“ಮೃತ’ ಭಾಷೆಯಿಂದ “ಅಮೃತ’ ಭಾಷೆ ಪಟ್ಟದತ್ತ ಸಂಸ್ಕೃತ


Team Udayavani, Jan 5, 2017, 3:45 AM IST

matru-bashe.jpg

ಉಡುಪಿ: ಈ ಮುಂದಿನ ಹೇಳಿಕೆ ಸಂಸ್ಕೃತ ಕಲಿಕೆ ಕಡ್ಡಾಯವಿರುವ ಲಂಡನ್‌ನ ಪ್ರತಿಷ್ಠಿತ ಸೈಂಟ್‌ ಜಾನ್ಸ್‌ ಇಂಡಿಪೆಂಡೆಂಟ್‌ ಸ್ಕೂಲ್‌ನ ಕೈಪಿಡಿಯದು: Sanskrit is a perfect tool for the awakening of young minds to the universality of human thought and depth of self-expression which will help prepare them for the challenges of an increasingly global society.

ಭಾರತದ ಕೆಲವೇ ಜನರಲ್ಲಿರುವ ಸಂಸ್ಕೃತ ಯುನೈಟೆಡ್‌ ಕಿಂಗ್‌ಡಮ್‌ನ ಶಾಲೆ, ವಿ.ವಿ.ಗಳಲ್ಲಿ ಆಸಕ್ತಿ ಕೆರಳಿಸಿವೆ. ಲಂಡನ್‌ನ ಸೈಂಟ್‌ ಜೇಮ್ಸ್‌ ಜೂನಿಯರ್‌ ಶಾಲೆಯಲ್ಲಿ ಬಹುತೇಕ ಮಕ್ಕಳು ಸಂಸ್ಕೃತ ಓದಲು ತುದಿಗಾಲಲ್ಲಿ ನಿಂತಿದ್ದಾರೆ. 1975ರಲ್ಲಿ ಆರಂಭವಾದ ಈ ಹವೆ ಈಗ ಆಂದೋಲನ ರೂಪದಲ್ಲಿದೆ. “It gives them brilliant linguistic training” ಎಂದು ಸಂಸ್ಕೃತ ವಿಭಾಗ ಮುಖ್ಯಸ್ಥ ವಾರ್‌ವಿಕ್‌ ಜೆಸಾಪ್‌ ಹೇಳಿರುವುದನ್ನು ಎನ್‌ಡಿಟಿವಿ ಕಾಮ್‌ ವರದಿ ಮಾಡಿದೆ. ಸೈಂಟ್‌ ಜೇಮ್ಸ್‌ ಶಾಲೆ ಸಂಸ್ಕೃತ ಭಾಷೆಗಾಗಿ ಆಂದೋಲನವನ್ನೇ ಆರಂಭಿಸಿದೆ. ಅಮೆರಿಕದಲ್ಲಿ ವಿದೇಶೀ ಭಾಷೆ ಕಲಿಯಲು ಅವಕಾಶವಿದ್ದು, ಭಾರತದ ಸಂಸ್ಕೃತ ಭಾರತೀ ಸಂಘಟನೆ “ಸ್ಯಾಂಸ್ಕೃತ್‌ ಆ್ಯಸ್‌ ಫಾರಿನ್‌ ಲ್ಯಾಂಗ್ವೇಜ್‌’ ಪ್ರಕಲ್ಪ ಆರಂಭಿಸಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಕಂಡುಬರುತ್ತಿದೆ. ಲಂಡನ್‌ನ ಎಸ್‌ಒಎಎಸ್‌ ವಿ.ವಿ. ಸಂಜೆಯ ಸಂಸ್ಕೃತ ಕೋರ್ಸ್‌ ನಡೆಸುತ್ತಿದ್ದು, 2017ಕ್ಕೆ ಅಂತರ್ಜಾಲದಲ್ಲಿ ಅರ್ಜಿ ಆಹ್ವಾನಿಸಿದೆ. 

