30 ವರ್ಷದಲ್ಲಿ ಇಡೀ ಜಕಾರ್ತಾ ಸಮುದ್ರ ಪಾಲಾಗಲಿದೆ…ಇಡೀ ನಗರವೇ ಸ್ಥಳಾಂತರ
ಈ ಪ್ರಮಾಣದ ಅರಣ್ಯವನ್ನು ತೆರವುಗೊಳಿಸಿ ನಗರ ನಿರ್ಮಿಸಲಾಗುತ್ತದೆ.
Team Udayavani, Jan 21, 2022, 1:03 PM IST
ಮಹತ್ವದ ಬೆಳವಣಿಗೆಯಲ್ಲಿ ಇಂಡೋನೇಷ್ಯಾ ತನ್ನ ರಾಜಧಾನಿಯನ್ನು ಬದಲಿಸಲು ಹೊರಟಿದೆ. ಈಗಿರುವ ಜಕಾರ್ತದಿಂದ 2,000 ಕಿ.ಮೀ. ದೂರದಲ್ಲಿರುವ ನುಸಂತರಾಗೆ ಸ್ಥಳಾಂತರಿಸಲು ನಿರ್ಧರಿಸಿದೆ. 2022ರಿಂದಲೇ ಮೊದಲ ಹಂತದ ಕಾಮಗಾರಿ ಶುರುವಾಗಲಿದೆ. ದಿಢೀರನೇ ರಾಜ ಧಾನಿ ಬದಲಿಸಲು ಕಾರಣವೇನು ಎಂಬುದರ ಕುರಿತ ಒಂದು ನೋಟ ಇಲ್ಲಿದೆ.
ರಾಜಧಾನಿ ಸ್ಥಳಾಂತರ ಏಕೆ? ಸರಿಯಾಗಿ ಇನ್ನು ಮೂವತ್ತು ವರ್ಷಗಳಲ್ಲಿ ಇಡೀ ಜಕಾರ್ತಾ ಸಮುದ್ರ ಪಾಲಾಗಲಿದೆ. ತಾಪಮಾನ ಏರಿಕೆಯಿಂದಾಗಿ ಸಮುದ್ರದ ಮಟ್ಟ ಏರಲಿದೆ. ಇದಕ್ಕೆ ಬಲಿ ಯಾಗುವ ಮೊದಲ ನಗರ ಎಂಬ ಕುಖ್ಯಾತಿಗೂ ಜಕಾರ್ತಾ ಪಾತ್ರವಾಗಲಿದೆ. ಮುಂದಿನ ದಿನಗ ಳಲ್ಲಿ ಇಲ್ಲಿ ಹೆಚ್ಚೆಚ್ಚು ಪ್ರವಾಹಗಳೂ ಆಗಲಿವೆ. ಅಲ್ಲದೆ ಈ ನಗರದ ಮಾಲಿನ್ಯ ಪ್ರಮಾಣವೂ ಹೆಚ್ಚಾಗಿಯೇ ಇದೆ. ಈ ನಗ ರದ ಮೇಲಿನ ಒತ್ತಡ ಕಡಿಮೆ ಮಾಡುವ ದೃಷ್ಟಿಯಿಂದ
ಈ ಬದಲಾವಣೆ ಮಾಡಲಾಗುತ್ತಿದೆ.
ಇಡೀ ನಗರವೇ ಶಿಫ್ಟ್ ಆಗುತ್ತಾ? ಇಲ್ಲ, ಇಡೀ ಜಕಾರ್ತವೇ ಅಲ್ಲಿಗೆ ಹೋಗುವುದಿಲ್ಲ. ಆಡಳಿತಾ ತ್ಮಕ ಕಟ್ಟಡಗಳಷ್ಟೇ ನುಸುಂತರಾಗೆ ವರ್ಗವಾಗಲಿವೆ. ಉಳಿದಂತೆ ವಾಣಿಜ್ಯ ಮತ್ತು ಹಣಕಾಸು ರಾಜಧಾನಿಯಾಗಿ ಜಕಾರ್ತಾ ಉಳಿಯಲಿದೆ.
