ಬೀಚಿಯವರ ಭಿನ್ನ ಆತ್ಮಕಥನ ನನ್ನ ಭಯಾಗ್ರಫಿ


Team Udayavani, Nov 20, 2020, 1:03 AM IST

book

ಈ ಅಂಕಣ ರಾಜ್ಯೋತ್ಸವ ವಿಶೇಷ. ರಾಜ್ಯದ ಯುವ ಬರಹಗಾರರು ಒಂದು ಕನ್ನಡದ ಕೃತಿ ಕುರಿತು ಬರೆಯುತ್ತಾರೆ. ಇದು ಒಂದು ರೀತಿಯಲ್ಲಿ ಓದುವ ಪಂದ್ಯ.

ವೈಶಿಷ್ಟ್ಯಪೂರ್ಣ ಹಾಸ್ಯಬರಹಗಳಿಗೆ ಮತ್ತೂಂದು ಹೆಸರು ಬೀಚಿ. ಗೊಡ್ಡು ಸಂಪ್ರ ದಾಯಕ್ಕೆ ಸಡ್ಡು ಹೊಡೆದು, ವೈಚಾರಿಕತೆಗೆ ಪ್ರಾಶಸ್ತ್ಯ ನೀಡಿ ತಮ್ಮದೇ ಆದ ಅಪರೂಪದ ಶೈಲಿಯನ್ನು ಸಾಧಿಸಿಕೊಂಡು ಕನ್ನಡ ಸಾಹಿತ್ಯ ಲೋಕದಲ್ಲಿ ಹೆಸರಾದವರು.

ಕಥೆ, ಕಾದಂಬರಿ, ನಗೆಹನಿಗಳು, ನಾಟಕಗಳ ಮೂಲಕ ಹಾಸ್ಯದ ಜತೆಜತೆಗೆ ಸಾಮಾಜಿಕ ಪ್ರಜ್ಞೆ, ವೈಚಾರಿಕತೆಯ ಬೀಜ ವನ್ನು ಓದುಗರಲ್ಲಿ ಬಿತ್ತಿದವರು.

ಆತ್ಮಕಥೆಗೆ ಇಂಗ್ಲಿಷ್‌ನಲ್ಲಿ ಬಯೋಗ್ರಫಿ ( ಆಜಿಟಜr ಚಟಜy) ಎನ್ನುತ್ತಾರೆ. ಆದರೆ ಬೀಚಿಯವರು ಮಾತ್ರ ತಮ್ಮ ಆತ್ಮಕಥೆಗೆ “ನನ್ನ ಭಯಾಗ್ರಫಿ’ ಎಂದು ಹೆಸರಿಟ್ಟು ಗಮನ ಸೆಳೆದಿದ್ದು, ಅದಕ್ಕೆ ಕಾರಣವನ್ನೂ ತಿಳಿಸಿದ್ದಾರೆ.

“”ಈ ಆತ್ಮಚರಿತ್ರೆಗೆ ನಾನು “ನನ್ನ ಭಯಾಗ್ರಫಿ’ ಎಂಬ ಹಂಡಬಂಡ ಹೆಸರನ್ನು ಇಟ್ಟುದೇಕೆ? ಇದಕ್ಕೊಂದು ಕಾರಣವಿದೆ. ಬಾಳನ್ನು ತುಂಡು ತುಂಡಾಗಿ ನೋಡಿದಾಗ ಆಗುವುದೇ ಹಾಗೆ. ನನ್ನಿಂದ ನಾನು ಹೊರ ಬಂದು ದೂರ ನಿಂತು ನನ್ನನ್ನು ನೋಡಿದಾಗ ಎದೆ ಝಲ್‌ ಎನ್ನುತ್ತದೆ. ಅಯ್ಯೋ ಚಾಂಡಾಲಾ ಎಂದನ್ನುತ್ತದೆ ಬಾಯಿ. ಆಗ ನನ್ನದು ನಿಜಕ್ಕೂ ಭಯಾಗ್ರಫಿ ಎಂಬ ಅರಿವಾಗುತ್ತದೆ” ಎಂಬುದು ಅವರ ಮಾತು.

ಬೀಚಿಯವರ ಕೃತಿಗಳಲ್ಲೇ ಈ ಆತ್ಮಕಥೆ ವಿಶೇಷವಾದದ್ದು. ತನ್ನ ಬಾಲ್ಯದ ದಿನಗಳು, ನೋವುನಲಿವು, ಕಲಿಕೆ, ಹೆತ್ತವರ ಬಗ್ಗೆ, ಮದುವೆ, ಕೆಲಸ, ಕನ್ನಡ ಸಾಹಿತ್ಯ ಲೋಕದ ಒಡನಾಟ, ಬರಹ, ನಾಟಕ, ಭಾಷಣ, ಓಡಾಟ, ಪುಸ್ತಕಗಳ ಒಲವು, ಮನೆ ಕಟ್ಟಿಸಿದ ಕಥೆ ಹೀಗೆ ಹಲವಾರು ಘಟನಾವಳಿಗಳನ್ನು ಈ ಕೃತಿಯಲ್ಲಿ ಪಡಿಮೂಡಿಸಿದ್ದಾರೆ.

