ಅಂದು ಅವನೇ ನನ್ನ ಬಸ್‌ ಚಾರ್ಜ್‌ ಕೊಟ್ಟಿದ್ದ 


Team Udayavani, Mar 21, 2017, 3:45 AM IST

sneha-ullal-55.jpg

ಅಂದು ಎಂದಿನಂತೆ ಕಾಲೇಜು ಮುಗಿಸಿಕೊಂಡು ಬಸ್‌ ನಿಲ್ದಾಣಕ್ಕೆ ಬಂದೆ. ನಮ್ಮ ಊರಿನ ಬಸ್‌ ಹತ್ತಿ ಕುಳಿತುಕೊಂಡೆ. ಅವನು ಬಸ್‌ ಹತ್ತಿ ನನ್ನ ಹಿಂದಿನ ಸೀಟಿನಲ್ಲೆ ಕುಳಿತುಕೊಂಡ. ಅವನೆಲ್ಲಿ ನನ್ನನ್ನು ಮಾತನಾಡಿಸುತ್ತಾನೋ ಅಂತ ನನ್ನ ಮನದಲ್ಲಿ ಭಯ ಶುರುವಾಗಿತ್ತು. ಕಂಡಕ್ಟರ್‌ ಹಿಂದಿನ ಸೀಟಿನಿಂದ ಟಿಕೆಟ್‌ ಕೇಳುತ್ತಾ ಬಂದುದರಿಂದ, ಅವನು ನನ್ನ ಟಿಕೆಟ್‌ ದುಡ್ಡನ್ನು ಕೊಡಲು ಮುಂದಾದ. ಆದರೆ ನಾನು “ಬೇಡ ನಾನೇ ಕೊಡುತ್ತೇನೆ’ ಎಂದರೂ ಅವನೇ ಐದು ರುಪಾಯಿ ಬಸ್‌ ಚಾರ್ಜ್‌ ಕೊಟ್ಟ. ನಾನೂ ಹೆಚ್ಚು ಒತ್ತಾಯ ಮಾಡದೆ ಯಾರೇನು ತಿಳಿದುಕೊಳ್ಳುತ್ತಾರೋ ಎಂದು ಸುಮ್ಮನಾದೆ. ಕಂಡಕ್ಟರ್‌ ನಮ್ಮತ್ತ ನೋಡಿ ನಗುತ್ತಾ ಟಿಕೆಟ್‌ ಕೊಟ್ಟು ಹೋದ. 

ಮನದೊಳಗೆ ಆತಂಕ ಶುರುವಾಯ್ತು. ಅವನು ಜೇಬಿನಿಂದ ಚಿಕ್ಕ ಚೀಟಿಯೊಂದನ್ನು ನನಗೆ ಕೊಟ್ಟ. ಚೀಟಿಯನ್ನು ಬಿಡಿಸಿ ಓದಿದೆ. ಅದರಲ್ಲಿ “ನಾನು ನಿನ್ನ ಜೊತೆ ಮಾತನಾಡಬೇಕು, ಯಸ್‌ ಆರ್‌ ನೋ?’ ಅಂತ ಬರೆದಿತ್ತು. ನನಗೋ ಹೆದರಿಕೆ. ಅವನು ಚೀಟಿ ಕೊಟ್ಟಿದ್ದನ್ನು ಬಸ್ಸಿನಲ್ಲಿ ಪರಿಚಿತರು ಯಾರಾದರೂ ನೋಡಿದರೇ ಎಂದು. ಏಕೆಂದರೆ ಬಸ್‌ ಹತ್ತಿಕೊಂಡಾಗ ನನ್ನ ಪರಿಚಯದವರೊಬ್ಬರು ಬಸ್‌ನಲ್ಲಿದ್ದುದನ್ನು ನಾನು ನೋಡಿದ್ದೆ.

ಇದರ ಮಧ್ಯೆ ಅವನ ಚೀಟಿಯಲ್ಲಿದ್ದ ಪ್ರಶ್ನೆಗೆ ಹೇಗೆ ಉತ್ತರಿಸಬೇಕೆಂಬ ಕಾತುರವೂ ಇತ್ತು ಎನ್ನಿ. ಅವನ ಜೊತೆ ಮಾತನಾಡಬೇಕೆಂಬ ಬಯಕೆ ನನಗಿತ್ತು. ಆದರೆ ಅದನ್ನು ನೇರವಾಗಿ ಹೇಳ್ಳೋಕೆ ಧೈರ್ಯ ಇರಲಿಲ್ಲ. ಉತ್ತರ ಬರೆಯೋಣ ಅಂದರೆ ನನ್ನ ಹತ್ತಿರ ಪೆನ್‌ ಇರಲಿಲ್ಲ. ಪೆನ್ಸಿಲ… ಇತ್ತಾದರೂ ಅದರ ಮೊನೆ ಮುರಿದಿತ್ತು. ಯಾವ ರೀತಿ ಉತ್ತರಿಸಬೇಕೆಂದು ತಿಳಿಯದೆ ಗೊಂದಲದಲ್ಲಿರುವಾಗಲೇ ನನ್ನ ಸ್ಟಾಪ್‌ ಬಂದಿತು. ಅವನ ಕಡೆ ಒಮ್ಮೆಯೂ ತಿರುಗಿ ನೋಡದೆ ನಾನು ಬಸ್ಸಿನಿಂದ ಇಳಿದು ಹೋದೆ. ಮರುದಿನದಿಂದ ಅವನು ನನ್ನ ಕಣ್ಣಿಗೆ ಕಾಣದಂತೆ ಓಡಾಡುತ್ತಿದ್ದ.  

ಮತ್ತೂಂದು ದಿನ ಬಂದು ಒಂದು ದಪ್ಪದ ಪುಸ್ತಕ ಕೊಟ್ಟ. ನಾನು ತೆಗೆದುಕೊಂಡೆ. ಮನೆಗೆ ಹೋದ ಮೇಲೆ ಪುಸ್ತಕ ತೆರೆದು ನೋಡಿದೆ. ಅದು, ಇಂಗ್ಲಿಶ್‌ ರ್ಯಾಪಿಡೆಕ್ಸ್‌ ಪುಸ್ತಕ. ಚೀಟಿಯಲ್ಲಿ ಅವನು ಬರೆದಿದ್ದು ನನಗೆ ತಿಳಿಯಲಿಲ್ಲವೆಂದು ಇಂಗ್ಲೀಷ್‌ ಕಲಿತುಕೋ ಎಂದು ಆ ಗ್ರಾಮರ್‌ ಪುಸ್ತಕ ಕೊಟ್ಟಿದ್ದ ಅವನು. ನಾನು ಚೂರು ಓದಿ ಮತ್ತೆ ಅವನಿಗೆ ಆ ಪುಸ್ತಕವನ್ನು ವಾಪಸ್‌ ಕೊಟ್ಟೆ. ನಾನೇ ನೇರವಾಗಿ ಕೊಡದೇ ಬೇರೆಯವರಿಂದ ತಲುಪಿಸಿದ್ದೆ. ಆ ಪುಸ್ತಕದ ಹಾಳೆಯ ಮಧ್ಯದಲ್ಲಿ ಅವನು ಅಂದು ಕೊಟ್ಟಿದ್ದ ಬಸ್‌ ಚಾರ್ಜ್‌ ಐದು ರುಪಾಯಿಯನ್ನೂ ಇಟ್ಟು ಕೊಟ್ಟಿದ್ದೆ. ಇದರಿಂದ ಅವನಿಗೆ ಬೇಜಾರಾಯೊ¤à ಏನೋ. ಅಂದಿನಿಂದ ಅವನೂ ಮಾತನಾಡಿಸಲಿಲ್ಲ. ನಾನೂ ಮಾತನಾಡಿಸುವ ಗೋಜಿಗೆ ಹೋಗಲಿಲ್ಲ. 

– ಚೈತ್ರಾ ವಿ. ಮಾಲವಿ  

ಟಾಪ್ ನ್ಯೂಸ್

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.