ಹೊಸ ಪ್ರದೇಶ ಹೇಗಿದೆ? ಕಾಳಿ ಮಂಥನ ಎಂಬ ದೊಡ್ಡ ಕಾಡುಗಳಿರುವ ದ್ವೀಪವೊಂದರಲ್ಲಿ ಹೊಸ ರಾಜಧಾನಿ ನಿರ್ಮಾಣವಾಗಲಿದೆ. ಇದಕ್ಕೆ ಅಲ್ಲಿನ ಅಧ್ಯಕ್ಷರು ನುಸುಂತಾರಾ ಎಂಬ ಹೆಸರಿಟ್ಟಿ ದ್ದಾರೆ. ಈ ಪ್ರದೇಶ ಅತ್ಯುತ್ತಮ ನೈಸರ್ಗಿಕ ಸಂಪನ್ಮೂಲವನ್ನೂ ಹೊಂದಿದೆ. ರಾಜಧಾನಿ ಬದ ಲಾವಣೆ ಮಾಡುತ್ತಿರುವ ಮೊದಲ ದೇಶವೇ? ಇಲ್ಲ, ಈಗಾಗಲೇ ಬ್ರೆಜಿಲ್, ಮ್ಯಾನ್ಮಾರ್, ಈಜಿಪ್ಟ್, ಕಜ ಕಿಸ್ಥಾನ್ ದೇಶಗಳು ರಾಜಧಾನಿ ಬದಲಾವಣೆ ಮಾಡಿಕೊಂಡಿವೆ.
ಹೊಸ ರಾಜಧಾನಿಯ ವಿಸ್ತಾರವೇನು?
ಒಟ್ಟಾರೆ 256,143 ಹೆಕ್ಟೇರ್ ಪ್ರದೇಶದಲ್ಲಿ ಹೊಸ ನಗರ ನಿರ್ಮಾಣಗೊಳ್ಳಲಿದೆ. ಈ ಪ್ರಮಾಣದ ಅರಣ್ಯವನ್ನು ತೆರವುಗೊಳಿಸಿ ನಗರ ನಿರ್ಮಿಸಲಾಗುತ್ತದೆ.
ಎಷ್ಟು ವೆಚ್ಚವಾಗಬಹುದು?
ಸರಿ ಸುಮಾರು 32 ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚವಾಗುವ ನಿರೀಕ್ಷೆ ಇದೆ. ಒಟ್ಟಾರೆ ಐದು ಹಂತಗಳಲ್ಲಿ ಈ ರಾಜಧಾನಿಯ ನಿರ್ಮಾಣವಾಗಲಿದ್ದು, 2022ರಲ್ಲೇ ಮೊದಲ ಹಂತ ಶುರುವಾ ಗಲಿದೆ
2050ಕ್ಕೆ ಏನಾಗಲಿದೆ?
ಜಾಗತಿಕ ಹಣಕಾಸು ಸಂಸ್ಥೆಯ ವರದಿ ಪ್ರಕಾರ, 2050ರ ವೇಳೆಗೆ ಜಾವಾ ದ್ವೀಪದಲ್ಲಿರುವ ಜಕಾರ್ತಾದ ಉತ್ತರ ಭಾಗದ ಶೇ.95ರಷ್ಟು ಭೂಮಿ ಸಮುದ್ರದಲ್ಲಿ ಮುಳುಗಡೆಯಾಗಲಿದೆ. ಇಲ್ಲಿ ಒಂದು ಕೋಟಿ ಜನ ಸಂಖ್ಯೆ ಇದ್ದು, ಇವರೆಲ್ಲರೂ ಕಷ್ಟಕ್ಕೆ ಸಿಲುಕಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು