ಬಜೆಯಲ್ಲಿದೆ ಲಕ್ಷ ಲೋಡು ಹೂಳು: ತೆಗೆದರೆ ನೀರು,ತೆಗೆಯದಿರೆ ಕಣ್ಣೀರು!


Team Udayavani, May 7, 2017, 3:56 PM IST

Baje-dam-maniapl.jpg

ಉಡುಪಿ: ನಗರದಲ್ಲಿ ಮಾತ್ರವಲ್ಲದೆ ಎಲ್ಲೆಡೆಯೂ ನೀರಿಗೆ  ಹಾಹಾಕಾರ ಎದ್ದಿದೆ. ಕಳೆದ ವರ್ಷ ಮಳೆ ಪ್ರಮಾಣ ಕಡಿಮೆಯಾದ್ದು, ಮಳೆಗಾಲ ಬೇಗನೆ ಕೊನೆಗೊಂಡದ್ದು ಕಾರಣವಾದರೂ ಬಜೆಯಲ್ಲಿ ಹೂಳು ತೆಗೆಯದೆ ಇದ್ದುದೂ ಇನ್ನೊಂದು ಪ್ರಮುಖ ಕಾರಣಗಳಲ್ಲಿ ಒಂದು ಎಂಬ ವಾದವಿದೆ. ಒಂದು ಅಂದಾಜಿನ ಪ್ರಕಾರ ಸ್ಥಳೀಯರು ಹೇಳುವಂತೆ ಒಂದು ಲಕ್ಷ ಲೋಡು ಹೂಳು ಅಲ್ಲಿ ತುಂಬಿಕೊಂಡಿದೆ. ಇಷ್ಟೊಂದು ಹೂಳು ತುಂಬಿದರೆ ನೀರು ನಿಲ್ಲುವುದಾದರೂ ಎಲ್ಲಿ?

ಸುಮಾರು ಹತ್ತು ವರ್ಷಗಳ ಹಿಂದೆ ಮರಳುಗಾರಿಕೆ ನಿಷೇಧವಾದಾಗ ಬಜೆ ಅಣೆಕಟ್ಟು ಪ್ರದೇಶದಲ್ಲಿ ಹೂಳು ತೆಗೆಯಲೂ ಇದನ್ನು ಥಳುಕು ಹಾಕಲಾಯಿತು. ಹೂಳು ತೆಗೆಯುವುದೆಂದರೆ ಅದು ಮರಳು ತೆಗೆಯುವುದು ಎಂಬ ವ್ಯಾಖ್ಯಾನ ನೀಡಿದರು. ಆದರೆ ಆಯಾ ವರ್ಷ ಜಿಲ್ಲಾಧಿಕಾರಿಯವರು ವಿಶೇಷ ಮುತುವರ್ಜಿಯಿಂದ ಹೂಳು ತೆಗೆಸುತ್ತಿದ್ದರು. ಇದು ನಡೆಯದೆ ನಾಲ್ಕೈದು ವರ್ಷಗಳೇ ಆಗಿವೆ.

ಮಳೆಗಾಲ ಆರಂಭವಾದಾಗ ಘಟ್ಟದ ಮೇಲಿನ ಮಣ್ಣು ನೀರಿನ ಜತೆ ಹರಿದುಬರುತ್ತದೆ. ನದಿ ಯಲ್ಲಿ ನೀರಿನ ಹರಿಯುವಿಕೆ ಸುಮಾರು ಜನವರಿವರೆಗೆ ಇರುತ್ತದೆ. ಈ ಅವಧಿಯಲ್ಲಿ ಸಂಗ್ರಹವಾದ ಹೂಳನ್ನು ತೆಗೆದರೆ ನೀರಿನ ಶೇಖರಣೆ ಸಾಧ್ಯವಾಗುತ್ತದೆ. ಇಲ್ಲವಾದರೆ ಶೇಖರಣೆಯಾದ ಹೂಳಿನ ಮೇಲಿನಿಂದ ನೀರು ಹರಿದು ಸಮುದ್ರ ಸೇರುತ್ತದೆ. ಈಗ ಆದದ್ದೂ ಅಷ್ಟೆ ಎನ್ನಲಾಗುತ್ತಿದೆ.