ಕಲಿಕೆಯಲ್ಲಿ ಎಷ್ಟೋ ಭಾಷೆಗಳಲ್ಲಿ ಬರವಣಿಗೆ ಸಾಧ್ಯವಿಲ್ಲದಿದ್ದರೂ ಮಾತನಾಡುವವರು ಇರುವುದರಿಂದಲೇ ಅದು ಜೀವಂತವೆನಿಸಿದೆ. ಸಂಸ್ಕೃತದ ವಿಷಯಗಳನ್ನು ಮಾತ್ರ ಕಲಿಸುವ 15 ವಿ.ವಿ.ಗಳು, ಶೃಂಗೇರಿ, ಜಮ್ಮು ಮೊದಲಾದೆಡೆ ಬಹು ಕ್ಯಾಂಪಸ್‌ ಇರುವ ಡೀಮ್ಡ್ ವಿ.ವಿ. ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ, ದೇಶದಲ್ಲಿ 120 ವಿ.ವಿ., ಸಾವಿರಾರು ಶಾಲೆ, ಕಾಲೇಜು, ಜರ್ಮನ್‌, ಫ್ರಾನ್ಸ್‌, ರಶ್ಯಾ, ಅಮೆರಿಕ ಮೊದಲಾದ ವಿದೇಶಗಳ 254 ವಿ.ವಿ.ಗಳಲ್ಲಿ ಸಂಸ್ಕೃತ ವಿಭಾಗ, ದೇಶದಲ್ಲಿ ಒಟ್ಟು 8 ಕೋಟಿ ವಿದ್ಯಾರ್ಥಿಗಳು ಸಂಸ್ಕೃತ ಓದುವವರಿದ್ದರೂ ಮಾತನಾಡುವವರಿಲ್ಲದ ಕಾರಣ “ಮೃತ ಭಾಷೆ’ ಪಟ್ಟ ಕಟ್ಟಿಕೊಂಡ ಸಂಸ್ಕೃತಕ್ಕೆ ಮಾತನಾಡುವವರನ್ನು ಕಟ್ಟಿ “ಅಮೃತ ಭಾಷೆ’ ಪಟ್ಟ ಕೊಡಲು ಸಂಸ್ಕೃತ ಭಾರತೀ ಅಣಿಯಾಗಿದೆ. 1981ರಲ್ಲಿ ಹಿಂದೂ ಸೇವಾ ಪ್ರತಿಷ್ಠಾನ ಜನ್ಮತಳೆದು ಅದರ ಒಂದು ಅಂಗವಾಗಿ ಸಂಸ್ಕೃತ ವಿಭಾಗ ಕಾರ್ಯನಿರ್ವಹಿಸುತ್ತಿತ್ತು. ಪ್ರತಿಷ್ಠಾನದ ಈ ವಿಭಾಗವೇ 1995ರಲ್ಲಿ ಸಂಸ್ಕೃತ ಭಾರತಿಯಾಗಿ ಸ್ಥಾಪನೆಗೊಂಡಿತು. ಪ್ರತಿಷ್ಠಾನದ ಆರಂಭದಿಂದ ಈವರೆಗೂ ಗೌರವಾಧ್ಯಕ್ಷರಾಗಿರುವ ಪೇಜಾವರ ಶ್ರೀ ಪರ್ಯಾಯದಲ್ಲಿ ಅ. ಭಾರತ ಸಂಸ್ಕೃತ ಅಧಿವೇಶನ ರಾಜಾಂಗಣದಲ್ಲಿ ಸಂಪನ್ನಗೊಳ್ಳುತ್ತಿದೆ. 

