3 ಸಹಸ್ರದ ಪುಟ್ಟ ಹೆಜ್ಜೆಯು 3.72 ಲಕ್ಷವಾದ ಕ್ಷೀರ ಕ್ರಾಂತಿ!


Team Udayavani, Apr 16, 2017, 7:23 AM IST

nandini.jpg

ಮಣಿಪಾಲದಲ್ಲಿ 1974ರಲ್ಲಿ ಆರಂಭವಾದ ಕೆನರಾ ಮಿಲ್ಕ್ ಯೂನಿಯನ್‌ ಬಳಿಕ ದಕ್ಷಿಣಕನ್ನಡ ಜಿಲ್ಲಾ ಹಾಲು ಒಕ್ಕೂಟದೊಂದಿಗೆ ವಿಲೀನವಾಯಿತು. ಈಗ ಇದು ಕರ್ನಾಟಕದ ಹಾಲು ಒಕ್ಕೂಟಗಳಲ್ಲೇ ಸಮಗ್ರ ಸಾಧನಾ ನಿರ್ವಹಣೆಯಲ್ಲಿ ಅಗ್ರಸ್ಥಾನದಲ್ಲಿದ್ದು, ಅವಿಭಜಿತ ಜಿಲ್ಲೆಯ ಕ್ಷೀರಕ್ರಾಂತಿಯ ಸ್ವರೂಪವನ್ನು ಪ್ರತಿಫಲಿಸುತ್ತದೆ. ಇಂದು ಒಕ್ಕೂಟವು ಉಡುಪಿ ಜಿಲ್ಲೆಯ ಉಪ್ಪೂರು ಗ್ರಾಮದಲ್ಲಿ ಹೊಸ ಡೈರಿ ಮತ್ತು ಆಡಳಿತ ಕಚೇರಿ ಸಂಕೀರ್ಣಕ್ಕೆ ಶಂಕುಸ್ಥಾಪನೆ ನಡೆಯಲಿದೆ.

ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸಹಿತವಾದ “ಅವಿಭಜಿತ’ ದ.ಕನ್ನಡ ಜಿಲ್ಲೆಯಲ್ಲಿ ಕ್ಷೀರಕ್ರಾಂತಿಯ ಹರಿಕಾರ ಸಂಸ್ಥೆ “ನಂದಿನಿ’ ಬ್ರಾಂಡ್ ಉತ್ಪನ್ನಗಳಿಂದ ಪ್ರಸಿದ್ಧವಾದದ್ದು ದಕ್ಷಿಣಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ.

ಈಗ ಏಪ್ರಿಲ್‌ 16ರಂದು ಒಕ್ಕೂಟವು ಉಡುಪಿ ಜಿಲ್ಲೆಯ ಉಪ್ಪೂರು ಗ್ರಾಮದಲ್ಲಿ ನೂತನವಾಗಿ, 2.5 ಲಕ್ಷ ಲೀಟರ್‌ ಸಾಮರ್ಥ್ಯದ ಡೈರಿ ಮತ್ತು ಆಡಳಿತ ಕಚೇರಿ ಸಂಕೀರ್ಣಕ್ಕೆ ಶಂಕು ಸ್ಥಾಪನೆ ನೆರವೇರಿಸಲಿದೆ. ಈ ಮೂಲಕ ಹಾಲು ಮತ್ತು ಪೂರಕ ಉತ್ಪನ್ನಗಳ ಕುರಿತಾದ ರೈತಪರ- ಪಶು ಸಂಗೋಪನಾ ಅಭಿಯಾನವನ್ನು ಮತ್ತಷ್ಟು ವಿಸ್ತರಿಸಲಿದೆ.

