ಅರ್ಥವಾಗದ ಭಾಷೆ ನೀನು


Team Udayavani, Mar 21, 2017, 3:45 AM IST

PicsArt_1470330124061.jpg

ನಿನ್ನ ಪ್ರೀತಿಯಿಂದ ಸಿಕ್ಕ ಸಂತೋಷದ ಮುಂದೆ ನಿನ್ನ ವಿದಾಯದ ನೋವು ಏನೇನೂ ಅಲ್ಲ! ಮೊದಲ ಪ್ರೀತಿಯೇ ನನ್ನನ್ನು ಸೋಲಿಸುತ್ತದೆ ಎಂದು ನಾನು ಎಣಿಸಿರಲಿಲ್ಲ. ಅದು ನೀಡುವ ಎಲ್ಲಾ ಅನುಭೂತಿ, ವರ್ಣನೆಗೆ ಸಿಗದ ಸಂಭ್ರಮ ಎಲ್ಲವನ್ನು ಬಾಚಿ ತಬ್ಬಿಕೊಂಡಿದ್ದೇನೆ. 

ಇದಕ್ಕೆ ಒಲವಿನ ಓಲೆ ಅಂತೀಯೋ, ವಿರಹ ವೇದನೆ ಅಂತೀಯೋ ನಿನಗೆ ಬಿಟ್ಟದ್ದು. ಚೆಲುವಿಗೇ ಛಂದಸ್ಸು, ಸೌಂದರ್ಯಕ್ಕೆ ತೇಜಸ್ಸಿನಂತಿರುವ ನಿನ್ನ ಬಗ್ಗೆ ಅಕ್ಷರ ಜೋಡಿಸಬೇಕಾದರೆ ಭಾಷೆಯನ್ನು ಕತ್ತೆಯ ಥರ ದುಡಿಸಿಕೊಳ್ಳುವವನು ಕೂಡ ಒಂದರೆಕ್ಷಣ ನಿರುದ್ಯೋಗಿಯಾಗಿ ಬಿಡುತ್ತಾನೆ. ಇನ್ನು ನಾನೆಷ್ಟರವನು?

ಅದು ಹುಚ್ಚು ಕೋಡಿ ಮನಸ್ಸಿನ ವಯಸ್ಸು. ಪ್ರೀತಿಸಿದ ಜೀವ ಕೈ ಬಿಟ್ಟು ಹೋದಾಗ ಈ ಭೂಮಿ ಮೇಲೆ ನನಗೆ ಇವಳು ಬಿಟ್ರೆ ಬೇರೆ ಯಾರೂ ಇಲ್ಲ ಅಂತ ಅನಿಸಿದ್ದು ನೆನೆದ ತಲೆಯನ್ನು ಅವ್ವ ಒರೆಸಿದಾಗಲೇನೇ. ನೀ ಕಂಡಾಗ, ಒಂದೇ ಸಮನೆ ಬಡಿದುಕೊಂಡು ಕಾರಣ ಹೇಳದೆ ಕಂಗೆಡಿಸುವ ನನ್ನ ಹೃದಯ, ಪ್ರೀತಿ ಎಂಬ ವಿಐಪಿಯನ್ನು ಪರಿಚಯ ಮಾಡಿಕೊಳ್ಳಬೇಕಾದರೆ “ನನ್ನ ಒಪ್ಪಿಗೆ ಪಡೆಯೋ ಮೂರ್ಖ’ ಎನ್ನುವ ಕಣ್ಣುಗಳು. ಇದಕ್ಕೆಲ್ಲ ಏನು ಹೇಳುವುದೊ…? ಇಂದಿಗೂ ನನ್ನಲ್ಲಿ ಉತ್ತರವಿಲ್ಲ. ನಿನ್ನ ನೋಟಕ್ಕೆ ಹುಚ್ಚನಂತೆ ಕಾದಿದ್ದೆ. ಆದರೆ ಒಂದು ಮುಸ್ಸಂಜೆ ನೀ ನನ್ನ ನೋಡಿ ಅರ್ಥವಿಲ್ಲದ ನಗೆ ನಕ್ಕಾಗ ನನ್ನೊಳಗಿನ ಪ್ರೇಮಿ ಸಂಭ್ರಮ ಪಟ್ಟ ಪರಿಯಿದೆಯಲ್ಲ, ಅದು ಎಲ್ಲಾ ಹುಡುಗರಿಗೂ ಜೀವನದಲ್ಲಿ ಒಮ್ಮೆ ಮಾತ್ರ ದಕ್ಕುವ ಸುಖ. 