ಪ್ರತೀ ಅಧ್ಯಾಯದಲ್ಲೂ ಬೀಚಿಯವರ ಮಾತು, ವಿಚಾರಗಳು, ಬದುಕಿನ ಕುರಿತ ಅವರ ದೃಷ್ಟಿಕೋನ, ಜನರ ಜತೆಗಿನ ಒಡನಾಟ, ಹಾಸ್ಯಪ್ರಜ್ಞೆ, ವಿಶಾಲ ಮನೋ ಭಾವ ಮುಂತಾದವುಗಳನ್ನು ಕಾಣಬಹುದು. ಓದುತ್ತಾ ಹೋದಂತೆ ಬೀಚಿಯ ಜೀವನದನುಭವಕ್ಕೆ ನಾವು ಸಾಕ್ಷಿಯಾಗುವಂಥ ಆಪ್ತಭಾವ ಮೂಡುತ್ತದೆ.

ಕನ್ನಡ ಸಾಹಿತ್ಯ ಲೋಕವನ್ನು ಪ್ರವೇಶಿಸಿದ ದಿನಗಳು, ಭಾಷಣಕ್ಕಾಗಿ ಊರೂರು ತಿರುಗಿದ್ದು, ಸ್ನೇಹಿತರೊಂದಿಗಿನ ಹಾಸ್ಯ ಪ್ರಸಂಗಗಳು, ಸಾಹಿತ್ಯ ಪ್ರೇರಣೆ ನೀಡಿದ ಪುಸ್ತಕಗಳು, ಬಾಲ್ಯದ ಜೀವನ ಪಾಠ, ಆಸರೆಯಾದ ಅಣ್ಣ, ಬಾಲ್ಯದಲ್ಲಿ ಸಲಹಿದ ಅತ್ತೆ, ಪತ್ನಿ ಮಕ್ಕಳೊಂದಿಗಿನ ಜೀವನ, ಹಿರಿಯ ಪುತ್ರನ ಮದುವೆ ನಿಶ್ಚಯವಾದ ಕೆಲವೇ ದಿನಗಳಲ್ಲಿ ಎದುರಾದ ಕಿರಿಯ ಮಗನ ಸಾವು ಮುಂತಾದವು ಗಳಲ್ಲೆಲ್ಲ ಬೀಚಿಯವರನ್ನು ಅರಿಯುತ್ತಾ ಹೋದಂತೆ ನಮಗೆ ಬೆರಗಾಗುತ್ತದೆ. ಹಾಸ್ಯ ಲೇಖಕನ ಬಾಳಿನ ನೋವು ಮನಸ್ಸನ್ನು ಕರಗಿಸುತ್ತದೆ, ನಮ್ಮನ್ನು ಚಿಂತನೆಗೆ ಹಚ್ಚುತ್ತವೆ.

ಸಾಮಾನ್ಯವಾಗಿ ಆತ್ಮಕಥೆಯಲ್ಲಿ ಸ್ವಪ್ರತಿಷ್ಠೆ, ಹಿರಿಮೆ-ಗರಿಮೆ, ಕೀರ್ತಿ, ಸೋಗುತನ ಮುಂತಾದವೇ ರಾರಾಜಿಸುತ್ತಿರುತ್ತವೆ. ಕೆಲವು ಆತ್ಮಕಥನಗಳು ಇವುಗಳಿಂದ ದೂರವಾಗಿ ಭಿನ್ನ ಅನುಭವವನ್ನು ನೀಡುತ್ತವೆ. ಅವುಗಳ ಸಾಲಿಗೆ “ನನ್ನ ಭಯಾಗ್ರಫಿ’ ಸೇರುತ್ತದೆ.

ಬೀಚಿ ಅವರು ಇಲ್ಲಿ ನಿಷ್ಪಕ್ಷಪಾತವಾಗಿ ತಾವೇ ತಮ್ಮ ಜೀವನವನ್ನು ವಿಮರ್ಶಾ ದೃಷ್ಟಿಯಿಂದ ನೋಡಿ ಬರಹದ ಮೂಲಕ ತಮ್ಮ ಬದುಕನ್ನು ಸಾರ್ವತ್ರಿಕಗೊಳಿಸಿ¨ªಾರೆ.
ಯಾವುದೇ ಹಮ್ಮುಬಿಮ್ಮಿನ ಪೇಟ ತೊಡದೆ ಸತ್ಯದ ಕೈಹಿಡಿದು ಜೀವನ ದರ್ಶನ ಮಾಡಿಸಿದ್ದಾರೆ. ಆ ಸತ್ಯದರ್ಶನದ ಭರದಲ್ಲಿ ತನ್ನ ಜೀವನದಲ್ಲಿ ಭಾಗಿಯಾದ ಯಾವುದೇ ವ್ಯಕ್ತಿಗೆ ವೃಥಾ ನೋವುಂಟಾಗಬಾರದೆಂಬ ಎಚ್ಚರವೂ ಅವರಲ್ಲಿದೆ. ಇದು ಸಾಮಾನ್ಯದ ವಿಷಯವಲ್ಲ. ಹಾಗಾಗಿ ಬೀಚಿಯವರ “ನನ್ನ ಭಯಾಗ್ರಫಿ’ ಒಂದು ಅನನ್ಯ ಕೃತಿಯಾಗಿದೆ.

ವಿ. ಪುನೀತ್‌ ಕುಮಾರ್‌, ಬೆಂಗಳೂರು

ಟಾಪ್ ನ್ಯೂಸ್

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.