ಅಂಚೆ ಮೂಲಕ ಸಂಸ್ಕೃತ
ಸಂಸ್ಕೃತ ಭಾರತೀ ಅಂಚೆ ಮೂಲಕ ಸಂಸ್ಕೃತವನ್ನು ತೆಲುಗು, ಕನ್ನಡ, ತಮಿಳು, ಗುಜರಾತಿ, ಮರಾಠಿ, ಹಿಂದಿ, ಅಸ್ಸಾಮಿ, ಒಡಿಯ, ಬಂಗಾಲಿ, ಮಲಯಾಳ, ಇಂಗ್ಲಿಷ್‌ ಈ 11 ಭಾಷೆಗಳಲ್ಲಿ ಕಲಿಸುತ್ತಿದೆ. ಮಾಸ ಪತ್ರಿಕೆ ‘ಸಂಭಾಷಣಾ ಸಂದೇಶ’ಕ್ಕೆ 14 ದೇಶಗಳಲ್ಲಿ ಲಕ್ಷ ಚಂದಾದಾರರಿದ್ದಾರೆ. ಸಂಸ್ಕೃತ ಭಾರತಿಯನ್ನು ಕಟ್ಟಿ ಬೆಳೆಸಿದ ಎಚ್‌.ಆರ್‌. ವಿಶ್ವಾಸ್‌, ಜನಾರ್ದನ ಹೆಗಡೆ, ಚ.ಮೂ. ಕೃಷ್ಣಶಾಸ್ತ್ರಿಯಂತಹ ವಿದ್ವಾಂಸರು ವೃತ್ತಿ ಜೀವನದಲ್ಲಿದ್ದರೆ ವಿ.ವಿ. ಕುಲಪತಿ ವರೆಗೆ ಹೋಗುವ ಸಾಮರ್ಥ್ಯ ಹೊಂದಿದವರು. ಸಂಸ್ಕೃತ ಭಾರತೀ ಯುವಕರು, ವಿದ್ಯಾರ್ಥಿಗಳು, ಹಿರಿಯರು, ಮಹಿಳೆಯರು ಹೀಗೆ ವಿವಿಧ ವಯೋಮಾನದವರು ಸಂಸ್ಕೃತದಲ್ಲಿ ಮಾತನಾಡುವಂತೆ ಮಾಡುತ್ತಿದೆ. ಇಂತಹ 1.35 ಲಕ್ಷ ಶಿಬಿರಗಳ ಮೂಲಕ 95 ಲಕ್ಷ ಜನರಿಗೆ ಸಂಸ್ಕೃತದಲ್ಲಿ ಮಾತನಾಡಲು ಕಲಿಸಿದೆ. 20,000 ಸ್ಥಳೀಯ ಕಾರ್ಯಕರ್ತರ ಪಡೆ ಇದೆ. 

ಅಸಾಮಾನ್ಯರವರೆಗೆ
ಸಂಸ್ಕೃತ ಸಮ್ಮೇಳನದಲ್ಲಿ ವಿವಿಧ ಜವಾಬ್ದಾರಿಗಳನ್ನು ಹೊತ್ತ ಒಂದು ಸ್ಥಾನದಿಂದ ಒಬ್ಬರೇ ಎಂಬ ನಿಯಮದಂತೆ 2,000 ಕಾರ್ಯಕರ್ತರು ಪಾಲ್ಗೊಳ್ಳುತ್ತಿದ್ದಾರೆ. ಇವರಲ್ಲಿ 100 ಮಂದಿ ಈಶಾನ್ಯ ಭಾರತದಿಂದ, ಒಟ್ಟು 600 ಮಹಿಳಾ ಕಾರ್ಯಕರ್ತರು ಬರುತ್ತಿದ್ದಾರೆ. ಅಗತ್ಯವುಳ್ಳ ಮಹಿಳಾ ಕಾರ್ಯಕರ್ತರನ್ನು ಶ್ರೀಕೃಷ್ಣ ಮಠದ ಆಸುಪಾಸಿನ ಮನೆಗಳಲ್ಲಿ ಉಳಿಸಿಕೊಳ್ಳುತ್ತಿರುವುದು, ಸಂಸ್ಕೃತ ಭಾರತೀ ಕಾರ್ಯಾಲಯಕ್ಕಾಗಿ ಉಡುಪಿ ನಗರದಲ್ಲಿರುವ ಉದ್ಯಾವರದ ವಿಠಲ ಕಾಮತ್‌ ತಮ್ಮ ಮನೆಯನ್ನೇ ಬಿಟ್ಟುಕೊಟ್ಟಿರುವುದು, ಮೂರು ವಿ.ವಿ.ಗಳಲ್ಲಿ ಕುಲಪತಿಯಾಗಿದ್ದು, ಪ್ಯಾರಿಸ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಅಂತಾರಾಷ್ಟ್ರೀಯ ಸಂಸ್ಕೃತ ಅಧ್ಯಯನ ಸಂಸ್ಥೆ  ಮುಖ್ಯಸ್ಥ ಡಾ| ಕುಟುಂಬ ಶಾಸ್ತ್ರಿ, ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ ಜಮ್ಮು ಕ್ಯಾಂಪಸ್‌ ಪ್ರಾಂಶುಪಾಲರಾಗಿದ್ದ, ಜೀವನವಿಡೀ ಸ್ವಯಂಪಾಕ ವ್ರತ ನಡೆಸುತ್ತಿರುವ (ಸ್ವತಃ ಅಡುಗೆ ಮಾಡಿ ಊಟ ಮಾಡುವ) ಡಾ| ರಾಮಾನುಜ ದೇವನಾಥನ್‌, ಸಾಹಿತಿ ಚೆನ್ನೈನ ಜೋ ಡಿ’ಕ್ರೂಸ್‌, ಸಿಬಿಎಸ್‌ಇ ಅಧ್ಯಕ್ಷರು, ಇಸ್ರೋ ಅಧ್ಯಕ್ಷರು, ರಾಷ್ಟ್ರೀಯ ಪಾಂಡುಲಿಪಿ ಮಿಶನ್‌ ನಿರ್ದೇಶಕರಂತಹ ವಿವಿಧ ಕ್ಷೇತ್ರಗಳ ಹಿರಿಯರು ಪಾಲ್ಗೊಳ್ಳುತ್ತಿರುವುದು ವಿಶೇಷ ಘಟನೆಗಳಾಗಲಿವೆ. ಜ. 5 ಸಂಜೆ 5.30ಕ್ಕೆ ಅಪೂರ್ವ ಪ್ರದರ್ಶಿನಿ, ಜ. 6 ಬೆಳಗ್ಗೆ 10ಕ್ಕೆ ಅಧಿವೇಶನದ ಉದ್ಘಾಟನೆ ನಡೆಯಲಿದೆ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಜ. 8ರ ವರೆಗೆ ಬೆಳಗ್ಗೆ 8.30ರಿಂದ ರಾತ್ರಿ 8.30 ರವರೆಗೆ ಭೇಟಿ ನೀಡಬಹುದು. 

