ಅಗಸ್ತ್ಯ ಋಷಿ ಶಾಪ… ಗಜೇಂದ್ರ ಮೋಕ್ಷದ ಹಿಂದಿನ ರಹಸ್ಯವೇನು?


Team Udayavani, May 22, 2018, 11:20 AM IST

ಒಂದಾನೊಂದು ಕಾಲದಲ್ಲಿ ಇಂದ್ರದ್ಯುಮ್ನನೆಂಬುವವನು ಪಾಂಡ್ಯ ದೇಶವನ್ನು ಧರ್ಮದಿಂದ ಆಳುತ್ತಿದ್ದನು. ಅವನು ಶ್ರೀಮನ್ನಾರಾಯಣನ ಪರಮಭಕ್ತ. ರಾಜ್ಯವನ್ನು ತೊರೆದು ಮಲಯ ಪರ್ವತದ ತಪ್ಪಲಿನಲ್ಲಿ ಆಶ್ರಮವನ್ನು ಕಟ್ಟಿ ಮೌನವ್ರತ ಧಾರಣೆಮಾಡಿ ಶ್ರೀಹರಿಯ ನಾಮಸ್ಮರಣೆ ಮಾಡುತ್ತಾ ತಪೋನಿರತನಾಗಿಬಿಟ್ಟನು.

ಇಂದ್ರದ್ಯುಮ್ನನ ಕುಲಪುರೋಹಿತರಾದ ಅಗಸ್ತ್ಯ ಋಷಿಗಳು ರಾಜನು ಮಾಡಿದ್ದನ್ನು ಕೇಳಿ ಬಹಳ ಹರುಷಗೊಂಡರು. ಅವನ ಘನತೆಯನ್ನು ಪ್ರತ್ಯಕ್ಷವಾಗಿಯೇ ನೋಡುವ ಹಂಬಲದಿಂದ ಅವನ ಆಶ್ರಮಕ್ಕೆ ಹೊರಟು ಬಂದರು.  ಆಗ ರಾಜನು ಶ್ರೀಹರಿಯ ಧ್ಯಾನದಲ್ಲಿ ತನ್ನನ್ನು ತಾನು ಮರೆತು ಕುಳಿತಿದ್ದನು. ಗುರುಗಳು ಬಂದದ್ದನ್ನು ಲಕ್ಷಿಸಲೇ ಇಲ್ಲ. ಇದರಿಂದ ಕೋಪಗೊಂಡ ಋಷಿಗಳು “ನೀನು ಮದಾಂಧವಾದ ಆನೆಯಾಗು” ಎಂದು ಶಪಿಸಿ ಹೊರಟು ಹೋದರು.

ತನ್ನ ಅನುಷ್ಠಾನವು ಮುಗಿದ ಬಳಿಕ ಇಂದ್ರದ್ಯುಮ್ನನು ಕಣ್ತೆರೆದನು, ಅಗಸ್ತ್ಯರು ಬಂದು ಹೋದದ್ದನ್ನು ಅವರು ಶಾಪಕೊಟ್ಟದ್ದು ಎಲ್ಲವನ್ನು ತಪಃ ಶಕ್ತಿಯಿಂದ ಅರಿತನು. “ಸರಿ ಇದೆಲ್ಲವೂ ತನ್ನ ಪ್ರಾರಬ್ದಕ್ಕನುಗುಣವಾಗಿ ನಡೆಯಿತೆಂದು ಸುಮ್ಮನಾದನು. ರಾಜನ ಮರಣದ ನಂತರ ತ್ರಿಕೂಟ ಪರ್ವತದ ಸುತ್ತಲಿರುವ ದಟ್ಟವಾದ ಅರಣ್ಯದಲ್ಲಿ ಬಿದಿರಿನ ಮೆಳೆಗಳು ಬಹಳವಾಗಿರುವದರಿಂದ ಆನೆಗಳ ಸಂಖ್ಯೆ ಅತಿಯಾಗಿದ್ದವು. ಇಲ್ಲಿ ಆನೆಗಳ ಗುಂಪಿನಲ್ಲಿ ಗಂಡಾನೆಯಾಗಿ ಜನಿಸಿದನು, ಬಹು ಬೃಹದಾಕಾರನಾಗಿಯೂ ಅಸಮಾನ ಬಲಾಢ್ಯನಾಗಿಯೂ ಬೆಳೆದು ಆ ಅರಣ್ಯದಲ್ಲಿನ ಸಮಸ್ತ ಗಜ ವೃಂದಕ್ಕೆ ಅಧಿಪತಿಯಾಗಿ ” ಗಜೇಂದ್ರ” ಎಂದು ಮೆರೆಯತೊಡಗಿದನು.

