ಪ್ರೀತಿ-ಪ್ರೇಮ ಬದುಕಿನ ಅಡಿಪಾಯವಾಗಲಿ 


Team Udayavani, Nov 18, 2022, 6:10 AM IST

tdy-37

ಪ್ರೀತಿ, ಪ್ರೇಮ ಎಂಬ ಎರಡು ಪುಟ್ಟ ಪುಟ್ಟ ಸರಳ ಪದಗಳು. ಆಲಿಸಲೂ ರಮ್ಯ ಶಬ್ದಗಳು. ಆದರೆ ವಿಶಾಲ ವ್ಯಾಖ್ಯಾನಕ್ಕೆ ಒಳಪಟ್ಟದ್ದು. ಪುರಾಣ, ಧರ್ಮಗ್ರಂಥ, ಲೌಕಿಕ, ಅಲೌಕಿಕ ಪ್ರಪಂಚದಲ್ಲಿ ಪ್ರೀತಿ- ಪ್ರೇಮದ ಮಹಿಮೆ ವರ್ಣಿಸಲದಳ. ಜಗತ್ತು ನಿಂತಿರುವುದೇ ಪ್ರೀತಿ-ಪ್ರೇಮದ ಸುಭದ್ರ ಪಂಚಾಗದಲ್ಲಿ. ಪ್ರೀತಿ-ಪ್ರೇಮ ವಿಹೀನ ಜೀವನ ವಿರಸ, ವೈಮನಸ್ಸಿಗೆ ಮೂಲ ಹೇತುವಾಗಿ ಪರಿಣಮಿಸುತ್ತದೆ.

ಪ್ರೀತಿ-ಪ್ರೇಮಗಳ ಹೃನ್ಮನಪೂರ್ವಕ, ಹೃನ್ಮನ ಬೆಸೆಯುವ ಅಸಂಖ್ಯಾತ ಪ್ರಸಂಗ-

ಸನ್ನಿವೇಶಗಳು ರಾಮಾಯಣ, ಮಹಾ ಭಾರತಗಳಲ್ಲಿ ಆದರ್ಶಮಯವಾಗಿವೆ, ರಾಮ-ಹನುಮರ ಪ್ರೇಮ, ಕೃಷ್ಣ-ಬಲ ರಾಮರ, ಕೃಷ್ಣ-ಕುಚೇಲರ, ರಾಮ ಮತ್ತು ತನ್ನ ಸಹೋದರರಾದ ಲಕ್ಷ್ಮಣ, ಭರತ ಮತ್ತು ಶತ್ರುಘ್ನರ ಪ್ರೀತಿ, ಯಶೋದಾ-ಕೃಷ್ಣ, ನಾರದ ಪ್ರೇಮ, ಕುಂತಿ- ಕೃಷ್ಣ,

ಗಣಪತಿಯ ತಂದೆ-ತಾಯಿ ಪ್ರೀತಿ, ದೇವರ ಮತ್ತು ಭಕ್ತರ ಈ ಪರಿಯ ಅನೇಕಾನೇಕ ಕಥಾನಕಗಳು ಹೀಗೆಲ್ಲ.

ಈ ಎಲ್ಲ ಪುರಾಣ ಕಥೆಗಳಲ್ಲಿ ಪ್ರೀತಿ-ಪ್ರೇಮದ ಮಹತ್ವ, ಅದರಲ್ಲಿರುವ ಶಕ್ತಿ, ಈ ಎರಡು ಗುಣಗಳನ್ನು ಮೈಗೂಡಿಸಿಕೊಂಡ ವ್ಯಕ್ತಿಗಳು ಜನಮನ್ನಣೆಗೆ ಪಾತ್ರವಾದುದನ್ನು ಸಾರಿ ಹೇಳುತ್ತವೆ. ಇದೇ ಪ್ರೀತಿ-ಪ್ರೇಮದ ಸಾರ.ಹಾಗೆಂದು ಈ ಪ್ರೀತಿ-ಪ್ರೇಮ ಎಲ್ಲೆಯನ್ನು ಮೀರಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದಕ್ಕೂ ಪೌರಾಣಿಕ ಮತ್ತು ಐತಿಹಾಸಿಕ ಕಥಾನಕಗಳಲ್ಲಿ ಸಾಕಷ್ಟು ನಿದರ್ಶನಗಳು ದೊರಕುತ್ತವೆ. ಯಾವೊಂದೂ ಅನುಮಾ ನಕ್ಕೂ ಆಸ್ಪದವಿಲ್ಲದಂತೆ ಕಲ್ಮಶರಹಿತ, ಶುದ್ಧ ಅಂತಃಕರಣದ ಪ್ರೀತಿ ನಮ್ಮ ಬಾಳನ್ನು ಹಸನಾಗಿಸುವುದು ನಿಶ್ಚಿತ. ಇದೇ ವೇಳೆ ಪ್ರೀತಿ-ಪ್ರೇಮದ ವಿಚಾರದಲ್ಲಿ ಎಡವಟ್ಟು ಮಾಡಿಟ್ಟುಕೊಂಡರೆ ಅದು ನಮ್ಮ ಬದುಕಿಗೇ ಕೊಳ್ಳಿ ಇಡಬಹುದು. ಇಲ್ಲಿ ನಮ್ಮ ವಿವೇಚನೆ ಪ್ರಮುಖ ಪಾತ್ರ ವಹಿಸುತ್ತದೆ.

