ಮೋದಿ ಯುಗ, ಒಂದು ಯೋಗವೇ?


Team Udayavani, Jun 4, 2019, 6:00 AM IST

Modi-N-800

ಒಂದು ರೀತಿಯ ಆಧುನಿಕತೆ, ಇಂಗ್ಲಿಷ್‌ ತಿಳಿದರೇ ಪಾಂಡಿತ್ಯ ಎಂಬ ಎಡಬಿಡಂಗಿ ಗ್ರಹಿಕೆ, ಭಾರತೀಯರು ಪ್ರತಿ ರಂಗದಲ್ಲೂ ತಮಗೆ ತಿಳಿಯದ ಇಂಗ್ಲಿಷ್‌ ಭಾಷೆಯ ಉರುಳನ್ನು ಕೊರಳಿಗೆ ಕಟ್ಟಿಕೊಂಡೇ ತಿರುಗಬೇಕಾದ ಅಸಹಾಯಕ ಸ್ಥಿತಿಯಿಂದ ಕಾಲರಾಯ ಹೊಸದೇ ದಿವ್ಯಕ್ಕೆ ತಂದು ನಿಲ್ಲಿಸಬಹುದೆ? ಮೋದಿ ಕೋಟಿ ಕೋಟಿ ಜನರನ್ನು ಸಂವೇದಿಸುತ್ತಿರುವ ವಿಚಾರ ನಾವು 2014ರಿಂದಲೂ ಗಮನಿಸುತ್ತಲೇ ಬಂದಿದ್ದೇವೆ.

ಬ್ರಿಟಿಶರು ತಮ್ಮ ವಶದಲ್ಲಿದ್ದ ಭಾರತವನ್ನು ಒಡೆದು ಹೋದರು ಎಂಬುದು ಚರಿತ್ರೆಯ ಕರಾಳ ಅಧ್ಯಾಯ. ಆದರೆ ಇದೇ ಬ್ರಿಟಿಶರು ಒಡೆದುಕೊಂಡೇ ಇದ್ದ ಭಾರತದ ಭೂಪಟವನ್ನು ಒಗ್ಗೂಡಿಸಿದ ಕೀರ್ತಿಗೂ ಪಾತ್ರರಾಗುತ್ತಾರೆ ಎಂಬುದನ್ನು ಸಂಭ್ರಮದಿಂದ ಹೇಳಿದರೆ ಅದು ಸೂಕ್ತವೆ? ಕಾಲದ ಸತ್ಯವನ್ನು ಆಧಾರವಾಗಿಸಿದರೆ ಎಂದೂ ಬ್ರಿಟಿಶರನ್ನು ಭಾರತೀಯರು ಕ್ಷಮಿಸಲು ಸಾಧ್ಯವಿಲ್ಲ.

ಮನುಷ್ಯನ ಅಂತರಾತ್ಮದಲ್ಲಿ ದೈವವೂ ಬೀಡು ಬಿಟ್ಟಿರುತ್ತದೆ. ದೆವ್ವವೂ ಗಹಗಹಿಸುತ್ತಿರುತ್ತದೆ. ಲಾಗಾಯ್ತಿನಿಂದ ಭಾರತದ ಪರಂಪರೆ ಛಪ್ಪನ್ನೈವತ್ತಾರು ದೇಶಗಳ ಮಡಿಕೆಗಳನ್ನು ಹೊಂದಿಯೇ ಪೂರ್ಣತ್ವಕ್ಕಾಗಿ ಹಾತೊರೆಯುತ್ತಲಿದೆ.

“ಸಮುದ್ರ ವಸನೇ ದೇವಿ ಪರ್ವತಸ್ತನ ಮಂಡಲೇ ವಿಷ್ಣು ಪತ್ನಿ ನಮಸ್ತುಭ್ಯಂ ಪಾದ ಸ್ಪರ್ಶಂ ಕ್ಷಮಸ್ವಮೇ’ ಎಂಬುದಾಗಿ ಇಡೀ ಪ್ರಪಂಚವನ್ನು ವಿಷ್ಣುಪತ್ನಿಯಾಗಿ ಪರಿವರ್ತಿಸಿ, ತಾಯ್ತನದ ದಿವ್ಯವನ್ನು ಭೂಮಿಗೆ ಒದಗಿಸಿದವರು ನಾವು ಭಾರತೀಯರು. ವಿಧಿಯಿರದೆ ಪಾದ ಸ್ಪರ್ಶವನ್ನು ಮಾಡು ತ್ತಿದ್ದೇವೆ, ವಿಷ್ಣು ಪತ್ನಿಯಾದ ಓ ಭೂರಮೆ, ಲಕ್ಷ್ಮಿಯೆ ಕ್ಷಮಿಸು ಎಂದು ಕೈಮುಗಿದು ತಾಯಿಯನ್ನು ಕೇಳಿಕೊಳ್ಳುತ್ತೇವೆ. ಆದರೆ ರಾಜಕೀಯ ಕಾರಣಗಳು ವಿಷ್ಣು ಪತ್ನಿಯನ್ನು ಎಷ್ಟೊಂದು ದೇಶಗಳನ್ನಾಗಿ ಪರಿವರ್ತಿ ಸಿವೆ? ದೈವತ್ವದ ಒಳ ಸಾರ ಭಾರತೀಯನಿಗೆ ಇಡೀ ವಸುಂಧರೆ ಒಂದು ಎಂಬ ಸಂದೇಶ ಕೊಡುತ್ತದೆ. ರಾಜಕೀಯದ ಕುದಿ ವಿಷದ ಹೆಡೆ ಭಾರತೀಯ, ಪಾಕಿಸ್ತಾನಿ, ಬ್ರಿಟಿಶ್‌, ಚೈನಿಸ್‌, ಅಮೆರಿಕನ್‌, ಆಸ್ಟ್ರೇಲಿಯನ್‌, ಝೂಂಬಿಯನ್‌, ಕೆರಿಬಿಯನ್‌ ಎಂಬಿತ್ಯಾದಿ ಫ್ರೆàಮಿನೊಳಗಡೆ ಸೆರೆಯಾಗಿಸುತ್ತದೆ. ನಾವು ಸ್ವತಂತ್ರರು. ಆದರೂ ಒಂದು ಅರ್ಥದಲ್ಲಿ ಬಂಧಿಗಳು. ಸಾಹಿತ್ಯ ಭಾರತದ ಮಹಾಜ್ಞಾನ ಕೋಶಗಳಾದ ಮಹಾ ಉಪನಿಷತ್ತಿನಲ್ಲಿ ಬರುವ “ವಸುಧೈವ ಕುಟುಂಬಕಂ’ ಎಂಬ ಮಾತು ಕೇವಲ ಅಲಂಕಾರಿಕವಾಗಿದೆ.

ಕಾಲಚಕ್ರ ಉರುಳುತ್ತದೆ. 1947 ಆಗಸ್ಟ್‌ 15ರ ಮಧ್ಯರಾತ್ರಿ (ಶುಭ ಕೆಲಸಗಳು ಮಧ್ಯರಾತ್ರಿಯಲ್ಲಿ ನಡೆಯುವುದು ಒಂದು ಅಸಂಗತ ವಿಷಯ. ಈ ಹೊತ್ತಿನಲ್ಲಿ ಯಾವ ಶಕ್ತಿಗಳು ಬಲ ಪಡೆದಿರುತ್ತವೆ ಎಂಬುದನ್ನು ಆಧುನಿಕ ಮನೋವಿಜ್ಞಾನಿಗಳೂ ಇದಕ್ಕಿಂತಲೂ ಮೊದಲು ಭಾರತೀಯ ಪರಂಪರೆಗಳು ವ್ಯಾಖ್ಯಾನ ಮಾಡಿರುವ ವಿಚಾರವೇ. ಎಲ್ಲವನ್ನೂ ಬ್ರಿಟಿಶರು ತಮಗೆ ಬೇಕಾದಂತೆ ನೋಡಿ ಕೊಂಡರು. ಸ್ವಾತಂತ್ರ್ಯದ ಸಂಭ್ರಮ ಒಂದು ರೀತಿಯಲ್ಲಿ ಸಂಭ್ರಮ ವಾಯೊ¤à, ರಕ್ತದೋಕುಳಿಯಲ್ಲಿ ಮಿಂದೆದ್ದ ಮಾರಣ ಹೋಮವಾಯೊ¤à ಎಂಬುದನ್ನು ನಿಷ್ಪಕ್ಷಪಾತವಾಗಿ ವ್ಯಾಖ್ಯಾನಿಸು ವುದಾದರೆ ಮುಂಚೂಣಿಯಲ್ಲಿದ್ದ ಅಂದಿನ ನಾಯಕರುಗಳು ದುರ್ಬಲತೆಯಲ್ಲಿ ಬಳಲಿದ್ದರು. ಭಾರತದಲ್ಲಿ ಅಶಾಂತಿಯನ್ನು, ನೆತ್ತರಿನ ಹೊಳೆಯನ್ನು, ಕೊಲೆ, ಸುಲಿಗೆ, ಅತ್ಯಾಚಾರಗಳ ಮೂಲಕ ಮುಸ್ಲಿಮರು ಹಾಗೂ ಹಿಂದೂಗಳಲ್ಲಿ ಹೊಂದಾಣಿಕೆ ಆಗಲು ಕಷ್ಟವಾದ ವಸ್ತುಸ್ಥಿತಿಯನ್ನು ಮೂಕಪ್ರೇಕ್ಷಕರಾಗಿ ನೋಡುವ ಸ್ಥಿತಿಗತಿಯನ್ನು ನಾಯಕರುಗಳು ಎದುರಿಸಿದರು. ಬ್ರಿಟಿಶ್‌ ಇಂಡಿಯಾ ವಿಭಜನೆಯಾಗುತ್ತ ಭಾರತ ಹಾಗೂ ಪಾಕಿಸ್ತಾನ ದೇಶಗಳಾಗಿ, ಸ್ವಾತಂತ್ರ್ಯದ ತುರಾಯಿಯೊಂದಿಗೆ ಪಡಿಮೂಡುತ್ತಲಿದ್ದಾಗ ಬ್ರಿಟಿಶರು ತಮ್ಮ ಬೇಜವಾಬ್ದಾರಿಯನ್ನು ಪ್ರದರ್ಶಿಸಿದರು. ಒಂದು ಆಡಳಿತ, ಕೋಟಿಗಟ್ಟಲೆ ಜನರು ವಿಭಜನೆಯ ಕಾರಣದಿಂದಾಗಿ ಆ ದೇಶಕ್ಕೆ, ಈ ದೇಶಕ್ಕೆ ತಂತಮ್ಮ ಇಚ್ಛೆಯ ನೆಲೆಯಲ್ಲಿ ಹೊರಟು ಹೋಗುತ್ತಿದ್ದಾಗ ತುಸು ತಪ್ಪಿದರೂ ಮಹಾ ದೊಡ್ಡ ರಕ್ತದೋಕುಳಿ, ದಂಗೆ ಘಟಿಸಿಯೇ ತೀರುತ್ತದೆ ಎನ್ನುವುದನ್ನು ಯಾಕೆ ಗ್ರಹಿಸಲಿಲ್ಲ?ಹಿಂಸೆ ಎಷ್ಟು ಖಂಡನಾರ್ಹವೋ ಖಂಡನಾರ್ಹವೋ ಅಷ್ಟೇ ಖಂಡನಾರ್ಹ ಅರ್ಥವಿರದೆ ಹೊರಳಾಡುವ ಅಹಿಂಸೆ ಕೂಡ. ನಿಜವಾದ ಮನುಷ್ಯ, ಸಂಸ್ಕಾರಪೂರ್ಣ ಮನುಷ್ಯ ಅಹಿಂಸೆಯನ್ನು ಎಂದೂ ತಿರಸ್ಕರಿಸಲಾರ. ಆದರೆ, ಹಿಂಸೆ ಇನ್ನಿಲ್ಲದೆ ತಾಂಡವ ವಾಡುತ್ತಿದ್ದಾಗ ಆಡಳಿತ ಸೂಕ್ತ ರೀತಿಯಲ್ಲಿ ನಿಯಂತ್ರಿಸಲು ಸಾಧ್ಯವಾಗದ ಕ್ರಮವನ್ನು ಅಹಿಂಸೆ ಎಂದು ಹೇಳಿಸಿಕೊಳ್ಳದು. ಅದು ಮುಂಚೂಣಿಯಲ್ಲಿನ ನಾಯಕತ್ವ, ಆಡಳಿತದಲ್ಲಿರುವ ಸರಕಾರಗಳು ದುರ್ಬಲವಾಗಿದ್ದವು ಎಂದೇ ಅರ್ಥ.

ದುರ್ಬಲರು ನಾಯಕರಾಗಿರದಿದ್ದರೆ, ಆಡಳಿತ ಜವಾಬ್ದಾರಿಯನ್ನು ಸೂಕ್ತವಾಗಿ ನಿರ್ವಹಿಸಿದ್ದರೆ ಧಾರ್ಮಿಕ ಆಧಾರದ ಮೇಲೆ ವಿಭಜನೆಗೊಳ್ಳುತ್ತಿರುವ ಭಾರತ ಹಾಗೂ ಪಾಕಿಸ್ತಾನಗಳಾಗಿ ರೂಪುಗೊಳ್ಳುತ್ತ ಬ್ರಿಟಿಶ್‌ರಾಜ್‌ ಎಂಬ ಸಂಕೋಲೆಯಲ್ಲಿ ಬಂಧಿತವಾಗಿದ್ದ ಭರತಖಂಡ ಹಿಂಸಾಕಾಂಡವನ್ನು ನೋಡಬೇಕಾಗಿ ಬರುತ್ತಿತ್ತೆ? ಮಾನವೀಯತೆ ನಾಚಲೇ ಬೇಕಾದ ಸಿಥತಿ “ವಸುಧೈವ ಕುಟುಂಬಕಂ’ ಎಂಬ ಐಕ್ಯತೆಯ ಮಂತ್ರವನ್ನು ಬೋಧಿಸಿದ ಭರತಭೂಮಿ ದೇಶ ವಿಭಜನೆಯ ಹೆಸರಿನಲ್ಲಿ ನೋಡಬೇಕಾದ ಸ್ಥಿತಿ ಬಂದದ್ದು ಒಂದು ವ್ಯಂಗ್ಯ. ಸದ್ಭಾವನೆ, ತಾಳ್ಮೆ, ವ್ಯವಧಾನ ಇತ್ಯಾದಿಗಳು ಎಂದೂ ಮೂಡಲಾರದು ಎಂಬ ಕಾರ್ಕೋಟಕ (ವಿಷದ ಹೆಡೆ ಹೊತ್ತ) ಸರ್ಪದ ಅಸ್ತಿತ್ವ ಹಿಂದೂ ಹಾಗೂ ಮುಸ್ಲಿಂ ಸಮೂಹದ ನಡುವೆ ಇಂದೂ ಉಭಯ ದೇಶಗಳಲ್ಲೂ ಹರಳುಗಟ್ಟಿಕೊಂಡೇ ಇರುವುದು ನೋವಿನ ಸಂಗತಿ. ಗೀರಿ ರಕ್ತ ತಂದೇ ತೀರುವ ಈ ಹರಳನ್ನು ದೂರಕ್ಕೆ ಎತ್ತಿ ಎಸೆಯುವುದು ಹೇಗೆ? ಈ ಪ್ರಶ್ನೆಯನ್ನು ತಮಗೆ ಕಂಡ ರೀತಿಯಲ್ಲಿ ವಿಶ್ಲೇಷಿಸುತ್ತ ಹೋಗುತ್ತಿರುವವರನ್ನು ಇಂದೂ ಕಾಣುತ್ತಿದ್ದೇವೆ.

ದೇಶ ವಿಭಜನೆಯ ನಂತರದಲ್ಲಿ ಇದೀಗ 72 ವರ್ಷಗಳೇ ಕಳೆದುಹೋದವು. ಬದಲಾವಣೆಯ ದಾರಿಯನ್ನು ವಿಧವಿಧವಾಗಿ ಆಯ್ಕೆಯಾದ ಸರಕಾರಗಳು ಯೋಜನೆಗಳನ್ನು ರೂಪಿಸುತ್ತಲೇ ಬಂದಿವೆ. ದಾರಿದ್ರé ನೀಗಿದೆ ಎಂದು ಅನ್ನಲಾಗದ ವರ್ತಮಾನವನ್ನು ಸೃಷ್ಟಿಸಲು ಈ 72 ವರ್ಷಗಳು ಏಕೆ ವಿಫ‌ಲವಾದವು? ಧರ್ಮಗಳನ್ನು ವಿಭಜಿಸಿ ಚುನಾವಣೆಯಲ್ಲಿ ಮತ ಪಡೆಯುತ್ತಿದ್ದ ಅಸಂಗತ ವಿಚಾರದ ಮಿಸುಕಾಟವನ್ನೂ ಮೀರಿ ಜಾತಿಗಳನ್ನೂ ಒಡೆದು ಚುನಾವಣೆಯಲ್ಲಿ ಮತ ಪಡೆಯುವ ಸ್ಥಿತಿಗತಿಯನ್ನೂ ನೋಡುತ್ತಲೇ ಬಂದೆವು.

1947ರಿಂದ ಭಾರತ ದೇಶದ ಆಡಳಿತ ನೆಹರೂ ಯುಗದೊಂದಿಗೆ ಹೆಜ್ಜೆ ಇರಿಸಿದ ಬಗೆ ಹೇಗಿತ್ತು? “ನಹಿ ಜ್ಞಾನೇನ ಸದೃಶಂ’ ಎಂಬ ವಿಚಾರ ಆಗಿನಿಂದಲೂ ಆಡಳಿತದಲ್ಲಿದ್ದ ಮಂದಿಯ, ಆಡಳಿತ ನಡೆಸುತ್ತಿದ್ದ ಮಂದಿಯ ಸುತ್ತ ಇದ್ದ ಬುದ್ಧಿಜೀವಿಗಳ, ಸಾಂಸ್ಕೃತಿಕ ರಂಗದ ಶ್ರೇಷ್ಠರೆಲ್ಲರ ಧೋರಣೆ ಆಗೇ ಇತ್ತು. ಆದರೆ ಜ್ಞಾನವೆಂಬುದು ಇಂಗ್ಲಿಷ್‌ ಆಚ್ಛಾದಿತ ಸಂಕೋಲೆಯೊಂದಿಗೇ ವ್ಯಕ್ತಗೊಳ್ಳುತ್ತಿದ್ದ ಸ್ಥಿತಿ ಇತ್ತು. ಇಂಗ್ಲಿಷರನ್ನು ಅಂಧಾನುಕರಣೆ ಮಾಡುವ ಕ್ರಮ, ಇಂಗ್ಲಿಷ್‌ ತಿಳಿದರೆ ಪಂಡಿತ ಎಂಬ ಅಘೋಷಿತ ಆದರೆ ಅನಿವಾರ್ಯ ಸ್ಥಿತಿ ದಟ್ಟವಾಗಿ ನಿಂತು ದೈತ್ಯಾಕಾರ ತಳೆದು ನಿಂತಿತು. ಇಂಗ್ಲಿಷ್‌ ತಿಳಿಯದವರು ಜ್ಞಾನಶೂನ್ಯರು ಎಂಬ ಸ್ಥಿತಿ (ಈಗಲೂ ಇದು ದೂರವಾಗಿಲ್ಲ)ಗೆ ನೆಹರೂ ಅವರಿಂದ ಶುರುವಾದ ಆಡಳಿತ ಕಾಲದಿಂದಲೂ ದೈತ್ಯಾಕಾರ ತಳೆದುನಿಂತ ಸ್ಥಿತಿ ಯಾಕೆ ಆವರಿಸಿತು? ಆಡಳಿತದಲ್ಲೂ ಇಂಗ್ಲಿಷ್‌ ಅಧಿಕೃತ ಭಾಷೆಯಾಗಿ ನಿಂತಿತು. ಆದರೆ ಭಾರತೀಯರ ಯೋಚನೆಗಳು ಇಂಗ್ಲಿಷಿನಲ್ಲಿ ಇರುತ್ತಿರಲಿಲ್ಲ.

ಒಂದು ರೀತಿಯ ಆಧುನಿಕತೆ, ಇಂಗ್ಲಿಷ್‌ ತಿಳಿದರೇ ಪಾಂಡಿತ್ಯ ಎಂಬ ಎಡಬಿಡಂಗಿ ಗ್ರಹಿಕೆ, ಭಾರತೀಯರು ಪ್ರತಿ ರಂಗದಲ್ಲೂ ತಮಗೆ ತಿಳಿಯದ ಇಂಗ್ಲಿಷ್‌ ಭಾಷೆಯ ಉರುಳನ್ನು ಕೊರಳಿಗೆ ಕಟ್ಟಿಕೊಂಡೇ ತಿರುಗಬೇಕಾದ ಅಸಹಾಯಕ ಸ್ಥಿತಿಯಿಂದ ಕಾಲರಾಯ ಈಗ (ನರೇಂದ್ರ ಮೋದಿಯವರ ಯುಗವನ್ನು ಕಾಲರಾಯ ಭಾರತದಲ್ಲಿ ಸೃಷ್ಟಿಸಿರುವ ತನಕ ನಡೆದ ಚರ್ಚೆ, ಉಪನ್ಯಾಸ, ಭಾಷಣ, ವಿಕಸನ, ನಿಶ್ಚಲತೆ, ದಾರಿದ್ರé, ಒಂದು ಹಂತದ ಬೆಳವಣಿಗೆ, ಆದರೆ ಮೂಲಭೂತ ಸೌಕರ್ಯಗಳು ಕನಸೇ ಆಗಿಹೋದ ದಾರುಣ ಸ್ಥಿತಿಗತಿಗಳನ್ನು ನೆನೆಯದಿರಲಾಗದು. ಥಟ್ಟಂತ ಮರೆಯಲು ಸಾಧ್ಯವಿಲ್ಲ) ಹೊಸದೇ ದಿವ್ಯಕ್ಕೆ ತಂದು ನಿಲ್ಲಿಸಬಹುದೆ?

ಮೋದಿ ಕೋಟಿ ಕೋಟಿ ಜನರನ್ನು ಸಂವೇದಿಸುತ್ತಿರುವ ವಿಚಾರ ನಾವು 2014ರಿಂದಲೂ ಗಮನಿಸುತ್ತಲೇ ಬಂದಿದ್ದೇವೆ. ಎಲ್ಲಿಯ ತನಕ ಮೋದಿಯವರು ಪ್ರಶ್ನಾತೀತ ನಾಯಕನಾಗಿ ರೂಪುಗೊಂಡಿದ್ದಾರೆ ಎಂದರೆ ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದಿಂದ ಬಂದ ಬಹುದೊಡ್ಡ ಕಾಂಗ್ರೆಸ್‌ ನಾಯಕ ರೋಷನ್‌ ಬೇಗ್‌ ಖುದ್ದಾಗಿ “”ಮೋದಿ ಇಡೀ ಭಾರತವನ್ನು ಏಕಪಕ್ಷೀಯವಾಗಿ ತನ್ನ ನಾಯಕತ್ವದಿಂದ ಸಂವೇದಿಸಬಲ್ಲ ನಾಯಕ” ಎಂದು ಟ್ವೀಟ್‌ ಮಾಡುವ ತನಕ ಎಂದರೆ ಆ ಆಳ ತಿಳಿಯಬಹುದು. ನೆಹರೂ ಹೊಂದಿದ್ದ ಇಂಗ್ಲಿಷ್‌ ಪ್ರಣೀತ Sophisticationಯುಗದ ಸಮಾಪ್ತಿಯಾಗಿ ನರೇಂದ್ರ ಮೋದಿಯವರ ಅಪ್ಪಟ ಭಾರತೀಯ ಶೈಲಿಯ ಎಂದೆನ್ನಲಾದ ಚೌಕಟ್ಟಿಗೆ ಸ್ಥಾಯಿಯಾದ ವರ್ತಮಾನ ಭಾರತದ ರಾಜಕೀಯ ಕ್ಷಿತಿಜಕ್ಕೆ ಪಸರಿಸಿ ನಿಂತುಕೊಂಡಿದೆ.

ನೆಹರೂ ಸಂದರ್ಭದಲ್ಲಿ ಮಾಧ್ಯಮಗಳು ಇದ್ದ ಬಗೆಯೇ ಬೇರೆ ಇತ್ತು. ಈಗ ಪರಿಸ್ಥಿತಿ ಬೇರೆ. ಪ್ರತಿ ಮಾತು, ಪ್ರತಿ ದಿರುಸು, ಪ್ರತಿಯೊಂದು ಚಲನವಲನ, ಕಾಶಿಯಲ್ಲಿ ನಡೆಯುವ ಪ್ರಧಾನಿ ನಡೆಸುವ ಗಂಗಾರತಿ ಅಭಿಷೇಕ, ಫ‌ಲ ಪಂಚಾಮೃತ ಪೂಜೆಗಳೆಲ್ಲ ಮಾಧ್ಯಮಗಳ ಮೂಲಕ ನಮ್ಮ ಕಣ್ಣೆದುರಿಗೇ ವರ್ತಮಾನದ ಸ್ವರೂಪಗಳೆಲ್ಲ ಪ್ರತ್ಯಕ್ಷವಾಗುತ್ತವೆ. ನೆಹರೂ ಕಾಲ ಇಂಗ್ಲಿಷೇ ಆಧುನಿಕತೆಯಾದರೆ, ಈ ಕಾಲ ಸನಾತನ ಭಾರತವನ್ನು ಆಧುನಿಕವಾದ ತಂತ್ರಗಳ ಮುಖೇನ ತೋರಿಸುವ ಹಂತಕ್ಕೆ ಬಂದು ತಲುಪಿದೆ. ಪ್ರಧಾನಿಯವರ ಹಣೆಯ ಮೇಲಿನ ಗಂಧ, ಇನ್ಯಾರೋ ಸುಪ್ರಸಿದ್ಧರ ಕೈಮಣಿಕಟ್ಟಿಗೆ ಕಟ್ಟಿಕೊಂಡ ಸಿದ್ಧಿ ಸೂತ್ರ, ರಾಜಕಾರಣಿಗ ಕೈಯಲ್ಲಿರುವ ಲಿಂಬು ಫ‌ಲಗಳೆಲ್ಲ ಯಥಾವತ್ತಾಗಿ ಮನೆಯಲ್ಲೇ ಕುಳಿತು ನೋಡುವ ಕಾಲ.

ಈಗ ನರೇಂದ್ರ ಮೋದಿ ನೆಹರು, ಇಂದಿರಾ ಇವರೆಲ್ಲ ಕಂಡಿದ್ದ ಜನಪ್ರಿಯತೆಯನ್ನು ನೆನೆಪಿಸುತ್ತಿರುವ ಕಾಲ. “”ಐದು ವರ್ಷಗಳ ಆಡಳಿತ ಹೇಗೋ ನಡೆಸಿದರು. ಆದರೆ, ಮೋದಿ ಈ ಚುನಾವಣೆಯ ನಂತರ 543 ಎಂಪಿಗಳಲ್ಲಿ ಇವರೂ ಒಬ್ಬ ಎಂಪಿ ಅಷ್ಟೇ” ಎಂದು ಸಾವಿರಾರು ಮಂದಿ ನಂಬಿದ್ದ ವಿಚಾರ ಬುಡಮೇಲಾಗಿ ಮೋದಿ (ಯಾರೂ ರಾಜಕೀಯ ವಿಶ್ಲೇಷಕರು ಊಹಿಸಿರದ ಸೈಂಧವ ಶಕ್ತಿಯಿಂದ ಭಾರತದ ರಾಜಕೀಯದ ದಿಕ್ಕನ್ನು ಹೇಗೆ ಬದಲಿಸಲು) ಹೇಗೆ ಬೆಳೆದು ನಿಂತರು? ಭಾರತೀಯ ಸೈನಿಕರನ್ನು ನಿಷ್ಕರುಣೆಯಿಂದ ಸಾಯಿಸಿದ, ಭಯೋತ್ಪಾದಕರು ಪುಲ್ವಾಮಾದಲ್ಲಿ ನಡೆಸಿದ ರಕ್ತದೋಕುಳಿ ನರೇಂದ್ರ ಮೋದಿಯವರ ನೆರವಿಗೆ ಬಂತೆ? ಆದರೆ ಸಮೀಕ್ಷೆಯ ಪ್ರಕಾರ ಒಟ್ಟೂ 7 ಹಂತಗಳ ಚುನಾವಣೆಯಲ್ಲಿ ಮೊದಲ 2 ಹಂತದ ಲೋಕಸಭಾ ಚುನಾವಣೆ ದೇಶದಲ್ಲಿ ಮುಗಿದಾದ ಮೇಲೂ ಮೋದಿ ಜನಪ್ರಿಯತೆ ಅಂಕಪಟ್ಟಿಯಲ್ಲಿ ನಾಟಕೀಯ ಬದಲಾವಣೆ ಇಲ್ಲ ಎಂದೇ ಸಮೀಕ್ಷೆಗಳು ಹೇಳಿದವು.

ಹಾಗಾದರೆ ಯಾವ ದಿವ್ಯಕ್ಕೆ ಮೋದಿಯವರ ಯಾಚನೆ ಈವರೆವಿಗೂ ಭಾಜಪ ಕಂಡರಿಯದ ಯಶಸ್ಸಿನ ಕ್ರಾಂತಿಗೆ ಸಿದ್ಧಿಸೂತ್ರವನ್ನು ಒದಗಿಸಿತು? ಕಾಶೀ ವಿಶ್ವೇಶ್ವರನಿಗೆ ನಡೆಸಿದ ಪೂಜೆ, ಪ್ರಾರ್ಥನೆ, ಅಹವಾಲುಗಳು ಅನುಗ್ರಹವಾಗಿ ಪರಿವರ್ತನೆಗೊಂಡವೆ? ಗಂಗಾರತಿ, ಗಂಗಾಪೂಜೆ ಯಶಸ್ಸಿಗಾಗಿ ಮೋದಿಯ ಕೈ ಬಲಪಡಿಸಿದವೆ?

ಎಂತೆಂಥ ಮುತ್ಸದ್ದಿಗಳನ್ನು ಹೊಂದಿದ್ದ ವಿಪಕ್ಷಗಳು ಅಥವಾ ಜಾತಿ ರಾಜಕೀಯ ಲೆಕ್ಕಾಚಾರದಿಂದಾಗಿ ಗೆದ್ದು ಬೀಗಲೇಬೇಕಿದ್ದ ಘಟಾನುಘಟಿಗಳು ಕಾಶಿಯಲ್ಲಿ ನಾಮಪತ್ರ ಸಲ್ಲಿಸಿ ಬಂದಾದ ಮೇಲಿನ ಮೋದಿಯನ್ನು ನಿಯಂತ್ರಿಸಲು ಸಾಧ್ಯವೇ ಆಗಲಿಲ್ಲ.
ಆರ್‌ಎಸ್‌ಎಸ್‌ಗೂ ಅಪಧ್ಯ ಎಂದಂದುಕೊಂಡ ಮೋದಿ ಪುಟಿದೆದ್ದರು. ಮೋದಿ ಜನರನ್ನು ಮಾತಿನ ಮೂಲಕ ತಲುಪುತ್ತಾರೆ. ತಾನು ಜನಪ್ರತಿನಿಧಿಯಲ್ಲ, ನಾನೂ ನಿಮ್ಮಂತೆ ಕಾರ್ಯಕರ್ತ ಎನ್ನುತ್ತಾರೆ. ಚೌಕಿದಾರ ಎಂದು ಅನ್ನುತ್ತ ಕಾವಲು ಕಾಯುವವನು ಎಂದು ಜನರ ಕೈ ಹಿಡಿದು ಇದನ್ನು ನಿನ್ನ ಬಳಿ ಹೇಳುತ್ತಿದ್ದೇನೆ ಎಂದು ಪ್ರತಿಯೊಬ್ಬನಿಗೂ ಅನಿಸುವ ಹಾಗೆ ಮಾತನಾಡುತ್ತಾರೆ. ಮಾತು ಅವರಿಗೆ ವರವಾಗಿದೆ. ಎದುರಾಳಿಗಳನ್ನು ಕೇಂದ್ರದ ಸ್ವಾಧೀನ ಸಂಸ್ಥೆಗಳ ಮೂಲಕ ನಿಯಂತ್ರಿಸುತ್ತಾರೆ (ದುರ್ಬಳಕೆ ಮಾಡುತ್ತಾರೆ) ಎಂಬ ಆರೋಪ ಎದುರಿಸಿದರೂ ಯಾರ ಮೇಲೆ ದಾಳಿ ನಡೆಯಿತೋ ಅವರು ದಾಳಿಗೊಳಗಾಗಬೇಕಾದ ವ್ಯಕ್ತಿಯೇ ಅಲ್ಲ ಎಂಬುದನ್ನು ಸಾರಾ ಸಗಟಾಗಿ ಅಲ್ಲಗಳೆಯುವಂತೆ ಇರುತ್ತಿರಲಿಲ್ಲ. ವೈಯಕ್ತಿಕವಾಗಿ ಶಕ್ತಿವಂತನಾಗಬೇಕು ಎಂಬುದು ಮೋದಿಯವರ ಸಾತ್ವಿಕ ಹಟ ಎಂಬುದನ್ನು ಜನ ನಂಬುವಂತೆ ಮಾಡಿದರು. ಗೆದ್ದರು.
ಆದರೆ, ಪ್ರಬಲ ವಿರೋಧಿ ಆಗಬೇಕಾದವರು ತತ್ತರಿಸಿದ್ದಾರೆ. ಮೋದಿಯವರನ್ನು ಥಂಡಾಗೊಳಿಸಬಹುದಾದ ಅಸ್ತ್ರಗಳನ್ನು ಉಪಯೋಗಿಸುವ ಚೈತನ್ಯ ಅವರ ಮಾತುಗಳಿಗೆ ಇರದೇ ಹೋಯಿತು. ವೈಯಕ್ತಿಕವಾಗಿ ನೀವು ಭ್ರಷ್ಟರಿಲ್ಲದಿರಬಹುದು. ಆದರೆ, ನಿಮ್ಮ ಆರ್ಥಿಕ ನೀತಿಗಳು ಸರಿ ಇದ್ದವೆ, ಗಂಗೆಯನ್ನು ಸ್ವತ್ಛಗೊಳಿಸಿದಿರಾ, ಕಸ ಮುಕ್ತ ಭಾರತವಾಯೆ¤, ನೋಟ್‌ ಬಂದೀ ಅಖೈರಾಗಿ ಭಾರತೀಯರ ಪಾಲಿಗೆ ಯಾವ ಒಳಿತನ್ನು ತಂದಂತಾಯ್ತು, ಯಾಕೆ ಸಾಮಾಜಿಕ ಜಾಲತಾಣಗಳಲ್ಲಿ ಅಸಹಿಷ್ಣುತೆಯ, ಯಾರನ್ನೋ ಉದ್ರೇಕಿಸುವ ಸಂಗತಿಗಳು ವೈರಲ್‌ ಆಗುತ್ತಿವೆ, ಸಾತ್ವಿಕ ಭಾರತದ ಯಾವ ದಿವ್ಯಗಳನ್ನು ಜಗತ್ತಿನ ಇತರ ಉನ್ನತ ಸಂಗತಿಗಳಿಗಿಂತ ಶ್ರೇಷ್ಠ ಎಂಬುದನ್ನು (ಸಾಹಿತ್ಯ, ಔಷಧ, ಆಹಾರ, ಶಿಸ್ತು, ಸಂಯಮ, ಆಚಾರ, ವಿಚಾರ, ದೇವರು, ಪುರಾಣಗಳ ಬಗೆಗೆ ತಿಳಿಸುವುದರ ಮೂಲಕ) ಮುನ್ನೆಲೆಗೆ ತಂದಿರಿ, ಎಷ್ಟು ಭ್ರಷ್ಟರನ್ನು ಈ ಐದು ವರ್ಷಗಳಲ್ಲಿ ಇತರ ಭ್ರಷ್ಟರು ಹೆದರುವ ಮಟ್ಟಿಗೆ ಒಂದು ಅಂತಿಮ ಘಟ್ಟಕ್ಕೆ ತಲುಪಿ ಶಿಕ್ಷೆ ಹೊಂದುವಂತೆ ಮಾಡಿದಿರಿ, ನ್ಯೂಕ್ಲಿಯರ್‌ ಯುದ್ಧವೇ ಅಂತಿಮವಾಗುವ ಸಂದರ್ಭ ಬಂದರೆ ಪಾಕಿಸ್ತಾನ, ಚೀನಾದಂಥ ರಾಷ್ಟ್ರಗಳನ್ನು ನಿಯಂತ್ರಿಸುವ ವಜ್ರಾಯುಧ ನಿಮ್ಮಲ್ಲಿದೆಯೆ, ಕಳ್ಳನೋಟುಗಳು ಅನ್ಯ ದೇಶದ ಮೂಲಕ, ಅನ್ಯ ದೇಶದಿಂದ ಭಯೋತ್ಪಾದಕರು ನಮ್ಮ ದೇಶಕ್ಕೆ ನುಸುಳಿ ಬರುವ, ಕಾಶ್ಮೀರದಂಥ ಸೂಕ್ಷ್ಮ ಪ್ರದೇಶಗಳಲ್ಲಿ ಇರುವ ಪ್ರಕ್ಷುಬ್ಧತೆಗಳನ್ನು ನಿಯಂತ್ರಿಸುವ, ಕುಡಿಯುವ ನೀರು, ಬೆಳೆಗಾಗಿನ ನೀರಿನ ಸಮಸ್ಯೆ ಪರಿಹರಿಸುವ, ಕೋಟಿಗಟ್ಟಲೆ ನಿರುದ್ಯೋಗಿಗಳಿಗೆ ಕೆಲಸ ಸಿಗುವ, ಜಿಎಸ್‌ಟಿಯ ಮೂಲಕ ಆರ್ಥಿಕವಾದ ವೇದಿಕೆಗೆ ದೇಶದಲ್ಲಿ ಪ್ರಭಾವಳಿ ಸಿಗುವಂತಾಗುವ ಗಡಿಭಾಗದ ದೇಶಗಳಿಂದ ಬರುತ್ತಲೇ ಇರುವ ಅನ್ಯ ದೇಶೀಯರನ್ನು ನಿಯಂತ್ರಿಸುವ ಇತ್ಯಾದಿ, ಇತ್ಯಾದಿ ವಿಷಯಗಳನ್ನು ಮುಂದಿಟ್ಟುಕೊಂಡು ರಾಹುಲ್‌ ಆಗಲೀ, ಮಹಾ ಘಟಬಂಧನದ ನಾಯ್ಡು, ಮುಲಾಯಂ, ಮಾಯಾವತಿಯಾಗಲೀ ಅಬ್ಬರಿಸಲೇ ಇಲ್ಲ. ಕೇಜ್ರಿವಾಲ್‌, ಮಮತಾ ಅಂಥವರೂ ಮಸುಕಾಗಿ ಹೋದರು.

