Deepavali 2023: ತಮಸೋಮಾ ಜ್ಯೋತಿರ್ಗಮಯ
Team Udayavani, Nov 12, 2023, 10:00 AM IST
ದೀಪಾವಳಿ ಹಬ್ಬ ಬಂತೆಂದರೆ ಎಲ್ಲೆಲ್ಲೂ ದೀಪಗಳ ಸಡಗರ. ದೀಪ ಮಂಗಳಕರ ಹಾಗೂ ಶುಭ, ಸೂರ್ಯ ಮತ್ತು ಅಗ್ನಿಯ ಸಂಕೇತವಾಗಿದೆ. ಮನುಷ್ಯರು ಕಂಡು ಹಿಡಿದ ಅದ್ಭುತಗಳಲ್ಲಿ ಬೆಂಕಿಯು (ಅಗ್ನಿ) ಒಂದು.
ಜಗತ್ತಿಗೆ ಬೆಳಕು ಶ್ರೇಷ್ಠ ಪ್ರಧಾನವಾದದ್ದು, ಬೆಳಕಿಲ್ಲದೆ ಜಗತ್ತು ಇಲ್ಲ. ಸಕಲ ಜೀವರಾಶಿಗಳಿಗೂ ಬೆಳಕು ಬೇಕೇ ಬೇಕು. ಪ್ರಾಚೀನ ಕಾಲದಲ್ಲಿ ದೀಪವನ್ನು ಕಲ್ಲು ಅಥವಾ ಚಿಪ್ಪಿನಿಂದ ಮಾಡುತ್ತಿದ್ದರು. ಕಾಲ ಬದಲಾದಂತೆ ವಿಧ ವಿಧ ಮಣ್ಣಿನ, ಲೋಹದ ಹಾಗೂ ಬೆಳ್ಳಿ ದೀಪಗಳು ಬೆಳಕಿಗೆ ಬಂದವು. ಮಣ್ಣಿನ ದೀಪ ಹಚ್ಚುವುದು ಸರ್ವ ಶ್ರೇಷ್ಠ.
ದೀಪಗಳಲ್ಲಿ ಹಲವು ವಿಧಗಳಿವೆ. ಪ್ರಾರ್ಥನೆಗಾಗಿ ಉಪಯೋಗಿಸುವ ದೀಪವೇ ಆರತಿ ದೀಪ. ದೇವರ ಮುಂದೆ ಶಾಶ್ವತವಾಗಿ ಬೆಳಗುವ ದೀಪ ನಂದಾದೀಪ. ಸರಪಳಿಗಳಿಂದ ತೂಗು ಹಾಕಿದ ದೀಪ ತೂಗು ದೀಪವಾದರೆ, ಪುಟ್ಟಸ್ತಂಭದಂಥ ಪೀಠದ ಮೇಲಿರುವ ದೀಪವೇ ಕಾಲುದೀಪ.
ದೀಪಗಳಿಗೂ ನಾನ ಹೆಸರಿನ ರೂಪಗಳು ಇವೆ. ದಿಯಾ, ಹಣತೆ. ಮನೆಯಲ್ಲಿ ದೀಪ ಬೆಳಗುವುದರಿಂದ ಸಕಾರಾತ್ಮಕ ಶಕ್ತಿಯ ಆಗಮನದಿಂದ, ನಕಾರಾತ್ಮಕ ಶಕ್ತಿಗಳ ನಿರ್ಗಮನವಾಗಿ ಶಾಂತಿ, ನೆಮ್ಮದಿ ನೆಲೆಸುತ್ತದೆ. ದೀಪ ಅಂದರೆ ಲಕ್ಷ್ಮಿ ಸ್ವರೂಪ. ಸಾಕ್ಷಾತ್ ಲಕ್ಷ್ಮಿ ಮನೆಯಲ್ಲಿ ವಾಸಿಸುತ್ತಾರೆ ಎಂಬುದು ನಂಬಿಕೆ.
ದೀಪ ಬೆಳಗಿಸುವ ಮೊದಲು ದೀಪ ಬೆಳಗಿಸಲು ನಿಯಮಗಳ ಬಗ್ಗೆ ತಿಳಿಯಿರಿ….?