ಭಗವಂತನ ವರಪ್ರಸಾದ ಪಡೆಯುವಲ್ಲಿ ಭಗವಂತನಲ್ಲಿ ನಾವಿಡುವ ಪ್ರೀತಿ-ಪ್ರೇಮ ಗಣನೀಯವಾಗಿ ಪರಿಗಣನೆಗೆ ಬರುತ್ತದೆ.

ಪ್ರೀತಿ-ಪ್ರೇಮ ಅಮರತ್ವದ ಪ್ರತೀಕ, ಹೊಂದಾಣಿಕೆಯ ದ್ಯೋತಕ, ನಂಬಿಕೆಯ ಮೂಲಾಧಾರ, ಸುಮನಸ್ಸಿನ ಸಂಕೇತ ವಾಗಿದ್ದು ಸ್ವಸ್ಥ ಸಮಾಜದ ಹೆಗ್ಗುರುತಾಗಿದೆ. ನಮ್ಮ ಬದುಕಿನ ಹುಟ್ಟಿನಿಂದ ಬಾಲ್ಯ, ಶೈಶಾವಸ್ಥೆ, ಯೌವ್ವನ, ಮುದಿತನದ ವಿವಿಧ ಮಜಲುಗಳಲ್ಲಿನ ಜೀವನದಲ್ಲಿ ಪ್ರೀತಿ-ಪ್ರೇಮ ಅನವರತ ರೂಪ ತಾಳಿ ಹಾಸು ಹೊಕ್ಕಾದಲ್ಲಿ ಬಾಳಿನ ದಿವ್ಯತೆ, ಭವ್ಯತೆ, ಆನಂದವೇ ಬೇರೆ ರೀತಿಯದ್ದು. ದೆೃವ ಪ್ರೇಮದಿಂದ ತಂದೆ -ತಾಯಿ, ಹಿರಿ ಯರು, ಕುಟುಂಬ, ಸಮಾಜ, ಗುರು, ಪ್ರಕೃತಿ, ಪ್ರಾಣಿ-ಪಕ್ಷಿ, ದೇಶ… ಪ್ರೇಮಗಳು ರಕ್ತಗತವಾದರೆ ಬಾಳಿನ ವ್ಯಕ್ತಿತ್ವ ಸದಾ ಭೂಷಣ ಪ್ರಾಯವಾಗಿ ಕಂಗೊಳಿಸುವುದು. ಸಾಧನೆಗೆ ಪ್ರೇರಣಾಸ್ರೋತವಾಗುವುದು.

ದ್ವೇಷ, ಕೋಪ-ತಾಪ, ವೆೃಮನಸ್ಸು, ಮತ್ಸರ,ವಿರಸ, ಬೇಸರ, ಭಿನ್ನಾಭಿಪ್ರಾಯ ಇತ್ಯಾದಿ ಗಳ ಅಂಕುಶಕ್ಕೆ ಪ್ರೀತಿ-ಪ್ರೇಮವೇ ರಾಮ ಬಾಣ. ದೆೃಹಿಕ ಆರೋಗ್ಯಕ್ಕೂ ಇವು ದಿವ್ಯ ಔಷಧ ಎಂಬುದು ಸಾಬೀತಾಗಿದೆ.

