ಸುಡುಗಾಡು ಸಿದ್ಧರು,ಬುಡ್ಗ ಜಂಗಮರರಿಗೆ 25 ಮನೆಗಳು


Team Udayavani, Jul 8, 2017, 3:45 AM IST

070717SGE4A.jpg

ಉಡುಪಿ: ಬಡಜನರ ಕಷ್ಟ-ಕಾರ್ಪಣ್ಯಕ್ಕೆ ಸ್ಪಂದಿಸುವ ಕೈಂಕರ್ಯದಲ್ಲಿ ತಮ್ಮನ್ನು ನಿರಂತರ ತೊಡಗಿಸಿಕೊಂಡ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರು, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ “ಹೊಸ ಬೆಳಕು-ಹೊಸ ಬದುಕು’ ಯೋಜನೆಯಡಿ ಸುಡುಗಾಡು ಸಿದ್ಧರು ಮತ್ತು ಬುಡ್ಗ ಜಂಗಮದವರ ಇಪ್ಪತ್ತೈದು ನಿರಾಶ್ರಿತ ಕುಟುಂಬಗಳಿಗೆ ಉಡುಪಿ ನಗರಸಭೆ ಮಾರ್ಗದರ್ಶನದೊಂದಿಗೆ ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮ ಹಾಗೂ ವಿವಿಧ ಇಲಾಖೆಗಳ ಸಹಕಾರದ ಸಂಗಮದಿಂದ ಸುಸಜ್ಜಿತ ಮನೆಗಳನ್ನು ಕಟ್ಟಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. 

ಉದ್ಘಾಟನೆ
ತನ್ಮೂಲಕ ಸಚಿವರ “ವಿಷನ್‌ ಉಡುಪಿ-2015′ ಆಶಯದಂತೆ “ಸೂರು ಇಲ್ಲದವರಿಗೆ ಸೂರು’ ನೀಡುವ ಪ್ರಮುಖ ಯೋಜನೆಗೆ ಪುಷ್ಟಿ ದೊರಕಿದೆ. ಇದೀಗ ಕೊಡಂಕೂರು ಸಂಸ್ಕೃತ ವಿದ್ಯಾಪೀಠದ ಬಳಿಯಲ್ಲಿ ನಿರ್ಮಿಸಲಾದ “ಪ್ರಮೋದ್‌ ಮಧ್ವರಾಜ್‌ ಬಡಾವಣೆ’ಯ ಉದ್ಘಾಟನೆ ಸಮಾರಂಭ ಜು. 9ರಂದು ಮಧ್ಯಾಹ್ನ 12ಕ್ಕೆ ನಡೆಯಲಿದೆ. 

ಹೊಸ ಯೋಜನೆ-ಯೋಚನೆ
ರಾಷ್ಟ್ರೀಯ ಹೆದ್ದಾರಿಯ ವಿಸ್ತೀರ್ಣ ಸಂದರ್ಭ ನಿರಾಶ್ರಿತರಾದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಜೋಪಡಿಗಳನ್ನು ಕಟ್ಟಿಕೊಂಡು ದುಸ್ತರ ಬದುಕು ಸಾಗಿಸುತ್ತಿರುವ ಸುಡುಗಾಡು ಸಿದ್ಧರು ಮತ್ತು ಬುಡ್ಗ ಜಂಗಮದವರ 25 ಕುಟುಂಬಗಳನ್ನು ಸ್ಥಳಾಂತರಿಸುವ, “ಸುಂದರ ಉಡುಪಿ’ಯ ನೈರ್ಮಲ್ಯತೆಗೆ ಹಾಗೂ ದುರ್ಬಲರಿಗೆ ಸಕಲ ಸೌಲಭ್ಯಗಳೊಂದಿಗೆ ಆಶ್ರಯ ನೀಡುವ ಸಂಕಲ್ಪದ ನೆಲೆಯಲ್ಲಿ ಶಾಸಕ ಪ್ರಮೋದ್‌ ಮಧ್ವರಾಜ್‌ ಅವರು ಹೊಸ ಯೋಜನೆ-ಯೋಚನೆ ನಡೆಸಿದರು.  ಸರಕಾರಿ ವಸತಿ ಜಾಗದ ಕೊರತೆ ಎದುರಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಶಾಸಕರು ನಿರಾಶ್ರಿತ ಸಂತ್ರಸ್ತರ ಮನವೊಲಿಸಿ ಕೊಡಂಕೂರಿನಲ್ಲಿ ಸುಮಾರು 55 ಸೆಂಟ್ಸ್‌ ನಿವೇಶನ ಖರೀದಿಸುವರೇ ಸಹಕರಿಸಿದರು. 

ವ್ಯವಸ್ಥಿತ ಬಡಾವಣೆ
ವಿವಿಧ ಇಲಾಖೆಗಳ ಮಾರ್ಗದರ್ಶನದೊಂದಿಗೆ ವ್ಯವಸ್ಥಿತ ಬಡಾವಣೆ ರೂಪಿಸಿ, ಸರಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಕಾರ್ಯರೂಪಕ್ಕೆ ತರಲು ಶ್ರಮಿಸಿದರು. ತನ್ಮೂಲಕ “ಕರ್ನಾಟಕದ ಮಾದರಿ ವಸತಿ ಯೋಜನೆ’ಯ ಕನಸನ್ನು ನನಸಾಗಿಸುವಲ್ಲಿ ಯಶಸ್ವಿಯಾದುದನ್ನು ಗಮನಿಸಬಹುದು.