ಮತ್ತೊಂದು ಕಡೆ ದೇವಲೋಕದ ಗಂಧರ್ವರಲ್ಲಿ “ಹೂಹೂ” ಎಂಬುವನು ಒಮ್ಮೆ ಭೂಮಿಗೆ ಬಂದು ಒಂದು ಉದ್ಯಾನವದಲ್ಲಿ ವಿಹರಿಸುತ್ತಿರುವಾಗ ಅವನೆದುರು ದೇವಲ ಋಷಿಗಳು ಬರುತ್ತಿದ್ದರು. ಆ ಋಷಿಗಳು ವೃದ್ಧಾಪ್ಯದಿಂದ ಕೃಷವಾಗಿ ಕುರೂಪಿಯಾಗಿದ್ದರು. ಇವರನ್ನು ಕಂಡ ಹೂಹೂ ಹಾಸ್ಯದಿಂದ ನಕ್ಕನು. ಇದರಿಂದ ಋಷಿಗಳು ಸಿಟ್ಟಾಗಿ, “ಎಲೈ ಮಧಾಂಧಾ ನೀನು ಈಗಿಂದೀಗಲೇ ಕ್ರೂರ ಜಂತುವಾದ ಮೊಸಳೆಯಾಗು” ಎಂದು ಶಪಿಸಿದರು. ತಪ್ಪಿನ ಅರಿವಾಗಿ ಹೂಹೂ ಪಶ್ಚಾತ್ತಾಪದಿಂದ ಅವರ ಕಾಲಿಗೆ ಬಿದ್ದು ಕ್ಷಮೆ ಕೇಳಿದನು. ಆಗ ದೇವಲರು ಕರುಣೆಯಿಂದ ” ಗಂಧರ್ವ ಏಳು , ನಾನು ಕೊಟ್ಟ ಶಾಪವು ಸುಳ್ಳಾಗಲಾರದು, ಮೊಸಳೆ ಜನ್ಮ ನೀನು ತಾಳಿದಾಗ ನಿನ್ನಂತೆ ಶಾಪಗ್ರಸ್ಥವಾದ ಒಂದು ಆನೆಯ ಕಾಲನ್ನು ಹಿಡಿ ಆಗ ಆ ಪುಣ್ಯಾತ್ಮನ ಪ್ರಾರ್ಥನೆಗೆ ಒಲಿದು ಶ್ರೀ ಮಹಾವಿಷ್ಣುವು ಅವನನ್ನು ಉದ್ಧರಿಸಲು ಬರುವನು. ಆಗ ನಿನ್ನ ಶಾಪವಿಮೋಚನೆಯಾಗುತ್ತದೆ”  ಎಂದು ಹೇಳಿ ಹೊರಟುಹೋದರು.

ಹೂಹೂ ಗಂಧರ್ವನು ಬೃಹದಾಕಾರದ ಮೊಸಳೆಯಾಗಿ ತ್ರಿಕೂಟ ಪರ್ವತದ ಅರಣ್ಯದ ಮಧ್ಯದಲ್ಲಿದ್ದ ಋತುಮಂಥ ಎಂಬ ಸರೋವರವನ್ನು ಹೊಕ್ಕು ಅಲ್ಲಿ ವಾಸಿಸತೊಡಗಿದನು.

ಒಮ್ಮೆ ಗಜೇಂದ್ರನು ಅದೇ ಋತುಮಂಥ ಸರೋವರದಲ್ಲಿ ತನ್ನ ಪರಿವಾರ ಸಮೇತ ಇಳಿದು ಸ್ವಚ್ಛಂದವಾಗಿ ವಿಹರಿಸಿ ದಡಕ್ಕೆ ಬರುವ ಸಮಯಕ್ಕೆ ಸರಿಯಾಗಿ ಅಲ್ಲೇ ವಾಸಿಸುತ್ತಿದ್ದ ಮೊಸಳೆಯೂ (ಹೂ ಹೂ  ಗಂಧರ್ವನು) ಗಜೇಂದ್ರನ ಕಾಲನ್ನು ಹಿಡಿಯಿತು. ಗಜೇಂದ್ರನು ಕಾಲನ್ನು ಝಾಡಿಸುತ್ತ ಮೊಸಳೆಯ ಹಿಡಿತದಿಂದ ತಪ್ಪಿಸಿಕೊಳ್ಳಲು ಬಹಳವಾಗಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅವನ ಪರಿವಾರದವರು ಪ್ರಯತ್ನಿಸಿದರೂ ಅವರೆಲ್ಲರ ಶಕ್ತಿಮೀರಿ ಮೊಸಳೆಯೂ ಗಜೇಂದ್ರನನ್ನು ನೀರಿನಲ್ಲಿ ಜಗ್ಗತೊಡಗಿತು. ತಮ್ಮಿಂದ ಸಾಧ್ಯವಿಲ್ಲವೆಂದು ಎಲ್ಲ ಆನೆಗಳು ಹಿಂತಿರುಗಿದವು