ನೀರೂ ಲಭ್ಯ; ಮರಳೂ ಲಭ್ಯ
ಒಂದು ಕಡೆ ಮರಳುಗಾರಿಕೆಗೆ ನಿಷೇಧ, ಇನ್ನೊಂದು ಕಡೆ ಮರಳಿಗೆ ಹಾಹಾಕಾರ ಇವೆರಡು ಮುಖಗಳು ಕಂಡುಬರುತ್ತಿದ್ದರೆ ಇಲ್ಲಿ ಕಾನೂನು ಪರಿಪಾಲಿಸಿ ಹೂಳು ತೆಗೆಯದೆ ಇದ್ದದ್ದು ನೀರಿನ ಹಾಹಾಕಾರಕ್ಕೆ ಕಾರಣವಾಗಿದೆ. ಕಾನೂನು ಪಾಲನೆ ಮುಖ್ಯವೋ? ಜನರಿಗೆ ಕುಡಿಯುವ ನೀರು ಮುಖ್ಯವೋ? ಬಜೆ ಅಣೆಕಟ್ಟು ಪ್ರದೇಶದಲ್ಲಿ ತುಂಬಿದ ಹೂಳನ್ನು ಬಡಜನರಿಗೆ ಕಡಿಮೆ ದರದಲ್ಲಿ ಮರಳು ಆಗಿ ನೀಡಬಹುದು. ಆಗ ಒಂದಿಷ್ಟು ಮರಳು ಹಾಹಾಕಾರ ನೀಗೀತು, ಜತೆಗೆ ಮುಖ್ಯವಾಗಿ ನೀರಿನ ಬವಣೆ ಬಗೆಹರಿದೀತು. ಈ ಸಮಸ್ಯೆಯನ್ನು ಬಗೆ ಹರಿಸದೆ ಎಷ್ಟು ಅಣೆಕಟ್ಟು ಕಟ್ಟಿದರೂ ಜನರಿ ಗೇನೂ ಲಾಭವಾಗದು, ಜತೆಗೆ ಜನರ ತೆರಿಗೆ ಹಣ ಪೋಲು ಆಗುತ್ತದೆಯಲ್ಲವೆ? ಹಾಗೆಂದ ಮಾತ್ರಕ್ಕೆ ಈಗಲೇ ಹೂಳೆತ್ತಿದರೆ ತತ್‌ಕ್ಷಣ ನೀರಿನ ಸಂಗ್ರಹವಾಗುವುದಿಲ್ಲ. ಆದರೆ ಮುಂದಿನ ಮಳೆಗಾಲದ ಕೊನೆಯಲ್ಲಿ ಹೂಳೆತ್ತಿದರೆ ಆ ಸ್ಥಳದಲ್ಲಿ ನೀರು ಸಂಗ್ರಹವಾಗಲು ಅನುಕೂಲವಾದೀತು. ಈಗ ತತ್‌ಕ್ಷಣಕ್ಕೆ ಮರಳು ಬೇಕಾದವರಿಗೆ ಸರಕಾರವೇ ಕಡಿಮೆ ದರದಲ್ಲಿ ನೀಡಬಹುದು.