ಯಾವ ಸಮಯದಲ್ಲಿ ದೀಪವನ್ನು ಬೆಳಗಿಸುವುದರಿಂದ ಮನೆಗೆ ಶ್ರೇಷ್ಠ, ಯಾವ ದಿಕ್ಕಿನಲ್ಲಿ ದೀಪ ಬೆಳಗಿಸಬೇಕು ಎಂಬುದನ್ನು ತಿಳಿದುಕೊಳ್ಳಬೇಕು.
ಬೆಳಕು ದೀಪದಲ್ಲಿ ನೆಲೆಸಿದೆ. ಯಾವುದೇ ಶುಭ ಕಾರ್ಯಕ್ರಮಗಳನ್ನು ಆರಂಭ ಮಾಡುವ ಮೊದಲು ದೀಪ ಬೆಳಗುವುದರ ಮೂಲಕವೇ ಶುರುವಾಗುವುದು. ದೀಪ ಜ್ಞಾನಾಭಿವೃದ್ಧಿಯನ್ನು ಹೆಚ್ಚಿಸುತ್ತದೆ ಮನಸ್ಸಿನ ಅಂಧಕಾರವನ್ನು ತೊಲಗಿಸುತ್ತದೆ.
ದೀಪವನ್ನು ಜ್ಞಾನದ ಸಂಕೇತವೆಂದು ಕರೆಯುತ್ತಾರೆ. ದೀಪ ಕತ್ತಲೆಯ ತೊಲಗಿಸಿ ಬೆಳಕಿನೆಡೆಗೆ ಕೊಂಡೊಯ್ಯುತ್ತದೆ. ದೀಪವನ್ನು ಬೆಳಗ್ಗೆ 5 ರಿಂದ 10 ರವರೆಗೆ ಸಂಜೆ 5 ರಿಂದ 7 ರವರೆಗೆ ಬೆಳಗಿಸುವುದು ಶ್ರೇಷ್ಠ ಕಾಲ.
ಮಣ್ಣಿನ ದೀಪವಾದರೆ ದೀಪದ ತುದಿಯು ಎಲ್ಲೂ ಮುರಿದಿರಬಾರದು. ಮುರಿದ ದೀಪವನ್ನು ಹಚ್ಚುವುದರಿಂದ ಲಕ್ಷ್ಮಿದೇವಿಯ ತನುಮನ ತೃಪ್ತಿಯಾಗುವುದಿಲ್ಲ.
ಬೆಳಗಿಸುವ ಮೊದಲು ದೀಪ ಸ್ವಚ್ಛಗೊಳಿಸಿ ಉಪಯೋಗಿಸಬೇಕು. ದೇವರ ಮುಂದೆ ಬೆಳಗಿದ ದೀಪ ಗಾಳಿಗೆ ಅಥವಾ ಮತ್ತ್ಯಾವುದೋ ಕಾರಣದಿಂದ ನಂದಿ ಹೋದರೆ ಮತ್ತೆ ದೀಪ ಹಚ್ಚಿ ದೇವರಿಗೆ ಭಕ್ತಿಯಲ್ಲಿ ಭಾವಪರವಶವಾಗಿ ಪೂಜೆ ಸಲ್ಲಿಸಬೇಕು.
ದೀಪಗಳನ್ನು ಮೂಲೆಯಲ್ಲಿ ಮತ್ತು ಪಶ್ಚಿಮ ದಿಕ್ಕಿನಲ್ಲಿ ಇಡಬಾರದು. ಇದರಿಂದ ಹಣಕಾಸಿನ ತೊಂದರೆ ಹೆಚ್ಚಾಗುತ್ತದೆ. ಸಂಜೆ ಸಮಯ ಮನೆಯ ಮುಖ್ಯಬಾಗಿಲಲ್ಲಿ ರಂಗೋಲಿ ಬಿಡಿಸಿ ದೀಪ ಬೆಳಗಿಸುವುದು ಶುಭಕರ.
-ವಾಣಿ, ಮೈಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