ದೇಶ ವಿದೇಶಗಳಲ್ಲಿ
ಸಂಸ್ಕೃತ ಭಾರತೀ ಈಗ ಎಲ್ಲ ರಾಜ್ಯಗಳು, 549 ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. 114 ಪೂರ್ಣಕಾಲೀನ ಕಾರ್ಯಕರ್ತರನ್ನು ಹೊಂದಿದ ಸಂಸ್ಥೆಯ ಚಟುವಟಿಕೆ ದೇಶದ 4,612 ಕಡೆಗಳಲ್ಲಿ ನಡೆಯುತ್ತಿದೆ. ಅಮೆರಿಕ, ಕೆನಡ, ಇಸ್ರೇಲ್‌, ಕೆರೆಬಿಯನ್‌, ಗಯಾನ, ಟ್ರಿನಿಡಾಡ್‌, ಮಾರಿಷಸ್‌, ಆಸ್ಟ್ರೇಲಿಯ, ನ್ಯೂಜಿಲಂಡ್‌, ಕೊಲ್ಲಿ ರಾಷ್ಟ್ರ ಹೀಗೆ 39 ದೇಶಗಳಲ್ಲಿ ಸಂಸ್ಕೃತ ಸಂಭಾಷಣಾ ಶಿಬಿರಗಳು ನಡೆದಿವೆ. ದುಬೈ ಮೊದಲಾದ 13 ದೇಶಗಳಲ್ಲಿ ನಿರಂತರ ಶಿಬಿರಗಳು ನಡೆಯುತ್ತಿವೆಯಲ್ಲದೆ ಪೂರ್ಣಾವಧಿ ಕಾರ್ಯಕರ್ತರು ಮೂಡಿಬಂದಿದ್ದಾರೆ. ಅಮೆರಿಕದ ಪೂರ್ವ ಮತ್ತು ಪಶ್ಚಿಮ ಕರಾವಳಿಯ ನ್ಯೂಜೆರ್ಸಿ, ವಾಷಿಂಗ್ಟನ್‌, ಕ್ಯಾಲಿಫೋರ್ನಿಯ, ಲಾಸ್‌ಏಂಜಲೀಸ್‌ ಮೊದಲಾದೆಡೆ ವಾರಾಂತ್ಯ ಶಿಬಿರಗಳು ನಡೆಯುತ್ತಿವೆ. ಇದಕ್ಕೆ ಟೆಕ್ಕಿಗಳು, ಮಕ್ಕಳು, ಮಹಿಳೆಯರು ಬರುತ್ತಿದ್ದಾರೆ. ಕ್ರಿಸ್ಮಸ್‌, ಆಗಸ್ಟ್‌ ರಜೆಗಳಲ್ಲಿ ಶಿಬಿರಗಳು ನಡೆಯುತ್ತಿವೆ.

ಟಾಪ್ ನ್ಯೂಸ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.