ಎಲ್ಲ ಮಹಾ ಅಭಿಯಾನಗಳೂ ಒಂದು ಪುಟ್ಟ ಹೆಜ್ಜೆಯಿಂದ ಆರಂಭವಾಗುತ್ತವೆ ಎನ್ನುವುದು ಪ್ರಸಿದ್ಧವಾದ ನಾಣ್ನುಡಿ! ದಕ್ಷಿಣಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತಕ್ಕೆ ಸಂಬಂಧಪಟ್ಟಂತೆಯೂ ಇದು ನಿಜವೇ. ಒಕ್ಕೂಟದ ಈ ಮಹಾ ಅಭಿಯಾನ ಆರಂಭವಾದದ್ದು 1974ರ ಮೇ 25ರಂದು, ಮಣಿಪಾಲದಲ್ಲಿ. ಅವಿಭಜಿತ ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆಯ ಮೂಲಕ ರೈತರಿಗೆ ಆರ್ಥಿಕ ಶಕ್ತಿ ತುಂಬುವ ಆಶಯದೊಂದಿಗೆ, ಗುಜರಾತ್‌ನ ಆನಂದ್‌ನ ಅಮುಲ್‌ ಮಾದರಿಯಲ್ಲಿ ಕೀರ್ತಿಶೇಷ ಟಿ. ಎ. ಪೈ ಅವರು ಕೆನರಾ ಮಿಲ್ಕ್ ಯೂನಿಯನ್‌ ಸ್ಥಾಪಿಸಿದರು. ಕೆಮುಲ್‌ ಎಂಬ ಹೆಸರು ಇರಿಸಿದರು. ಯೂನಿಯನನ್ನು ಆಸುಪಾಸಿನ ಪರಿಸರಕ್ಕೆ ವಿಸ್ತರಿಸಿಧಿದರು. ಆ ಕಾಲಕ್ಕೆ ಇಲ್ಲಿ ದಿನಕ್ಕೆ ಸರಾಸರಿ 3 ಸಾವಿರ ಲೀ. ಹಾಲು ಸಂಗ್ರಹಿಸಿ ಸಂಸ್ಕರಿಸಲಾಗುತ್ತಿತ್ತು. ಟಿ. ಎ. ಪೈ ಅವರ ಬಳಿಕ ಕೆ. ಕೆ. ಪೈ ಅವರು ಅಧ್ಯಕ್ಷರಾಗಿ ಸಂಸ್ಥೆಯನ್ನು ಮುನ್ನಡೆಸಿದರು.

ಈ ಯೂನಿಯನ್‌ 1985ರಲ್ಲಿ ದ.ಕನ್ನಡ ಜಿಲ್ಲಾ ಹಾಲು ಒಕ್ಕೂಟ ದೊಂದಿಗೆ ವಿಲೀನವಾಯಿತು.

ರಾಜ್ಯದಲ್ಲಿ ಅಗ್ರಸ್ಥಾನಿ
ಮುಂದೆ ಜಿಲ್ಲಾ ಹಾಲು ಒಕ್ಕೂಟವು ಮಂಗಳೂರು (ಕುಲಶೇಖರ), ಮಣಿಪಾಲ, ಪುತ್ತೂರು ವಿಭಾಗಗಳೊಂದಿಗೆ ಮುನ್ನಡೆಯಿತು. ಈಗ ಕರ್ನಾಟಕದ 14 ಹಾಲು ಒಕ್ಕೂಟಗಳಲ್ಲಿ ದ.ಕನ್ನಡ ಹಾಲು ಒಕ್ಕೂಟವು ಸಮಗ್ರ ಸಾಧನಾ ನಿರ್ವಹಣೆಯಲ್ಲಿ ಅಗ್ರಸ್ಥಾನದಲ್ಲಿದೆ.

