೊರಗೆಡಹುವುದು ಅನಿವಾರ್ಯ’ ಎಂದು ಕೊಹ್ಲಿ ಹೇಳಿದರು.

ವಿರಮಿಸಲು ಅವಕಾಶವಿಲ್ಲ
“ಇಲ್ಲಿ ವಿರಮಿಸುವುದಕ್ಕೆ ಅವಕಾಶವೇ ಇಲ್ಲ. ಉಸಿರಾಡುವುದಕ್ಕೂ ಸಮಯವಿಲ್ಲ. ಆರಂಭದಿಂದಲೇ ಒತ್ತಡ ಎದುರಾಗುತ್ತದೆ. ಇದನ್ನು ಅಂದಂದೇ ನಿಭಾಯಿಸಿ ಮುಂದಡಿ ಇಡಬೇಕು. ನಾಳೆ ನೋಡೋಣ, ಮುಂದಿನ ವಾರ ನೋಡೋಣ ಎಂದರೆ ಆಗದು. ಫ‌ುಟ್‌ಬಾಲ್‌ ಲೀಗ್‌ಗಾಗಿ ಆಟಗಾರರು 3-4 ತಿಂಗಳ ಕಾಲ ತಮ್ಮ ತೀವ್ರತೆಯನ್ನು ಕಾಯ್ದುಕೊಂಡಿರುತ್ತಾರೆ. ಇಂಥದೇ ಸ್ಥಿತಿ ಇಲ್ಲಿ ಎದುರಾಗಿದೆ. ಆದ್ದರಿಂದಲೇ ಇದನ್ನು ವಿಶ್ವಕಪ್‌ ಎಂದು ಕರೆಯುವುದು…’ ಎಂಬುದಾಗಿ ಕೊಹ್ಲಿ ಹೇಳಿದರು.

ಬೌಲಿಂಗ್‌ ವಿಭಾಗ ಬಲಾಡ್ಯ
“ಭಾರತದ ಬೌಲಿಂಗ್‌ ವಿಭಾಗ ಬಲಿಷ್ಠವಾಗಿದೆ. ಐಪಿಎಲ್‌ನಲ್ಲಿ ಆಡಿದರೂ ಬಳಲಿಕೆ ಕಂಡುಬಂದಿಲ್ಲ. ಎಲ್ಲರೂ ಫ್ರೆಶ್‌ ಆಗಿದ್ದಾರೆ. 50 ಓವರ್‌ ಪಂದ್ಯಕ್ಕೆ ಮಾನಸಿಕವಾಗಿ ಸಿದ್ಧರಾಗಿದ್ದಾರೆ’ ಎಂದು ಕೊಹ್ಲಿ ಹೇಳಿದರು. “ಕುಲದೀಪ್‌ ಮತ್ತು ಚಾಹಲ್‌ ನಮ್ಮ ಸ್ಪಿನ್‌ ವಿಭಾಗದ ಪಿಲ್ಲರ್. ಜತೆಗೆ ಬುಮ್ರಾ, ಶಮಿ, ಭುವನೇಶ್ವರ್‌ ರೂಪದಲ್ಲಿ ತ್ರಿವಳಿ ವೇಗಿಗಳನ್ನು ಹೊಂದಿದ್ದೇವೆ. ಇದು ವಿಶ್ವಕಪ್‌ನಲ್ಲೇ ಭಾರತದ ಅತ್ಯಂತ ಬಲಿಷ್ಠ ವೇಗದ ಬೌಲಿಂಗ್‌ ವಿಭಾಗವಾಗಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಹೈ ಸ್ಕೋರಿಂಗ್‌ ಮ್ಯಾಚ್‌
ಇತ್ತೀಚಿನ ಇಂಗ್ಲೆಂಡ್‌-ಪಾಕಿಸ್ಥಾನ ನಡುವಿನ ಏಕದಿನ ಸರಣಿಯನ್ನು ಗಮನಿಸಿ ಹೇಳಿದ ಕೊಹ್ಲಿ, “ಪಿಚ್‌ ಅತ್ಯುತ್ತಮವಾಗಿದೆ. ಬೇಸಗೆಯ ವಾತಾವರಣ ಹಿತಕರವಾಗಿದೆ. ಪರಿಸ್ಥಿತಿ ಕೂಡ ಕ್ರಿಕೆಟಿಗೆ ಅನುಕೂಲಕರವಾಗಿದೆ. ದೊಡ್ಡ ಮೊತ್ತದ ಪಂದ್ಯಗಳನ್ನು ನಿರೀಕ್ಷಿಸಲಾಗಿದೆ. ಆದರೆ ದ್ವಿಪಕ್ಷೀಯ ಸರಣಿಯೊಂದನ್ನು ವಿಶ್ವಕಪ್‌ಗೆ ಹೋಲಿಸಬಾರದು. ಇವೆರಡಕ್ಕೂ ಭಾರೀ ಅಂತರವಿದೆ. ನಾವಿಲ್ಲಿ 260-270ರ ಮೊತ್ತದ ಪಂದ್ಯವನ್ನು ನಿರೀಕ್ಷಿಸಬಹುದು. ಇಲ್ಲಿ ವಿಪರೀತ ಒತ್ತಡವಿರುತ್ತದೆ. ಹೀಗಾಗಿ ಈ ಮೊತ್ತವನ್ನು ಉಳಿಸಿಕೊಳ್ಳಬಹುದಾದ ಸಾಧ್ಯತೆ ಹೆಚ್ಚಿದೆ’ ಎಂದರು.