ವಿ-ಭಿನ್ನಾಭಿಪ್ರಾಯಗಳು
ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ತಾಂತ್ರಿಕವಾಗಿ ಹೂಳೆತ್ತುವುದರಿಂದ ಬಹಳ ಉಪಕಾರವಾಗುತ್ತದೆಂದು ಕಂಡುಬರುವುದಿಲ್ಲ ಎನ್ನುತ್ತಾರೆ. ಹೂಳೆತ್ತಲು ಜಿಲ್ಲಾಧಿಕಾರಿಯವರಿಗೆ ಹೇಳುತ್ತಲೇ ಇದ್ದೇನೆ. ಇದರಿಂದ ಸ್ವಲ್ಪವಾದರೂ ಉಪಕಾರವಾದೀತು ಎಂದು ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಹೇಳುತ್ತಾರೆ. ಕಾನೂನಿನ ಅಡಚಣೆ ಇದ್ದರೂ ಜಿಲ್ಲಾಧಿಕಾರಿಯವರ ಮೇಲೆ ಒತ್ತಡ ತಂದು ಹೂಳು ಎತ್ತಿದ್ದೆವು ಎನ್ನುತ್ತಾರೆ ಮಾಜಿ ಶಾಸಕ ಕೆ. ರಘುಪತಿ ಭಟ್‌. ಪರವಿರೋಧವಾದ ವಿಚಾರಗಳಿರುವಾಗ ತಜ್ಞರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕಾಗುತ್ತದೆ. ಮಣಿಪಾಲದ ಎಂಐಟಿ, ಸುರತ್ಕಲ್‌ ಎನ್‌ಐಟಿಕೆ ಜಾಗತಿಕ ಮಟ್ಟದ ಸಂಸ್ಥೆಗಳು. ಇಲ್ಲಿ ತಜ್ಞ ತಂತ್ರಜ್ಞಾನಿಗಳಿದ್ದಾರೆ.

ತಂತ್ರಜ್ಞಾನಿಗಳ ತಂಡವನ್ನು ನೇಮಿಸಿ ಅವರ ಅಭಿಪ್ರಾಯ ಪಡೆದು ಸೂಕ್ತ ಕ್ರಮಕ್ಕೆ ಮುಂದಾದರೆ ನೀರಿನ ಬವಣೆ ಬಗೆಹರಿಯಲು ಅನುಕೂಲವಾದೀತು. ಹೂಳೆತ್ತುವುದರಿಂದ ಉಪಕಾರವಾಗುವುದಿಲ್ಲವೆಂದರೆ ಪರ್ಯಾಯ ಮಾರ್ಗಕ್ಕಾದರೂ ತಜ್ಞರ ಸಲಹೆ ಪಡೆಯಬೇಕು. ಈ ಸಲಹೆ ಕಾನೂನು ಸಂದಿಗ್ಧತೆ ಉಂಟಾದಾಗಲೂ ಉಪಕಾರವಾಗುತ್ತದೆ.

ಉಪಕಾರವಾಗದು
ಬಜೆ ಅಣೆಕಟ್ಟಿನಲ್ಲಿ ಪಂಪಿಂಗ್‌ ಮಾಡುವ ಜಾಕ್‌ವೆಲ್‌ ನೀರಿನ ಮಟ್ಟ 1.38 ಮೀ. ಇರುತ್ತದೆ. ಇದಕ್ಕಿಂತ ಕೆಳಗೆ ನೀರಿದ್ದರೆ ನೀರನ್ನು ಪಂಪು ಮಾಡಲು ಆಗುವುದಿಲ್ಲ. ಮಳೆಗಾಲದ ಅವಧಿಯಲ್ಲಿಯಾಗಲೀ ಮಳೆಗಾಲದ ಕೊನೆಯಲ್ಲಾಗಲೀ ಹೂಳೆತ್ತಿದರೆ ಕೆಸರು ಆಗುತ್ತದೆ. ವರ್ಷದ 365 ದಿನವೂ ನೀರನ್ನು ಪಂಪು ಮಾಡುವುದರಿಂದ ಹೀಗಾದರೆ ತೊಂದರೆ ಆಗುತ್ತದೆ. ಹೂಳೆತ್ತುವುದರಿಂದ ಉಪಕಾರವಾಗುತ್ತದೆ ಎಂದು ನನಗೆ ಯಾರೂ ಮನವರಿಕೆ ಮಾಡಿಲ್ಲ.
– ಪ್ರಮೋದ್‌ ಮಧ್ವರಾಜ್‌,
 ಉಸ್ತುವಾರಿ ಸಚಿವರು, ಉಡುಪಿ ಜಿಲ್ಲೆ