ಪಂಚಭೂತಗಳು ಸಂಗಮಿಸಿರುವ ಈ ಜಗತ್ತು ಎಂಬತ್ತು ಲಕ್ಷ ಜೀವರಾಶಿಗೂ ಸೇರಿದ್ದು. ಎಲ್ಲರಿಗೂ ಬದುಕುವ ಹಕ್ಕು, ರೀತಿ-ನೀತಿಯನ್ನು ಪ್ರಕೃತಿ ದಯಪಾಲಿಸಿದೆ. ಈ ರೀತಿ-ನೀತಿ ಪ್ರಕಾರ ಬದುಕಿದಲ್ಲಿ ಬಾಳು ಸುಗಮವಾಗುವುದು. ಆದ ಕಾರಣ ಮಾನವ-ಮಾನವರೊಂದಿಗೆ ಮಾತ್ರವಲ್ಲ ಪ್ರಕೃತಿಯೊಡಗೂಡಿ ಸಕಲ ಚರಾಚರಗಳ ಬದುಕಿಗೂ ಪ್ರೇರಕರಾಗಬೇಕು. ಸಮಗ್ರ ಪ್ರಕೃತಿಯ ಪ್ರೀತಿ- ಪ್ರೇಮ ಮಾನವನ ಬದುಕಿನ ಅವಿಚ್ಛಿನ್ನ ಭಾಗವಾಗಬೇಕು. ಹೀಗಾದಲ್ಲಿ ಮಾತ್ರ ಪ್ರಕೃತಿ ಪುರುಷ ಪ್ರೇಮ ಮುಂದುವರಿಯುವುದು.

ಇಂದು ಪ್ರಕೃತಿಯೊಂದಿಗೆ ಮಾನವನ ದುರಾಸೆ, ದುರಹಂಕಾರದ ದುಂಡಾ ವರ್ತನೆಯ ಅಟ್ಟಹಾಸ, ಬರ್ಬರತೆ ಯಿಂದಾಗಿಯೇ ಪ್ರಕೃತಿ ಮಾತೆ ಮುನಿದು ವಿವಿಧ ಅವತಾರ ತಾಳುತ್ತಿ¨ªಾಳೆ ಎಂಬ ಬೀಭತ್ಸ ಚಿತ್ರಣ ನಮ್ಮೆಲ್ಲರ ಮುಂದೆ ಪ್ರಸ್ತುತವಾಗುತ್ತಿದೆ.

ಇನ್ನು ನಮ್ಮ ಸಾಮಾಜಿಕ ಜೀವನದ ಎಲ್ಲ ದುಗುಡ, ದುಮ್ಮಾನಗಳಿಗೆ ಪ್ರಧಾನ ಕಾರಣವೇ ಪ್ರೀತಿ-ಪ್ರೇಮದ ಕೊರತೆ. ಪ್ರೀತಿ ಜಗತ್ತನ್ನೇ ಗೆಲ್ಲುವ ಸಾಮರ್ಥ್ಯ ಹೊಂದಿರುವ ಅಮೂಲ್ಯ ಅಸ್ತ್ರ. ಪ್ರೀತಿ- ಪ್ರೇಮವನ್ನು ಹೃನ್ಮನದಲ್ಲಿ ಅವಿಭಾಜ್ಯವನ್ನಾಗಿಸಿ  ಬಾಳಿನ ನಕಾರಾತ್ಮಕತೆಯನ್ನು ವ್ಯರ್ಜಿಸಿ ಬಾಳಬಂಡಿಯಲ್ಲಿ ಪಯಣಿಸಬೇಕು. ಈ ಸುಮಧುರ ಪಯಣ ಪ್ರತಿಯೋರ್ವರ ಬಾಳಿನಲ್ಲಿ ಸುವಾಸನೆ ಬೀರು ವುದು ನಿಸ್ಸಂಶಯ. ಈ ಪ್ರಯಾಣದಲ್ಲಿ ನಾವು ಭಾಗಿಯಾಗಬೇಕಾಗಿರುವುದು ನಮ್ಮ ಆದ್ಯತೆಯಾಗಬೇಕು.

- ಸಂದೀಪ್‌ ನಾಯಕ್‌ ಸುಜೀರ್‌, ಮಂಗಳೂರು

ಟಾಪ್ ನ್ಯೂಸ್

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

World Water Day: ಜುಳು ಜುಳು ಸದ್ದೇಕೆ ಉರಿ ಮೌನ

World Water Day: ಜುಳು ಜುಳು ಸದ್ದೇಕೆ ಉರಿ ಮೌನ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

RC 17: ಮತ್ತೆ ಒಂದಾದ ರಂಗಸ್ಥಳಂ ತಂಡ

RC 17: ಮತ್ತೆ ಒಂದಾದ ರಂಗಸ್ಥಳಂ ತಂಡ

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.