“ಜಿಲ್ಲಾ ಒಕ್ಕೂಟವು ಹಾಲು ಖರೀದಿಯ ಮೂಲಕ ಈ ಭಾಗದ ರೈತರ ಹಿತಾಸಕ್ತಿಯನ್ನು ರಕ್ಷಿಸುತ್ತಿದೆ. ಪೂರಕ ಉತ್ಪನ್ನಗಳನ್ನು ತಯಾರಿಸುವ ಮೂಲಕ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ’ ಎನ್ನುತ್ತಾರೆ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಅವರು. ಒಕ್ಕೂಟದ ಸಾಧನೆಯ ಪಕ್ಷಿನೋಟ ಇಲ್ಲಿದೆ: 
– 95 ಬಿಎಂಸಿ ಹಾಲು ಕೇಂದ್ರ 
– 34 ಹಾಲು ಸಂಗ್ರಹಣಾ ಮಾರ್ಗ 
– 702 ಹಾಲು ಉತ್ಪಾದಕರ ಸಹಕಾರಿ ಸಂಘಗಳು
– ದೈನಿಕ 3.72 ಲಕ್ಷ ಲೀ. ಹಾಲು ಸಂಗ್ರಹ 
– ನಂದಿನಿ ಹಾಲಿನ 1,525 ಅಧಿಕೃತ ಡೀಲರ್‌ಗಳು 
– ದೈನಿಕ ಸರಾಸರಿ 3.45 ಲಕ್ಷ ಲೀಟರ್‌ ಹಾಲು; 60 ಸಾವಿರ ಲೀ. ಮೊಸರು ಮಾರಾಟ 
– 28 ಕೋಟಿ ರೂ. ವೆಚ್ಚದಲ್ಲಿ ಫ್ಲೆಕ್ಸಿ ಪ್ಯಾಕ್‌ ಮತ್ತು ಉತ್ಪನ್ನಗಳ ಘಟಕ ಸ್ಥಾಪನೆ ಮೂಲಕ ಮೂರು ತಿಂಗಳ ಕಾಲ ಸಂರಕ್ಷಿಸಬಹುದಾದ “ತೃಪ್ತಿ’ ಹಾಲು ಉತ್ಪಾದನೆ. 

ಒಕ್ಕೂಟವು ಪೇಡಾ, ಮೈಸೂರು ಪಾಕ್‌, ಹಾಲಿನ ಜಂಬೋ ಪೊಟ್ಟಣ, ಮೊಸರು, ನಂದಿನಿ ಬೈಟ್‌, ಬೆಣ್ಣೆ, ಸಾದಾ ಮತ್ತು ಮ್ಯಾಂಗೋ ಲಸ್ಸಿ, ಬರ್ಫಿ, ಮಜ್ಜಿಗೆ, ಸುವಾಸಿತ ಹಾಲು, ನಂದಿನಿ ಗುಡ್‌ಲೈಫ್‌, ಕ್ರೀಂ, ಪನೀರ್‌, ತುಪ್ಪ ಇತ್ಯಾದಿ ಹಾಲಿನ ಪೂರಕ ಉತ್ಪನ್ನಗಳನ್ನು ಕೂಡ ನಂದಿನಿ ಬ್ರಾÂಂಡ್‌ನ‌ಲ್ಲಿ ಯಶಸ್ವಿಯಾಗಿ ಮಾರುಕಟ್ಟೆಗೆ ನೀಡುತ್ತಿದೆ. 

ಗ್ರಾಮೀಣ ಆರ್ಥಿಕ ಶಕ್ತಿ
ಹಾಲು ಸಂಬಂಧಿತ ವಸ್ತುಶಃ ಎಲ್ಲ  ಕ್ಷೇತ್ರಗಳಲ್ಲಿಯೂ ಒಕ್ಕೂಟವು ಯಶಸ್ಸು ಪಡೆದಿದೆ. ಈ ಮೂಲಕ ಕರಾವಳಿಯ ಈ ಭಾಗದ ರೈತರಿಗೆ, ಕೃಷಿಕರಿಗೆ ಆರ್ಥಿಕ ಶಕ್ತಿ ದೊರೆಯಲು ಸಾಧ್ಯವಾಗಿದೆ. ಹಾಲು ಉತ್ಪಾದಕರ ಮಹಿಳಾ ಸಂಘಗಳ ಮೂಲಕ ಗ್ರಾಮೀಣ ಮಹಿಳಾ ಸಬಲೀಕರಣವೂ ಸಾಕಾರಗೊಂಡಿದೆ.

