ಬಾರಕೂರು ಪಂಡಿತರಿಗೆ ಗೊತ್ತಿದ್ದ ರೋಗದ ಭಾಷೆ…


Team Udayavani, Jun 30, 2017, 3:45 AM IST

290617Astro05.jpg

ಉಡುಪಿ: ಹಲವು ದಶಕಗಳ ಹಿಂದಿನ ಮಾತು. ಬಾರಕೂರಿನಲ್ಲಿ ಕೇರಳದಿಂದ ಬಂದ ಆಯುರ್ವೇದ ಪಂಡಿತರೊಬ್ಬರಿದ್ದರು. ಅವರಿಗೆ ರೋಗಿಯ ದೇಹವನ್ನು ಮುಟ್ಟಿದಾಗಲೇ ರೋಗವೇ ಅವರೊಡನೆ ಮಾತನಾಡುತ್ತಿತ್ತು. ಆ ಭಾಷೆ ಅವರಿಗೆ ಮಾತ್ರ ತಿಳಿಯುತ್ತಿತ್ತು…

ಇಂತಹ ಭಾಷೆಗಳನ್ನು ಕಂಪ್ಯೂಟರ್‌ಗೆ ಕಲಿಸಿದರೆ ಅದು ರೋಗಿ ಜತೆ ಮಾತನಾಡಬಹುದೆ? ಈ ಪ್ರಶ್ನೆ ಕಂಪ್ಯೂಟರ್‌ ತಜ್ಞ, ಭಾಷಾತಜ್ಞ ಪ್ರೊ|ಕೆ.ಪಿ.ರಾಯರದ್ದು. ಇತಿಹಾಸತಜ್ಞ ಪ್ರೊ|ಡಿ.ಡಿ.ಕೋಸಾಂಬಿ ಅವರ ಸ್ಮರಣಾರ್ಥ ಮಣಿಪಾಲ ಎಂಐಟಿ ಸಭಾಂಗಣದಲ್ಲಿ ಗುರುವಾರ ಮಣಿಪಾಲ ವಿ.ವಿ.ಯ ಸೆಂಟರ್‌ ಫಾರ್‌ ಗಾಂಧಿಯನ್‌ ಆ್ಯಂಡ್‌ ಪೀಸ್‌ ಸ್ಟಡೀಸ್‌ ಆಯೋಜಿಸಿದ “ಭಾಷೆಗಳ ಸಂವಹನ: ಒಂದು ತಾತ್ವಿಕ ಒಳನೋಟ’ ವಿಷಯ ಕುರಿತು ಮುಂಬಯಿಯಲ್ಲಿ ಹೋಮಿ ಜಹಾಂಗೀರ ಭಾಭಾ ಮತ್ತು ಡಿ.ಡಿ.ಕೋಸಾಂಬಿಯವರ ಜತೆ ಕೆಲಸ ಮಾಡಿದ್ದ ಪ್ರೊ| ರಾವ್‌ ಮಾತನಾಡಿದರು. 

ಬಾರಕೂರು ಪಂಡಿತರ ಆ ಭಾಷೆ ಇನ್ನೊಬ್ಬರಿಗೆ ತಿಳಿಯದೆ ಇದ್ದಿರ ಬಹುದಾದರೂ ಅದನ್ನು ಕಂಪ್ಯೂಟರ್‌ಗೆ ಕಲಿಸಲು ಸಾಧ್ಯವೆ ಎಂಬ ಚಿಂತನೆಯನ್ನು ಪ್ರೊ| ರಾವ್‌ ಹರಿಬಿಟ್ಟರು. ಇಂತಹ ಒಂದು ಭಾಷೆ ತಿಳಿಯ ಬೇಕಾದರೆ ಆದಿದೈವಿಕ (ದೈವದತ್ತ ವಾದ ಗುಣ), ಆದಿಭೌತಿಕ (ಹೇಳಿಕೊಡುವವರು, ಕೇಳುವವರು, ಗ್ರಂಥ, ಕಲಿಕೆಯ ವಾತಾವರಣ), ಆಧ್ಯಾ ತ್ಮಿಕ (ಸ್ವಪ್ರಯತ್ನ) ವಿಚಾರಗಳು ಪಾತ್ರವಹಿಸುತ್ತವೆ. ಆಯುರ್ವೇ ದಾಚಾರ್ಯ ಶುಶ್ರುತರು ರೋಗ ಗುಣಪಡಿಸಲು ಸ್ಪರ್ಶನ (ಮುಟ್ಟು ವುದು), ದರ್ಶನ (ನೋಡುವುದು), ಸಂಭಾಷಣ (ಮಾತನಾಡುವುದು) ಅಗತ್ಯ ಎಂದು ಹೇಳಿದ್ದರು ಎಂದರು. 