ವೈಶಿಷ್ಟ್ಯತೆ 
ರಾಜ್ಯ ಹಾಗೂ ಕೇಂದ್ರ ಸರಕಾರದ ವಸತಿ ಯೋಜನೆಯ ಸೌಲಭ್ಯಗಳನ್ನು ಸದುಪಯೋಗಪಡಿಸಿ ಉಡುಪಿ ನಗರಸಭೆ ಮಾರ್ಗದರ್ಶನದೊಂದಿಗೆ ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮದ ಸಹಕಾರದೊಂದಿಗೆ ಆಡಳಿತದಲ್ಲಿ ದಕ್ಷತೆ, ಗುಣಮಟ್ಟ ಮತ್ತು ಪಾರದರ್ಶಕತೆಯನ್ನು ಅನುಷ್ಠಾನಗೊಳಿಸಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರಿಗೆ ಸರಕಾರದಿಂದ ಪ್ರಾಯೋಜಿಸಲ್ಪಟ್ಟ ವಸತಿ ಯೋಜನೆಗಳಡಿ ವಸತಿ ನಿರ್ಮಾಣಗೊಂಡಿವೆ. 

ಅವಶ್ಯ ಸೌಲಭ್ಯ
ಸರಕಾರೇತರ ಸಂಸ್ಥೆಗಳಾದ ಸಾಮಾಜಿಕ ಬದ್ಧತೆಯ ಕಾಳಜಿಯೊಂದಿಗೆ ಕಾರ್ತಿಕ್‌ ಶೆಟ್ಟಿ ಅಲೆವೂರು ಅವರ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಅಲೆವೂರಿನ ಕಿನ್‌ಫ್ರಾಟೆಕ್‌ ಸಂಸ್ಥೆ ಯೋಜನಾ ನಿರ್ವಹಣೆ ಹಾಗೂ ತಾಂತ್ರಿಕ ನೆರವು ಮತ್ತು ಪ್ಲಶ್‌ ಲಿವಿಂಗ್‌ ಸಂಸ್ಥೆ ವಿನ್ಯಾಸದ ನೆರವು ನೀಡಿವೆ. ವಿಶಿಷ್ಟವಾಗಿ ಮೂಡಿಬಂದ ನೂತನ ಪರಿಕಲ್ಪನೆಯಾದ “ಹೊಸ ಬೆಳಕು-ಹೊಸ ಬದುಕು’ ಎನ್ನುವ ಈ ಯೋಜನೆಯೊಂದಿಗೆ ವಿದ್ಯುತ್‌ ಸಂಪರ್ಕ, ಸ್ವಂತ ನೀರಿನ ವ್ಯವಸ್ಥೆ, ರಸ್ತೆ ಮುಂತಾದ ಅವಶ್ಯ ಸೌಲಭ್ಯಗಳನ್ನೂ ಒದಗಿಸಲಾಗಿದೆ. 

ಮುಂಬರುವ ಯೋಜನೆಗಳು 
– ಸಮಾಜ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಕಾಂಕ್ರಿಟೀಕೃತ ರಸ್ತೆ 
– ಕಾಂಕ್ರೀಟ್‌ ಚರಂಡಿ 
– ನಗರಸಭೆಯ ನೀರಿನ ಸೌಲಭ್ಯ 
– ದಾರಿ ದೀಪದ ವ್ಯವಸ್ಥೆ ಇತ್ಯಾದಿ. 

ಪ್ರಮೋದ್‌ ಮಧ್ವರಾಜ್‌ ಬಡಾವಣೆ 
ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ, ಖಾಸಗಿ ನಿರ್ಮಾಣಗಾರರ ಸಹಕಾರದೊಂದಿಗೆ “ಹೊಸ ಬೆಳಕು-ಹೊಸ ಬದುಕು’ ಯೋಜನೆಯನ್ನು ಕಾರ್ಯಗತಗೊಳಿಸಲು ಸಚಿವ ಪ್ರಮೋದ್‌ ಮಧ್ವರಾಜ್‌ ಕಾರಣೀಭೂತರಾಗಿದ್ದಾರೆ. ಸಚಿವರ ಅರ್ಥಪೂರ್ಣ ಕಾರ್ಯ ವೈಖರಿಗೆ ಪ್ರೇರಣೆಯಾಗಿ, ಪ್ರೀತಿಪೂರ್ವಕವಾಗಿ ಕೊಡಂಕೂರಿನಲ್ಲಿರುವ ಈ ಬಡಾವಣೆಗೆ “ಪ್ರಮೋದ್‌ ಮಧ್ವರಾಜ್‌ ಬಡಾವಣೆ’ ಎನ್ನುವುದಾಗಿ ನಾಮಾಂಕಿತಗೊಳಿಸಿದ್ದೇವೆ ಎಂದು ಕೊಡಂಕೂರು ಸುಡುಗಾಡು ಸಿದ್ಧರು ಮತ್ತು ಬುಡ್ಗ ಜಂಗಮದವರ ಪರವಾಗಿ ನಾಗಾರ್ಜುನ್‌ ವಿಭೂತಿ ತಿಳಿಸಿದ್ದಾರೆ.

– ಎಸ್‌.ಜಿ.ನಾಯ್ಕ

ಟಾಪ್ ನ್ಯೂಸ್

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.