ಒಂದು ಗುಲಾಬಿ ಹೂ ಕೂಡ ಕೊಡದೇ ಕಣ್ಣಿನಿಂದಲೇ ನಿನ್ನ ಪ್ರೀತಿಸುತ್ತಾ ಒಂದಿಡೀ ಮಳೆಗಾಲವನ್ನು ಕಳೆದ ಪರಿ ನೆನೆದು ನನ್ನೆದೆ ಆ ಎಲ್ಲಾ ಪ್ರೇಮಿಗಳಿಗಿಂತ ಖುಷಿಪಡುತಿತ್ತು. ನೂರು ಜನ್ಮಕಾಗುವಷ್ಟು ಧನ್ಯತೆ, ಉಲ್ಲಾಸ, ಜೀವನಪ್ರೀತಿಯನ್ನು ನನಗೆ ಕೊಟ್ಟಿದೆ ನನ್ನ ಪ್ರೇಮ. ಇದಕ್ಕೆಲ್ಲ ಕಾರಣ ನೀನು. ನಾನು ನಿನ್ನ ಪ್ರೀತಿಯ ಅಮಲಲ್ಲಿ ತೇಲಾಡುತ್ತಿದ್ದಾಗಲೇ ನೀನು ಇನ್ನೊಬ್ಬನನ್ನು ವ್ಯಾಮೋಹಿಸುತ್ತಿದ್ದೀಯ ಅಂತ ಗೊತ್ತಾದಾಗ ವಿಚಲಿತವಾಗಿದ್ದೆ. ಆದರೆ ನನಗೆ ಗೊತ್ತಾಗಿತ್ತು ನನ್ನ ಹೃದಯ ನಿನ್ನ ಭಾಷೆಯನ್ನು ತಪ್ಪಾಗಿ ಅರ್ಥೈಸಿತ್ತೆಂದು. ಇವಾಗಲಾದರೂ ಅನುವಾದ ಮಾಡುತ್ತಿಯಾ? ನವಜಾತ ಶಿಶು ನಾನು…

ನಿನ್ನ ಪ್ರೀತಿಯಿಂದ ಸಿಕ್ಕ ಸಂತೋಷದ ಮುಂದೆ ನಿನ್ನ ವಿದಾಯದ ನೋವು ಏನೇನೂ ಅಲ್ಲ! ಮೊದಲ ಪ್ರೀತಿಯೇ ನನ್ನನ್ನು ಸೋಲಿಸುತ್ತದೆ ಎಂದು ನಾನು ಎಣಿಸಿರಲಿಲ್ಲ. ಅದು ನೀಡುವ ಎಲ್ಲಾ ಅನುಭೂತಿ, ವರ್ಣನೆಗೆ ಸಿಗದ ಸಂಭ್ರಮ ಎಲ್ಲವನ್ನು ಬಾಚಿ ತಬ್ಬಿಕೊಂಡಿದ್ದೇನೆ. ಅದರ ನೆನಪುಗಳೇ ಸಾಕು…

– ಅಭಿಷೇಕ ಪಾಟೀಲ್‌, ಧಾರವಾಡ

ಟಾಪ್ ನ್ಯೂಸ್

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.