ಒಕ್ಕೂಟದಲ್ಲಿ ಸುಮಾರು 12 ಲಕ್ಷ ಸದಸ್ಯರಿದ್ದಾರೆ. ದೈನಿಕ ಹಾಲು ಒದಗಿಸುವ 13 ಲಕ್ಷ ಮಂದಿ ಇದ್ದಾರೆ. 702 ಸಂಘಗಳಿವೆ. 193 ಮಹಿಳಾ ಸಂಘಗಳಿವೆ. ಇದು ಅವಿಭಜಿತ ಜಿಲ್ಲೆಯ ಕ್ಷೀರಕ್ರಾಂತಿಯ ಸ್ವರೂಪವನ್ನು ಪ್ರತಿಫಲಿಸುತ್ತದೆ. ಮಂಗಳೂರು ಡೈರಿಯು ವ್ಯಾಪಕ ನೆಲೆಯ ಸೌಲಭ್ಯಗಳಿಂದ ದೇಶದ ರೈತರ ಗಮನ ಸೆಳೆದಿದೆ. ಉಪ್ಪೂರು ಗ್ರಾಮದ ಹೊಸ ಡೈರಿಯು 2.5 ಲಕ್ಷ ಲೀ. ಹಾಲು ಸಂಸ್ಕರಣೆ, 35 ಸಾವಿರ ಕೆಜಿ ಮೊಸರು ಮತ್ತು ಪೂರಕ ಉತ್ಪನ್ನಗಳ ಸಾಮರ್ಥ್ಯ ಹೊಂದಲಿದೆ. 

– ಮನೋಹರ ಪ್ರಸಾದ್‌

Ad

ಟಾಪ್ ನ್ಯೂಸ್

Belagavi: Rani Channamma University receives IIT Mumbai’s Emerging University Award

Belagavi: ರಾಣಿ ಚನ್ನಮ್ಮ ವಿವಿಗೆ ಮುಂಬೈ ಐಐಟಿಯ ಎಮರ್ಜಿಂಗ್ ಯೂನಿವರ್ಸಿಟಿ ಅವಾರ್ಡ್

KOTA; ಬಿಯರ್‌ ಬಾಟಲಿಯಿಂದ ಹ*ಲ್ಲೆ; ಯುವಕನಿಗೆ ಗಂಭೀರ ಗಾಯ

KOTA; ಬಿಯರ್‌ ಬಾಟಲಿಯಿಂದ ಹ*ಲ್ಲೆ; ಯುವಕನಿಗೆ ಗಂಭೀರ ಗಾಯ

Bantwal ರಹಿಮಾನ್‌ ಹ*ತ್ಯೆ ಪ್ರಕರಣ: ಇಬ್ಬರು ಆರೋಪಿಗಳ ಜಾಮೀನು ಅರ್ಜಿ ತಿರಸ್ಕೃತ

Bantwal ರಹಿಮಾನ್‌ ಹ*ತ್ಯೆ ಪ್ರಕರಣ: ಇಬ್ಬರು ಆರೋಪಿಗಳ ಜಾಮೀನು ಅರ್ಜಿ ತಿರಸ್ಕೃತ

ಮೊಂಟೆಪದವು ಮಹಿಳೆ ಅತ್ಯಾಚಾ*ರಗೈದು ಕೊ*ಲೆ ಪ್ರಕರಣ: ಬಿಹಾರ ಮೂಲದ ಆರೋಪಿ ಬಂಧನ

ಮೊಂಟೆಪದವು ಮಹಿಳೆ ಅತ್ಯಾಚಾ*ರಗೈದು ಕೊ*ಲೆ ಪ್ರಕರಣ: ಬಿಹಾರ ಮೂಲದ ಆರೋಪಿ ಬಂಧನ

Tesla-Maha-CM

ದೇಶದ ಮೊದಲ ʼಟೆಸ್ಲಾʼ ಕಾರು ಮಳಿಗೆ ಉದ್ಘಾಟಿಸಿದ ಸಿಎಂ ದೇವೇಂದ್ರ ಫಡ್ನವೀಸ್‌

Rehabilitation not required in all land acquisition cases: Supreme Court

Supreme Court: ಎಲ್ಲ ಭೂಸ್ವಾಧೀನ ಪ್ರಕರಣಗಳಲ್ಲಿ ಪುನರ್ವಸತಿ ಅಗತ್ಯವಿಲ್ಲ

Belthangady; ಪಿಲ್ಯ ಪರಿಸರದಲ್ಲಿ ನಾಯಿ ಮೇಲೆ ಚಿರತೆ ದಾಳಿ; ಗ್ರಾಮಸ್ಥರಲ್ಲಿ ಆತಂಕ

Belthangady; ಪಿಲ್ಯ ಪರಿಸರದಲ್ಲಿ ನಾಯಿ ಮೇಲೆ ಚಿರತೆ ದಾಳಿ; ಗ್ರಾಮಸ್ಥರಲ್ಲಿ ಆತಂಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MH-ganesh-Fest

