ಜಮೀನು ಕೊಟ್ಟ ರೈತನಿಗೆ ರೈಲನ್ನೇ ನೀಡಿದ ಕೋರ್ಟ್
Team Udayavani, Mar 19, 2017, 6:03 AM IST
ಉತ್ತರ ವಿಭಾಗೀಯ ರೈಲ್ವೆ ತನ್ನ ಜಮೀನನ್ನು ವಶಪಡಿಸಿಕೊಂಡು ಸೂಕ್ತ ಪರಿಹಾರ ನೀಡಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿದ್ದ ಪಂಜಾಬ್ನ ಲೂಧಿಯಾನದ ರೈತನಿಗೆ ಕೋರ್ಟು ರೈಲನ್ನೇ ನೀಡಿದೆ! ಆಶ್ವರ್ಯ ಎನಿಸಿದರೂ ನೀವಿದನ್ನು ನಂಬಲೇಬೇಕು. ಈ ಅಮೋಘ ತೀರ್ಪು ನೀಡಿರುವುದು ಇಲ್ಲಿಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಧೀಶರು. ಕೋರ್ಟ್ ಆದೇಶದಂತೆ ರೈಲ್ವೆ ಇಲಾಖೆ, ರೈತ ಸಂಪುರಣ್ ಸಿಂಗ್ಗೆ 2015ರಲ್ಲಿ 1.05 ಕೋಟಿ ರೂ. ಪರಿಹಾರ ನೀಡಬೇಕಿತ್ತು.
ಆದರೆ ಈವರೆಗೂ ನೀಡಿಲ್ಲ. ಇದನ್ನು ಪ್ರಶ್ನಿಸಿ ಅವರು ಕೋರ್ಟ್ ಮೆಟ್ಟಿಲೇರಿದ್ದರು. ತೀರ್ಪು ನೀಡಿರುವ ಕೋರ್ಟು, ದೆಹಲಿ ಮತ್ತು ಅಮೃತಸರದ ನಡುವೆ ಓಡಾಡುವ ರೈಲು ಸಂಖ್ಯೆ 12030ಯನ್ನು ರೈತನಿಗೇ ನೀಡುವಂತೆ ಆದೇಶಿಸಿದೆ. ದೂರುದಾರ ರೈತ ಸಂಪುರಣ್ ಮತ್ತು ಅವರ ಪರ ವಕೀಲರು ಕೋರ್ಟ್ ಆದೇಶವನ್ನು ರೈಲಿನ ಚಾಲಕ ಮತ್ತು ವಿಭಾಗೀಯ ಇಂಜಿನಿಯರ್ಗೆ ನೀಡಿ ರೈಲನ್ನು ವಶಪಡಿಸಿಕೊಂಡರು. 5 ನಿಮಿಷಗಳ ಬಳಿಕ ರೈಲು ಬಿಟ್ಟುಕೊಟ್ಟರು.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