ಹಾಗಾದರೆ ಇನ್ನು ಮೋದಿ ಪ್ರಶ್ನಾತೀತ ನಾಯಕರಾದರೆ? “”ನೀವು ನಿಮ್ಮ ರಾಜ್ಯದ ಎಂಪಿಗಳಲ್ಲ, ದೇಶದ ಹಿತ ಕಾಯುವ ಎಂಪಿಗಳು ಎಂಬುದನ್ನು ನೆನಪಿಡಿ, ಮಂತ್ರಿಗಳಾಗಿ ಮಂತ್ರಿಮಂಡಲ ಸೇರುತ್ತೇವೆ ಎಂಬ ಅರಿವನ್ನು ಮೋದಿ ಹೊಂದಿದ್ದಾರೆಂಬುದು ಸ್ಪಷ್ಟ.

ಮೋದಿ ಬಲಿಷ್ಠರಾಗಿ ಕಾಣಿಸುತ್ತಿದ್ದಾರೆ. ಆದರೆ, ಹಸಿವು, ಬಡತನ, ನಿರುದ್ಯೋಗ, ಶಿಕ್ಷಣ ಸೌಲಭ್ಯ ವಂಚಿತ ಸಮೂಹ ನಿರ್ನಾಮ ವಾಗುವವರೆಗೂ ಮೋದಿ ಪ್ರಶ್ನಾತೀತ ಬಲಿಷ್ಠ ನಾಯಕರಾಗಲಾರರು. ಅಲ್ಪಸಂಖ್ಯಾತರನ್ನು ರಕ್ಷಿಸುವ ಗೌರವಿಸುವ ಮಾತುಗಳು ಕೇವಲ ಮಾತುಗಳಾಗದೇ, ಆರ್ಥಿಕಬಲ ಪಡೆದ ಭಾರತವನ್ನು ಮೋದಿ ಕಟ್ಟಲಾರರು. ಇಂಥದ್ದೊಂದು ಭಾರತ ಮೈದಳೆಯುವಂತಾದರೆ 2029ರವರೆಗೂ ಮೋದಿ ಎಂಬುದು ಅಬಾಧಿತ.

-ಮಹಾಬಲಮೂರ್ತಿ ಕೊಡ್ಲಕೆರೆ

ಟಾಪ್ ನ್ಯೂಸ್

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.