ಅಳಿವಿನ ಭೀತಿಯಲ್ಲಿ ರೈನೋಗಳು; ಘೇಂಡಾಮೃಗಗಳಿಗೆ ಪ್ರವಾಹ ತಂದೊಡ್ಡಿದೆ ಸಂಕಷ್ಟ
Team Udayavani, Jul 20, 2020, 10:45 AM IST
ಈಶಾನ್ಯ ರಾಜ್ಯ ಅಸ್ಸಾಂಗೆ ಮಳೆ, ಪ್ರವಾಹ ಹೊಸತಲ್ಲ. ಆದರೆ, ಈ ವರ್ಷ ಕೋವಿಡ್ ವೈರಸ್ ವಿರುದ್ಧದ ಹೋರಾಟದ ನಡುವೆಯೇ ಪ್ರವಾಹದ ವಿರುದ್ಧವೂ ಸೆಣಸಬೇಕಾದ ಅನಿವಾರ್ಯತೆಗೆ ರಾಜ್ಯ ಸಿಲುಕಿದೆ. ಇಲ್ಲಿನ 33 ಜಿಲ್ಲೆಗಳ ಪೈಕಿ 25 ಜಿಲ್ಲೆಗಳು ಮಳೆ, ಪ್ರವಾಹದಿಂದ ತತ್ತರಿಸಿಹೋಗಿದ್ದು, 40 ಲಕ್ಷಕ್ಕೂ ಅಧಿಕ ಮಂದಿ ಅತಂತ್ರರಾಗಿದ್ದಾರೆ. ಅದರಲ್ಲೂ ವಿಶ್ವವಿಖ್ಯಾತ ಕಾಜಿರಂಗಾ ರಾಷ್ಟ್ರೀಯ ಉದ್ಯಾನದಲ್ಲಿನ ವನ್ಯಜೀವಿಗಳು ತೀವ್ರ ಸಂಕಷ್ಟಕ್ಕೆ ಗುರಿಯಾಗಿವೆ. ಅಸ್ಸಾಂನ ಹೆಮ್ಮೆ ಎಂದೇ ಕರೆಯಲ್ಪಡುವ ಒಂದು ಕೊಂಬಿನ ಘೇಂಡಾಮೃಗಗಳು(ರೈನೋ) ವಿನಾಶದಂಚಿನಲ್ಲಿದ್ದು, ಅವುಗಳ ಉಳಿವಿಗೆ ಈ ಪ್ರವಾಹ ಮತ್ತಷ್ಟು ಅಡ್ಡಿ ಉಂಟುಮಾಡಿದೆ.
ಇಬ್ಬರು ಶತ್ರುಗಳು
ಅಸ್ಸಾಂನ ರೈನೋಗಳಿಗೆ ಇಬ್ಬರು ಶತ್ರುಗಳು. ಒಂದು ಪ್ರವಾಹ, ಮತ್ತೂಂದು ಬೇಟೆಗಾರರು. ಬೇಟೆಯ ವಿರುದ್ಧ ಅರಣ್ಯ ಅಧಿಕಾರಿಗಳು ದಶಕಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಇತ್ತೀಚೆಗಷ್ಟೇ ಗೆಲುವು ದೊರಕತೊಡಗಿದೆ. ಅಷ್ಟರಲ್ಲೇ, ಪ್ರಕೃತಿ ವಿಕೋಪವು ರೈನೋಗಳ ಜೀವಕ್ಕೆ ಅಪಾಯ ತಂದೊಡ್ಡಿದೆ. ಕಾಜಿರಂಗಾ ಉದ್ಯಾನದ ಶೇ.95 ಭಾಗ ಜಲಾವೃತವಾಗಿದ್ದು, ಉದ್ಯಾನದೊಳಗಿನ 223 ಅರಣ್ಯ ಶಿಬಿರಗಳ ಪೈಕಿ 153 ಮುಳುಗಡೆಯಾಗಿವೆ.
3,500 ಜಗತ್ತಿನಲ್ಲಿ ಉಳಿದಿರುವ ಒಂದು ಕೊಂಬುಳ್ಳ ಘೇಂಡಾಮೃಗಗಳ ಸಂಖ್ಯೆ
2,400 ಈ ಪೈಕಿ ಕಾಜಿರಂಗಾ ದಲ್ಲಿರುವ ಘೇಂಡಾಮೃಗಗಳು
430 ಚ.ಕಿ.ಮೀ. ಕಾಜಿರಂಗಾ ಉದ್ಯಾನದ ಒಟ್ಟು ವಿಸ್ತೀರ್ಣ
ಶೇ.95 ಪ್ರಸ್ತುತ ಪ್ರವಾಹ ದಿಂದಾಗಿ ಜಲಾವೃತಗೊಂಡ ಉದ್ಯಾನದ ಭಾಗ
76 ಈ ವರ್ಷ ಮಳೆ, ಪ್ರವಾಹಕ್ಕೆ ಬಲಿಯಾದ ವನ್ಯಜೀವಿಗಳು
45 ಗಾಯಗೊಂಡಿರುವ ಪ್ರಾಣಿಗಳು
121 ಅರಣ್ಯಾಧಿಕಾರಿಗಳು ರಕ್ಷಿಸಿರುವ ಪ್ರಾಣಿಗಳ ಸಂಖ್ಯೆ
02 ಈ ವರ್ಷ ಕೊಚ್ಚಿಹೋಗಿ ಸತ್ತ ಘೇಂಡಾಮೃಗಗಳು
30 2017ರ ಪ್ರವಾಹದಲ್ಲಿ ಮೃತ
17 2019ರಲ್ಲಿ ಕೊಚ್ಚಿಹೋದ ಖಡ್ಗಮೃಗಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…
Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ
Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ
Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ
MUST WATCH
ಹೊಸ ಸೇರ್ಪಡೆ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