ಗಜೇಂದ್ರನು ನೋವಿನಿಂದ ಪರಿತಪಿಸುತ್ತಿರಲು ಅವನಿಗೆ ತನ್ನ ಪೂರ್ವಜನ್ಮದ ಸ್ಮರಣೆಯಾಯಿತು. ತನ್ನ ಹಿಂದಿನ ಜನ್ಮದಲ್ಲಿ ಶ್ರೀಹರಿಯ ಭಕ್ತನಾಗಿದ್ದು ನೆನೆದು ಶ್ರೀಹರಿಯನ್ನು ಭಕ್ತಿಯಿಂದ ಸ್ತೋತ್ರಮಾಡತೊಡಗಿದನು. ಗಜೇಂದ್ರನು ಮರಣ ಸಂಕಟದಿಂದ ತೊಳಲಾಡುತ್ತಿದ್ದರು ಸಹ ಅದನ್ನು ಮರೆತು ಶ್ರೀಹರಿಯ ಪಾದಾರವಿಂದಗಳಲ್ಲಿ ಮನಸ್ಸಿಟ್ಟು ಕೂಗಲು ಶ್ರೀಮನ್ನಾರಾಯಣನು ಗರುಡವಾಹನವಾಗಿ ಬಂದು ತನ್ನ ಸುದರ್ಶನ ಚಕ್ರದಿಂದ ಹೊಡೆದು ಗಜೇಂದ್ರನ ಕಾಲನ್ನು ಎಳೆಯುತ್ತಿದ್ದ ಮೊಸಳೆಯನ್ನು ಕತ್ತರಿಸಿದನು. ಕೂಡಲೇ ಅದರೊಳಗಿಂದ ಹೂಹೂ ಗಂಧರ್ವನು ತನ್ನ ಮೂಲ ರೂಪದಿಂದೆದ್ದುಬಂದು ಶ್ರೀಮನ್ನಾರಾಯಣನಿಗೆ ಪ್ರದಕ್ಷಿಣೆ ನಮಸ್ಕಾರಗಳನ್ನರ್ಪಿಸಿ ತನ್ನ ಲೋಕಕ್ಕೆ ಹೊರತು ಹೋದನು.

ನಂತರ ಶ್ರೀಹರಿಯು ಗರುಡನಿಂದ ಇಳಿದು ಗಜೇಂದ್ರನ ಮೈದಡವಿ ಸಮಾಧಾನ ಪಡಿಸಿದನು. ಶ್ರೀಹರಿಯ ಸ್ಪರ್ಶದಿಂದ ಗಜೇಂದ್ರನು ತನ್ನ ನಿಜರೂಪವಾದ ಇಂದ್ರದ್ಯುಮ್ನನಾಗಿ ಶ್ರೀಹರಿಯ ಮುಂದೆ ನಿಂತನು, ಶ್ರೀಹರಿಯು ಗಜೇಂದ್ರನಿಗೆ (ಇಂದ್ರದ್ಯುಮ್ನನಿಗೆ) ಮೋಕ್ಷವನ್ನು ಕರುಣಿಸಿ ತನ್ನ ಸಂಗಡ ವೈಕುಂಠಕ್ಕೆ ಕರೆದೊಯ್ದನು. ಭಕ್ತಿಯಿಂದ ಭಜಿಸುವ ಭಕ್ತರು ಸಂಕಟದಲ್ಲಿದ್ದಾಗ ನಂಬಿದ ಭಕ್ತರನ್ನು ಎಂದಿಗೂ ಕೈಬಿಡುವುದಿಲ್ಲ  ಶ್ರೀಹರಿಯು ಅವರನ್ನು ರಕ್ಷಿಸುತ್ತಾನೆ.

ಟಾಪ್ ನ್ಯೂಸ್

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.