ಧೋನಿ ಪಾತ್ರ ನಿರ್ಣಾಯಕ
ಭಾರತಕ್ಕೆ ವಿಶ್ವಕಪ್‌ ಟ್ರೋಫಿಯನ್ನು ಮರಳಿ ತಂದುಕೊಡುವಲ್ಲಿ ಮಹೇಂದ್ರ ಸಿಂಗ್‌ ಧೋನಿ ಪಾತ್ರ ಅತ್ಯಂತ ಮಹತ್ವದ್ದಾಗಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಕೋಚ್‌ ರವಿಶಾಸ್ತ್ರೀ ಅಭಿಪ್ರಾಪಟ್ಟರು.
“ಧೋನಿ ತಂಡದಲ್ಲಿದ್ದರೆ ಅವರ ಸಂವಹನ, ಸಮಾಲೋಚನೆಗಳೆಲ್ಲ ಅದ್ಭುತವಾಗಿರುತ್ತವೆ. ಓರ್ವ ಕೀಪರ್‌ ಆಗಿ ಅವರು ಕಳೆದ ಅನೇಕ ವರ್ಷಗಳಿಂದ ತಮ್ಮ ಛಾಪು ಮೂಡಿಸಿದ್ದಾರೆ. ಅವರ ಕ್ಯಾಚ್‌, ಸ್ಟಂಪಿಂಗ್‌, ರನೌಟ್‌ಗಳೆಲ್ಲ ಅಮೋಘ. ಇಂಥ ಕ್ಷಣಗಳೇ ಪಂದ್ಯದ ತಿರುವಿನಲ್ಲಿ ಮಹತ್ವದ ಪಾತ್ರ ವಹಿಸುವುದು’ ಎಂದು ಶಾಸ್ತ್ರೀ ಹೇಳಿದರು. ಇದು ಧೋನಿ ಆಡುತ್ತಿರುವ 4ನೇ ವಿಶ್ವಕಪ್‌. 2011ರಲ್ಲಿ ಧೋನಿ ಸಾರಥ್ಯದಲ್ಲೇ ಭಾರತ ತನ್ನ 2ನೇ ವಿಶ್ವಕಪ್‌ ಗೆದ್ದು ಇತಿಹಾಸ ನಿರ್ಮಿಸಿದ್ದನ್ನು ಮರೆಯುವಂತಿಲ್ಲ.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.