2 ಬಳಕೆ, 3 ಹಾಗೇ…
ಜಗತ್ತಿನ ಎಷ್ಟೋ ಕಡೆ ಎಷ್ಟೋ ಭಾಷೆಗಳು ಎಷ್ಟೋ ಸಮಯಗಳಲ್ಲಿ ಹುಟ್ಟಿವೆ, ಸತ್ತಿವೆ, ಕೆಲವು ಬದುಕಿವೆ. ಮೊದಲು ಮೌಖೀಕ (ಮಾತಿನಲ್ಲಿದ್ದ) ಭಾಷೆಗಳು ಕ್ರಮೇಣ ಲಿಪಿ ಅಗತ್ಯ ಕಂಡು ಲಿಖೀತ ರೂಪ ಪಡೆಯಿತು. ಅನಂತರ ನೃತ್ಯದಲ್ಲಿಯೂ ಭಾಷೆಯ ಬಳಕೆಯಾಯಿತು. ಇದುವರೆಗೂ ದೃಶ್ಯ (ಕಾಣುವುದು), ಶ್ರಾವ್ಯದಲ್ಲಿ (ಕೇಳುವುದು) ಮಾತ್ರ ಭಾಷೆಯ ಬಳಕೆಯಾಗಿದೆ ವಿನಾ ಇತರ 3 ಇಂದ್ರಿಯಗಳನ್ನು (ರಸ- ನಾಲಗೆ, ಸ್ಪರ್ಶ-ಚರ್ಮ, ಗಂಧ/ವಾಸನೆ – ಮೂಗು) ಬಳಸಿಕೊಂಡಿಲ್ಲ. ಇದನ್ನೂ ಬಳಸಿಕೊಳ್ಳಲು ಸಾಧ್ಯವೆ? ಉದಾ ಹರಣೆಗೆ ಸಿಟ್ಟು ಬಂದಾಗ ಮೈ ವಾಸನೆ ಬೇರೆಯಾಗಬಹುದು ಎಂದರು. 

ಕೆಲವರಿಗೆ ಬರೆಹದ ಜ್ಞಾನ ಬಾರದೆ ಹೋಗಬಹುದು, ಆತನಿಗೆ ನೃತ್ಯದ ಭಾಷೆ ಚೆನ್ನಾಗಿ ತಿಳಿಯಬಹುದು. ಉದಾಹರಣೆಗೆ ಮುತ್ತುಸ್ವಾಮಿ ದೀಕ್ಷಿತರ ತಮ್ಮ ಬಾಲುಸ್ವಾಮಿ ದೀಕ್ಷಿತರು 1790ರಲ್ಲಿ ಪ್ರಥಮ ಬಾರಿಗೆ ವಯೋಲಿನ್‌ನ್ನು ಕರ್ನಾಟಕ ಸಂಗೀತಕ್ಕೆ ಜಾರಿಗೆ ತಂದರು. ಈಗ ಕಛೇರಿಗಳಿಗೆ ವಯೋಲಿನ್‌ ಅನಿವಾರ್ಯ ಎಂಬ ಸ್ಥಿತಿಗೆ ಬಂದಿದೆ. ಅವರಿಗೆ ವಯೋಲಿನ್‌ಗೆ ಕರ್ನಾಟಕ ಸಂಗೀತವನ್ನು ಕಲಿಸುವ ಭಾಷೆ ಗೊತ್ತಿತ್ತು ಎಂದು ಪ್ರೊ|ರಾವ್‌ ಹೇಳಿದರು. ಪ್ರೊ| ವರದೇಶ್‌ ಹಿರೇಗಂಗೆ ಸ್ವಾಗತಿಸಿದರು.

ಟಾಪ್ ನ್ಯೂಸ್

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.