ಒತ್ತಾಯಿಸುತ್ತಿದ್ದೇನೆ
ನಾನು ಹೋದ ವರ್ಷದಿಂದ ಹೇಳುತ್ತಲೇ ಇದ್ದೇನೆ. ನಾನು ಇತ್ತೀಚೆಗೆ ಹೋಗಿ ನೋಡಿದಾಗ ನದಿ ಮಧ್ಯೆ, ಬದಿಗಳಲ್ಲಿ ಗುಡ್ಡ ಬೆಟ್ಟದಂತೆ ಹೂಳು ತುಂಬಿ ಗಿಡಗಳು ಬೆಳೆದಿರುವುದನ್ನು ಕಂಡಿದ್ದೇನೆ. ಮುಂದೆ ಇದು ಮರವಾಗಿ ಬೆಳೆದೀತು. ನಾನು ಜಿಲ್ಲಾಧಿಕಾರಿಯವರಲ್ಲಿ ಹೂಳೆತ್ತುವ ಕೆಲಸ ಮಾಡಿಸಿ ಎಂದಾಗ ಮರಳುಗಾರಿಕೆ ನಿಷೇಧದಿಂದ ಆಗುತ್ತಿಲ್ಲ ಎಂದು ಹೇಳುತ್ತಾರೆ. ಈಗಲಾದರೂ ತೆಗೆದರೆ ಮುಂದಿನ ವರ್ಷದ ನೀರಿನ ಸಮಸ್ಯೆ ಸ್ವಲ್ಪವಾದರೂ ಬಗೆಹರಿದೀತು. ಏನು ಮಾಡಬೇಕೆಂದು ಗೊತ್ತಾಗ್ತಿಲ್ಲ.
– ಮೀನಾಕ್ಷಿ ಮಾಧವ ಬನ್ನಂಜೆ,
 ನಗರಸಭಾಧ್ಯಕ್ಷೆ, ಉಡುಪಿ

ಹಿಂದೆ ಮಾಡಿದ್ದೆವು
ಬಜೆ ಅಣೆಕಟ್ಟು ಪ್ರದೇಶದಲ್ಲಿಯೇ ಮರಳುಗಾರಿಕೆ ನಿಷೇಧ ಎಂದಿಲ್ಲ. ಎಲ್ಲ ಕಡೆಯ ಮರಳುಗಾರಿಕೆ ನಿಷೇಧದಂತೆ ಬಜೆಗೂ ಅನ್ವಯವಾಗುತ್ತದೆ. 2012ರ ವರೆಗೂ ಪ್ರತಿವರ್ಷ ಜಿಲ್ಲಾಧಿಕಾರಿಯವರ ಮೇಲೆ ಒತ್ತಡ ಹೇರಿ ಹೂಳು ಎತ್ತಿದ್ದೆವು. ನಮಗೆ ಕುಡಿಯುವ ನೀರು ಮುಖ್ಯ.
– ಕೆ. ರಘುಪತಿ ಭಟ್‌, 
ಮಾಜಿ ಶಾಸಕರು, ಉಡುಪಿ

ಇದೇ ತಂತ್ರ ಅದಕ್ಕೂ…
ಈಗ ಡ್ರೆಜ್ಜಿಂಗ್‌ ಮಾಡಿ ನೀರನ್ನು ಬಜೆ ಕಡೆಗೆ ರಿದುಬಿಡುತ್ತಿದ್ದಾರೆ. ಹೂಳೆತ್ತಿ ನೀರು ಸಂಗ್ರಹವಾದಾಗಲೂ ಇದೇ ತಂತ್ರವನ್ನು ಅನ್ವಯಿಸಿ ನೀರು ಸಂಗ್ರಹಾಗಾರಕ್ಕೆ ಬಿಡಬಹುದು.
– ಆನಂದ್‌, ನಿವೃತ್ತ ಎಂಜಿನಿಯರ್‌, ಉಡುಪಿ ನಗರಸಭೆ. 

– ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.