ಪ್ರಾದೇಶಿಕ ಹೆಮ್ಮೆ, ಗುರುತಿನ ಸಂಕೇತ, ಸಂಸ್ಕೃತಿಯ ಪ್ರತಿಬಿಂಬ ರಾಜ್ಯ ಹಬ್ಬ

TM-Vijya-bhaskar

ದಿನ ಪತ್ರಿಕೆ ಓದು ಯುಪಿಎಸ್‌ಸಿ ಪರೀಕ್ಷೆಗೆ ಮೂಲಧಾತು: ಟಿ.ಎಂ.ವಿಜಯ ಭಾಸ್ಕರ್‌

1-desss

ಹೊರಗೆ ಕಲಿಯುವುದಕ್ಕಿಂತಲೂ ರಂಗದೊಳಗೆ ಕಲಿಯುವುದೇ ಮುಖ್ಯ : ಕೆ.ಎಂ. ಸುಬ್ರಾಯ ಪಾಟಾಳಿ ಸಂಪಾಜೆ

15-mangaluru

Mangaluru: ದಕ್ಷಿಣ ಕನ್ನಡ ಬದಲು ʼಮಂಗಳೂರು ಜಿಲ್ಲೆ’ ಕೂಗು ಜೋರು!

ಸದಾಚಾರ ಸಂಹಿತೆಗೊಂದು ಮುನ್ನುಡಿ‌-ವರ್ತನೆ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತದೆ…

ಸದಾಚಾರ ಸಂಹಿತೆಗೊಂದು ಮುನ್ನುಡಿ‌-ವರ್ತನೆ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತದೆ…

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

Belagavi: Rani Channamma University receives IIT Mumbai’s Emerging University Award

Belagavi: ರಾಣಿ ಚನ್ನಮ್ಮ ವಿವಿಗೆ ಮುಂಬೈ ಐಐಟಿಯ ಎಮರ್ಜಿಂಗ್ ಯೂನಿವರ್ಸಿಟಿ ಅವಾರ್ಡ್

KOTA; ಬಿಯರ್‌ ಬಾಟಲಿಯಿಂದ ಹ*ಲ್ಲೆ; ಯುವಕನಿಗೆ ಗಂಭೀರ ಗಾಯ

KOTA; ಬಿಯರ್‌ ಬಾಟಲಿಯಿಂದ ಹ*ಲ್ಲೆ; ಯುವಕನಿಗೆ ಗಂಭೀರ ಗಾಯ

Byndoor; ಮಲಗಿದಲ್ಲೇ ವ್ಯಕ್ತಿ ಸಾವು

Byndoor; ಮಲಗಿದಲ್ಲೇ ವ್ಯಕ್ತಿ ಸಾವು

Kadaba: ರಸ್ತೆ ಅಪಘಾತದ ಗಾಯಾಳು ಸಾವು

Kadaba: ರಸ್ತೆ ಅಪಘಾತದ ಗಾಯಾಳು ಸಾವು

Bantwal ರಹಿಮಾನ್‌ ಹ*ತ್ಯೆ ಪ್ರಕರಣ: ಇಬ್ಬರು ಆರೋಪಿಗಳ ಜಾಮೀನು ಅರ್ಜಿ ತಿರಸ್ಕೃತ

Bantwal ರಹಿಮಾನ್‌ ಹ*ತ್ಯೆ ಪ್ರಕರಣ: ಇಬ್ಬರು ಆರೋಪಿಗಳ ಜಾಮೀನು ಅರ್ಜಿ ತಿರಸ್ಕೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.