150 ವರ್ಷದ ಬಳಿಕ ತೆರೆಯಿತು ಮಠದ ಕೋಣೆ!


Team Udayavani, Mar 21, 2017, 11:31 AM IST

mutt.jpg

ಆಳಂದ: ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಲಾಡಮುಗಳಿಯಲ್ಲಿರುವ ಪುರಾತನ ವಿರೂಧಿ ಪಾಕ್ಷೇಶ್ವರ ಮಠದ ಕೋಣೆಯೊಂದರ ಮುಚ್ಚಿದ ಬಾಗಿಲನ್ನು 150 ವರ್ಷಗಳ ಬಳಿಕ ತೆರೆಯಲಾಗಿದ್ದು, ಈ ಸಂದರ್ಭದಲ್ಲಿ ವಿಶೇಷ ಪೂಜಾ ಸಾಮಗ್ರಿಗಳು ಪತ್ತೆಯಾಗಿವೆ. ಬಾಗಿಲು ತೆಗೆಯಲು ಹೋಗಿ ಹಿಂದಿನ ಶ್ರೀ ವಿರೂಪಾಕ್ಷ ಮಹಾಸ್ವಾಮೀಜಿಗಳಿಗೆ ತೊಂದರೆಯಾಗಿ 7 ದಿನಗಳ ಬಳಿಕ ಲಿಂಗೈಕ್ಯರಾಗಿದ್ದಾರೆ ಎಂದು ಭಾವಿಸಿ ಈವರೆಗೂ ಕೋಣೆ ಬಾಗಿಲು ತೆರೆದಿರಲಿಲ್ಲ.

ಉತ್ತರಾಧಿಕಾರಿ ಶ್ರೀ ಬಸವಲಿಂಗ ದೇವರು ನಂಬಿಕೆ ಮತ್ತು ಶ್ರದ್ಧೆಯೊಂದಿಗೆ ಗದ್ದುಗೆಗೆ ಎರಡು ಹೊತ್ತು ಪೂಜೆ ಮಾಡುತ್ತ,
ಭಕ್ತರ ಒಪ್ಪಿಗೆ ಮೇರೆಗೆ ಎಂಟು ತಿಂಗಳಿಂದ ಮಠದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಮಠದ ಗದ್ದುಗೆ ಎದುರಿನಲ್ಲಿ ಮಲಗಿದ್ದಾಗ ಕನಸು ಬಿತ್ತು ಎನ್ನಲಾಗಿದೆ. “ಮಠದಲ್ಲಿ ಕತ್ತಲು ತುಂಬಿಕೊಂಡಿದೆ. ಅಭಿವೃದ್ಧಿಗೆ ಗಮನ ಹರಿಸಬೇಕು’ ಎಂದು ಕನಸಿನಲ್ಲಿ ಪ್ರೇರಣೆ ಆಗಿರುವುದನ್ನು ಉತ್ತರಾಧಿಕಾರಿ ಶ್ರೀ ಬಸವಲಿಂಗ ದೇವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಬಹಿರಂಗ ಮಾಡಿದರು. ಆಗ ಭಕ್ತರು, “ಬೇಡ, ನೂರಾರು ವರ್ಷಗಳಿಂದ ಹಿಂದಿನ ಸ್ವಾಮಿಗಳಾÂರೂ
ಬಾಗಿಲು ತೆಗೆಸಿಲ್ಲ. ಈಗ ತೆರೆಯುವುದು ಬೇಡ. ಏಳು ಹೆಡೆ ಸರ್ಪವಿದೆ, ಶನಿಕಾಟ ಹತ್ತುತ್ತದೆ’ ಎಂಬ ಆತಂಕ ವ್ಯಕ್ತಪಡಿಸಿದ್ದರು.

ಭಕ್ತರಿಗೆ ತಿಳಿಹೇಳಿದ ಸ್ವಾಮೀಜಿ,
“ಮೂಢನಂಬಿಕೆ ಬೇಡ. ಮಠದ ಕೋಣೆ ಬಳಕೆಗೆ ಬಾರದಂತೆ ಸಮ್ಮನೆ ಬಿಟ್ಟರೆ ಏನು ಪ್ರಯೋಜನ? ತೆಗೆದು ನೋಡೋಣ. ಏನಾದರೂ ಆಗುವುದಿದ್ದರೆ ನನಗೇ ಆಗಲಿ. ಊರವರಿಗೆ ಏನೂ ಆಗುವುದಿಲ್ಲ. ಮೂಢನಂಬಿಕೆ, ಕಂದಾಚಾರ ತೊಡೆದು ಹಾಕಬೇಕು’ ಎಂದು ಮನವೊಲಿಸಿದಾಗ ಭಕ್ತರು ಸಮ್ಮತಿ ಸೂಚಿಸಿದರು. ಬಳಿಕ ಮುಚ್ಚಿದ ಬಾಗಿಲು ತೆರೆದು ಸ್ವತ್ಛ ಮಾಡುವಾಗ ಹಲವು ಮಹತ್ವದ ಸಾಮಗ್ರಿಗಳು ದೊರೆತವು ಎಂದು ಬವಸಲಿಂಗ ದೇವರು ಮಾಹಿತಿ ನೀಡಿದರು.

ಹಲವು ವಸ್ತುಗಳು ಪತ್ತೆ: ಕೋಣೆ ಬಾಗಿಲು ತೆಗೆದು ಉತVನನ ಮಾಡುತ್ತ ಮುಂದುವರಿದಾಗ ಮೊದಲಿಗೆ ಎತ್ತರದ ಕಂಚಿನ ತೇರು, ಗಂಟೆ, ಜಾಗಟೆಗಳು, ಮಂಗಳಾರತಿ ಸಲಕರಣೆಗಳು, ಧೂಪ ಹಚ್ಚುವ ಚಮಚ, ನಾಗದೇವತೆ ಮುಖದ
ಹಿತ್ತಾಳೆ ನಾಗಬಿಂದಿಗೆ, ಹಿತ್ತಾಳೆ ಪಾದುಕೆ, ತ್ರಿಶೂಲ, ಖಡ್ಗ, ದೀಪ, ಗಂಟೆ, ಬೆಳ್ಳೆ, ಕಮಂಡಲ, ತಂಬಿಗೆ, ತಟ್ಟೆ ಹಾಗೂ ನಗಾರಿ, ಆವುಗೆ, ಹೂಕುಂಡ, ದೀಪ ಹಚ್ಚುವ ಪಣತಿ, ರುದ್ರಾಕ್ಷಿ ರುದ್ರದೇವರ ಮೂರ್ತಿ, ತಾಮದ್ರ ನಾಣ್ಯಗಳು ದೊರೆತು
ಅಚ್ಚರಿ ಮೂಡಿಸಿವೆ. 12ನೇ ಶತಮಾನದಲ್ಲಿ ವಚನ ಸಾಹಿತ್ಯ ರಚಿಸಲು ಬಳಸಲಾಗುತ್ತಿದ್ದ ತಾಡೋಲೆ ಕಟ್ಟು ಮತ್ತು ನಿಜಾಮರ ಕಾಲದ ಎಂಟು ನಾಣ್ಯಗಳೂ ದೊರೆತಿವೆ.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.